ಎಡಿಟೋರಿಯಲ್

ಇಂದಿನ ಭಾರತ ಅಂಬೇಡ್ಕರ್ ತ್ಯಾಗ ಅರಿಯಬೇಕು

ಬಾಬಾಸಾಹೇಬರ ಮಾರ್ಗದ ಎಳೆ ಹಿಡಿದ ಯುವಪೀಳಿಗೆ ಹೆಜೆ ಇಡಲಿ

-ಮಲ್ಕುಂಡಿ ಮಹದೇವಸ್ವಾಮಿ

೧೯೫೬, ಡಿಸೆಂಬರ್ ೬ರಂದು ಸಂವಿಧಾನ ಶಿಲ್ಪಿ, ಎಲ್ಲ ವರ್ಗಗಳ ನೊಂದವರ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ಮಾಣ (ನಿಧನ) ಹೊಂದಿದ ದಿನ. ಅದರ ಮಾರನೆ ದಿನ ಅಂದರೆ ಡಿ.೭ರಂದು ಅಸಾಮಾನ್ಯ ಸಾಧಕನ ಪಾರ್ಥಿವ ಶರೀರದ ಮುಂದೆ ಅಸಾಧ್ಯವಾದ ಘಟನೆಯೊಂದು ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬಾಂಬೆಯಲ್ಲಿ ಬರುವ ಡಿಸೆಂಬರ್ ೧೬ ರಂದು ೧೦ಲಕ್ಷ ಜನರು ಬೌದ್ಧ ಧಮ್ಮ ಸ್ವೀಕರಿಸುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ ಅಚಾನಕ್ ಬಾಬಾಸಾಹೇಬರು ಈ ಘಟನೆಗೆ ಹತ್ತು ದಿನದ ಮುಂಚೆ ತೀರಿಕೊಂಡಿದ್ದು, ಅವರ ಆಪ್ತ ಬಿ.ಕೆ.ಗಾಯಕ್ವಾಡ್ ಅವರನ್ನು ಇನ್ನಿಲ್ಲದ ಶೋಕಕ್ಕೆ ತಳ್ಳಿತ್ತು. ಆದರೆ ಗಾಯಕ್ವಾಡರು ಬಾಬಾ ಸಾಹೇಬರ ಈ ಇಂಗಿತವನ್ನು ನೆರೆದಿದ್ದ ಆ ಜನಸಾಗರದ ಮುಂದೆ ಇಟ್ಟು, ನೀವು ಬಾಬಾ ಸಾಹೇಬರ ಈ ಅತೀವ ಆಸೆಯನ್ನು ಈಡೇರಿಸ ಬಲ್ಲಿರಾ? ಎಂದಾಗ, ಆ ಮಾನವಸಾಗರವು ದುಃಖಿತ ಹರ್ಷೋದ್ಗಾರದೊಂದಿಗೆ ಸಮ್ಮತಿಯನ್ನು ಸೂಚಿಸಿತು. ಇಂತಹ ಅಪರೂಪದ ಘಟನೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿಯೇ ಎಂದೆಂದೂ ಅಳಿಸಲಾಗದ ಸ್ಮತಿ ಸ್ಮರಣೀಯ.

೧೯೫೬ ಅ.೧೪ರಲ್ಲಿ ನಡೆದ ೧೦ಲಕ್ಷ ಜನರ ಧಮ್ಮ ಪರಿವರ್ತನೆಯನ್ನು ಬಿಟ್ಟರೆ, ಈ ಘಟನೆಯು ಭಾರತದ ಚರಿತ್ರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬುದ್ದ ಧಮ್ಮ ಸ್ವೀಕರಿಸಿದಂತಹ ಘಟನೆಯಾಗಿದೆ. ಅದು ಯಾವ ಸಿದ್ಧತೆಯೂ ಇಲ್ಲದೆ. ಸ್ಮಶಾನದ ಒಳಗೆ ನಡೆದ ಈ ಚಾರಿತ್ರಿಕ ಕ್ಷಣ ಅಪೂರ್ವವಾದದ್ದು.

