ಮನರಂಜನೆ

ಸೋನಲ್‍ಗೆ ಲೈನ್‍ ಹೊಡೆಯುತ್ತಿದ್ದೀಯ ಎಂದು ದರ್ಶನ್‍ ಕಿಚಾಯಿಸುತ್ತಿದ್ದರು: ತರುಣ್ ಸುಧೀರ್

ತರುಣ್‍ ಸುಧೀರ್ ಹಾಗೂ ಸೋನಲ್‍ ಇದೇ ಆಗಸ್ಟ್ 11ರಂದು ಮದುವೆಯಾಗುತ್ತಿದ್ದಾರೆ. ಈ ವಿಷಯವನ್ನು ಈಗಾಗಲೇ ಇಬ್ಬರೂ ಅಧಿಕೃತವಾಗಿ ಘೋಷಿಸಿದ್ದು, ಆಹ್ವಾನ ಪತ್ರಿಕೆಯನ್ನೂ ಹಂಚುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಇಬ್ಬರೂ ಶನಿವಾರ ಮಾಧ್ಯಮದವರ ಮುಂದೆ ಬಂದು ಆಹ್ವಾನಿಸುವುದರ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಪರಿಚಯದ ಕುರಿತು ಮಾತನಾಡಿದ ತರುಣ್‍ ಸುಧೀರ್, ‘‘ರಾಬರ್ಟ್’ ಚಿತ್ರದ ಸಂದರ್ಭದಲ್ಲಿ ನಮ್ಮಿಬ್ಬರ ಭೇಟಿಯಾಯಿತು. ನಮ್ಮ ಸಂಬಂಧ ಬಹಳ ವೃತ್ತಿಪರವಾಗಿತ್ತು. ಆ ನಂತರ ನಾಲ್ಕು ವರ್ಷಗಳ ಕಾಲ ಇಬ್ಬರೂ ವರ್ಷಕ್ಕೆ ಎರಡು ಮೆಸೇಜ್‍ಗಳನ್ನು ಹಾಕುತ್ತಿದ್ದೆವು. ಅವರು ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಮೆಸೇಜ್ ಮಾಡಿದರೆ, ನಾನು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮೆಸೇಜ್ ಮಾಡುತ್ತಿದ್ದೆ. ಅದು ಬಿಟ್ಟರೆ ಹೆಚ್ಚು ಮಾತಿರಲಿಲ್ಲ. ಯಾವುದಾದರೂ ಸಮಾರಂಭದಲ್ಲಿ ಸಿಕ್ಕರೆ ಹಲೋ ಎನ್ನುವುದು ಬಿಟ್ಟರೆ ನಮ್ಮಿಬ್ಬರ ನಡುವೆ ಹೆಚ್ಚು ಮಾತಿರಲಿಲ್ಲ. 2023ರಲ್ಲಿ ನಮ್ಮಿಬ್ಬರ ಬಾಂಡಿಂಗ್‍ ಶುರುವಾಯ್ತು’ ಎಂದರು.

