ಮನರಂಜನೆ

ಬೆಂಗಳೂರು ಬಿಟ್ಟು ದೂರ ತೀರದಲ್ಲಿ ಚಿತ್ರ ತೋರಿಸಿದ ಮಂಸೋರೆ

ಸಾಮಾನ್ಯವಾಗಿ ಒಂದು ಚಿತ್ರದ ಪ್ರೀಮಿಯರ್‌ ಪ್ರದರ್ಶನ ಬೆಂಗಳೂರಿನಲ್ಲಿ ನಡೆದು, ಆ ನಂತರ ಬೇರೆ ಊರುಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಈ ವಾರ ಬಿಡುಗಡೆಯಾಗುತ್ತಿರುವ ತಮ್ಮ ‘ದೂರ ತೀರ ಯಾನ’ ಚಿತ್ರದ ಮೂಲಕ ಹೊಸ ಪ್ರಯೋಗವನ್ನು ಮಂಸೋರೆ ಮಾಡುತ್ತಿದ್ದಾರೆ. ಈಗಾಗಲೇ ಅವರು ತಮ್ಮ ಚಿತ್ರವನ್ನು ಬೆಂಗಳೂರಿಗೂ ಮೊದಲೇ ಧಾರವಾಡದ ಪದ್ಮ ಚಿತ್ರಮಂದಿರದಲ್ಲಿ ತೋರಿಸಿದ್ದಾರೆ.

ಇಷ್ಟಕ್ಕೂ ಬೆಂಗಳೂರು ಬಿಟ್ಟು, ಧಾರವಾಡದಲ್ಲಿ ಮಂಸೋರೆ ಚಿತ್ರ ತೋರಿಸಿದ್ದು ಯಾಕೆ? ಈ ಕುರಿತು ಮಾತನಾಡಿರುವ ಅವರು, ‘ಧಾರವಾಡದಲ್ಲಿ ಪ್ರೀಮಿಯರ್‍ ಶೋ ಮಾಡಿದ್ದೇವೆ. ಸಾಮಾನ್ಯವಾಗಿ, ನಾವು ಬೆಂಗಳೂರಿನಲ್ಲಿ ಸೆಲೆಬ್ರಿಟಿಗಳನ್ನು ಕರೆದು ಪ್ರೀಮಿಯರ್‍ ಶೋ ಮಾಡುತ್ತೇವೆ. ಇಲ್ಲಿ ಸಿಕ್ಕ ಪ್ರತಿಕ್ರಿಯೆನ್ನು ಕರ್ನಾಟಕದ ಜನರ ಜೊತೆಗೆ ಹಂಚಿಕೊಳ್ಳುತ್ತೇವೆ. ಮೊದಲು ಪ್ರೇಕ್ಷಕರು ಚಿತ್ರ ನೋಡಲಿ, ಆ ನಂತರ ಸೆಲೆಬ್ರಿಟಿಗಳು ಚಿತ್ರ ನೋಡಲಿ ಎಂಬುದು ನಮ್ಮ ಉದ್ದೇಶ. ಪ್ರೇಕ್ಷಕರೇ ನಮ್ಮ ಚಿತ್ರದ ಸೆಲೆಬ್ರಿಟಿ.‌ ಅವರು ನೋಡಿ ನಮ್ಮ ಚಿತ್ರ ಚೆನ್ನಾಗಿದೆ ಎಂದು ಇನ್ನೊಬ್ಬರಿಗೆ ಹೇಳಿದಾಗ ಖಂಡಿತವಾಗಿ ಹೆಚ್ಚಿನ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ಸಿನಿಮಾ ಬದುಕಿರುವುದೇ ಪ್ರೇಕ್ಷಕರಿಂದ. ಪ್ರೇಕ್ಷಕರು ನೋಡಿದರೆ ಮಾತ್ರ ಚಿತ್ರ ಮಾಡಬಹುದು. ಚಿತ್ರ ತಯಾರಕರು ಮತ್ತು ಪ್ರೇಕ್ಷಕರು ಒಂದು ಗಾಡಿಗೆ ಎರಡು ಚಕ್ರಗಳಿದ್ದಂತೆ. ಅವೆರಡೂ ಜೊತೆಯಾಗಿ ಹೋದರೆ ಮಾತ್ರ, ಸಿನಿಮಾ ತಯಾರಾಗುತ್ತದೆ. ಒಂದು ಚಕ್ರ ಪಕ್ಕಕ್ಕೆ ಹೋದರೂ, ಇಡೀ ಬಾಡಿ ಅಲ್ಲೇ ಉಳಿಯುತ್ತದೆ’ ಎಂದರು.

