ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್ ಬಾಸ್ -ಸೀಸನ್ 11’ಕ್ಕೆ ದಿನಗಣನೆ ಪ್ರಾರಂಭವಾಗುತ್ತಿದೆ. ಈ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮವು ಸೆ. 20ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದ್ದು, ಅಂದು ಸುದೀಪ್ ಸ್ಪರ್ಧಿಗಳನ್ನು ಮನೆಗೆ ಬಿಡಲಿದ್ದಾರೆ.
ಅಂದಹಾಗೆ, ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆನ್ಲೈನ್ ರಮ್ಮಿ ಸಂಸ್ಥೆಯೊಂದು ಪಡೆದಿದೆ. ಈ ಹಿಂದೆ ರಮ್ಮಿ ಆನ್ಲೈನ್ ಗೇಮ್ಗೆ ಪ್ರಚಾರ ಮಾಡಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು ಸುದೀಪ್. ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅವರು, ರಮ್ಮಿ ಆಟಕ್ಕೆ ಪ್ರಚಾರ ನೀಡಬಾರದು, ಅದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸಂಸ್ಥೇಯ ಪ್ರಚಾರದಿಂದ ಸುದೀಪ್ ದೂರ ಉಳಿದರೂ, ಇದೀಗ ‘ಬಿಗ್ ಬಾಸ್’ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆನ್ಲೈನ್ ರಮ್ಮಿ ಗೇಮ್ ಪಡೆದಿದೆ.
ಸಾಮಾಜಿಕ ಜವಾಬ್ದಾರಿ ಇರುವ ನಟನೊಬ್ಬ ಸಮಾಜಕ್ಕೆ ಮಾರಕವಾಗಿರುವ ಆನ್ಲೈನ್ ರಮ್ಮಿ ಆಟವನ್ನು ಪ್ರಚಾರ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ‘ನಮ್ಮದು ತಿಳವಳಿಕೆ ಇರುವ ಒಂದು ಸಮಾಜ. ಇಲ್ಲಿ ಸಿಗರೇಟ್, ಕುಡಿತ, ಸಾಕಷ್ಟು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ-ತಾಯಿ ಇದ್ದಾರೆ. ನಮಗೆ ಏನು ಬೇಕೋ ಅದನ್ನು ನಾವು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ಪಡೆಯುವ ತೆರಿಗೆ ತುಂಬಾ ದುಬಾರಿ ಎಂಬ ಅನಿಸಿಕೆ ಜನರಲ್ಲಿದೆ. ಆದರೆ, ಒಂದು ದೇಶ ನಡೆಸುವಾಗ, ಈ ತರಹದ ಹಣ ಅವಶ್ಯಕವಾಗಬಹುದು. ಅದೇ ತರಹ ಈ ತರಹದ ಕಾರ್ಯಕ್ರಮಗಳನ್ನು ರೂಪಿಸುವಾಗ, ಈ ತರಹದ ಜಾಹೀರಾತುಗಳು ಬೇಕಾಗಬಹುದು. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಅದನ್ನು ಸರಿದೂಗಿಸುವುದಕ್ಕೆ ಈ ತರಹದ ಜಾಹೀರಾತುಗಳು ಬೇಕಾಗಬಹುದು. ಇದಕ್ಕೂ ನನಗೂ ಸಂಬಂಧವಿಲ್ಲ. ಇದು ಸಂಸ್ಥೆಗೆ ಬಿಟ್ಟ ವಿಷಯ’ ಎಂದರು.
ಇದೆಲ್ಲದರ ಹೊರತಾಗಿ ತಾವು ‘ಬಿಗ್ ಬಾಸ್’ನಿಂದ ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದೆ ಎಂದ ಸುದೀಪ್, ‘ಬರೀ ರಮ್ಮಿ ಬಗ್ಗೆ ಮಾತ್ರವಲ್ಲ, ನಾನು ಅದನ್ನ ಮೀರಿ ನೋಡುತ್ತಿದ್ದೇನೆ. ‘ಬಿಗ್ ಬಾಸ್’ನಂತಹ ಕಾರ್ಯಕ್ರಮದಿಂದ ಎಷ್ಟೋ ಕುಟುಂಬಗಳಿಗೆ ಪ್ರಯೋಜನವಾಗಿವೆ, ಎಷ್ಟೋ ವ್ಯಕ್ತಿತ್ವಗಳು ಉದ್ಧಾರವಾಗಿವೆ, ಹಲವರಿಗೆ ಕೆಲಸ ಸಿಕ್ಕಿದೆ. ಕಾರ್ಯಕ್ರಮ ನೋಡಿದವರೆಲ್ಲಾ ರಮ್ಮಿ ಆಡುತ್ತಾರಾ? ಸಮಾಜದಲ್ಲಿ ತಿಳವಳಿಕೆ ಇರುವ ಪ್ರತಿಯೊಬ್ಬರೂ ತನ್ನ ಆಯ್ಕೆ ಏನಿರಬೇಕೆಂದು ಯೋಚಿಸುತ್ತಾರೆ’ಎಂದರು.
ಆನ್ಲೈನ್ ರಮ್ಮಿ ತಪ್ಪು ಎನ್ನುವವರು ಸಿದ್ದರಾಮಯ್ಯ ಅಥವಾ ಮೋದಿ ಅವರನ್ನು ಕೇಳಿ ಎನ್ನುವ ಸುದೀಪ್, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಹೋಗಿ, ಪ್ರಧಾನಿ ಮೋದಿ ಮನೆಗೆ ಹೋಗಿ ಇವೆಲ್ಲಾ ಬೇಡ ಎಂದು ಸ್ಟ್ರೈಕ್ ಮಾಡಿ. ನನಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಇಲ್ಲ. ಮೋದಿ ಮತ್ತು ಸಿದ್ದರಾಮಯ್ಯನವರು ನನ್ನ ಹಿಡಿತದಲ್ಲಿದ್ದರೆ, ಬೇರೆ ವಿಷಯ. ಬಹುಶಃ ನಾನು ರಾಜಕಾರಣಿಯಾದರೆ, ನನಗೆ ಸಾಧ್ಯವಾಗಿದ್ದು ಮಾಡುತ್ತೇನೆ’ ಎಂದರು.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…