ಮನರಂಜನೆ

ಹಳೆ‌ಯ ಗರ್ಲ್ ಫ್ರೆಂಡ್‍ಗೆ ಪೃಥ್ವಿ ಅಂಬಾರ್ ಶುಭಾಶಯ: ಆಲ್ಬಂ ಸಾಂಗ್ ಬಿಡುಗಡೆ

ನಮ್ಮಲ್ಲಿ ಆಲ್ಬಂ ಹಾಡುಗಳ ಟ್ರೆಂಡ್ ಕಡಿಮೆ. ಅದರಲ್ಲೂ ಸಿನಿಮಾ ನಟ-ನಟಿಯರು ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಇನ್ನೂ ಕಡಿಮೆಯೇ. ಹೀಗಿರುವಾಗ, ಸಿನಿಮಾ ನಟ-ನಟಿಯರು ಇಂತಹ ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಇನ್ನೂ ವಿರಳವೇ. ಹೀಗಿರುವಾಗಲೇ ನಟ ಪೃಥ್ವಿ ಅಂಬಾರ್‍ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸದ್ದಿಲ್ಲದೆ, ‘ಶುಭಾಶಯ’ ಎಂಬ ವೀಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ.

ಜನಪ್ರಿಯ ಗೀತರಚನೆಕಾರ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು ನಿರ್ದೇಶಿಸಿರುವ ‘ಶುಭಾಶಯ’ ಎಂಬ ಹೊಸ ಆಲ್ಬಂ ಗೀತೆ ಅನಾವರಣಗೊಂಡಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ದಂಪತಿ ಇತ್ತೀಚೆಗೆ ‘ಶುಭಾಶಯ’ ಆಲ್ಬಂ ಗೀತೆಯನ್ನು ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.

ಇದನ್ನು ಓದಿ: ಕಾಂತಾರ – ಅಧ್ಯಾಯ 1’ ಚಿತ್ರಕ್ಕೆ ನಟ-ಗಾಯಕ ದಿಲ್ಜಿತ್ ದೋಸಾಂಜ್ ಎಂಟ್ರಿ

ಈ ಹಾಡಿನ ಕುರಿತು ಮಾತನಾಡುವ ಪೃಥ್ವಿ, ‘ಕೆಲವು ಚಿತ್ರತಂಡಗಳ ಜೊತೆಗೆ ಸೇರಿಕೊಂಡರೆ, ನಾವು ಸಹ ಸಾಕಷ್ಟು ಕಲಿಯುವುದಕ್ಕೆ ಸಿಗುತ್ತದೆ. ನಾನು ಈ ಹಾಡಿನ ಚಿತ್ರೀಕರಣದಲ್ಲಿ ಸಾಕಷ್ಟು ಕಲಿತಿದ್ದೇನೆ. ನಾಗಾರ್ಜುನ ಶರ್ಮ ಅವರ ಜೊತೆಗೆ ನನಗೆ ಅಷ್ಟೇನೂ ಒಡನಾಟವಿರಲಿಲ್ಲ. ಅವರೊಬ್ಬ ಒಳ್ಳೆಯ ತಂತ್ರಜ್ಞ. ಮುಂದಿನ ದಿನಗಳಲ್ಲಿ ಅವರೊಬ್ಬ ಒಳ್ಳೆಯ ನಿರ್ದೇಶಕರಾಗುತ್ತಾರೆ ಎಂಬ ನಂಬಿಕೆ ಇದೆ. ಇಷ್ಟು ಚೆನ್ನಾಗಿ ನಾನು ಯಾವ ಚಿತ್ರದಲ್ಲೂ ಕಾಣಿಸಿರಲಿಲ್ಲ. ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಈ ಹಾಡಿನಲ್ಲಿ ಪೇಂಟರ್ ಒಬ್ಬನ ಪ್ರೇಮಕಥೆಯನ್ನು ನಾಗಾರ್ಜುನ್ ಶರ್ಮ ಕಟ್ಟಿಕೊಟ್ಟಿದ್ದಾರೆ. ಪೃಥ್ವಿ ಅಂಬಾರ್ ಪೇಂಟರ್ ಆಗಿ, ಆತನ ಪ್ರೇಯಸಿಯಾಗಿ ಅಂಜಲಿ ಅನೀಶ್ ನಟಿಸಿದ್ದಾರೆ. ‘ಅವಳು ಹೋಗು ಅಂದಾಗಲೇ ಸತ್ತಿದ್ದೆ, ಈಗ ಪೂರ್ತಿ ಮಣ್ಣಾಗಿದ್ದೇನೆ, ಆದರೂ ಅವಳಿಗೆ ಕೋರಲು ಹೊರಟಿರುವೆ ಶುಭಾಶಯ‌ …’ ಎಂದು ಶುರುವಾಗುವ ಹಾಡನ್ನು ಸಿನಿಮಾ ರೀತಿಯೇ ಸುಂದರವಾಗಿ ಚಿತ್ರೀಕರಣ ಮಾಡಲಾಗಿದೆ.

