ಎಡಿಟೋರಿಯಲ್

ಸಾಯುವ ಘಳಿಗೆಯಲ್ಲಿ ಹೇಳಿದ ಸತ್ಯ !

 

  ವಾಣಿಶ್ರೀಯ ಹೇಳಿಕೆ ತೆಗೆದುಕೊಳ್ಳಲು ವಾರ್ಡಿನತ್ತ ಹೋದಾಗ ಆಕೆಯ ಅಣ್ಣನೂ ಜೊತೆಯಲ್ಲಿ ಬಂದ.

ಇವರು ಬೇಕಾ ಸರ್?’ ಎಂದು ಕೇಳಿದೆ.

ಇರಲಿ ಬಿಡಿವಾಣಿಶ್ರೀಯವರ ಹೇಳಿಕೆಗೆ ಇವರೂ ಸಹಿ ಹಾಕಲಿಆಗ ಕೇಸು ಗಟ್ಟಿಯಾಗುತ್ತೆ’ ಎಂದರು ಇನ್‌ಸ್ಪೆಕ್ಟರು.

ಮೆಮೋ ಪಡೆದುಕೊಂಡ ಡ್ಯೂಟಿ ಡಾಕ್ಟರು, ‘ಕಂಡಿಷನ್ನು ವೆರಿ ಕ್ರಿಟಿಕಲ್ಅದಕ್ಕೇ inform ಮಾಡಿದೆ’ ಎಂದರು.

ಸರಿ ಸರ್ಅವರ ಹೇಳಿಕೆ ಏನಿದೆಯೋ ಅದನ್ನು ರೆಕಾರ್ಡ್ ಮಾಡ್ತೀನಿತಾವೂ ಎದುರಿಗಿರಬೇಕುಅವಳೀಗ sedetion  ಮೇಲಿಲ್ಲ ಅಲ್ಲವೇ?’

ರುಗ್ಣಾವಸ್ತೆಯಲ್ಲಿದ್ದರೂ ವಾಣಿಶ್ರೀಗೆ ಪ್ರಜ್ಞೆ ಇತ್ತು. ‘ನೋಡಮ್ಮಾ ಆವತ್ತು ನಿಜವಾಗಿ ಏನೇನು ನಡೀತು ಅದಷ್ಟನ್ನು ಸತ್ಯವಾಗಿ ಹೇಳಿಸತ್ಯ ಧರ್ಮ ತಿಳ್ಕೊಂಡು ಹೇಳಿನೋಡಿ ಡಾಕ್ಟರುನಿಮ್ಮಣ್ಣ ಎಲ್ರೂ ಇದ್ದೇವೆ’

ಇನ್‌ಸ್ಪೆಕ್ಟರ್ ದನಿಯಲ್ಲಿ ಒಂದು ಬಗೆಯ ಸಾಂತ್ವನಭರವಸೆ ತುಂಬಿತ್ತು.

ಯಾರ ಮೇಲೋ ಯಾಕೇಳಲಿ ಸಾರ್ಯಾರೂ ಇಲ್ಲವೆಂಕಟ್ರಮಣಸ್ವಾಮೀ ಎಲ್ಲ ನಿಂಗೇ ಗೊತ್ತು’ ಎಂದರು ಆಕೆ ನಿಡುಸುಯ್ಯುತ್ತಾ.

