ಮನರಂಜನೆ

15 ಹೀರೋಗಳನ್ನು ನಿರ್ದೇಶಿಸುವ ತಾಕತ್ತು ಯಾವ ನಿರ್ದೇಶಕರಿಗೂ ಇಲ್ಲ: ಬಾಬು

ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ರಾಜೇಂದ್ರ ಸಿಂಗ್‍ ಬಾಬು ನಿರ್ದೇಶನದ ‘ರಕ್ತ ಕಾಶ್ಮೀರ’ ಚಿತ್ರವು ಮುಂದಕ್ಕೆ ಹೋಗಿದೆ. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ, ಚಿತ್ರದ ಒಂದು ಹಾಡನ್ನು ಬಾಬು ತೋರಿಸಿದ್ದಾರೆ. ಕನ್ನಡ ಚಿತ್ರರಂಗದ 15 ಪ್ರಮುಖ ನಟರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಾಡಿನ ಕುರಿತು ಮಾತನಾಡುವ ಬಾಬು, ‘ಈ ಹಿಂದೆಯೂ ಈ ತರಹದ್ದೊಂದು ಪ್ರಯತ್ನವಾಗಿರಲಿಲ್ಲ. ಮುಂದೆಯೂ ಆಗುವುದಿಲ್ಲ. ಕನ್ನಡದಲ್ಲೇ ಯಾವ ನಿರ್ದೇಶಕರಿಗೂ 15 ಹೀರೋಗಳನ್ನು ನಿರ್ದೇಶಿಸುವ ತಾಖತ್ತು ಇಲ್ಲ. 15 ಹೀರೋಗಳನ್ನು ಆರು ದಿನಗಳ ಕಾಲ ನಿರ್ದೇಶಿಸುವುದು ಸುಲಭದ ಮಾತಲ್ಲ. ಅಂಥದ್ದರಲ್ಲಿ 15 ಜನರೂ, ನನ್ನ ಹಿರಿತನ, ಅನುಭವ ನೋಡಿ ನನಗೊಂದು ಅವಕಾಶ ಕೊಟ್ಟರು. ಅಂಬರೀಶ್‍, ವಿಷ್ಣುವರ್ಧನ್‍, ಶಿವರಾಜಕುಮಾರ್, ಪುನೀತ್, ದರ್ಶನ್‍, ಜಗ್ಗೇಶ್‍, ರಮೇಶ್‍, ಆದಿತ್ಯ, ಶ್ರೀನಾಥ್‍, ದೊಡ್ಡಣ್ಣ, ಜೈಜಗದೀಶ್‍ ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.

