ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ ತಮ್ಮ ಕ್ರಾಂತಿ ಚಿತ್ರದ ಪ್ರಚಾರದ ವೇಳೆ ನಡೆದ ಒಂದು ಸಂದರ್ಶನದಲ್ಲಿ ತಮ್ಮ ನೆಚ್ಚಿನ ಚಾಟ್ ಸೆಂಟರ್ ಬಗ್ಗೆ ಮಾತನಾಡಿದ್ದರು. ಬೆಂಗಳೂರಿನ ನಾಗರಭಾವಿ ಸಮೀಪ ವೀರೇಶ್ ಎಂಬ ವಿಶೇಷ ಚೇತನ ಅಭಿಮಾನಿಯೋರ್ವ ನಡೆಸುತ್ತಿದ್ದ ʼಹೊಟ್ಟೆಪಾಡುʼ ಎಂಬ ಚಾಟ್ಸೆಂಟರ್ ಬಗ್ಗೆ ಮಾತನಾಡಿದ್ದರು.
“ಆತ ಒಬ್ಬ ವಿಶೇಷ ಚೇತನ ಅಭಿಮಾನಿ. ಹೊರಗಡೆ ಹೋಗಿ ಭಿಕ್ಷೆ ಬೇಡದೇ ಪಾನಿಪೂರಿ ಇಟ್ಟುಕೊಂಡು ಕಷ್ಟಪಟ್ಟು ದುಡಿಯುತ್ತಿದ್ದಾನಲ್ಲ ಅದು ಗ್ರೇಟ್. ಅವನನ್ನು ಹುಡುಕಿಕೊಂಡು ಹೋಗಿ ತಿಂದರೆ, ಆತ ಇನ್ನೊಂದಷ್ಟು ಜನರಿಗೆ ಸ್ಪೂರ್ತಿಯಾಗುತ್ತಾನೆ” ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು.
ದರ್ಶನ್ ಅವರ ಈ ಸಂದರ್ಶನ ಹೊರಬಿದ್ದ ಬಳಿಕ ಇದೀಗ ಆ ವಿಶೇಷಚೇತನ ಅಭಿಮಾನಿ ವೀರೇಶ್ ಜೀವನವೇ ಬದಲಾಗಿಹೋಗಿದೆ. ಈ ಹಿಂದೆ ದಿನಕ್ಕೆ ನೂರು ಪ್ಲೇಟ್ ಮಾರಾಟವಾಗ್ತಿದ್ದ ಚಾಟ್ಸ್ ಇದೀಗ ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ 200 ಪ್ಲೇಟ್ ಮಾರಾಟವಾಗ್ತಿದೆ. ಹೀಗಂತ ಸ್ವತಃ ವೀರೇಶ್ ʼಕನ್ನಡ ಫಿಲ್ಮಿಬೀಟ್ʼ ಜತೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…