ಡಾ.ಬಿ.ಆರ್.ಅಂಬೇಡ್ಕರ್ ರವರು ತಾವು ಬದುಕಿದ್ದ ಕೊನೆಯ ಕ್ಷಣದವರೆಗೂ ಬಹುದೊಡ್ಡ ಸಂಕಲ್ಪಗಳೊಂದಿಗೆ ಬದುಕಿದ್ದರು.
ಆದರೆ ಅವರ ಸಂಕಲ್ಪಗಳು ಇಂದಿನ ತಲೆವಾರಿನಲ್ಲಿ ಮರೆಯಾಗುತ್ತಾ ಅವರ ವೈಭವೀಕರಣ, ಅತಿರೇಕದ ಅಭಿಮಾನ, ಆಚರಣೆಗಳೊಳಗೆ ಕಳೆದು ಹೊಗುತ್ತಿವೆ. ಮುಸ್ಲಿಂ ಮನೆಯಲ್ಲೊಂದು ‘ಕುರಾನ್’, ಕ್ರಿಶ್ಚಿುಂನ್ನರಿಗೆ ‘ಬೈಬಲ್’, ಇದ್ದ ಹಾಗೆಯೇ ಪ್ರತಿ ಶೋಷಿತರ ಮನೆಯಲ್ಲಿ ‘ಬುದ್ಧ ಮತ್ತು ಆತನ ಧಮ್ಮ’ ಕೃತಿ ಇರಬೇಕೆಂಬ ಬಹುದೊಡ್ಡ ಆಶಯವನ್ನು ಅವರು ವ್ಯಕ್ತ ಪಡಿಸಿದ್ದರು. ಅಂತಹ ಸಂಕಲ್ಪಗಳನ್ನು ಮರೆತು ಇಂದಿನ ಪರಿನಿಬ್ಬಾಣ ದಿನಾಚರಣೆಗಳು, ಅವರ ಪುತ್ತಳಿಯ ಮುಂದೆ ದೀಪಗಳನ್ನು ಮಾತ್ರ ಸುಡುತ್ತಿವೆ. ೬೫ ವರ್ಷಗಳಿಂದ ಎಷ್ಟು ದೀಪಗಳನ್ನು ಸುಟ್ಟಿದ್ದೀರಿ ಆದರೆ ಈಗಾ ನಮ್ಮೊಳಗಿನ ಸ್ವಾರ್ಥ, ಅಸೂಯೆ, ವಿಘಟನೆಯನ್ನೊಮ್ಮೆ ಸುಟ್ಟುಬಿಟ್ಟರೆ ಒಳ್ಳೆ ಬದುಕನ್ನು ಕಾಣಬಹುದೇನೊ. ಮಹಾನಾಯಕ ಧಾರಾವಾಹಿಯನ್ನು ನೋಡುವುದರೊಟ್ಟಿಗೆ ಅವರ ‘ವೇಟಿಂಗ್ ಫಾರ್ ವೀಸಾ‘ ಕೃತಿಯನ್ನು ಒಮ್ಮೆ ಓದಿ ಬಿಟ್ಟರೆ ನಮಗೆ ಮತ್ತಷ್ಟು ನೈಜ ಅಂಬೇಡ್ಕರವರು ಕಾಣಬಹುದೇನೊ.

ಅಂಬೇಡ್ಕರರಿಗೆ ಅದೆಷ್ಟು ಒತ್ತಡ ಬಂದರೂ ಕೂಡ ತಮ್ಮ ಬೋಂಗ್ರಫಿಯನ್ನು ಬರೆದುಕೊಳ್ಳಲಿಲ್ಲ. ಆದರೆ ಬರೆಯುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ‘ಬುದ್ಧ ಮತ್ತು ಆತನ ಧಮ್ಮ’ ಹಾಗೂ ಇನ್ನಷ್ಟು ಗ್ರಂಥಗಳ ನಂತರದಲ್ಲಿ ಮಾತ್ರ ಎಂದಿದ್ದರು. ಆದರೆ ತಮ್ಮ ‘ವೇಟಿಂಗ್ ಫಾರ್ ವೀಸಾ’ ಎಂಬ ಕೃತಿಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಒಂದಿಷ್ಟು ಘಟನೆಗಳನ್ನು ಬರೆದಿಟ್ಟಿದ್ದರು. ಈ ಪುಸ್ತಕವನ್ನು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮವಾಗಿ ಸ್ವೀಕರಿಸಿತ್ತು. ಆಗಿನ್ನೂ ಭಾರತದ ಹಳ್ಳಿಗಳಲ್ಲಿ ಅಂಬೇಡ್ಕರ್ ನಾಮಫಲಕಗಳನ್ನು ಹಾಕಲೂ ಅವಕಾಶ ನೀಡದ ಕಾಲವದು.