ಮಲ್ಟಿಸ್ಟಾರರ್‍ ಚಿತ್ರಗಳು ಮತ್ತೆ ಕನ್ನಡಕ್ಕೆ ಬರಲೇ ಬೇಕು ಎನ್ನುವ ಬಾಬು, ‘ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಲೇ ಇದೆ. ಈ ಹಿಂದೆ ಕೆಲವು ಅಪರೂಪದ ಕಾಂಬಿನೇಷನ್‍ನ ಚಿತ್ರಗಳು ಬಂದಿವೆ. ಅದು ಪುನಃ ಬರಬೇಕು. ನಮ್ಮಲ್ಲಿ ಹಲವು ಹೀರೋಗಳನ್ನಿಟ್ಟುಕೊಂಡು ಚಿತ್ರ ಮಾಡುವ ನಿರ್ದೇಶಕರೇ ಇಲ್ಲ ಎನ್ನುತ್ತಾರೆ. ಅದಕ್ಕೆ ಇದೊಂದು ಹಾಡು ಉದಾಹರಣೆ. ನಿರ್ದೇಶಕರು ಖಂಡಿತಾ ಇದ್ದಾರೆ. ಹೀರೋಗಳು ಮನಸ್ಸು ಮಾಡಬೇಕು. ಕನ್ನಡದಲ್ಲಿ ಇನ್ನೂ ದೊಡ್ಡದೊಡ್ಡ ಚಿತ್ರಗಳನ್ನು ಮಾಡಬೇಕೆಂದರೆ, ಕನ್ನಡದ ಮಣ್ಣಿನ ಕಥೆಗಳು ಇವೆ. ಹೀರೋಗಳು ಸಹ ಇದ್ದಾರೆ. ಆದರೆ, ಅವರೆಲ್ಲಾ ಗೋಡೆ ಕಟ್ಟಿಕೊಂಡಿದ್ದಾರೆ. ಗೋಡೆ ಒಡೆಯಬೇಕು. ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಆ ಗೋಡೆ ನಿಲ್ಲಿಸುತ್ತಿದೆ. ಎಲ್ಲರೂ ಒಟ್ಟಿಗೆ ಸೇರಿ ಒಳ್ಳೆಯ ಸಿನಿಮಾಗಳನ್ನು ಮಾಡಬಹುದು. ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದು ಸುಳ್ಳು. ಅದಕ್ಕೆ ಇಚ್ಛಾಶಕ್ತಿ ಮತ್ತು ಎಲ್ಲರ ಸಹಕಾರ ಬೇಕು. 15 ಹೀರೋಗಳು ಸಹಕಾರ ಕೊಡದಿದ್ದರೆ, ಈ ತರಹದ ಹಾಡು ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ. ಒಂದು ಪ್ರಯತ್ನ ಯಶಸ್ವಿಯಾಗಬೇಕೆಂದರೆ, ಎಲ್ಲರ ಸಹಕಾರ ಮುಖ್ಯ. ಎರಡೂ ಕೈಗಳು ಸೇರಿದರೆ ಹೇಗೆ ಚಪ್ಪಾಳೆಯಾಗುತ್ತದೋ, ಕಲಾವಿದರು ಮತ್ತು ನಿರ್ದೇಶಕರು ಸೇರಿದರೆ ಒಂದೊಳ್ಳೆಯ ಚಿತ್ರವಾಗುತ್ತದೆ’ ಎನ್ನುತ್ತಾರೆ.

ನಮ್ಮಲ್ಲೂ ಬುದ್ಧಿವಂತರಿಗೆ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಅವರು, ‘ಅವಕಾಶಗಳು ಸಿಕ್ಕರೆ, ನಾವೂ ಯಾರಿಗೂ ಕಡಿಮೆ ಇಲ್ಲ. 70ರ ದಶಕದಿಂದ 90ರ ದಶಕದವರೆಗೂ ನಮ್ಮಲ್ಲಿ ಹಲವು ಪ್ರಯತ್ನಗಳಾಗಿವು. ಭಾರತದಲ್ಲಿ ನಾವೇ ನಂಬರ್‍ ಒನ್‍ ಆಗಿದ್ದೆವು. ಶುಕ್ರವಾರದಿಂದ ಭಾನುವಾರದವರೆಗೂ ಭಾರತೀಯ ಚಿತ್ರರಂಗ ಬೆಂಗಳೂರಿನಲ್ಲಿ ಇರುತ್ತಿತ್ತು. ನಾವು ಮಾಡುವ ಕಥೆಗಳ ಬಗ್ಗೆ ಹಲವರಿಗೆ ಆಸಕ್ತಿ ಇತ್ತು. ಒಂದು ಚಿತ್ರ ಗೆದ್ದಿದೆ ಎಂದು ಗೊತ್ತಾದರೆ, ಹಕ್ಕು ಪಡೆಯಲು 10 ಜನ ಬರುತ್ತಿದ್ದರು. ನಮ್ಮ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ಡಬ್‍ ಮತ್ತು ರೀಮೇಕ್‍ ಆಗಿವೆ’ ಎನ್ನುತ್ತಾರೆ.

MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ರಕ್ತ ಕಾಶ್ಮೀರ’ ಚಿತ್ರದಲ್ಲಿ ಉಪೇಂದ್ರ, ರಮ್ಯಾ ಮುಂತಾದವರು ನಟಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಈ ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

2 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

2 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

3 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

4 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

5 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

6 hours ago