ಎಡಿಟೋರಿಯಲ್

ಸರ್ಕಾರ ರೈತಪರ ಯೋಜನೆ ರೂಪಿಸಬೇಕು


ಎಸ್.ಸಿ.ಮಧುಚಂದನ್

ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ.

ರೈತರು ಎಂದರೆ ಯಾವಾಗಲೂ ಬೆಳೆಗಳನ್ನು ಬೆಳೆಯುವವರು ಸಂಕಷ್ಟ ಎದುರಿಸಿ ಜೀವನ ನಡೆಸುವವರು ಎನ್ನುವಂತಾಗಿದೆ. ಇಂದಿನ ಸರ್ಕಾರಗಳು ರೈತರ ನಷ್ಟದಲ್ಲಿ ತಾವು ಲಾಭವನ್ನು ಕಾಣುವ ಪ್ರಯತ್ನದಲ್ಲಿವೆಯೇ ಹೊರತು, ಬಂದ ಲಾಭದಲ್ಲಿ ರೈತರಿಗೂ ಸಮಪಾಲು ನೀಡಿ ಅವರನ್ನು ಮೇಲೆತ್ತಬೇಕು ಎಂಬ ಉದ್ದೇಶ ಯಾವ ಸರ್ಕಾರಕ್ಕೂ ಇಲ್ಲವೆನಿಸುತ್ತದೆ.

ಹಾಲಿನ ದರ ಮತ್ತು ಕಬ್ಬಿನ ಬೆಲೆ ಏರಿಕೆ ಮಾಡುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಕಳೆದ ೫೪ ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬೇಡಿಕೆ ಇಷ್ಟೇ, ಟನ್ ಕಬ್ಬಿಗೆ ೪,೫೦೦ ರೂ. ಬೆಲೆ ನಿಗದಿ ಮಾಡಬೇಕು ಹಾಗೂ ಲೀಟರ್ ಹಾಲಿನ ದರ ೪೦ ರೂ. ಮಾಡಬೇಕು ಎಂಬುದು. ಈ ಬೇಡಿಕೆಯನ್ನು ಈಡೇರಿಸಲಾಗದ ಸರ್ಕಾರ ಬುಧವಾರ ತನ್ನ ಅಽಕಾರವನ್ನು ಚಲಾಯಿಸಿ ಶಾಂತಿಯುತ ಪ್ರತಿಭಟನೆಯನ್ನು ತೀವ್ರ ಸ್ವರೂಪಕ್ಕೆ ತಿರುಗುವಂತೆ ಮಾಡಿದೆ. ಇದು ರೈತರ ರಕ್ತ ಹೀರುವ ಕೆಲಸವಲ್ಲದೇ ಮತ್ತೇನು?

