ಮನರಂಜನೆ

ಈ ದೀಪಾವಳಿ ಹಬ್ಬಕ್ಕೆ ಸ್ಟಾರ್‍ ಚಿತ್ರಗಳ ಸಂಭ್ರಮ

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಎರಡು ದಿನಗಳಷ್ಟೇ ಬಾಕಿ ಇದೆ. ಪ್ರತೀ ಬಾರಿ ದೀಪಾವಳಿಗೆ ಬೇರೆಬೇರೆ ಭಾಷೆಗಳಲ್ಲಿ ಒಂದಿಷ್ಟು ನಿರೀಕ್ಷೆಯ ಮತ್ತು ದೊಡ್ಡ ಬಜೆಟ್‍ನ ಚಿತ್ರಗಳು ಬಿಡುಗಡೆಯಾಗುತ್ತವೆ. ಅದಕ್ಕೆ ಈ ಬಾರಿ ಸಹ ಹೊರತಲ್ಲ. ಈ ಬಾರಿಯೂ ಒಂದಿಷ್ಟು ನಿರೀಕ್ಷಿತ ಚಿತ್ರಗಳು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಈ ಪೈಕಿ ಕನ್ನಡದಲ್ಲೊಂದಿಷ್ಟು ಚಿತ್ರಗಳಿವೆಯಾದರೂ, ಹೆಚ್ಚು ಚರ್ಚೆಯಲ್ಲಿರುವುದು ಶ್ರೀಮುರಳಿ ಅಭಿನಯದ ‘ಬಘೀರ’. ಕಳೆದ ಮೂರು ವರ್ಷಗಳಿಂದ ನಿರ್ಮಾಣದಲ್ಲಿರುವ ಈ ಚಿತ್ರ ಕೊನೆಗೂ ಈ ದೀಪಾವಳಿಗೆ ಬಿಡುಗಡೆಯಾಗುತ್ತಿದೆ. ಶ್ರೀಮುರಳಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಹೊಂಬಾಳೆ ಫಿಲಂಸ್‍ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸಿದೆ.

ಹಿಂದಿಯಲ್ಲಿ ಈ ವಾರ ಎರಡು ಪ್ರಮುಖ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದು ‘ಸಿಂಗಂ ಅಗೇನ್‍’, ಇನ್ನೊಂದು ‘ಭೂಲ್‍ ಬುಲಯ್ಯ’. ಎರಡೂ ಚಿತ್ರಗಳು ಜನಪ್ರಿಯ ಸರಣಿಯ ಚಿತ್ರಗಳಾಗಿರುವುದು ವಿಶೇಷ. ‘ಸಿಂಗಂ’ ಮತ್ತು ‘ಸಿಂಗಂ ರಿಟರ್ನ್ಸ್’ ನಂತರ ಸಿಂಗಂ ಪಾತ್ರದಲ್ಲಿ ಅಜಯ್‍ ದೇವಗನ್‍ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಬಹುತಾರಗಣವೇ ಇದೆ. ಅಕ್ಷಯ್‍ ಕುಮಾರ್, ಕರೀನಾ ಕಪೂರ್‍, ದೀಪಿಕಾ ಪಡುಕೋಣೆ, ಟೈಗರ್‍ ಶ್ರಾಫ್‍, ರಣವೀರ್ ಸಿಂಗ್‍ ಮತ್ತು ಅರ್ಜುನ್‍ ಕಪೂರ್‍ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಭೂಲ್‍ ಬುಲಯ್ಯ 3’ ಸಹ ಜನಪ್ರಿಯ ಸರಣಿಯೊಂದರ ಚಿತ್ರ. ಮಲಯಾಳಂನ ‘ಮಣಿಚಿತ್ರತಾಳ್‍’ ಆಧರಿಸಿ ಕೆಲವು ವರ್ಷಗಳ ಹಿಂದೆ ‘ಭೂಲ್‍ ಬುಲಯ್ಯ’ ಚಿತ್ರವು ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ಅಕ್ಷಯ್‍ ಕುಮಾರ್‍ ನಾಯಕನಾಗಿ ಕಾಣಿಸಿಕೊಂಡರೆ, ಎರಡನೆಯ ಭಾಗದಲ್ಲಿ ಕಾರ್ತಿಕ್‍ ಆರ್ಯನ್‍ ನಟಿಸಿದ್ದರು. ಮೂರನೆಯ ಭಾಗದಲ್ಲೂ ಅವರೇ ಮುಂದುವರೆದಿದ್ದು, ಈ ಚಿತ್ರದಲ್ಲಿ ವಿದ್ಯಾ ಬಾಲನ್‍ ಮತ್ತು ಮಾಧುರಿ ದೀಕ್ಷಿತ್‍ ಅಂಜುಲಿಕಾ ಮತ್ತು ಮಂಜುಲಿಕಾ ಎಂಬ ದೆವ್ವಗಳಾಗಿ ಕಾಣಿಸಿಕೊಂಡಿದ್ದಾರೆ.

ಇದಲ್ಲದೆ ಶಿವಕಾರ್ತಿಕೇಯನ್‍ ಅಭಿನಯದ ತಮಿಳಿನ ‘ಅಮರನ್‍’, ಜಯಂ ರವಿ ಅಭಿನಯದ ‘ಬ್ರದರ್‍’, ಮಲಯಾಳಂ ನಟ ದುಲ್ಕರ್‍ ಸಲ್ಮಾನ್‍ ಅಭಿನಯದ ತೆಲುಗು ಚಿತ್ರ ‘ಲಕ್ಕಿ ಭಾಸ್ಕರ್‍’ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಇವಲ್ಲದೆ, ಕನ್ನಡದ ನಟ ಧನಂಜಯ್‍ ಅಭಿನಯದ ತೆಲುಗು ಚಿತ್ರ ‘ಜೀಬ್ರಾ’ ಸಹ ಇದೇ ವಾರ ಬಿಡುಗಡೆಯಾಗಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಚಿತ್ರವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಆಂದೋಲನ ಡೆಸ್ಕ್

Recent Posts

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

18 mins ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

32 mins ago

ಮೈಶುಗರ್‌ ಶಾಲಾ ಶಿಕ್ಷಕರಿಗೆ ನೆರವಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…

57 mins ago

ಸಮಾನತೆ ತರಲೆಂದೇ ಗ್ಯಾರಂಟಿ ಯೋಜನೆಗೆ ಕೋಟಿಗಟ್ಟಲೇ ಹಣ ಖರ್ಚಿ ಮಾಡ್ತಿರೋದು: ಸಿಎಂ ಸಿದ್ದರಾಮಯ್ಯ

ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…

1 hour ago

ಟಿಬಿ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ

ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್‌ ಮುಂದೆ…

2 hours ago

ಮೈಸೂರು| ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…

2 hours ago