ಎಡಿಟೋರಿಯಲ್

ವಿ4 : ವಿತ್ತ ವಿಜ್ಞಾನ ವಿಶೇಷ ವಿಹಾರ

ಸೆನ್ಸೆಕ್ಸ್ ಮೇಲೆ ಕೊರೊನಾ ಕರಿಛಾಯೆ

ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೊನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ. ಕೋವಿಡ್‌ನ ಹೊಸ ರೂಪಾಂತರಿಯ ಭೀತಿಯಿಂದಾಗಿ ಸೆನ್ಸೆಕ್ಸ್ ೧,೦೦೦ ಅಂಕಗಳಷ್ಟು ಕುಸಿತ ಕಂಡಿದೆ. ಕೋವಿಡ್-೧೯ ಪರಿಣಾಮದಿಂದ ಹೂಡಿಕೆದಾರರಲ್ಲಿ ಭೀತಿ ಮೂಡಿದ್ದು, ಸತತ ೪ನೇ ನೇರ ಸೆಷನ್‌ನಲ್ಲಿ ಹಾಗೂ ಮೂರು ತಿಂಗಳ ಅವಧಿಯಲ್ಲಿ ದಿನವೊಂದರಲ್ಲೇ ಅಧಿಕ ಕುಸಿತ ದಾಖಲಾಗಿದೆ. ೫೯,೮೪.೨೯ ಅಂಕಗಳೊಂದಿಗೆ ಸೆನ್ಸೆಕ್ಸ್ ಸೆಷನ್ ಮುಕ್ತಾಯಗೊಂಡಿದ್ದು ೯೮೦.೯೩ ಅಂಕಗಳಷ್ಟು ಅಥವಾ ಶೇ.೧.೬೧ ರಷ್ಟು ಇಳಿಕೆ ದಾಖಲಾಗಿದೆ ನಿಫ್ಟಿ ೧೭,೮೦೬.೮೦ ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯ ೫೦ ಸ್ಟಾಕ್‌ಗಳ ಪೈಕಿ ಅದಾನಿ ಪೋರ್ಟ್, ಅದಾನಿ ಎಂಟರ್ ಪ್ರ್ತ್ಯೈಸಸ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಟಾಟಾ ಮೋಟಾರ‍್ಸ್ ಸೆನ್ಸೆಕ್ಸ್‌ನಲ್ಲಿ ಇಳಿಕೆ ಕಂಡ ೫ ಪ್ರಮುಖ ನಷ್ಟದಾರ ಸಂಸ್ಥೆಗಳಾಗಿದ್ದರೆ, ಸಿಪ್ಲಾ, ಡಿವೀಸ್ ಲ್ಯಾಬ್ಸ್, ಟೈಟಾನ್‌ಗಳು ಗಳಿಕೆ ಕಂಡಿವೆ.


ಯುವ ವಿಜ್ಞಾನಿಗಳಿಗೆ ರಾಷ್ಟ್ರಮಟ್ಟದ ಪ್ರಶಂಸೆ

ನೂತನವಾಗಿ ಆವಿಷ್ಕರಿಸಲ್ಪಟ್ಟ ಔಷಧಿಗಳನ್ನು ಪರೀಕ್ಷೆ ಮಾಡಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿತ್ತು. ಈ ವೇಳೆ ಅವುಗಳಿಗೆ ಉಂಟಾಗುತ್ತಿದ್ದ ಹಾನಿಯಾಗುವ ಅಪಾಯಗಳನ್ನು ತಪ್ಪಿಸುವ ಸಲುವಾಗಿ ಕೇರಳದ ಕಣ್ಣೂರು ಮೂಲದ ಶರಣ್ಯ, ಕೋಲಾರದ ಅರ್ಪಿತಾ ರೆಡ್ಡಿ, ಹೈದರಬಾದಿನ ಸಂಜನಾ ಎಂಬ ಮೂವರು ಯುವ ವಿಜ್ಞಾನಿಗಳು ಟೈಪ್ ೨ ಡಯಾಬಿಟಿಸ್ ಔಷಧಿ ಪ್ರಯೋಗಗಳಿಗಾಗಿ ೩ಡಿ ಬಯೋಪ್ರಿಂಟಿಂಗ್ ವಿಧಾನವನ್ನು ಬಳಸಿಕೊಂಡು ಮಾನವನ ಅಂಗಾಂಶವನ್ನು ಸಿದ್ಧಪಡಿಸಿದ್ದಾರೆ.
೩ಡಿ ಬಯೋಪ್ರಿಂಟಿಂಗ್ ಮೂಲಕ ಮಾನವ ಸ್ನಾಯು ಅಂಗಾಂಶವನ್ನು ಮರುಸೃಷ್ಟಿಸಿ ಜೀವಕೋಶಗಳನ್ನು ಮೂರು ವಿಧದ ಪರದಗಳೊಂದಿಗೆ ಸಂಪರ್ಕ ಹೊಂದಿಸಿದ್ದಾರೆ. ಈ ಕೃತಕ ಅಂಗಾಂಶದ ಮೇಲೆ ವಿವಿಧ ಔಷಧಿಗಳನ್ನು ಹಾಕಿ ಪರೀಕ್ಷಿಸಿದಾಗ ಅದು ಮಾನವ ಸ್ನಾಯುಗಳಂತೆ ಕಾರ್ಯನಿರ್ವಹಿಸುತ್ತವೆ ಎಂಬುದು ಕಂಡುಬಂದಿದ್ದು, ಈ ಆವಿಷ್ಕಾರಕ್ಕೆ ‘ಸೊಸೈಟಿ ಫಾರ್ ಆಲ್ಟರ್ನೇಟಿವ್ಸ್ ಟು ಅನಿಮಲ್ ಎಕ್ಸ್‌ಪೆರಿಮೆಂಟ್ಸ್ ’ ವಾರ್ಷಿಕ ಪ್ರಥಮ ಬಹುಮಾನ ನೀಡಿದೆ.


