ಎಡಿಟೋರಿಯಲ್

ವನ್ಯಜೀವಿ ಸಂಘರ್ಷ ತಪ್ಪಿಸಲು ಏನು ಮಾಡಬೇಕು ?

ನಮ್ಮ ರಾಜ್ಯದ ಬಹುತೇಕ ಕಡೆಗಳಲ್ಲಿ ನಿತ್ಯವೂ ಕಾಡಾನೆ ಹಾವಳಿ , ಚಿರತೆ ಕಾಟ ಇತ್ಯಾದಿ ಸುದ್ದಿಗಳನ್ನು ನಾವು ನೋಡುತ್ತಲೇ ಇದ್ದೇವೆ. ತಿ.ನರಸೀಪುರ ತಾಲ್ಲೂಕಿನಲ್ಲಿ ತಿಂಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿರತೆ ದಾಳಿಯಿಂದ ಸಾವನ್ನಪ್ಪಿರುವುದು ಗಂಭೀರತೆಯನ್ನು ಹೆಚ್ಚಿಸಿದೆ. ಈ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಲು ಮುಖ್ಯ ಕಾರಣ ಕಾಡಿನ ನಾಶ ದಿಂದ ಉಂಟಾಗಿರುವ ಮೇಲಿನ ಕೊರತೆ ಜತೆಗೇ ಕಾಡು ಪ್ರಾಣಿಗಳ ಸಂಖ್ಯೆಯಲ್ಲಿನ ಹೆಚ್ಚಳ.
ಆದರೆ ಎಷ್ಟು ಕಾಡುಗಳು ಒತ್ತುವರಿಯಾಗಿವೆ? ಎಷ್ಟು ಕಾಡುಗಳಲ್ಲಿ ಪ್ರಾಣಿಗಳಿಗೆ ಕುಡಿಯಲು ನೀರು, ಮೇಯಲು ಹುಲ್ಲುಗಾವಲು, ತಿನ್ನಲು ಗೆಡ್ಡೆ ಗೆಣಸು, ಬೇಟೆ ಪ್ರಾಣಿಗಳಿಗೆ ತಿನ್ನಲು ಸಾಕಷ್ಟು ಜಿಂಕೆ, ಕಡವೆ ಇತ್ಯಾದಿ ಪ್ರಾಣ ಗಳಿವೆ?ಈ ಬಗ್ಗೆ ಸಮರ್ಪಕ ಸಮೀಕ್ಷೆಯಾಗುವ ಅಗತ್ಯವಿದೆ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ನಿರಂತರ ಕಾಡುಪ್ರಾಣಿಗಳ ಮುಖಾಮುಖಿ ಗಂಭೀರತೆಯನ್ನು ಎದುರಿಸಬೇಕಾಗುತ್ತದೆ. ನಾಗರಹೊಳೆ, ಬಂಡಿಪುರ ಅರಣ್ಯದಲ್ಲಿ ಪ್ರಮುಖವಾಗಿ ಹುಲಿ,ಚಿರತೆ, ಆನೆಯ ಸಂಖ್ಯೆಗಳು ಅಂದಾಜು ಎಷ್ಟಿವೆ? ವಾರ್ಷಿಕವಾಗಿ ಸರಾಸರಿ ಇವುಗಳ ಸಂತತಿ ಎಷ್ಟು ಹೆಚ್ಚಾಗುತ್ತಿವೆ? ಕಾಡಿನಲ್ಲಿ ಇವುಗಳಿಗೆ ನಿಜಕ್ಕೂ ಆಹಾರ ಲಭ್ಯತೆ ಇವೆಯೇ? ಅರಣ್ಯದಂಚಿನ ಗ್ರಾಮಗಳಿಗೆ ಆನೆ,ಹುಲಿ,ಚಿರತೆ, ಕಾಟಿ,ಜಿಂಕೆ,ಕಡವೆ,ಕರಡಿ,ಕಾಡುಹಂದಿ, ಮೃಗಗಳು ಇತ್ಯಾದಿ ವನ್ಯಮ್ರಗಗಳು ನಿರಂತರ ವಲಸೆ ಬರಲು ಕಾರಣವೇನು? ಇವುಗಳ ಸಮರ್ಪಕ ಅಧ್ಯಯನ, ಸಂಪೂರ್ಣ ನಿಯಂತ್ರಣ ಇತ್ಯಾದಿ ಸಿದ್ಧತೆಗಳಿಗೆ ಅರಣ್ಯ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ ಎಂದು ಹೇಳಲಾಗುತ್ತಿದೆಯಾದರೂ ಸರ್ಕಾರ ಇದೀಗ ಕಣ್ಣೊರೆಸುವ ತಂತ್ರವಾಗಿ ಬಿಡುಗಡೆ ಮಾಡುತ್ತಿರುವ ರೂ.೫ ಕೋಟಿ, ರೂ.೧೦ ಕೋಟಿ ಅನುದಾನ ಏನೇನೂ ಸಾಲದು.