ಇಂದು ವಿಶ್ವದಾದ್ಯಂತ ಸಕ್ಕರೆಯನ್ನು ತಿನ್ನಬೇಡಿ ಎನ್ನುತ್ತಿದ್ದಾರೆ. ಆದರೆ ನಮ್ಮಲ್ಲಿ ಮಾತ್ರ ಸಕ್ಕರೆಯನ್ನು ಅಗತ್ಯ ವಸ್ತು ಕಾಯ್ದೆಯಡಿ ತಂದು ಇಟ್ಟಿದ್ದಾರೆ. ಆದರೆ ಇಲ್ಲಿ ಸಕ್ಕರೆ ಅಗತ್ಯವೇ? ಎಂಬ ಪ್ರಶ್ನೆ ಇದೆ. ಅಗತ್ಯ ವಸ್ತು ಕಾಯ್ದೆಯಡಿಯಲ್ಲಿದೆ ಎಂದ ಮಾತ್ರಕ್ಕೆ ಸರ್ಕಾರ ತನಗೆ ಬೇಕಾದ ರೀತಿ, ಅದರಲ್ಲಿಯೂ ಕಾರ್ಖಾನೆಗಳ ಮಾಲೀಕರಿಗೆ ಅನುಕೂಲವಾಗುವ ಬೆಲೆ ನಿಗದಿ ಮಾಡಿದರೆ ಇದನ್ನು ರೈತರ ಪರವಾಗಿದೆ ಎನ್ನಬಹುದೇ? ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶೇ.೮೦ರಷ್ಟು ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಸರ್ಕಾರದ್ದೇ ಆಗಿದೆ. ಸರ್ಕಾರದ ಶಾಸಕರು ಮತ್ತು ಮಂತ್ರಿಗಳೇ ಈ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದು, ಅವರಿಗೆ ಸಕ್ಕರೆಗೆ ಯಾವ ಬೆಲೆ ನಿಗದಿಯಾಗಿರುತ್ತದೆಯೋ ಅದರ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿ ಮಾಡುತ್ತಿದ್ದಾರೆ. ಏಕೆ ಕಬ್ಬಿನ ಮೂಲಕ ಆಲ್ಕೋಹಾಲ್ ಸೇರಿದಂತೆ ಇತರೆ ಪದಾರ್ಥಗಳ ತಯಾರಿಕೆಯಾಗುವುದಿಲ್ಲವೇ? ಅದರ ಆದಾಯ ಏನಾಯಿತು? ಮಂಡ್ಯದ ಉಸ್ತುವಾರಿ ಸಚಿವರು ವಾರ್ಷಿಕ ಅಬಕಾರಿ ಆದಾಯವು ೩೦ ಸಾವಿರ ಕೋಟಿ ರೂ.ಗಳಷ್ಟಿದೆ ಎಂದು ಬೊಬ್ಬೆ ಹೊಡೆಯು ತ್ತಿದ್ದಾರೆ. ಅಷ್ಟೂ ಆದಾಯಕ್ಕೆ ಕಬ್ಬು ಬೆಳೆಗಾರರೇ ಪ್ರಮುಖ ಕಾರಣ. ಸರ್ಕಾರ ಒಂದು ಟನ್ ಕಬ್ಬಿನಿಂದ 32-33 ಸಾವಿರ ರೂ. ಆದಾಯವನ್ನು ಗಳಿಸುತ್ತಿದೆ. ಕಬ್ಬು ಸಕ್ಕರೆಗೆ ಮಾತ್ರ ಸೀಮಿತವಾಗದೆ, ಸಕ್ಕರೆ ಹೊರತಾಗಿ ಬೇರೆ ಬೇರೆ ಪದಾರ್ಥಗಳು ತಯಾರಾಗಿ ಸರ್ಕಾರಕ್ಕೆ ಲಾಭದಾಯಕವಾಗಿದೆ. ನಮ್ಮ ಭಾಗದಲ್ಲಿ ಅಂದಾಜು ೧ ಎಕರೆಗೆ 50 ಟನ್ ಬೆಳೆದರೆ ಅದರ ಆದಾಯ ೩೨-೩೩ಲಕ್ಷ ರೂ.ಗಳಷ್ಟಿದೆ. ಅದೇ ಉತ್ತರ ಕರ್ನಾಟಕದ ಭಾಗದಲ್ಲಿ ಸರಾಸರಿ ಎಕರೆಗೆ 80 ಟನ್ ಬೆಳೆದು ಅದರಿಂದ ೪೫-೫೦ ಲಕ್ಷ ರೂ. ಆದಾಯ ಸರ್ಕಾರಕ್ಕೆ ಬರುತ್ತಿದೆ. ಹೀಗಿರುವಾಗ ರೈತರಿಗೆ ಉತ್ತಮ ಬೆಲೆ ನೀಡಲು ಸರ್ಕಾರಕ್ಕೆ ಏನು ಸಮಸ್ಯೆ?

