ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಅವರ ಚಿತ್ರವೊಂದು ಬಿಡುಗಡೆಯಾಗಿದ್ದು, ಕಳೆದ 15 ವರ್ಷದಲ್ಲೇ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಮೊನ್ನೆ ಶುಕ್ರವಾರ (ಜುಲೈ 12) ಅಕ್ಷಯ್ ಕುಮಾರ್ ಅಭಿನಯದ ‘ಸರ್ಫಿರಾ’ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆ ಯಾಗಿದೆ. ಈ ಚಿತ್ರವು ತಮಿಳಿನ ‘ಸೂರರೈ ಪೊಟ್ರು’ ಚಿತ್ರದ ರೀಮೇಕ್ ಆಗಿದ್ದು, ತಮಿಳು ಚಿತ್ರ ದೊಡ್ಡ ಹಿಟ್ ಆಗುವುದರ ಜೊತೆಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಪ್ರಶಂಸೆಯನ್ನೂ ತನ್ನದಾಗಿಸಿಕೊಂಡಿತ್ತು. ಆದರೆ, ಹಿಂದಿ ರೀಮೇಕ್ ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸೋತಿದೆ.
ಸರ್ಫಿರಾ ಚಿತ್ರವನ್ನು ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸುಧಾ ಕೊಂಗರಾ ಚಿತ್ರ ನಿರ್ದೇಶಿಸಿದ್ದು, ಅರುಣ್ ಭಾಟಿಯಾ, ಸೂರ್ಯ, ಜ್ಯೋತಿಕಾ ಮುಂತಾದವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್ ಕುಮಾರ್ ಒಡೆತನದ ಕೇಪ್ ಆಫ್ ಗುಡ್ ಫಿಲಂಸ್ ಸಹ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಅಕ್ಷಯ್ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳ ನಿರ್ಮಾಣದಲ್ಲೂ ಈ ಸಂಸ್ಥೆ ತೊಡಗಿಸಿಕೊಳ್ಳುವ ಹಾಗೆ ಈ ಚಿತ್ರದಲ್ಲೂ ತೊಡಗಿಸಿಕೊಂಡಿದೆ.
ಈ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ? ಜಗತ್ತಿನಾದ್ಯಂತ ಬಿಡುಗಡೆಯಾದ ಈ ಚಿತ್ರವು ಕೇವಲ 2.40 ಕೋಟಿ ರೂ ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಈ ಹಿಂದೆ, ಅಂದರೆ 15 ವರ್ಷಗಳ ಹಿಂದೆ ಅಕ್ಷಯ್ ಅಭಿನಯದ ‘ತಸ್ವೀರ್’ ಚಿತ್ರವು ಮೊದಲ ದಿನ ಕೇವಲ 1.4 ಕೋಟಿ ರೂ ಗಳಿಸಿತ್ತು. ಆಗಿನ ಕಾಲ ಬೇರೆ, ಈಗಿನ ಕಾಲ ಬೇರೆ. ಆ ಚಿತ್ರದ ನಂತರ ಅಕ್ಷಯ್ ಅಭಿನಯದ ಹಲವು ಚಿತ್ರಗಳು ಯಶಸ್ವಿಯಾಗುವುದರ ಜೊತೆಗ 100 ಕೋಟಿ ರೂ. ಗಳಿಕೆ ಮಾಡಿದೆ. ಐದು ವರ್ಷಗಳ ಹಿಂದೆ ಅಕ್ಷಯ್ ಅಭಿನಯದ ನಾಲ್ಕು ಚಿತ್ರಗಳು 200 ಕೋಟಿ ರೂ ಗಳಿಕೆ ಮಾಡಿತ್ತು. ಆ ನಂತರ ಕ್ರಮೇಣ ಅವರ ಚಿತ್ರಗಳು ಸೋಲ ತೊಡಗಿದವು. ಕೆಲವು ಚಿತ್ರಗಳು 100 ಕೋಟಿ ರೂ. ಕ್ಲಬ್ ಸೇರುವುದು ಕಷ್ಟವಾಯಿತು.
ಅಕ್ಷಯ್ ಅಭಿನಯದ ಹಿಂದಿನ ಚಿತ್ರ ‘ಬಡೇ ಮಿಯಾ ಚೋಟೇ ಮಿಯಾ’ ಚಿತ್ರವನ್ನು 350 ಕೋಟಿ ರೂ ಬಜೆಟ್ನಲ್ಲಿ ನಿರ್ಮಿಸಲಾಗಿತ್ತು. ಆದರೆ, ಚಿತ್ರವು ಅಂತಿಮವಾಗಿ 102.16 ಕೋಟಿ ರೂ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಇನ್ನು, ‘ಸರ್ಫಿರಾ’ ಚಿತ್ರವು 80 ಕೋಟಿ ರೂ ಬಜೆಟ್ನಲ್ಲಿ ನಿರ್ಮಾನವಾದ ಚಿತ್ರವಾಗಿದ್ದು, ಮೊದಲ ದಿನ ಕೇವಲ 2.40 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ಮುಂದುವರೆದರೆ, ಚಿತ್ರ 10 ಕೋಟಿ ರೂ. ಸಹ ಸಂಗ್ರಹಿಸುತ್ತದೋ, ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಕೋಲ್ಕತ್ತ : ಟಿ-20 ವಿಶ್ವಕಪ್ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್ಗಳ…
ಮಂಡ್ಯ: ಡಿ.ಕೆ. ಶಿವಕುಮಾರ್ ಅವರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿ.ರವಿಕುಮಾರ್…
ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ…
ಮೈಸೂರು : ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಮಂಡಿ ಪೊಲೀಸ್ ಠಾಣಾ ಅಧಿಕಾರಿಗಳು ನಡೆಸಿದ…
ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…
ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…