ಮನರಂಜನೆ

ಅವರ ಕನಸಲ್ಲಿ ಇವರ ಪಾತ್ರ; ‘ರೂಪಾಂತರ’ ಟ್ರೇಲರ್ ಬಿಡುಗಡೆ

ರಾಜ್‍ ಬಿ ಶೆಟ್ಟಿ ಅಭಿನಯದ ‘ಏಕಂ’ ಎಂಬ ವೆಬ್‍ಸರಣಿ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಈಗ ಇದೇ ಶುಕ್ರವಾರ (ಜುಲೈ 26), ರಾಜ್‍ ಅಭಿನಯದ ‘ರೂಪಾಂತರ’ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅವರು ಬರೀ ನಟ ಮತ್ತು ಸಂಭಾಷಣೆಕಾರ. ಮಿಕ್ಕ ಜವಾಬ್ದಾರಿಗಳು ಅವರ ಸ್ನೇಹಿತರದ್ದು. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

‘ರೂಪಾಂತರ’ ಬಗ್ಗೆ ಮಾತನಾಡುವ ರಾಜ್ ಬಿ ಶೆಟ್ಟಿ, ‘ನನಗೆ ಬಹಳ ಇಷ್ಟವಾದ ಚಿತ್ರಗಳ ಪೈಕಿ ‘ರೂಪಾಂತರ’ ಸಹ ಒಂದು. ಈ ಚಿತ್ರದಲ್ಲಿ ನಾನು ನಟ ಮತ್ತು ಸಣ್ಣಮಟ್ಟದಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದೇನೆ. ಬಿಟ್ಟರೆ, ಇದು ಇವರ ಕನಸು. ಇದರಲ್ಲಿ ಬೇರೆಬೇರೆ ಪಾತ್ರಗಳ, ಬೇರೆಬೇರೆ ಕಥೆಗಳಿವೆ. ಅವು ರೂಪಾಂತರಗೊಳ್ಳುವುದೇ ಈ ಚಿತ್ರದ ಕಥೆ. ಜೀವನದ ಒಂದು ಮಗ್ಗುಲಲ್ಲಿ ಅವರಲ್ಲಿ ರೂಪಾಂತರವಾಗುವ ಕಥೆ ಇದೆ. ಎಲ್ಲಾ ಕಥೆಗಳು ಸಮಾನಾಂತರವಾಗಿ ಸಾಗುತ್ತಿರುತ್ತದೆ. ಒಂದು ಹಂತದಲ್ಲಿ ಅವರೆಲ್ಲಾ ಭೇಟಿಯಾಗುತ್ತಾರೆ. ಒಬ್ಬನ ರೂಪಾಂತರಕ್ಕೆ ಇನ್ನೊಬ್ಬರ ಕೊಡುಗೆ ಇರುತ್ತದೆ’ ಎಂದರು.

ಈ ಚಿತ್ರವನ್ನು ಮಿಥಿಲೇಶ್ ಎಡವಲತ್ ನಿರ್ದೇಶಿಸಿದ್ದಾರೆ. ಅವರು ಮೂಲತಃ ಕೇರಳದವರು. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವುದರ ಜೊತೆಗೆ ಕಥೆ ಬರೆದು ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ನಾನು ನೋಡಿ, ಸ್ಫೂರ್ತಿಗೊಂಡ ಜನರ ಕಥೆ ಇದು. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸುತ್ತತ್ತದೆ’ ಎಂದು ಹೇಳಿಕೊಂಡರು ಮಿಥಿಲೇಶ್.

ನಿರ್ಮಾಪಕ ಸುಹಾನ್ ಪ್ರಸಾದ್‍ ಇದಕ್ಕೂ ಮೊದಲು ‘ಒಂದು ಮೊಟ್ಟೆಯ ಕಥೆ’ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ತಾವೂ ರೂಪಾಂತರಗೊಂಡಿರುವ ಕುರಿತು ಹೇಳಿದ ಅವರು, ‘ನಾವು ಇಷ್ಟು ದಿನ ಮಂಗಳೂರಿನ ಭಾಷೆ ಮತ್ತು ಸೊಗಡು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೆವು. ಹೊರಗೆ ಬಂದು ಬೇರೆ ತರಹದ ಸಿನಿಮಾ ಮಾಡೋಣ ಎಂಬ ಆಸೆ ಇತ್ತು. ಕಾರಣಾಂತರಗಳಿಂದ ಅದು ನಿಧಾನವಾಯ್ತು. ಈ ಚಿತ್ರದಿಂದ ಅದು ಸಾಧ್ಯವಾಗಿದೆ. ಇಲ್ಲಿ ಮಂಗಳೂರಿನ ಸೊಗಡಿಲ್ಲ. ಅಲ್ಲಿ ಚಿತ್ರೀಕರಣವನ್ನೂ ಮಾಡಿಲ್ಲ. ರಾಜ್ಯದ ಬೇರೆಬೇರೆ ಮೂಲೆಗಳ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಒಂದರ್ಥದಲ್ಲಿ ನಾವು ಸಹ ಈ ಚಿತ್ರದ ಮೂಲಕ ‘ರೂಪಾಂತರ’ ಆಗಿದ್ದೇವೆ’ ಎಂದರು.

ಮಿಥುನ್‍ ಮುಕುಂದನ್‍ ಸಂಗೀತ ಮತ್ತು ಪ್ರವೀಣ್‍ ಶ್ರೀಯಾನ್‍ ಛಾಯಾಗ್ರಹಣವಿರುವ ‘ರೂಪಾಂತರ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ ಜೊತೆಗೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮುಂತಾದವರು ನಟಿಸಿದ್ದಾರೆ.

ಭೂಮಿಕಾ

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

3 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

4 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

5 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

5 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

10 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

10 hours ago