ನಿನ್ ಗಂಡ ಆ ಬೋ*ಮಗ ಎಲ್ಲಿದ್ದನಿಮ್ಮತ್ತೆಗಂಡ ಏನೇನ್ಮಾಡುದ್ರು ಅದನ್ನು ಮೊದ್ಲು ಹೇಳು’ ಅವಳಣ್ಣ ಬಾಯಿ ತೆಗೆದ. ‘ಎತ್ತಿ ಎದೆಗೊದ್ದರೆ ನನ್ಮಗನೇ ತಿಂದಿದ್ನೆಲ್ಲ ಕಕ್ಕಂಬೇಕುಟಿಬಿ ಮುಚ್ಕಂಡು ನಿಂತ್ಕಳಯ್ಯಾಈ ಯಮ್ಮ ಏನು ಹೇಳ್ತಾರೋ ಅದನ್ನು ಕೇಳಿಸಿಕೋನಿನ್ನ ಪುರಾಣ ಊದಬೇಡ’ ಗೌಡರು ಅಬ್ಬರಿಸಿದರು. ‘ಹ್ಞೂಂ ಹೇಳಿ ತಾಯೀಆವತ್ತು ಏನೇನಾಯ್ತು ತಪ್ಪದೆ ನಿಧಾನವಾಗಿ ಹೇಳಿ’ ಎಂದರು ನಯವಾಗಿ. ‘ವಾರದಿಂದ ಮನೇಲಿ ಏನೇನೋ ಗಲಾಟೆ ಆಯ್ತಾನೇ ಇತ್ತುಆವತ್ತೂ ಕೂಡ ಜಗಳ ಆಗಿತ್ತುನಮ್ಮತ್ತೆ ಹಾಲ್‌ನಲ್ಲಿ ಟಿವಿ ನೋಡ್ತಾ ಕೂತಿದ್ದರುಮಕ್ಕಳು ಸ್ಕೂಲಿಗೆ ಹೋಗಿದ್ದರುಯಾಕೋ ಈ ಜೀವನ ಸಾಕು ಅನ್ನಿಸಿಬಿಡ್ತುಅಡುಗೆ ಮನೆಗೆ ಪೆಟ್ರೋಲ್ ಕ್ಯಾನ್ ತಗೊಂಡೋಗಿ ಮೈಮೇಲೆ ಸುರ್ಕೊಂಡು ಬೆಂಕಿ ಹಾಕ್ಕಂಡೆ’

ನಿಧಾನವಾಗಿಅಸ್ಪಷ್ಟವಾಗಿ ಗೊಗ್ಗರ ದನಿಯಲ್ಲಿ ಆಕೆ ನೆನೆಸಿಕೊಳ್ಳುತ್ತಿದ್ದಳುಒಂದು ಮಾತಿಗೂ ಕಂಟಿನ್ಯುಟಿ ಇರಲಿಲ್ಲಅಸ್ಪಷ್ಟ ಅಸಂಬದ್ಧತೆ (incoheranceಇತ್ತುಆದರೆ ನಡೆದಿದ್ದ ಚಿತ್ರಣ ಭಾಸವಾಗುತ್ತಿತ್ತು.

ಪೆಟ್ರೋಲ್ ಎಲ್ಲಿತ್ತುಬಂಕಿಗೆ ಹೋಗಿ ನೀವೇ ತಂದಿದ್ರಾ?’

ಇಲ್ಲನಮ್ಮೆಜಮಾನ್ರ ಬೈಕಿನಿಂದ ಎರಡು ದಿನ ಮೊದಲೇ ಪೆಟ್ರೋಲ್ ಇಳಿಸಿಕೊಂಡಿದ್ದೆಪ್ಲಾಸ್ಟಿಕ್ ಕ್ಯಾನಲ್ಲಿ ಮುಚ್ಚಳ ಹಾಕಿಟ್ಟಿದ್ದೆಮೊದಲು ಧೈರ್ಯವಾಗದೆ ಸುಮ್ಮನಾಗಿದ್ದೆಆವತ್ತು ಕ್ಯಾನು ತಗೊಂಡು ಬಂದು ಮೈಮೇಲೆ ಸುರಕೊಂಡೆ’

ಎಷ್ಟು ದೊಡ್ಡ ಕ್ಯಾನು ಅದು?’

ಚಿಕ್ಕದು ಎರಡು ಲೀಟರಿನದ್ದುಒಂದು ಮುಕ್ಕಾಲು ಕ್ಯಾನು ಮೊದ್ಲೇ ತುಂಬಿಸಿಟ್ಟಿದ್ದೆ’

ಬೆಂಕಿ ಹಚ್ಚಿಕೊಳ್ಳುವ ಮೊದಲು ನಿಮ್ಮತ್ತೆ ಏನಂತ ಬೈದಿದ್ರು?’

ಅವತ್ತೇನೂ ಬೈಲಿಲ್ಲಅವರ ಪಾಡಿಗೆ ಅವರು ಹಾಲಲ್ಲಿದ್ರುಆವತ್ತು ಮಾತೇ ಆಗ್ಲಿಲ್ಲನಂಗೇ ಮನ್ಸಿಗೆ ಬೇಜಾರಾಗಿತ್ತುಹಾಕ್ಕಂಡೆಯಾರೂ ಹೇಳ್ಲಿಲ್ಲಆ ಸ್ವಾಮೀನೆ ಹೇಳಿದ’

ಸ್ವಾಮೀ ಅಂದ್ರೆ ಯಾರು?’