ಕಾವೇರಿ ಜಲಾನಯನ ಪ್ರದೇಶ ಸಂಪದ್ಭರಿತವಾಗಿರಲು ಕಾಡು ಹಾಗೂ ವನ್ಯಜೀವಿಗಳು, ನೀಲಗಿರಿ ಜೀವ ವೈವಿಧ್ಯ ತಾಣಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣಗಳು ಸುಮಾರು ೬೨೦೦ ಚ.ಕಿ.ಮೀ.ಅರಣ್ಯ ಪ್ರದೇಶವನ್ನು ಹೊಂದಿದೆ.ಕೇರಳ ಸುಮಾರು ೨,೫೦೦ ಚ.ಕೀ.ಮಿ. ಹಾಗೂ ತಮಿಳುನಾಡು ಸುಮಾರು ೪೦೦೦ ಚ.ಕಿ.ಮೀ. ಅರಣ್ಯ ಪ್ರದೇಶಗಳನ್ನು ಹೊಂದಿದ್ದು ಆನೆ ಕಾರಿಡಾರ್ ಎಂದು ಗುರುತಿಸಲ್ಪಟ್ಟ ಈ ಭಾಗ ಅಂದಾಜು ೧೨೭೦೦ ಚ.ಕಿ.ಮೀ.ಹೊಂದಿದೆ. ಹೆಚ್ಚಾಗಿ ಕಾಡಾನೆಗಳು, ಇತ್ಯಾದಿ ವನ್ಯ ಪ್ರಾಣಿಗಳು ಈ ಮೂರು ರಾಜ್ಯದ ಅರಣ್ಯದ ನಡುವೆ ಅಧಿಕವಾಗಿ ಆಹಾರವನ್ನು ಅರಸಿ ಓಡಾಟ ನಡೆಸುತ್ತಿದ್ದವು. ಇದೀಗ ಅಂತಹ ಅರಣ್ಯ ಪ್ರದೇಶದಲ್ಲಿ ಆನೆ ಕಾರಿಡಾರ್ ಮಾನವನ ಹಸ್ತಕ್ಷೇಪದಿಂದಾಗಿ, ಕೃಷಿ ಕ್ಷೇತ್ರ ವಿಸ್ತರಣೆಯಿಂದಾಗಿ ಸಂಕೀರ್ಣವಾಗುತ್ತಿದೆ. ಕಾಡುಪ್ರಾಣಿ ಗಳ ಆಹಾರ ಸಂರಕ್ಷಿಸಿಸುವ ನಿಟ್ಟಿನಲ್ಲಿ ಹಾಗೂ ಕಾಡಿನ ಬೆಂಕಿಯಾಗದಂತೆ ನೋಡಿಕೊಳ್ಳುವದು ಇತ್ಯಾದಿ ಉಪಕ್ರಮಗಳ ಬಗ್ಗೆ ಸರ್ಕಾರ ಚಿಂತಿಸುವುದು ಕಂಡು ಬರುತ್ತಿಲ್ಲ.