ಡಿ.೬ರ ಆ ರಾತ್ರಿ ನಡೆದ ಘಟನೆಯ ಆಸುಪಾಸಿನಲ್ಲಿಯೇ ಅವರ ಪಾರ್ಥಿವ ಶರೀರವನ್ನು ಸಾರನಾಥಕ್ಕೆ ಕೊಂಡೊಯ್ಯಲು ಅವರ ಪತ್ನಿ ಸವಿತರವರು ಹಠ ಹಿಡಿದು ಕುಳಿತರು. ಆದರೆ ಅಭಿವಾನಿಗಳು ಮುಂಬೈಗೆ ಸಾಗಿಸಲು ಹಠ ಹಿಡಿದರು. ಆದರೆ ಮುಂಬೈಗೆ ಪಾರ್ಥಿವ ಶರೀರವನ್ನು ಸಾಗಿಸವ ಪ್ರಯಾಣದ ಹಣಕ್ಕಾಗಿ ಅಭಿವಾನಿಗಳು ತಮ್ಮ ಸ್ವಂತ ಕಾರನ್ನು ಮಾರಿದ್ದು, ಆನಂತರ ಜಗಜೀವನ್ ರಾಮ್ ರವರು ಇಂಡಿುಂನ್ ಏರ್‌ಲೈನ್ಸ್ ಮುಖಾಂತರ ಸಹಾಯ ಮಾಡಿದ್ದು, ಈಗ ಇತಿಹಾಸ. ಆದರೆ ಇಂತಹ ತ್ಯಾಗಪೂರ್ಣ ಬದುಕನ್ನು ಅವರು ಬದುಕಿದ್ದು ಯಾರ ಉಳಿವಿಗಾಗಿ ಎಂದೊಮ್ಮೆ ಇಂದಿನ ಭಾರತ ಯೋಚಿಸಬೇಕಾಗಿದೆ. ಇವರ ಬದುಕಿನ ತ್ಯಾಗದ ಇಂತಹ ಎಳೆ ಹಿಡಿದು ಇಂದಿನ ಯುವಪೀಳಿಗೆ ನಡೆಯಬೇಕಿದೆ.

ಇಂದು ಬೀದಿ ಬೀದಿಗಳಲ್ಲಿ ರಾರಾಜಿಸುವ ಬ್ಯಾನರ್‌ನಲ್ಲಿ ಮಹಾನಾಯಕರನ್ನು ನಾವು ಹುಡುಕಲಾರೆವು. ಹತ್ರಾಸ್‌ನಲ್ಲಿ ದೇಶದ ಕಣ್ಣೆದುರೆ ಸುಟ್ಟು ಹೋದ ಹೆಣ್ಣು ಮಗಳೊಬ್ಬಳ ಚಿತೆ ಕಿಚ್ಚಿನಲ್ಲಿ, ದಲಿತರ ಮಗು ಒಂದನ್ನು ದೇವಸ್ಥಾನದ ಹೊರಹಾಕಿದ ಅವವಾನದಲ್ಲಿ, ದಲಿತ ಹೆಣ್ಣುಮಗಳು ನೀರು ಕುಡಿದ ಕಾರಣಕ್ಕಾಗಿ ನೀರಿನ ತೊಂಬೆಯನ್ನು ಶುಚಿಗೊಳಿಸಿದ ಅವಮಾನದ ನೋವಿನೊಳಗೆ ಮಹಾನಾಯಕರು ನಮಗೆ ಕಾಣಲಿಲ್ಲವೆಂದರೆ ಅವರು ಮತ್ತೆಲ್ಲೂ ಕಾಣಲಾರರು.

 

 

andolana

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

9 hours ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

10 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

10 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

11 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

11 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

15 hours ago