ನಂ ಮಂದೇವರು ವೆಂಕಟ್ರಮಣಸಾಮಿ’ ಎಂದಳಾಕೆ.

ಹೋಗಲಿ ಈ ಗಾಯ ಆಗೋದಿಕ್ಕೆ ಕಾರಣ ಯಾರು ಅದನ್ನ ಸರಿಯಾಗಿ ಹೇಳಮ್ಮಾ’

ನಾನೇ ಬದುಕೋಲ್ಲಇನ್ನು ಯಾರ ಮೇಲೋ ಏಕೆ ಸುಳ್ಳು ಹೇಳಲಿಆ ಸ್ವಾಮಿನೇ ಹೇಳಿ ಮಾಡಿಸಿದ’

ಇಷ್ಟು ಹೇಳಿಕೆ ಪಡೆಯಲು ಎರಡೂವರೆ ಗಂಟೆ ಹಿಡಿದಿತ್ತುಯಾವುದೇ ಬಗೆಯ suggestive ಆದ ಸೂಚನಾತ್ಮಕ ಮಾತನ್ನೂ ಇನ್‌ಸ್ಪೆಕ್ಟರ್ ಆಡಲಿಲ್ಲನಾನಾ ಪ್ರಶ್ನೆಗಳು ನಾಲಿಗೆ ತುದಿಯಲ್ಲಿದ್ದರೂ ಕಂಟ್ರೋಲ್ ಮಾಡಿಕೊಂಡುವಾಣಿಶ್ರೀ ತಾನಾಗಿ ಹೇಳುವಂತೆ ಪ್ರಶ್ನೆ ಕೇಳುತ್ತಿದ್ದರುಅದರಲ್ಲಿ ಒಂದೇ ಒಂದೂ leading  ಪ್ರಶ್ನೆಗಳಿರಲಿಲ್ಲ (ತಮಗೆ ಬೇಕಾದ ಉತ್ತರವನ್ನು ಹೊರ ಸೆಳೆಯಲು ತಾನೇ ಮುಂದಾಗಿ ಕೆದಕಿ ಕೇಳುವ ಪ್ರಶ್ನೆ). ನನ್ನಲ್ಲಿದ್ದ ಡಿಕ್ಟಾಫೋನಿನಿಂದ (ಆ ಕಾಲದ sanyo ವಾಯ್ಸ್ ರೆಕಾರ್ಡರ್ಅಲ್ಲಿಯ ಸಂಪೂರ್ಣ ವಿದ್ಯಮಾನವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆಗಾಯಾಳುವಿನ ಹೇಳಿಕೆಯನ್ನು ಠಾಣಾ ರೈಟರ್ ಬಾಷಾ ಬರೆದುಕೊಳ್ಳುತ್ತಿದ್ದರು.

ಆಕೆಯ ಬಲಗೈ ಹೆಬ್ಬೆರಳು ಸುಟ್ಟಿರಲಿಲ್ಲಹೇಳಿಕೆಗೆ ಹೆಬ್ಬೆರಳನ್ನು ಒತ್ತಿಸಿದೆವುವೈದ್ಯರುನರ್ಸ್ಅವಳಣ್ಣ ಎಲ್ಲರೂ ಸಾಕ್ಷಿ ಸಹಿ ಹಾಕಿದರುದಿನಾಂಕ ಸಮಯದೊಂದಿಗೆ ಎಲ್ಲರ ಸಹಿ ಬಿದ್ದಿತು.

ಇಷ್ಟೆಲ್ಲಾ ಬೇಕಿತ್ತೇ ಸರ್?’ ಕೇಳಿದೆ.

ತಣ್ಣೀರನ್ನು ಆರಿಸಿಕೊಂಡು ಕುಡಿಯೋ ಕಾಲ ಇದಪ್ಪಾ.