ಕನ್ನಡದಲ್ಲಿ ನಡೆಯುತ್ತಿರುವ ಒಳ್ಳೆಯ ಪ್ರಯತ್ನಗಳ ಬಗ್ಗೆ ಬೇರೆ ಕಡೆ ಗಮನಸೆಳೆಯುವ ಪ್ರಯತ್ನ ಇದು ಎಂದ ಮಂಸೋರೆ, ‘ಇಂಟರ್ನೆಟ್‍ ಬರುವ ಮುನ್ನ ಸುದ್ದಿ ಎಲ್ಲರಿಗೂ ಸರಿಯಾಗಿ ತಲುಪುತ್ತಿತ್ತು. ಆದರೆ, ಇಂಟರ್ನೆಟ್‍ ಬಂದ ಮೇಲೆ, ಒಂದು ಪೋಸ್ಟರ್ ಒಂದು ಪ್ರದೇಶ ಬಿಟ್ಟು ಇನ್ನೊಂದು ಕಡೆ ಹೋಗಲ್ಲ. ನಮ್ಮ ಪ್ರಚಾರ ಸರಿಯಾಗಿ ತಲುಪುತ್ತಿಲ್ಲ. ಎಷ್ಟೋ ಬಾರಿ ಒಳ್ಳೆಯ ಸಿನಿಮಾಗಳು ಬಂದರೂ, ಅದು ಬೇರೆ ಕಡೆ ತಲುಪುವುದಿಲ್ಲ. ಹಾಗಾಗಿ, ನಾವು ನಮ್ಮ ಚಿತ್ರವನ್ನು ಬೇರೆ ಪ್ರದೇಶದಲ್ಲಿ ತೋರಿಸಿ, ಅಲ್ಲಿ ಜನ ಚಿತ್ರ ನೋಡಿ, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಒಳ್ಳೆಯ ಪ್ರಯತ್ನಗಳ ಬಗ್ಗೆ ಅಲ್ಲೂ ವಿಷಯಗಳು ಮುಟ್ಟಲಿ ಎಂಬ ನಂಬಿಕೆ ಮೇಲೆ ಈ ಪ್ರದರ್ಶನ ಮಾಡಿದ್ದೇವೆ. ಈ ಚಿತ್ರವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ಗಳಲ್ಲೇ ನಾವು ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ದೂರ ತೀರ ಯಾಬ’ ಚಿತ್ರವನ್ನು ಡಿ ಕ್ರಿಯೇಶನ್ಸ್ ಬ್ಯಾನರ್‍ ಅಡಿ ದೇವರಾಜ್‍ ನಿರ್ಮಿಸಿದ್ದಾರೆ. ಇದು ಅವರ ನಿರ್ಮಾಣದ ಐದನೇ ಚಿತ್ರ. ಪ್ರಯಾಣದಲ್ಲಿ ನಡೆಯುವ ಪ್ರೇಮಕಥೆ ಇರುವ ಈ ಚಿತ್ರಕ್ಕೆ ಮಂಸೋರೆ ಕಥೆ ಬರೆದಿದ್ದಾರೆ. ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ.

‘ದೂರ ತೀರ ಯಾನ’ ಚಿತ್ರದಲ್ಲಿ ವಿಜಯ್‍ ಕೃಷ್ಣ, ಪ್ರಿಯಾಂಕಾ ಜೊತೆಗೆ ಶ್ರುತಿ ಹರಿಹರನ್‍, ಶರತ್ ಲೋಹಿತಾಶ್ವ, ಅರುಣ್‍ ಸಾಗರ್‍ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಶೇಖರ್‍ ಚಂದ್ರ ಛಾಯಾಗ್ರಹಣ ಮತ್ತು ಬಕ್ಕೇಶ್‍ ಸಂಗೀತವಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

7 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

8 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

8 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

8 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

8 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

9 hours ago