ಜೀವ ಉಳಿಸಿದ ಆಪಲ್ ಐಫೋನ್ ೧೪ಸರಣಿ

ಹೊಸದಾಗಿ ಬಿಡುಗಡೆಯಾಗಿರುವ ಆಪಲ್ ಐಫೋನ್ ೧೪ರ ಸರಣಿಯ ಮೊಬೈಲ್‌ನಲ್ಲಿ ಹೊಸದಾಗಿ ಫೀಚರ್‌ವೊಂದು ಸೇರಿದ್ದು, ಇದು ಅಪಘಾತವಾದಂತಹ ಸಂದರ್ಭಲ್ಲಿ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಆಪ್ತರಿಗೆ ಮತ್ತು ತುರ್ತು ಸೇವೆಗಳಿಗೆ ನೆಟ್‌ವರ್ಕ್ ಇಲ್ಲದಿದ್ದರೂ ಉಪಗ್ರಹಗಳ ಸಹಾಯದೊಂದಿಗೆ ಮಾಹಿತಿ ನೀಡುವ ಫೀಚರ್ ಆಗಿದ್ದು ಅದನ್ನು ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಎಂದು ಪರಿಚಯಿಸಲಾಗಿದೆ. ಈ ಫೀಚರ್‌ನ ಸಹಾಯದಿಂದ ಇತ್ತೀಚೆಗೆ ಅಮೆರಿಕದಲ್ಲಿ ಜೋಡಿಯೊಂದು ಕಾರು ಅಪಘಾತಕ್ಕೀಡಾಗಿ ೩೦೦ ಅಡಿ ಆಳದ ಕಣಿವೆಗೆ ಸಿಲುಕಿಕೊಂಡಿದ್ದರು. ಈ ವೇಳೆ ಈ ಐಫೋನ್ ೧೪ರ ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಮೂಲಕ ಪತ್ತೆಹಚ್ಚಿ ಅವರನ್ನು ಮೇಲೆತ್ತಿ ಬದುಕುಳಿಸಲಾಯಿತು.


ಅಪರೂಪದ ಶಿವಲಿಂಗ

ನಂಜನಗೂಡು ಪಟ್ಟಣಕ್ಕೆ ಹೊಂದಿಕೊಂಡಂತೆಯೇ ಇರುವ ಮಲ್ಲನಮೂಲೆ ಮಠದ ಬಳಿ ಪಂಚಲಿಂಗಗಳ ೫ ಐತಿಹಾಸಿಕ ದೇವಾಲಯಗಳಿದ್ದು, ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿವೆ. ನಂಜನಗೂಡು ಭಾಗದಲ್ಲಿ ಚೋಳರು ಹಾಗೂ ಗಂಗರ ಕಾಲದ ಸಾಕಷ್ಟು ದೇವಾಲಯಗಳು ಕಂಡುಬಂದಿರುವ ಕಾರಣ, ಇದು ಕೂಡ ಚೋಳರ ಕಾಲದ್ದೇ ಇರಬಹುದು ಎಂದು ಶಂಕಿಸಲಾಗಿದೆ. ಈ ೫ ದೇವಾಲಯಗಳೂ ಅಕ್ಕಪಕ್ಕದಲ್ಲೇ ಇದ್ದು, ಇವುಗಳ ಪೈಕಿ ಒಂದು ದೇವಾಲಯದಲ್ಲಿ ಶಿವನ ತಲೆಯ ಮೇಲೆ ನಂದಿಯ ವಿಗ್ರಹವಿರುವ ಅಪರೂಪದ ಶಿವಲಿಂಗವೊಂದಿದೆ.

ಇಲ್ಲಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ಪೂಜೆ ಸಲ್ಲಿಸಲಾಗುತ್ತಿದ್ದು, ದೇವಸ್ಥಾನ ಅಭಿವೃದ್ಧಿಯಾದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿಸಬಹುದಾಗಿದೆ. ಅಲ್ಲದೆ ಇದು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಈ ದೇವಾಯವು ಜೀರ್ಣೋದ್ಧಾರಗೊಂಡು ಪ್ರಚಾರ ಸಿಕ್ಕರೆ ಹೆಚ್ಚಿನ ಜನರನ್ನು ಆಕರ್ಷಿಸುವ ಪ್ರವಾಸಿ ತಾಣವಾಗುತ್ತದೆ.

andolanait

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

12 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

13 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

14 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

14 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

18 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

19 hours ago