ಮನರಂಜನೆ

‘ಹೇರಾ ಫೇರಿ 3’ ಚಿತ್ರದಿಂದ ಹೊರನಡೆದ ಪರೇಶ್‍ ರಾವಲ್‍ ವಿರುದ್ಧ ಕೋರ್ಟ್‍ಗೆ ಹೋದ ಅಕ್ಷಯ್‍ ಕುಮಾರ್

ಬಾಲಿವುಡ್‍ನ ಜನಪ್ರಿಯ ನಟ ಪರೇಶ್‍ ರಾವಲ್‍ ವಿರುದ್ಧ ಅಕ್ಷಯ್‍ ಕುಮಾರ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಪರೇಶ್‍ ಮೇಲೆ ಕೇಸ್‍ ದಾಖಲಿಸಿರುವ ಅವರು 25 ಕೋಟಿ ರೂ. ಪರಿಹಾರ ಕೇಳಿದ್ದಾರೆ.

ಅಕ್ಷಯ್‍ ಕುಮಾರ್ ಮತ್ತು ಪರೇಶ್‍ ರಾವಲ್‍ ಒಟ್ಟಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಅವರ ನಟನೆಯ ‘ಮೋಹ್ರಾ’, ‘ಹೇರಾ ಫೇರಿ’, ‘ಓ ಮೈ ಗಾಡ್‍’ ಮುಂತಾದ ಚಿತ್ರಗಳು ಸಾಕಷ್ಟು ಯಶಸ್ವಿಯಾಗಿವೆ. ಅದರಲ್ಲೂ 2000ದಲ್ಲಿ ಬಿಡುಗಡೆಯಾದ ‘ಹೇರಾ ಫೇರಿ’ ಚಿತ್ರವು ದೊಡ್ಡ ಯಶಸ್ಸು ಕಂಡಿತ್ತು. ಅದರ ನಂತರ ಅದರ ಮುಂದಿನ ಭಾಗವೂ ಬಂದಿತ್ತು. ಕೆಲವು ತಿಂಗಳುಗಳ ಹಿಂದೆ ‘ಹೇರಾ ಫೇರಿ 3’ ಚಿತ್ರದ ಘೋಷಣೆಯೂ ಆಗಿತ್ತು. ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದ ಪರೇಶ್‍, ಈಗ ಚಿತ್ರತಂಡದಿಂದ ಹೊರನಡೆದಿದ್ದಾರೆ. ಇದರಿಂದ ಬೇಸರಗೊಂಡಿರುವ ಅಕ್ಷಯ್‍ ಕುಮಾರ್, ಪರೇಶ್‍ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

‘ಹೇರಾ ಫೇರಿ’ ಸರಣಿಯ ಮೊದಲೆರಡು ಚಿತ್ರಗಳನ್ನು ಫಿರೋಜ್‍ ನಡಿಯಾಡ್‍ವಾಲಾ ನಿರ್ಮಿಸಿದ್ದರು. ಅವರಿಂದ ಚಿತ್ರದ ಹಕ್ಕುಗಳನ್ನು ಪಡೆದ ಅಕ್ಷಯ್‍ ಕುಮರ್, ಈ ಚಿತ್ರವನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದರು. ಈ ಚಿತ್ರದಲ್ಲಿ ಪರೇಶ್‍ ರಾವಲ್‍ ತಮ್ಮ ಬಾಬು ರಾವ್‍ ಪಾತ್ರವನ್ನು ಮುಂದುವರೆಸಬೇಕಾಗಿತ್ತು. 11 ಲಕ್ಷ ಮುಂಗಡ ಪಡೆದಿದ್ದ ಪರೇಶ್‍ ರಾವಲ್‍, ಚಿತ್ರದ ಟೀಸರ್ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರಂತೆ. ಪೂರ್ಣಪ್ರಮಾಣದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಪರೇಶ್‍ ರಾವಲ್, ಚಿತ್ರದಿಂದ ಹಿಂದೆ ಸರಿದಿದ್ದಾರೆ. ತಾವು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸೋಷಿಯಲ್‍ ಮೀಡಿಯಾದಲ್ಲಿ ಘೋಷಿಸಿದ್ದಾರೆ.

