ಮನರಂಜನೆ

ಪ್ರಶಾಂತ್‍ ನೀಲ್‍ ಜೊತೆಗೆ ಅಜಿತ್ ಎರಡು ಚಿತ್ರ: ‘ಕೆಜಿಎಫ್‍ 3’ನಲ್ಲಿ ನಟಿಸುವ ಸಾಧ್ಯತೆ

ಪ್ರಶಾಂತ್ ನೀಲ್‍ ಮುಂದಿನ ನಡೆ ಏನು? ‘ಸಲಾರ್ 3’ ಎಂಬ ಸುದ್ದಿ ಇದೆ. ಅದೇ ರೀತಿ, ಜ್ಯೂನಿಯರ್‍ ಎನ್‍.ಟಿ.ಆರ್ ಅಭಿನಯದಲ್ಲಿ ಹೊಸ ಚಿತ್ರವನ್ನು ಪರಶಾಂತ್‍ ಶುರು ಮಾಡುತ್ತಾರೆ ಎಂಬ ಮಾತೂ ಇದೆ. ಹೀಗಿರುವಾಗಲೇ, ಕಾಲಿವುಡ್‍ ಅಂಗಳದಿಂದ ಒಂದು ಹೊಸ ಸುದ್ದಿ ಬಂದಿದೆ.

ಇದುವರೆಗೂ ಪ್ರಶಾಂತ್‍ ನೀಲ್‍ ಹೆಸರು ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಆದರೆ, ಇದೀಗ ತಮಿಳು ಚಿತ್ರರಂಗದಲ್ಲೂ ಪ್ರಶಾಂತ್‍ ಹೆಸರು ಜೋರಾಗಿಯೇ ಕೇಳಿಬಂದಿದೆ. ಮೂಲಗಳ ಪ್ರಕಾರ, ನಟ ಅಜಿತ್‍ ಅಭಿನಯದಲ್ಲಿ ಪ್ರಶಾಂತ್ ಎರಡು ಚಿತ್ರಗಳನ್ನು ನಿರ್ದೇಶಿಸುತ್ತಾರಂತೆ. ಅಷ್ಟೇ ಅಲ್ಲ, ‘ಕೆಜಿಎಫ್‍ 3’ ಚಿತ್ರದಲ್ಲೂ ಅಜಿತ್‍ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೌದು, ಇತ್ತೀಚೆಗೆ ಚೆನ್ನೈನಲ್ಲಿ ಪ್ರಶಾಂತ್‍ ನೀಲ್‍ ಮತ್ತು ಅಜಿತ್‍ ಭೇಟಿಯಾಗಿದೆ. ಈ ಭೇಟಿಯಲ್ಲಿ ಅಜಿತ್‍ ಜೊತೆಗೆ ಪ್ರಶಾಂತ್‍ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರಂತೆ. ಅಜಿತ್‍ಗಾಗಿಯೇ ಪ್ರಶಾಂತ್‍ ಒಂದು ಕಥೆ ಮಾಡಿಟ್ಟುಕೊಂಡಿದ್ದಾರಂತೆ. ಇದರ ಜೊತೆಗೆ ಯಶ್‍ ಅಭಿನಯದ ‘ಕೆಜಿಎಫ್‍ 3’ ಚಿತ್ರದಲ್ಲೂ ಒಂದು ಪಾತ್ರ ಮಾಡುವುದಕ್ಕೆ ಅಜಿತ್‍ಗೆ ಪ್ರಶಾಂತ್ ‍ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ಚಿತ್ರಗಳನ್ನು ಹೊಂಬಾಳೆ ಫಿಲಂಸ್‍ ನಿರ್ಮಾಣ ಮಾಡುತ್ತಿದೆಯಂತೆ.

ಈ ಸುದ್ದಿಗಳಲ್ಲಿ ಎಷ್ಟು ನಿಜ ಅಥವಾ ಸುಳ್ಳಿದೆ ಎಂದು ಈಗಲೇ ಹೇಳುವುದು ಕಷ್ಟ. ಏಕೆಂದರೆ, ಈ ಬಗ್ಗೆ ಪ್ರಶಾಂತ್‍ ಆಗಲೀ, ಅಜಿತ್‍ ಆಗಲೀ ಎಲ್ಲೂ ಮಾತನಾಡಿಲ್ಲ. ಒಂದು ಪಕ್ಷ ಈ ಚಿತ್ರಗಳು ಸಾಧ್ಯವಾದರೂ ಅದಕ್ಕೆ ಸಾಕಷ್ಟು ಸಮಯವಿದೆ. ಏಕೆಂದರೆ, ಪ್ರಶಾಂತ್‍ ಕೈಯಲ್ಲಿ ಸಾಕಷ್ಟು ಕೆಲಸವಿದ್ದು, ಮುಂದಿನ ತಿಂಗಳಿನಿಂದ ಅವರು ಹೈದರಾಬಾದ್‍ನಲ್ಲಿ ‘ಸಲಾರ್ 2’ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಸದ್ಯ, ‘ವಿದಾ ಮುಯರ್ಚಿ’ ಎಂಬ ಚಿತ್ರದಲ್ಲಿ ಅಜಿತ್‍ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಅಕ್ಟೋಬರ್‍ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಭೂಮಿಕಾ

Recent Posts

ನಾಳೆಯಿಂದ ಮಡಿಕೇರಿಯಲ್ಲಿ ಕೂರ್ಗ್‌ ಕಾರ್ನಿವಲ್‌

ನವೀನ್ ಡಿಸೋಜ ೨ನೇ ಬಾರಿಗೆ ನಡೆಯುವ ಪ್ರವಾಸಿ ಉತ್ಸವಕ್ಕೆ ಸಿದ್ಧತೆ; ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಹಭಾಗಿತ್ವ  ಮಡಿಕೇರಿ: ಡಿ.೨೦…

2 hours ago

ಮುಡಾ ಅಕ್ರಮ : ತೆರೆಗೆ ಸರಿದ ದೇಸಾಯಿ ಆಯೋಗದ ವರದಿ

ಕೆ.ಬಿ.ರಮೇಶನಾಯಕ ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ ೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ ೫೦:೫೦ ಅನುಪಾತದಡಿ…

2 hours ago

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

14 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

14 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

14 hours ago