ಇದರಲ್ಲಿ ರೈತರಿಗೆ ಇಡೀ ಆದಾಯವನ್ನು ಕೊಡಬೇಕಿಲ್ಲ. ಒಂದು ಟನ್ನಿಗೆ ಒಂದು ಸಾವಿರ ರೂ. ಹೆಚ್ಚಿಸಿದರೆ ಸಾಕು. ಇದರಿಂದ ರಾಜ್ಯದಲ್ಲಿ ವಾರ್ಷಿಕ ೬ ಸಾವಿರ ಕೋಟಿ ರೂ. ಹೆಚ್ಚಳವಾಗುತ್ತದೆ. ಇದರಿಂದ ಸರ್ಕಾರಕ್ಕೇನೂ ನಷ್ಟವಾಗುವುದಿಲ್ಲ. ಸದ್ಯ ಮಂಡ್ಯ ಭಾಗದಲ್ಲಿ ಇಳುವರಿಯೂ ಇಲ್ಲ, ಜೊತೆಗೆ ರಿಕವರಿಯೂ ಇಲ್ಲದಂತಾಗಿದೆ. ತಮಿಳುನಾಡಿನಲ್ಲಿ ರಿಕವರಿಯೂ ಶೇ.೯.೫ ರಷ್ಟಿದೆ. ಅದರ ಮೇಲೆ ಟನ್ ಕಬ್ಬಿಗೆ ೩,೨೦೦ ರೂ. ದರ ನಿಗದಿ ಮಾಡಿದ್ದಾರೆ. ಮಂಡ್ಯದಲ್ಲಿ ರಿಕವರಿ ಶೇ.೮.೫೬ ಇದೆ. ಈಗ ಇಲ್ಲಿ ೨,೭೮೦ರೂ. ಬೆಲೆ ನೀಡುತ್ತಿದ್ದಾರೆ. ಆದರೆ ಅದರಲ್ಲಿ ರೈತರು ಕಟಾವಿಗೆ ೧,೧೦೦ರೂ. ಗೊಬ್ಬರ ಸೇರಿದಂತೆ ನಿರ್ವಹಣೆ ವೆಚ್ಚವನ್ನೆಲ್ಲ ಕಳೆದರೆ ಇಂದು ಕಬ್ಬನ್ನು ರೈತರು ನಷ್ಟದಲ್ಲಿ ಬೆಳೆಯುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಅಷ್ಟಕ್ಕೂ ರೈತರಿಗೆ ಸರ್ಕಾರದಿಂದ ಯಾವ ಸೌಲಭ್ಯ ದೊರಕಿದೆ ಎಂದು ರೈತ ಸರ್ಕಾರಕ್ಕೆ ಆದಾಯ ಮಾಡಬೇಕು? ಒಂದು ಟನ್ ಕಬ್ಬಿಗೆ ಕೇವಲ ೪೦೦-೫೦೦ ರೂ. ಆದಾಯ ಪಡೆಯುವ ರೈತರು ತಮ್ಮ ಮಕ್ಕಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಓದಿಸಲು ಸಾಧ್ಯವೆ? ಇತ್ತ ಸರ್ಕಾರಿ ಶಾಲೆಗಳೂ ಸರಿಯಾಗಿಲ್ಲ. ಆರೋಗ್ಯ ಹದಗೆಟ್ಟರೆ ಸರ್ಕಾರಿ ಆಸ್ಪತ್ರೆಯೂ ಉತ್ತಮವಾಗಿಲ್ಲ. ಈಗಿರುವಾಗ ರೈತ ಹೇಗೆ ಕುಟುಂಬ ನಿರ್ವಹಣೆ ಮಾಡಬೇಕು? ಇನ್ನೂ ಹಾಲಿನ ವಿಚಾರಕ್ಕೆ ಬಂದರೆ ಅದು ಕೂಡ ಲೀ.ಗೆ ೩೬ ರೂ, ಇದೆ. ಆದರೆ ರೈತನಿಗ ಪ್ರೋತ್ಸಾಹಧನ ಸೇರಿ ಸಿಗುವುದು ೩೪ ರೂ, ಅದರಲ್ಲಿಯೂ ಪ್ರೋತ್ಸಾಹ ಧನ ೫ ರೂ. ೪-೫ ತಿಂಗಳಿಗೆ ಒಟ್ಟಾಗಿ ಬರುತ್ತದೆ. ಮನ್ ಮುಲ್‌ನಿಂದ ನವೆಂಬರ್ ೧ ರಂದು ಹಾಲಿನ ದರ ೧ ರೂ. ಏರಿಕೆ ಮಾಡಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿತ್ತು. ಆದರೆ ಪಶು ಆಹಾರಕ್ಕೆ ೧೨೫ ರೂ. ಹೆಚ್ಚಿಸಿ ಎಲ್ಲಿಯೂ ಪ್ರಕಟಿಸದೆ, ಕೇವಲ ಡೇರಿಗಳ ನಿರ್ವಾಹಕರಿಗೆ ಮಾಹಿತಿ ನೀಡಿದ್ದರು. ಇಂದು ರೈತರಿಗೆ ಸಾಕಷ್ಟು ಮೋಸ ನಡೆಯುತ್ತಿದೆ. ಯಾವ ಸರ್ಕಾರವೂ ಕೂಡ ರೈತಾಪಿಗಳು, ಕಾರ್ಮಿಕರು, ಬಡವರ ಪರವಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿ ಪ್ರಾಯ ಸೃಷ್ಟಿಸಿ ಜನಪ್ರತಿನಿಧಿಗಳಾಗಿದ್ದಾರೆ. ಇವರು ಎಂದೂ ಶ್ರಮಿಕ ವರ್ಗದವರಂತೆ ದುಡಿಯಲಿಲ್ಲ. ಕೇವಲ ಮಸೀದಿ-ಮಂದಿರ-ಚರ್ಚೆ ಎನ್ನುತ್ತಾ ಜಗಳದ ನಡುವೆ ಸರ್ಕಾರ ನಡೆಸುತ್ತಿದ್ದಾರೆ. ಇವರಿಗೆ ರೈತರ ಕಷ್ಟ ಅರ್ಥವಾಗು ವುದಿಲ್ಲ. ಇನ್ನಾದರೂ ಅನ್ನದಾತರ ಅಳಲಿಗೆ ಆಡಳಿತಗಾರರು ಕಿವಿ ಮತ್ತು ಮನಸ್ಸು ತೆರೆಯಬೇಕು.