ಈಗಾಗಲೇ ಗಂಡನ ಮನೆಯವರ ಮೇಲೆ ಅನುಮಾನ ಪಟ್ಕೊಂಡು ಕೂಗಾಡ್ತಾ ಇದ್ದಾರೆಸತ್ತರೆ ಪೊಲೀಸರನ್ನೇ ಅವರು ದೂರೋದುಸಂಭಾಷಣೆ ರೆಕಾರ್ಡ್ ಆಗಿದೆವಿಡಿಯೋನೂ ಇದೆಯಾವನಾದ್ರೂ ರಾಗ ಎಳುದ್ರೆ ತೋರಿಸೋದಿಕ್ಕೆ ಇರಲಿ ಅಂತಪೊಲೀಸ್ ಕೆಲಸಾ ಅಂದ್ರೆ ಬೇಲಿ ಹಾಕ್ಕೊಂಡು ಬೆಳೆ ಬೆಳಿಯೋ ಕೆಲಸ’

ಹಾಗಂತ ಪ್ರತಿಯೊಂದ್ರಲ್ಲೂ ದೂಷಣೆ ನಿರೀಕ್ಷಿಸುತ್ತಾ ಹೆದರಿಕೊಂಡು ಕೆಲ್ಸಾ ಮಾಡೋ ಅಗತ್ಯ ಇದ್ಯಾ ಸಾರ್ಪುಕ್ಕಲು ಅನ್ನೊದಿಲ್ವಾ?’

ಪೊಲೀಸ್ನೋರು ಎಷ್ಟೇ ಒಳ್ಳೆಯ ಕೆಲ್ಸಾ ಮಾಡಲಿಅನುಮಾನದಿಂದ್ಲೇ ನೋಡ್ತಾರೆಜನರ ದೃಷ್ಟಿಯೇ ಹಾಗಿದೆನಗುವವರ ಮುಂದೆ ನಾಚಿಕೆಗೇಡಾಗಬಾರದು ಅಂದ್ರೆನಾವು ಏನೋ ಕೆಡುಕಾಗುತ್ತೆ ಅಂತ ತಿಳ್ಕಂಡೇ ಕೆಲಸ ಮಾಡ್ಬೇಕಾಗುತ್ತೆ.’ ‘ಇವಳು ಹೀಗೆ ಹೇಳಿಕೆ ಕೊಡಬಹುದು ಅಂತಾನೆ ಗೊತ್ತಿರಲಿಲ್ಲಅಲಿಗೇಷನ್ ಬಂದಾಗಲೇ ನಾವು ಅತ್ತೆಗಂಡನನ್ನು ಮೊದಲು ಅರೆಸ್ಟ್ ಮಾಡಬೇಕಿತ್ತು ಅಲ್ವಾ ಸಾರ್ಅನಗತ್ಯವಾಗಿ ಪೊಲೀಸರ ಮೇಲೆ ಆಪಾ ದನೆ ಮಾಡೋದು ತಪ್ಪುತ್ತಿತ್ತು’

