ಮನರಂಜನೆ

ಕನ್ನಡ ಚಿತ್ರದಲ್ಲಿ ಹಾಲಿವುಡ್ ನಟನ ನಟನೆ; ಆ. 30ಕ್ಕೆ ‘ಮೈ ಹೀರೋ’ ಬಿಡುಗಡೆ

ಅವಿನಾಶ್‍ ವಿಜಯ್‍ಕುಮಾರ್ ನಿರ್ಮಿಸಿ-ನಿರ್ದೇಶಿಸಿರುವ ‘ಮೈ ಹೀರೋ’ ಎಂಬ ಚಿತ್ರವು ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಯಾಗುತ್ತಿದೆ. ದತ್ತಣ್ಣ, ಅಂಕಿತಾ ಅಮರ್‍, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ಹಾಲಿವುಡ್‍ನ ಜನಪ್ರಿಯ ನಟ ಎರಿಕ್ ರಾಬರ್ಟ್ಸ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

ಹೌದು, ಹಾಲಿವುಡ್‍ನ ಜನಪ್ರಿಯ ನಟಿ ಜ್ಯೂಲಿಯಾ ರಾಬರ್ಟ್ಸ್ ಅವರ ಸಹೋದರ ಎರಿಕ್‍ ರಾಬರ್ಟ್ಸ್, ‘ಮೈ ಹೀರೋ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರನ್‍ಅವೇ ಟ್ರೈನ್‍’, ‘ದಿ ಸ್ಪೆಷಲಿಸ್ಟ್’ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರು, ‘ಮೈ ಹೀರೋ’ ಚಿತ್ರದಲ್ಲಿ ಮತ್ತೊಬ್ಬ ಹಾಲಿವುಡ್‍ ನಟ ಜಿಲಾಲಿ ರಜ್ ಕಲ್ಲಹ್ ಜೊತೆಗೆ ನಟಿಸಿದ್ದಾರೆ.

ಅಮೇರಿಕದಿಂದ ಭಾರತಕ್ಕೆ ಬರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆವ ಒಂದು ಘಟನೆಯೇ ಈ ಚಿತ್ರದ ಕಥಾವಸ್ತು. ಭಾರತಕ್ಕೆ ಬರುವ ಆತನಿಗೆ ಒಬ್ಬ ಹುಡುಗ ಸಿಗುತ್ತಾನೆ. ಅವನ ಮೂಲ ಕರ್ನಾಟಕದಲ್ಲಿರುತ್ತದೆ. ಅವನನ್ನು ಕರೆದುಕೊಂಡು ಆ ವ್ಯಕ್ತಿ ಮಧ್ಯಪ್ರದೇಶದಿಂದ ಕರ್ನಾಕದವರೆಗೂ ಬರುತ್ತಾರೆ. ಇಷ್ಟಕ್ಕೂ ಆ ಹುಡುಗ ಯಾರು ಮತ್ತು ಆತ ಮಧ್ಯಪ್ರದೇಶದಲ್‍ಲೇಕೆ ಇರುತ್ತಾನೆ ಎನ್ನುವುದೇ ಚಿತ್ರದ ಕಥೆ.

ಎರಿಕ್‍ ರಾಬರ್ಟ್ಸ್ ಅವರಿಗೆ ಸಂಭಾವನೆ ಕೊಡುವುದಕ್ಕೆ ತಮ್ಮಿಂದ ಸಾಧ್ಯವಿರಲಿಲ್ಲ ಎಂದ ಅವಿನಾಶ್‍, ‘ಹಾಲಿವುಡ್‍ನಲ್ಲಿ ದೊಡ್ಡ ನಟ ಅವರು. ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಸ್ಕ್ರಿಪ್ಟ್ ಕಳಿಸಿದ್ದೆ. ಅವರಿಗೆ ಇಷ್ಟವಾಗಿತ್ತು. ಅವರ ಸಂಭಾವನೆ ಕೊಡುವುದಕ್ಕೆ ನಮ್ಮಿಂದ ಸಾಧ್ಯವಿರಲಿಲ್ಲ. ಈ ವಿಷಯ ಹೇಳುವುದಕ್ಕೆ ಬಹಳ ಮುಜುಗರವಾಗಿತ್ತು. ಆದರೂ ನಾವು ನೇರವಾಗಿಯೇ ಹೇಳಿದೆವು. ತಮಗೆ ಕಥೆ ಮತ್ತು ಪಾತ್ರ ಇಷ್ಟವಾಯ್ತು ಎಂದು ಚಿತ್ರದಲ್ಲಿ ನಟಿಸಿವುದಕ್ಕೆ ಒಪ್ಪಿಕೊಂಡರು’ ಎಂದರು ಅವಿನಾಶ್‍.

ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರವಂತೆ. ಈ ಕುರಿತು ಮಾತನಾಡುವ ಅವಿನಾಶ್ ವಿಜಯಕುಮಾರ್, ‘ವರ್ಣಭೇದ ಮತ್ತು ಹಿಂದಿಳಿದ ಸಮುದಾಯಗಳ ಶೋಷಣೆ ಬಗ್ಗೆ ಆಗಾಗ ಓದುತ್ತಲೇ ಇರುತ್ತೇವೆ. ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಈ ಚಿತ್ರಕ್ಕೆ ಮೂಲ ಪ್ರೇರಣೆ. ದಲಿತ ಹುಡುಗನೊಬ್ಬ ದೇವರು ಮುಟ್ಟಿದ್ದಕ್ಕೆ ಜನ ಅವನನ್ನು ಊರು ಬಿಟ್ಟು ಓಡಿಸಿದ್ದರು. ಅದಕ್ಕೂ ಮುನ್ನ, ಹಾಲಿವುಡ್‍ ನಟ ಸಿಲಿವೆಸ್ಟರ್ ಸ್ಟಲೋನ್ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮ್ಮ ಮೃತ ಮಗನ ಶ್ರಾದ್ಧ ಮಾಡಿದ್ದರು. ಇವೆರಡೂ ವಿಷಯಗಳನ್ನು ಸೇರಿಸಿ ಒಂದು ಕಥೆ ಮಾಡಿದ್ದೇನೆ. ವಿದೇಶದಿಂದ ಬರುವ ವ್ಯಕ್ತಿಯಾಗಿ ಜಿಲಾಲಿ ರಜ್ ಕಲ್ಲಹ್ ಕಾಣಿಸಿಕೊಂಡರೆ, ಕರ್ನಾಟಕದಿಂದ ಮಧ್ಯಪ್ರದೇಶಕ್ಕೆ ಹೋಗುವ ಹುಡುಗನಾಗಿ ಬಾಲನಟ ವೇದಿಕ್‍ ಅಭಿನಯಿಸಿದ್ದಾರೆ’ ಎಂದರು.

ಇದು ಎಲ್ಲಾ ಕಡೆ ಸಲ್ಲುವಂತಹ ಒಂದು ಕಥೆ ಎನ್ನುವ ಅವಿನಾಶ್‍, ‘ಅಮೇರಿಕಾದಂತಹ ದೇಶಗಳಲ್ಲಿ ಈಗಲೂ ವರ್ಣಭೇದವಿದೆ. ಪ್ರಪಂಚದಾದ್ಯಂತ ಶ್ರೀಮಂತ-ಬಡವ ಎಂಬ ತಾರತಮ್ಯವಿದ್ದೇ ಇದೆ. ಅದೆಲ್ಲವನ್ನೂ ಇಲ್ಲಿ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದೊಂದು ಮನರಂಜನಾತ್ಮಕ ಚಿತ್ರವಾಗಿರುತ್ತದೆ. ಚಿಕ್ಕಮಗಳೂರು, ಮಧ್ಯಪ್ರದೇಶ, ಅಮೇರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಶೇ. 60ರಷ್ಟು ಭಾಗದಲ್ಲಿ ಇಂಗ್ಲೀಷ್‍ ಇರುತ್ತದೆ. ಪಿವಿಆರ್‍-ಐನಾಕ್ಸ್ ಈ ಚಿತ್ರವನ್ನು ಎಲ್ಲೆಡೆ ಬಿಡುಗಡೆ ಮಾಡುತ್ತಿದೆ’ ಎಂದರು.

ಭೂಮಿಕಾ

Recent Posts

ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಮೈಸೂರು: ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಏಕಾಏಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ…

4 hours ago

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ: ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ…

8 hours ago

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಂಜುಂಡೇಶ್ವರ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ

ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…

10 hours ago

ಸುಂಟಿಕೊಪ್ಪ: ನೂತನ ಪೊಲೀಸ್‌ ವಸತಿ ಗೃಹ ಉದ್ಘಾಟಿಸಿದ ಸಚಿವ ಪರಮೇಶ್ವರ್‌

ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ‌ ವೆಚ್ಚದಲ್ಲಿ…

10 hours ago

ನಂಜುಂಡೇಶ್ವರನ ದೇವಸ್ಥಾನದಲ್ಲಿ ಇನ್ಮುಂದೆ ದಿನ 24 ಗಂಟೆಯೂ ಪ್ರಸಾದ ವಿತರಣೆ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…

10 hours ago

ಗುಂಡಾಲ್ ಜಲಾಶಯದಲ್ಲಿ ಹುಲಿ ಮೃತ ದೇಹ ಪತ್ತೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…

10 hours ago