andolanait

Recent Posts

ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಿ: ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇರಾನ್‌-ಇಸ್ರೇಲ್‌ ನಡುವಿನ ಸಂಘರ್ಷ ಏರ್ಪಟ್ಟಿರುವ ಪರಿಣಾಮ ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ…

8 hours ago

ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಸಂಸದ ಯದುವೀರ್‌ ಒಡೆಯರ್‌

ನಾಪೋಕ್ಲು: ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಾಗ್ದಾಳಿ…

9 hours ago

ಹನೂರು: ಶಾಲೆಗೆ ನೂತನ ಕಟ್ಟಡ ನಿರ್ಮಿಸುವಂತೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಶಿಕ್ಷಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಳಸಿಕೆರೆ ಗ್ರಾಮದ…

9 hours ago

ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ: ವಿಪಕ್ಷ ನಾಯಕ ಆರ್.‌ಅಶೋಕ್‌

ಬೆಂಗಳೂರು: ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು…

9 hours ago

ನಾಳೆ ರಕ್ತ ಚಂದ್ರಗ್ರಹಣ: ಕೊಡಗಿನ ವಿವಿಧ ದೇವಾಲಯಗಳಲ್ಲಿ ಪೂಜಾ ಸಮಯ ಬದಲು

ಕೊಡಗು: ನಾಳೆ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ…

9 hours ago

ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ.!

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು…

9 hours ago