ಮನರಂಜನೆ

ಸದ್ದಿಲ್ಲದೆ ‘ಲವ್ ಮಾಕ್ಟೇಲ್‍ 3’ ಚಿತ್ರ ಪ್ರಾರಂಭಿಸಿದ ಕೃಷ್ಣ

‘ಫಾದರ್’ ಮತ್ತು ‘ಬ್ರ್ಯಾಟ್‍’ ಚಿತ್ರಗಳನ್ನು ಮುಗಿಸಿರುವ ಕೃಷ್ಣ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಕೃಷ್ಣ ಸದ್ದಿಲ್ಲದೆ ‘ಲವ್‍ ಮಾಕ್ಟೇಲ್‍ 3’ ಚಿತ್ರದ ಕೆಲಸಗಳನ್ನು ಪ್ರಾರಂಭಿಸಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

‘ಲವ್‍ ಮಾಕ್ಟೇಲ್‍ 3’ ಚಿತ್ರವು ‘ಲವ್‍ ಮಕ್ಟೇಲ್‍ 2’ನ ಮುಂದುವರೆದ ಭಾಗವಾಗಿದ್ದು, ಈ ಚಿತ್ರದ ಕೆಲಸಗಳು ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಈ ಮಧ್ಯೆ, ಕೃಷ್ಣ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದರಿಂದ, ‘ಲವ್ ‍ಮಾಕ್ಟೇಲ್‍ 3’ನ ಕೆಲಸಗಳು ವಿಳಂಬವಾಯ್ತು. ಇದೀಗ ‘ಫಾದರ್’ ಮತ್ತು ‘ಬ್ರ್ಯಾಟ್‍’ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ‘ಲವ್‍ ಮಾಕ್ಟೇಲ್‍ 3’ ಚಿತ್ರದ ಒಂದು ಹಂತದ ಚಿತ್ರೀಕರಣವನ್ನೂ ಕೃಷ್ಣ ಮುಗಿಸಿದ್ದಾರೆ.

‘ಲವ್‍ ಮಾಕ್ಟೇಲ್‍ 3’ ಕುರಿತು ಮಾತನಾಡುವ ಕೃಷ್ಣ, ಮೊದಲೆರಡು ಭಾಗಗಳಂತೆ ಮೂರನೇ ಭಾಗವೂ ಅಷ್ಟೇ ವಿಭಿನ್ನವಾಗಿರುತ್ತದೆ. ಪಾತ್ರಗಳು ಅದೇ ಇರುತ್ತದೆ. ಆದರೆ, ಇದು ಬೇರೆ ತರಹದ ಸಿನಿಮಾ ಆಗಿರುತ್ತದೆ. ಹಳೆಯ ಪಾತ್ರಗಳ ಜೊತೆಗೆ, ಇನ್ನೊಂದಿಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗುತ್ತವೆ. ಎರಡನೇ ಭಾಗದಲ್ಲಿ ಕೆಲಸ ಮಾಡಿದ ತಾಂತ್ರಿಕ ತಂಡವೇ ಇಲ್ಲೂ ಮುಂದುವರೆಯುತ್ತದೆ. ಆ ಎರಡು ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರದ ಬಜೆಟ್‍ ಸಹ ಜಾಸ್ತಿ ಇರುತ್ತದೆ. ಹಾಗಂತ ಸುಮ್ಮನೆ ಖರ್ಚು ಮಾಡುತ್ತಿಲ್ಲ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡುತ್ತಿದ್ದೇವೆ’ ಎನ್ನುತ್ತಾರೆ.

‘ಲವ್‍ ಮಾಕ್ಟೇಲ್‍ 3’ ಮಾಡುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಕೃಷ್ಣ, ‘ಒಂದು ಕಥೆ ಮಾಡುವುದು ಸುಲಭ. ಅದರ ಮುಂದುವರೆದ ಭಾಗ ಮಾಡುವುದು ನಿಜಕ್ಕೂ ಕಷ್ಟ. ಒಂದು ಆ್ಯಕ್ಷನ್‍ ಚಿತ್ರದ ಸೀಕ್ವೆಲ್‍ ಮಾಡುವುದು ಸುಲಭದ ವಿಷಯ. ಆದರೆ, ಭಾವನಾತ್ಮಕ ಕಥೆ ಮಾಡುವುದು ಸವಾಲಿನ ಕೆಲಸ. ಅದರಲ್ಲೂ ಮೂರನೆಯ ಭಾಗ ಮಾಡುವುದು ಇನ್ನೂ ಕಷ್ಟ. ನಾನು ಮೊದಲ ಭಾಗದ ಕಥೆ ಬರೆದಾಗ, ಕೇವಲ 19 ದಿನಗಳಲ್ಲಿ ಕಥೆ-ಚಿತ್ರಕಥೆ ಬರೆದಿದ್ದೆ. ಎರಡನೆಯ ಭಾಗ ಬರೆಯುವುದಕ್ಕೆ ಆರು ತಿಂಗಳು ಬೇಕಾಯಿತು. ಮೂರನೆಯ ಭಾಗ ಬರೆಯುವುದಕ್ಕೆ ಮೂರೂವರೆ ವರ್ಷಗಳು ಬೇಕಾದವು’ ಎನ್ನುತ್ತಾರೆ.

ಇನ್ನು, ‘ಬ್ರ್ಯಾಟ್‍’ ಮತ್ತು ‘ಫಾದರ್’ ಚಿತ್ರಗಳ ಪೈಕಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗೆ, ‘ಇಬ್ಬರಲ್ಲಿ ಯಾರು ಮೊದಲು ಬರುತ್ತಾರೆ ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಎರಡೂ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎರಡೂ ಚಿತ್ರಗಳ ಕೆಲಸಗಳು ಒಂದು ಹಂತಕ್ಕೆ ಬಂದ ನಂತರ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದೆ. ವಿಶೇಷವೆಂದರೆ, ಇವೆರಡೂ ಚಿತ್ರಗಳು ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಪ್ಯಾನ್‍ ಇಂಡಿಯಾ ಚಿತ್ರಗಳು ಎನ್ನುತ್ತಾರೆ ಕೃಷ್ಣ.

ಆಂದೋಲನ ಡೆಸ್ಕ್

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

8 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

9 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

10 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

11 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

15 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

15 hours ago