ನಾಗರಹೊಳೆ, ಬಂಡಿಪುರ ಇತರೆ, ಕೇರಳ, ತಮಿಳುನಾಡು ಆನೆ ಕಾರಿಡಾರ್‌ಗಳು ಮುಕ್ತವಾಗಿದ್ದಾಗ ಈಗಿನಷ್ಟು ಕಾಡಾನೆ ಉಪಟಳ ಕೊಡಗಿನಲ್ಲಿ ಇರಲಿಲ್ಲ. ಇಲ್ಲಿನ ಆನೆಗಳು ಬೆಂಗಳೂರಿನ ಬನ್ನೇರುಘಟ್ಟ ದವರೆಗೂ ಸಂಚರಿಸುತ್ತಿದ್ದವು. ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಕೃಷಿ, ಭತ್ತದ ಕೃಷಿ ಇತ್ಯಾದಿ ಉಪಕ್ರಷಿ ಅಧಿಕಗೊಂಡಾಗ ಅಲ್ಲಿನ ಅರಣ್ಯ ಪ್ರದೇಶದೊಂದಿಗೆ ಕಾಡಾನೆಗಳ ಕಾರಿಡಾರ್ ಬಂದ್ ಆಯಿತು. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರದ ಕಾಡುಗಳು ಏನಾಗಿವೆ? ಕೆಲವು ಬೆಟ್ಟಗುಡ್ಡಗಳು ಪರಿವರ್ತಿತ ಸೆಟ್‌ಗಳಾಗಿವೆ. ಅನಧಿಕೃತ ಫಾರ್ಮ್ ಆಗಿ ಪರಿವರ್ತನೆಯಾಗಿದೆ.ಇನ್ನು ಕೆಲವು ಕಲ್ಲು ಬೆಟ್ಟಗಳು ಕಲ್ಲುಗಣಿಗಾರಿಕೆಯ ತಾಣವಾಗಿ ಅಕ್ರಮಗಳೇ ಅಧಿಕವಾಗಿದ್ದು, ವನ್ಯಪ್ರಾಣ ಗಳ ಆವಾಸ ಸ್ಥಾನಗಳು ಮಾಯವಾಗಿವೆ. ಇತ್ತ ಪುಷ್ಪಗಿರಿ, ಬೃಹ್ಮಗಿರಿ, ತಲಕಾವೇರಿ, ನಾಗರಹೊಳೆ, ಬಂಡಿಪುರದಲ್ಲಿ ಆನೆ ಮತ್ತು ಹುಲಿಯ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಅರಣ್ಯಪ್ರದೇಶ ಒತ್ತುವರಿದಾರರಿಂದ, ಮಾನವನ ಹಸ್ತಕ್ಷೇಪಕ್ಕೆ ಸಿಲುಕಿರುವ ಹಿನ್ನೆಲೆ ಕಿರಿದಾಗುತ್ತಿದೆ.

ಭವಿಷ್ಯದಲ್ಲಿ ವನ್ಯಪ್ರಾಣಿ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡಲ್ಲಿ ವನ್ಯಪ್ರಾಣಿ -ಮಾನವ ಸಂಘರ್ಷವನ್ನು ನಿಯಂತ್ರಿಸಲು ಸಾಧ್ಯವಿದೆ. ಉತ್ತಮ ಕಾರ್ಯಯೋಜನೆ ರೂಪಿಸಿದ್ದೇ ಆದಲ್ಲಿ, ಮುಂದಿನ ೫೦ ವರ್ಷ ನಾವು ನೆಮ್ಮದಿಯಿಂದ ಬಾಳಬಹುದು.

 

andolana

Recent Posts

ಕೇಬಲ್‌ ಟಿವಿ ಆಪರೇಟರ್‌ ಶುಲ್ಕ ಶೇ.50 ರಷ್ಟು ಕಡಿತ : ಕೆ.ಜೆ.ಜಾರ್ಜ್‌

ಬೆಳಗಾವಿ (ಸುವರ್ಣಸೌಧ) : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೇಬಲ್ ಟಿವಿ ಆಪರೇಟರ್‌ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು…

23 mins ago

ಅನಗತ್ಯ ಸಿಜೇರಿಯನ್‌ ಹೆರಿಗೆ : ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಖಚಿತ

ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…

1 hour ago

ಚಿಕ್ಕಮಗಳೂರಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧಾರ : ಪರಿಸರ ಸಂಘಟನೆಗಳಿಂದ ತೀವ್ರ ವಿರೋಧ

ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…

1 hour ago

ಇತಿಹಾಸ ತಿರುಚಲು ಮೋದಿ ಯತ್ನ : ಗೌರವ್‌ ಗೊಗೊಯ್‌ ಆರೋಪ

ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…

1 hour ago

ಒಂದೇ ಒಂದು ಮಗುವಿದ್ದರೂ ಕೂಡ ಕನ್ನಡ ಶಾಲೆ ಮುಚ್ಚಲ್ಲ : ಸರ್ಕಾರ ಸ್ಪಷ್ಟನೆ

ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…

1 hour ago

ಸಿದ್ದರಾಮಯ್ಯ ಪೂರ್ಣವಧಿ ಸಿಎಂ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆ ಪರ ಯಂತ್ರೀಂದ್ರ ಬ್ಯಾಟಿಂಗ್‌

ಬೆಳಗಾವಿ : ಡಿನ್ನರ್‌ ಬ್ರೇಕ್‌ಫಾಸ್ಟ್‌ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್‌ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…

2 hours ago