ತನ್ನ ಹಳೆಯ ಪ್ರೇಮಿಯ ಮದುವೆಗೆ ಹೋಗಿ ಪ್ರಿಯಕರ ಶುಭಾಶಯ ಕೋರುವುದೇ ‘ಶುಭಾಶಯ’ ಆಲ್ಬಂ ಸಾಂಗ್ ಹೈಲೆಟ್. ಜಸ್ಕರಣ್ ಸಿಂಗ್ ಈ ಗೀತೆಗೆ ಧ್ವನಿಯಾಗಿದ್ದು, ಜೋ ಕೋಸ್ಟಾ ಸಂಗೀತ ಹಾಡಿನ ಅಂದ ಹೆಚ್ಚಿಸಿದೆ. ವೈಷ್ಣವಿ ಫಿಲ್ಮಂಸ್ ಬ್ಯಾನರ್ ಈ ಆಲ್ಬಂ ಹಾಡನ್ನು ನಿರ್ಮಿಸಿದ್ದು, ವೈಷ್ಣವಿ ಫಿಲ್ಮಂಸ್ ಯೂಟ್ಯೂಬ್ ನಲ್ಲಿ ಶುಭಾಶಯ ಆಲ್ಬಂ ಸಾಂಗ್ ವೀಕ್ಷಣೆಗೆ ಲಭ್ಯವಿದೆ.

ಆಂದೋಲನ ಡೆಸ್ಕ್

Recent Posts

ಇರಾನ್‌ ನೂತನ ಸುಪ್ರೀಂ ಲೀಡರ್‌ಗೆ ಕಾಲು ಕಟ್‌, ಕೋಮಾಗೆ ಜಾರಿಗೆ ಮೊಜ್ತಾಬಾ

ಟೆಹರಾನ್:‌ ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಇರಾನ್‌ ದೇಶಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ.…

23 mins ago

ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಔತಣಕೂಟ: ಯಾವ ದಿನ ಗೊತ್ತಾ.?

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಕೆಲ ದಿನಗಳ ಹಿಂದೆ ಡಿನ್ನರ್‌ ಸಭೆ ಆಯೋಜಿಸಿದ್ದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಕೂಡ ಸಚಿವರಿಗೆ…

41 mins ago

ಇರಾನ್‌-ಇಸ್ರೇಲ್‌ ಸಂಘರ್ಷ ಎಫೆಕ್ಟ್:‌ ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಏರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಈಗ ಜನಸಾಮಾನ್ಯರ ಅಡುಗೆ ಮನೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ…

60 mins ago

ಹಳೆ ಕೆಸರೆಯ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಕಸದ ರಾಶಿ

ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ…

2 hours ago

ಓದುಗರ ಪತ್ರ: ಓವೆಲ್ ಮೈದಾನದಲ್ಲಿ ಆಸನಗಳನ್ನು ದುರಸ್ತಿ ಮಾಡಿ

ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…

5 hours ago

ಓದುಗರ ಪತ್ರ: ಒಳಮೀಸಲಾತಿ; ಸಮಾನ ಅವಕಾಶ ಕಲ್ಪಿಸಿ

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…

5 hours ago