ಮನರಂಜನೆ

‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ: ರಾಜ್‍ ಬಿ ಶೆಟ್ಟಿ

ರಾಜ್‍ ಬಿ ಶೆಟ್ಟಿ ಅಭಿನಯದ ಬಗ್ಗೆ ‘ಟೋಬಿ’ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಚಿತ್ರ ನಿರೀಕ್ಷೆ ಗೆಲುವು ಕಾಣಲಿಲ್ಲ. ಅದಕ್ಕೆ ಸರಿಯಾಗಿ ಚಿತ್ರದ ಬಗ್ಗೆಯೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸೋಲಿನಿಂದ ರಾಜ್ ಶೆಟ್ಟಿ ಬಹಳಷ್ಟು ಪಾಠ ಕಲಿತಿರುವಂತೆ ಕಾಣುತ್ತದೆ. ಅವರೇ ಹೇಳಿಕೊಂಡಂತೆ ‘ಟೋಬಿ’ಯಲ್ಲಿ ಕಲಿತ ಬಗ್ಗೆ ಅವರು ಯಾವ ಚಿತ್ರದಲ್ಲೂ ಕಲಿತಿಲ್ಲವಂತೆ.

ಈ ಕುರಿತು ಇತ್ತೀಚೆಗೆ ಮಾತನಾಡಿರುವ ರಾಜ್‍, ‘ಸೋಲು ಬಹಳ ಸುಂದರ. ನಾನು ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ. ‘ಟೋಬಿ’ ಸೋಲಿನಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಈ ಸೋಲಿನಿಂದ ಸ್ವಲ್ಪ ಹಿನ್ನೆಡೆ ಆಗಬಹುದು. ಗೆಲುವು ಆತ್ಮವಿಶ್ವಾಸ ಕೊಟ್ಟರೆ, ಸೋಲು ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟುಹಾಕುತ್ತವೆ. ಎಲ್ಲಿ ತಪ್ಪು ಮಾಡಿದೆ? ನಾವೆಷ್ಟು ಬದಲಾಗಿದ್ದೇವೆ? ಇವೆಲ್ಲವೂ ಯೋಚಿಸುವಂತೆ ಮಾಡುತ್ತದೆ’ ಎನ್ನುತ್ತಾರೆ.

ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ ಎನ್ನುವ ರಾಜ್‍, ‘ನಾವು ಆರಂಭದಲ್ಲಿ ಚಿತ್ರರಂಗಕ್ಕೆ ಬಂದಾಗ ಮುಗ್ಧರಾಗಿರುತ್ತೇವೆ. ಕ್ರಮೇಣ ನಮ್ಮಲ್ಲೊಂದು ಬದಲಾವಣೆ ಆಗುತ್ತದೆ. ನಾವು ಸೋತಾಗ, ನಮಗೆ ನಾವೇ ಎಲ್ಲಿ ಸೋತೆವು ಎಂದು ಪ್ರಶ್ನೆ ಮಾಡಿಕೊಂಡರೆ ಎಲ್ಲವೂ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸೋತಿದ್ದಕ್ಕೆ ನಾನು ಬಹಳ ಲಕ್ಕಿ ಎನ್ನಬೇಕು. ಸೋತಾಗ ಸ್ವಲ್ಪ ಕಷ್ಟವಾಗುವುದು ಹೌದು. ಆದರೆ, ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ. ಆ ಚಿತ್ರ ಗೆದ್ದಿದ್ದರೆ, ನಾನು ಸಹ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದೆನೇನೋ? ಅಷ್ಟರಲ್ಲಿ ಸೋತೆ. ಮುಂದೆ ತಪ್ಪಾದರೆ ಭಯವಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಎಂಬ ಧೈರ್ಯ ಬರುತ್ತದೆ. ಸೋಲು ತುಂಬಾ ಸ್ವಾತಂತ್ರ್ಯ ಕೊಡುತ್ತದೆ’ ಎಂಬುದು ರಾಜ್‍ ಮಾತು.

‘ಟೋಬಿ’ ಸೋತರೂ, ಅದರಿಂದ ಒಬ್ಬ ನಟನಾಗಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆಯಂತೆ. ‘ಆ ಚಿತ್ರ ಕಮರ್ಷಿಯಲ್‍ ಆಗಿ ಗೆಲ್ಲದೇ ಇರಬಹುದು. ಒಬ್ಬ ನಟನಾಗಿ ನನಗೆ ಆ ಚಿತ್ರದ ನಂತರ ಬಹಳ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಮೊದಲ ಬಾರಿಗೆ ಏನೋ ಮಾಡಬಹುದು ಅಂತ ಅನಿಸುತ್ತಿದೆ. ಸದ್ಯ ‘45’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದಲ್ಲದೆ ಇನ್ನೊಂದೆರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಮಲಯಾಳಂನಿಂದ ಒಂದಿಷ್ಟು ಅವಕಾಶಗಳು ಬರುತ್ತಿವೆ. ಆದರೆ, ಸದ್ಯ ಅಲ್ಲಿಗೆ ಹೋಗಿ ನಟಿಸುವಷ್ಟು ಪುರುಸೊತ್ತಿಲ್ಲ. ಇದಲ್ಲದೆ ಒಂದು ವೆಬ್‍ ಸೀರೀಸ್ ಸಹ ಮಾಡುತ್ತಿದ್ದೀನಿ’ ಎಂದು ಅವರು ಮಾಹಿತಿ ಕೊಡುತ್ತಾರೆ.

ಭೂಮಿಕಾ

Recent Posts

ಬೆಂಗಳೂರಿನಲ್ಲಿ ಸಾಕು ಪ್ರಾಣಿಗಳ ಮಾರಣಹೋಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…

49 mins ago

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

1 hour ago

ಜೀವಾವಧಿ ಶಿಕ್ಷೆಯಿಂದ ಪಾರಾಗಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ…

2 hours ago

ಪೊಲೀಸ್‌ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪರಮೇಶ್ವರ್‌

ಬೆಳಗಾವಿ: ಪೊಲೀಸ್‌ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…

2 hours ago

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್‌…

3 hours ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಮುಚ್ಚುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…

3 hours ago