ಮನರಂಜನೆ

‘ಬಿಗ್ ಬಾಸ್‍’ನಿಂದ ಎಷ್ಟು ಜನರಿಗೆ ಪ್ರಯೋಜನ ಆಯಿತು ಎಂಬುದು ಮುಖ್ಯ: ಸುದೀಪ್‍

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್‍ ಬಾಸ್‍ -ಸೀಸನ್‍ 11’ಕ್ಕೆ ದಿನಗಣನೆ ಪ್ರಾರಂಭವಾಗುತ್ತಿದೆ. ಈ ಕಾರ್ಯಕ್ರಮವನ್ನು ಸುದೀಪ್‍ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮವು ಸೆ. 20ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದ್ದು, ಅಂದು ಸುದೀಪ್‍ ಸ್ಪರ್ಧಿಗಳನ್ನು ಮನೆಗೆ ಬಿಡಲಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆನ್‍ಲೈನ್‍ ರಮ್ಮಿ ಸಂಸ್ಥೆಯೊಂದು ಪಡೆದಿದೆ. ಈ ಹಿಂದೆ ರಮ್ಮಿ ಆನ್‍ಲೈನ್‍ ಗೇಮ್‍ಗೆ ಪ್ರಚಾರ ಮಾಡಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು ಸುದೀಪ್‍. ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅವರು, ರಮ್ಮಿ ಆಟಕ್ಕೆ ಪ್ರಚಾರ ನೀಡಬಾರದು, ಅದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸಂಸ್ಥೇಯ ಪ್ರಚಾರದಿಂದ ಸುದೀಪ್‍ ದೂರ ಉಳಿದರೂ, ಇದೀಗ ‘ಬಿಗ್‍ ಬಾಸ್’ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆನ್‍ಲೈನ್‍ ರಮ್ಮಿ ಗೇಮ್‍ ಪಡೆದಿದೆ.

ಸಾಮಾಜಿಕ ಜವಾಬ್ದಾರಿ ಇರುವ ನಟನೊಬ್ಬ ಸಮಾಜಕ್ಕೆ ಮಾರಕವಾಗಿರುವ ಆನ್‍ಲೈನ್‍ ರಮ್ಮಿ ಆಟವನ್ನು ಪ್ರಚಾರ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್‍, ‘ನಮ್ಮದು ತಿಳವಳಿಕೆ ಇರುವ ಒಂದು ಸಮಾಜ. ಇಲ್ಲಿ ಸಿಗರೇಟ್‍, ಕುಡಿತ, ಸಾಕಷ್ಟು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ-ತಾಯಿ ಇದ್ದಾರೆ. ನಮಗೆ ಏನು ಬೇಕೋ ಅದನ್ನು ನಾವು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ಪಡೆಯುವ ತೆರಿಗೆ ತುಂಬಾ ದುಬಾರಿ ಎಂಬ ಅನಿಸಿಕೆ ಜನರಲ್ಲಿದೆ. ಆದರೆ, ಒಂದು ದೇಶ ನಡೆಸುವಾಗ, ಈ ತರಹದ ಹಣ ಅವಶ್ಯಕವಾಗಬಹುದು. ಅದೇ ತರಹ ಈ ತರಹದ ಕಾರ್ಯಕ್ರಮಗಳನ್ನು ರೂಪಿಸುವಾಗ, ಈ ತರಹದ ಜಾಹೀರಾತುಗಳು ಬೇಕಾಗಬಹುದು. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಅದನ್ನು ಸರಿದೂಗಿಸುವುದಕ್ಕೆ ಈ ತರಹದ ಜಾಹೀರಾತುಗಳು ಬೇಕಾಗಬಹುದು. ಇದಕ್ಕೂ ನನಗೂ ಸಂಬಂಧವಿಲ್ಲ. ಇದು ಸಂಸ್ಥೆಗೆ ಬಿಟ್ಟ ವಿಷಯ’ ಎಂದರು.

ಇದೆಲ್ಲದರ ಹೊರತಾಗಿ ತಾವು ‘ಬಿಗ್‍ ಬಾಸ್‍’ನಿಂದ ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದೆ ಎಂದ ಸುದೀಪ್‍, ‘ಬರೀ ರಮ್ಮಿ ಬಗ್ಗೆ ಮಾತ್ರವಲ್ಲ, ನಾನು ಅದನ್ನ ಮೀರಿ ನೋಡುತ್ತಿದ್ದೇನೆ. ‘ಬಿಗ್ ಬಾಸ್‍’ನಂತಹ ಕಾರ್ಯಕ್ರಮದಿಂದ ಎಷ್ಟೋ ಕುಟುಂಬಗಳಿಗೆ ಪ್ರಯೋಜನವಾಗಿವೆ, ಎಷ್ಟೋ ವ್ಯಕ್ತಿತ್ವಗಳು ಉದ್ಧಾರವಾಗಿವೆ, ಹಲವರಿಗೆ ಕೆಲಸ ಸಿಕ್ಕಿದೆ. ಕಾರ್ಯಕ್ರಮ ನೋಡಿದವರೆಲ್ಲಾ ರಮ್ಮಿ ಆಡುತ್ತಾರಾ? ಸಮಾಜದಲ್ಲಿ ತಿಳವಳಿಕೆ ಇರುವ ಪ್ರತಿಯೊಬ್ಬರೂ ತನ್ನ ಆಯ್ಕೆ ಏನಿರಬೇಕೆಂದು ಯೋಚಿಸುತ್ತಾರೆ’ಎಂದರು.

ಆನ್‍ಲೈನ್‍ ರಮ್ಮಿ ತಪ್ಪು ಎನ್ನುವವರು ಸಿದ್ದರಾಮಯ್ಯ ಅಥವಾ ಮೋದಿ ಅವರನ್ನು ಕೇಳಿ ಎನ್ನುವ ಸುದೀಪ್‍, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಹೋಗಿ, ಪ್ರಧಾನಿ ಮೋದಿ ಮನೆಗೆ ಹೋಗಿ ಇವೆಲ್ಲಾ ಬೇಡ ಎಂದು ಸ್ಟ್ರೈಕ್‍ ಮಾಡಿ. ನನಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಇಲ್ಲ. ಮೋದಿ ಮತ್ತು ಸಿದ್ದರಾಮಯ್ಯನವರು ನನ್ನ ಹಿಡಿತದಲ್ಲಿದ್ದರೆ, ಬೇರೆ ವಿಷಯ. ಬಹುಶಃ ನಾನು ರಾಜಕಾರಣಿಯಾದರೆ, ನನಗೆ ಸಾಧ್ಯವಾಗಿದ್ದು ಮಾಡುತ್ತೇನೆ’ ಎಂದರು.

ಭೂಮಿಕಾ

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

12 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

12 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

13 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

13 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

13 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

13 hours ago