ಪರೇಶ್‍ ರಾವಲ್‍ ಅವರ ಈ ನಡೆಯಿಂದ ನಷ್ಟವಾಗಿದೆ ಎಂದು ಆರೋಪಿಸಿ ಅಕ್ಷಯ್ ಕುಮಾರ್ ಒಡೆತನದ ನಿರ್ಮಾಣ ಸಂಸ್ಥೆಯು, 25 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. ಒಂದು ವಾರದೊಳಗೆ ಅವರು 25 ಕೋಟಿ ರೂ.ಗಳನ್ನು ಡೆಪಾಸಿಟ್‍ ಇಡದಿದ್ದರೆ, ಅವರ ವಿರುದ್ಧ ಸಿವಿಲ್‍ ಮತ್ತು ಕ್ರಿಮಿನಲ್‍ ಮೊಕದ್ದಮೆಯನ್ನು ದಾಖಲಿಸುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.

ಹೇರಾ ಫೇರಿ 3’ ಚಿತ್ರದಿಂದ ಪರೇಶ್‍ ರಾವಲ್‍ ನಿಜಕ್ಕೂ ಹೊರನಡೆದು, ಅಕ್ಷಯ್‍ ಕೇಳಿದ ಪರಿಹಾರವನ್ನು ಕೊಡತ್ತಾರಾ? ಎಂಬುದನ್ನು ಕಾದು ನೋಡಬೇಕು.

ಆಂದೋಲನ ಡೆಸ್ಕ್

Recent Posts

ಪ್ರವಾಸಿತಾಣ ಉತ್ತೇಜಿಸಲು ಪ್ರವಾಸಿ ಗೈಡ್‌, ಮ್ಯಾಪ್‌ ಸಿದ್ದ : ಮಂಡ್ಯದಲ್ಲಿ 106 ಪ್ರವಾಸಿ ತಾಣಗಳ ಪರಿಗಣನೆ

ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು…

2 mins ago

ಕೆ.ಆರ್‌.ಪೇಟೆ | ರೈತನ ಮೇಲೆ ಚಿರತೆ ದಾಳಿ ; ಪ್ರಾಣಾಪಾಯದಿಂದ ಪಾರು

ಕೆ.ಆರ.ಪೇಟೆ : ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಸೋಮವಾರ…

8 mins ago

ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿ ಪಾಲಾಗದಂತೆ ಗೃಹಲಕ್ಷ್ಮಿ ಜಾರಿ : ಸಚಿವೆ ಹೆಬ್ಬಾಳಕರ್‌

ಬೆಳಗಾವಿ : ದೇಶದಲ್ಲಿ ಮಾದರಿಯಾದ, ಮಹಿಳೆಯರ ಸಬಲೀಕರಣ ಉದ್ದೇಶ ಹೊಂದಿರುವ ಗೃಹಲಕ್ಷ್ಮಿ ಯೋಜನೆಯನ್ನು ಒಂದೇ ಒಂದು ರೂಪಾಯಿ ಕೂಡ ಮಧ್ಯವರ್ತಿಗಳ…

10 mins ago

ಬಿದ್ದಾಟಂಡ ವಾಡೆಯಲ್ಲಿ ಸಂಭ್ರಮದ ಪುತ್ತರಿ ಕೋಲಾಟ

ನಾಪೋಕ್ಲು : ಬಿದ್ದಾಟಂಡ ವಾಡೆಯ ಐತಿಹಾಸಿಕ ನೂರಂಬಡ ನಾಡ್ ಮಂದ್‌ನಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಕೋಲಾಟ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.…

12 mins ago

ರೈಲು ನಿಲ್ದಾಣಗಳಿಗೆ ಭೇಟಿ,ಪರಿಶೀಲನೆ ನಡೆಸಿದ ಡಿಆರ್‌ಎಂ ಮುದಿತ್‌ ಮಿತ್ತಲ್‌

ಮೈಸೂರು : ನೈಋತ್ಯರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ಅವರು ಅಧಿಕಾರಿಗಳೊಂದಿಗೆ ನಗರದ ವಿವಿಧ ರೈಲು ನಿಲ್ದಾಣಗಳಿಗೆ ಭೇಟಿ…

30 mins ago

ಪೊಲೀಸರು ಯಾರನ್ನು ಓಲೈಕೆ ಮಾಡದಿರಿ : ಡಿಜಿಪಿ ಚಂದ್ರಶೇಖರ್‌ ಸಲಹೆ

ಮೈಸೂರು : ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಅವರು ಮಂಗಳವಾರ ಬೆಳಿಗ್ಗೆ ಮೈಸೂರಿಗೆ ಭೇಟಿ ನೀಡಿ…

39 mins ago