‘ರಾಬರ್ಟ್’ ಚಿತ್ರದಲ್ಲಿ ದರ್ಶನ್‍ ಈ ವಿಷಯವಾಗಿ ಬಹಳ ಕಿಚಾಯಿಸುತ್ತಿದ್ದರು ಎಂದ ತರುಣ್, ‘’ರಾಬರ್ಟ್’ ಚಿತ್ರದ ಶೂಟಿಂಗ್ ಮಾಡುವಾಗ, ಸೋನಾಲ್‍ ಮಾತ್ರ ಯಾಕೆ ಇಷ್ಟು ಚೆನ್ನಾಗಿ ಫ್ರೇಮ್ ಇಡುತ್ತೀಯಾ? ನಮ್ಮನ್ನು ಯಾಕೆ ಚೆನ್ನಾಗಿ ತೋರಿಸಲ್ಲ? ಎಂದು ಕಾಲೆಳೆಯುತ್ತಿದ್ದರು. ನೀನು ಅವರಿಗೆ ಲೈನ್‍ ಹೊಡೆಯುತ್ತಿದ್ದೀಯ ಎಂದು ದರ್ಶನ್‍ ಕಿಚಾಯಿಸುತ್ತಿದ್ದರು. ಸೆಟ್‍ನಲ್ಲಿ ರೇಗಿಸುತ್ತಿದ್ದರು. ಅಮ್ಮ ಒಮ್ಮೆ ಸೆಟ್‍ಗೆ ಬಂದಾಗ, ಇವನಿಗೆ ಮದುವೆ ಮಾಡಿಸಲಾ? ಎಂದು ಕೇಳಿದ್ದರು. ಅದಕ್ಕೆ ಅಮ್ಮ, ‘ನೀನು ಯಾರನ್ನು ತೋರಿಸುತ್ತೀಯೋ, ಅವರು ನನಗೆ ಓಕೆ’ ಎಂದಿದ್ದರು. ಇದೊಂದು ತಮಾಷೆಯ ವಿಷಯವಾಗಿತ್ತು. ಬಹುಶಃ ಸೆಟ್‍ನಲ್ಲಿ ಹೀಗೆ ಮಾತು ಕೇಳಿಬಂದಿದ್ದರಿಂದ ಶುರುವಾಯ್ತೇನೋ ಗೊತ್ತಿಲ್ಲ. ಸೋನಲ್‍ ಬೇರೆ ಚಿತ್ರಗಳ ಚಿತ್ರೀಕರಣಕ್ಕೆ ಹೋದಾಗ ಅಲ್ಲಿ, ‘ನೀವು ಮತ್ತು ತರುಣ್ ಡೇಟ್ ಮಾಢುತ್ತಿದ್ದೀರಾ?’ ಎಂದು ಕೇಳುತ್ತಿದ್ದರಂತೆ. ಆಗ ನಮಗೆ ಸರಿಯಾದ ಪರಿಚಯವಿರಲಿಲ್ಲ. ಸ್ನೇಹಿತರಾದ ಸುಧಾಕರ್, ಚಿಕ್ಕಣ್ಣ ಯಾವಾಗಲೂ ಹೇಳುತ್ತಿದ್ದರು. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಮದುವೆಯಾಗಿ’ ಎನ್ನುತ್ತಿದ್ದರು. ಸೋನಲ್ ಒಂದು ದಿನ ಫೋನ್ ಮಾಡಿ, ‘ಎಲ್ಲರೂ ನಮ್ಮ ಬಗ್ಗೆ ಮಾತಾಡುತ್ತಿದ್ದಾರೆ’ ಎಂದರು. ‘ನನ್ನ ಸ್ನೇಹಿತರು ಹಾಗೇ ಹೇಳುತ್ತಿದ್ದಾರೆ’ ಎಂದೆ. ಪದೇಪದೇ ಈ ವಿಷಯ ಕೇಳಿಬರುತ್ತಿದೆ, ಬಹುಶಃ ಪ್ರಕೃತಿಯೇ ನಮ್ಮನ್ನು ಒಂದು ಮಾಡುತ್ತಿದೆಯಾ? ಎಂದನಿಸಿತು. ಮೊದಲು ಪರಸ್ಪರ ಅರ್ಥ ಮಾಡಿಕೊಳ್ಳೋಣ ಎಂದು ಮುಂದಾದೆವು. ಕೆಲವು ತಿಂಗಳುಗಳ ಕಾಲ ಅರ್ಥ ಮಾಡಿಕೊಂಡು, ಈಗ ಮದುವೆ ಆಗುತ್ತಿದ್ದೇವೆ’ ಎಂದರು.

ಇನ್ನು, ದರ್ಶನ್‍ ಅವರಿಗೆ ಮದುವೆ ವಿಷಯದ ಬಗ್ಗೆ ಗೊತ್ತಿತ್ತಂತೆ. ‘ದರ್ಶನ್‍ ಅವರ ಬಳಿ ಡೇಟ್‍ ಬಗ್ಗೆ ಅವರಿಗೆ ಮೊದಲೇ ಮಾತಾಡಿದ್ದೆ. ಅವರು ಓಕೆ ಎಂದಿದ್ದರು. ಅವರಿಗೆ ಎಲ್ಲವೂ ಗೊತ್ತಿತ್ತು. ನಾನು ಜೈಲಿಗೆ ಹೋದಾಗ ಅವರು ಮೊದಲು ಹಾಯ್‍, ಹೆಲೋ ಎನ್ನಲಿಲ್ಲ. ಮದುವೆ ತಯಾರಿ ಸರಿಯಾಗಿ ನಡೆಯುತ್ತಿದೆಯಾ ಎಂದರು. ಯಾವುದೂ ಬದಲಾಗಬಾರದು, ಅಂದುಕೊಂಡ ದಿನದಂದೇ ಮದುವೆ ಮಾಡಿಕೊಳ್ಳಬೇಕು. ಏನೂ ಟೆನ್ಶನ್ ‍ಮಾಡಿಕೊಳ್ಳಬೇಡ. ನಾನು ಖಂಡಿತಾ ಬರುತ್ತೇನೆ. ಡೇಟ್ ಮುಂದಕ್ಕೆ ಹಾಕಬೇಡ ಎಂದು ಹೇಳಿದ್ದರು’ ಎಂದರು ತರುಣ್‍.

ಮದುವೆ ನಂತರ ನಟನೆ ಮುಂದುವರೆಸುವುದಾಗಿ ಹೇಳುವ ಸೋನಲ್, ‘ಮದುವೆ ನಂತರ ಖಂಡಿತಾ ಸಿನಿಮಾ ಮಾಡುವುದನ್ನು ಮುಂದುವರೆಸುತ್ತೇನೆ. ಈಗಾಗಲೇ ಒಂದಿಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಅದರಲ್ಲಿ ನಟಿಸುತ್ತೇನೆ. ಸಣ್ಣ ಗ್ಯಾಪ್‍ ತೆಗೆದುಕೊಂಡು, ನಟನೆಯನ್ನು ಮುಂದುವರೆಸುತ್ತೇನೆ’ ಎಂದರು.

ಭೂಮಿಕಾ

Recent Posts

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

4 hours ago