ಜನ ಬಾಯಿಗೆ ಬಂದದ್ದು ಮಾತಾಡ್ತಾರೆ ಅಂತ ಡುಬುಕ್ ಅಂತ ಅರೆಸ್ಟ್ ಮಾಡೋದಿಕ್ಕಾಗುತ್ತಾಅವಳು ಅಡ್ಮಿಟ್ ಆದ ಮೊದಲ ದಿನವೇ ತಾನೇ ಪೆಟ್ರೋಲ್ ಹಾಕ್ಕಂಡಿದ್ದೆ ಅಂತ ಸಬ್ ಇನ್‌ಸ್ಪೆಕ್ಟರ್ ಹತ್ರ ಹೇಳಿಕೆ ಕೊಟ್ಟಿದ್ದಳುಆದರೆ ಆವತ್ತು ಔಷಧಿ ಮಂಪರಿನಲ್ಲಿ ಕೊಟ್ಟಿದ್ದರಿಂದ ಕೋರ್ಟಿನಲ್ಲಿ ನಿಲ್ತಿರಲಿಲ್ಲಅದಕ್ಕೇ ಇಲ್ಲೀತನಕ ಕಾದಿದ್ದಾಯ್ತು’ ಹೇಳಿಕೆ ಪಡೆದ ಎರಡೇ ದಿನಕ್ಕೆ ವಾಣಿಶ್ರೀ ತೀರಿಕೊಂಡಳುಆಕೆ ಸಾವಿಗೆ ಅನ್ಯರ ಕೈವಾಡವಿದ್ದ ಬಗ್ಗೆ ಯಾವುದೇ ಸಾಕ್ಷ್ಯವಾಗಲೀ ಸಾಕ್ಷಿಯಾಗಲೀ ಇರಲಿಲ್ಲಹೇಳಿಕೆ ನೀಡುವ ಸಮಯದಲ್ಲಿ ಆಕೆ ಮಾನಸಿಕವಾಗಿ ಸ್ಥಿಮಿತದಲ್ಲಿದ್ದಳುಅದನ್ನು ವೈದ್ಯರೂ ದೃಢೀಕರಿಸಿದ್ದರುಹೀಗಾಗಿ ಆಕೆ ನೀಡಿದ ಆ ಕೊನೆಯ ಹೇಳಿಕೆಯೇ ಮರಣ ಕಾಲದ ಹೇಳಿಕೆ ಎಂದು ಪರಿಗಣಿತವಾಯಿತುಅಲ್ಲದೆ ಸುಟ್ಟು ಆಸ್ಪತ್ರೆಗೆ ಸೇರಿದ ದಿನವೇತಾನಾಗೆ ಬೆಂಕಿ ಹಚ್ಕೊಂಡೆ ಎಂದು ಬಂಧುಗಳೆದುರು ಹೇಳಿದ್ದಳುಆದರೆ ದಿನಗಳೆದಂತೆ ಆರೋಪ ಗಂಡಅತ್ತೆಯ ಮೇಲೆ ತಿರುಗಿತ್ತು.

ಗಂಡಅತ್ತೆ ಮೇಲಿನ ವೃಥಾರೋಪ ಮಂಜಿನಂತೆ ಕರಗಿತು.

(ಮುಗಿಯಿತು)

 

andolanait

Recent Posts

ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್, ವಿಮೆ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದ ಗಿರಿಶ್ರೇಣಿಗಳಿಗೆ ಬರುವ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ದೇಶಕ್ಕೆ ಮಾದರಿಯಾಗುವಂತಹ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸುವಂತೆ ಅರಣ್ಯ,…

1 hour ago

ಅಡುಗೆ ಅನಿಲ,‌ಪೆಟ್ರೋಲಿಯಂ ಉತ್ಪನ್ನಗಳ ಕೊರತೆಗೆ ಕೇಂದ್ರ ಕಾರಣ ; ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ದೇಶದಲ್ಲಿ ಅಡುಗೆ ಅನಿಲ, ಪೆಟ್ರೊಲ್ ಡಿಸೇಲ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್…

1 hour ago

ಮೈಸೂರು-ಜೋಧ್‌ಪುರ ನಡುವೆ ವಿಶೇಷ ರೈಲು ಸೇವೆ ಆರಂಭ

ಮೈಸೂರು : ಮೈಸೂರು-ಜೋಧ್‌ಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿರುವುದಕ್ಕೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ…

2 hours ago

ಓದುಗರ ಪತ್ರ | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮಾರಕ ನಿರ್ಮಾಣ ಸ್ವಾಗತಾರ್ಹ

೨೦೨೫ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ ವರ್ಷಗಳ ನಂತರ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಯಶೀಲರಾಗಿ…

2 hours ago

ಓದುಗರ ಪತ್ರ | ಆಟೋ ಚಾಲಕರಿಗೆ ಸರ್ಕಾರ ಪರಿಹಾರ ನೀಡಲಿ

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ನಡೆಸುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಿಂದ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದ್ದ ಕಚ್ಚಾ ತೈಲ…

2 hours ago

ಓದುಗರ ಪತ್ರ | ಜನಗಣತಿ ದೇಶದ ಏಳಿಗೆಯ ದಿಕ್ಸೂಚಿ

ಜನಗಣತಿ ಕಾರ್ಯದಲ್ಲಿ ಗಣತಿದಾರರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು. ಗುರುತಿನ ಚೀಟಿ ಧರಿಸಿ, ಸೌಜನ್ಯದಿಂದ ಮಾಹಿತಿ ಸಂಗ್ರಹಿಸಿ.…

2 hours ago