ಎಚ್.ಎಸ್.ಶಂಕರ ಹೊನ್ನೇಗೌಡನಹಳ್ಳಿ
ದಶಕದಿಂದ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆಯೋ, ಇಲ್ಲವೋ? ಎಂಬ ಪ್ರಶ್ನೆ ಸಹಜವಾಗಿ ಮೂಡಲು ಆರಂಭಿಸಿದೆ. ಕಾರಣ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇವಲ ಯೋಜನೆಗಳ ಹೆಸರು ಬದಲಾವಣೆ, ನಗರಗಳ ಹೆಸರು ಬದಲಾವಣೆ, ಬ್ಯಾಂಕುಗಳ ವಿಲೀನದ ಕಾರ್ಯಗಳೇ ಭರದಿಂದ ಸಾಗುತ್ತಿವೆಯೇ ವಿನಾ, ಬಡವರ್ಗಗಳ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ಪೂರೈಕೆಗೆ, ಪೂರಕವಾದ ಯೋಜನೆಗಳು ಜಾರಿಯಾಗಲೇ ಇಲ್ಲ.
ಈ ಹಿಂದಿನ ಸರ್ಕಾರಗಳು ಜನರ ಹಿತಕ್ಕಾಗಿ ಜಾರಿಗೊಳಿಸಿದ ಯೋಜನೆಗಳಿಗೆ ಕೇವಲ ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಸರ್ಕಾರಕ್ಕೆ ಅದರ ಕ್ರೆಡಿಟ್ ಸಲ್ಲುವುದಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಆವಾಸ್ ಯೋಜನೆಯು ಪಿಎಂ ಗ್ರಾಮೀಣ ಆವಾಸ್ ಯೋಜನೆಯಾಗಿದೆ. ಸಮಗ್ರ ಬೆಳೆ ವಿಮಾ ಯೋಜನೆಯು ಪಿಎಂ ಫಸಲ್ ಬಿಮಾ ಯೋಜನೆಯಾಗಿ, ಜೆಎನ್ಎನ್ಯುಆರ್ ಎಂ- ಅಮೃತ್, ಆಮ್ ಆದ್ಮಿ ಬಿಮ ಯೋಜನೆಯು ಪಿಎಂ ಸುರಕ್ಷಾ ಭೀಮಾ ಯೋಜನೆಯಾಗಿ, ರಾಷ್ಟ್ರೀಯ ಇ-ಗವರ್ನರ್ಸ್ ಯೋಜನೆಯನ್ನು ಡಿಜಿಟಲ್ ಇಂಡಿಯಾ ಆಗಿ ಪರಿವರ್ತಿಸಲಾಗಿದೆ. ಹೀಗೆ ಅನೇಕ ಯೋಜನೆಗಳಿಗೆ ಹೆಸರು ಬದಲಾಯಿಸಲಾಗಿದೆ.
ಈ ಹೆಸರು ಬದಲಾವಣೆ ಯೋಜನೆಗಳಿಗೆ ಮಾತ್ರ ಸೀಮಿತವಾಗಿರದೆ, ದೇಶದ ಪ್ರಮುಖ ನಗರಗಳಿಗೂ ವ್ಯಾಪಿಸಿದೆ. ಅಲಹಾಬಾದ್ಅನ್ನು ಪ್ರಯಾಗ್ ರಾಜ್ ಎಂತಲೂ, ಅಮಿನನ್ನು ಅಭಿಮನ್ಯುಪುರ ಎಂದು ನಗರಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ. ಇದರೊಂದಿಗೆ ದೇಶದ ಸಾಕಷ್ಟು ಬ್ಯಾಂಕ್ಗಳನ್ನೂ ಕೂಡ ಇತರೆ ಬ್ಯಾಂಕುಗಳೊಡನೆ ವಿಲೀನ ಮಾಡಿದೆ. ಅದರಿಂದ ಯಾವುದೇ ದೊಡ್ಡ ಬದಲಾವಣೆ ಏನೂ ಕಾಣುತ್ತಿಲ್ಲ.
ಏತನ್ಮಧ್ಯೆ ದಶಕದಿಂದೀಚೆಗೆ ಜನಸಾಮಾನ್ಯರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಕೇವಲ ಹೆಸರು ಬದಲಾವಣೆಯ ಹಾದಿ ಹಿಡಿದಿರುವ ಸರ್ಕಾರವು ಜನಸಾಮಾನ್ಯರು ಪ್ರತಿನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿದೆ. ಆದರೆ ತಾವು ಬಡವರ ಪರ ಆಡಳಿತ ನೀಡುತ್ತಿದ್ದೇವೆ ಎಂದು ಬಿಂಬಿಸುತ್ತಿದ್ದು, ಸಾಮಾನ್ಯ ಜನರು ದುಡಿದ ದಿನಕೂಲಿಯ ಮೊತ್ತಕ್ಕಿಂತ ಅವರ ದಿನದ ಜೀವನ ನಿರ್ವಹಣೆಯ ವೆಚ್ಚವೇ ಅಧಿಕವಾಗುವಂತೆ ಮಾಡಿದೆ.
ಇಂದು ಪ್ರತಿನಿತ್ಯ ಜನರಿಗೆ ಅತ್ಯಗತ್ಯವಾಗಿರುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ಗಳು, ಆಹಾರ ಪದಾರ್ಥಗಳು ಬೆಲೆ ಗಗನಕ್ಕೇರುತ್ತಿದೆ. ಇದು ಜನಸಾಮಾನ್ಯರ ಜೀವನ ಬೀದಿಗೆ ಬರುವಂತೆ ಮಾಡುತ್ತಿದ್ದು, ಇವುಗಳನ್ನು ನಿಯಂತ್ರಿಸಬೇಕಾದ ಸರ್ಕಾರ ಇಂದು ಧರ್ಮಗಳ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಜೊತೆಗೆ ಅನಗತ್ಯವಾದ ಹೆಸರು ಬದಲಾವಣೆಯ ಕಾರ್ಯದಲ್ಲಿ ತೊಡಗಿಕೊಂಡಿದೆ.
ಇದಿಷ್ಟು ಸಾಲದಂತೆ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಇದರೊಂದಿಗೆ 1 ರಿಂದ 8ನೇ ತರಗತಿವರೆಗಿನ ಪ.ಜಾತಿ, ಪ.ಪಂಗಡಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದೆ. 2015ರಲ್ಲಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 93ನೇ ಸ್ಥಾನದಲ್ಲಿತ್ತು. ಆದರೆ 2022ರ ಸೂಚ್ಯಂಕದಲ್ಲಿ 107ನೇ ಸ್ಥಾನದಲ್ಲಿದೆ. ಇದು ಭಾರತದ ಅಭಿವೃದ್ಧಿಯೇ? ಎಂಬುದು ಜನರ ಪ್ರಶ್ನೆಯಾಗಿದೆ. ಪ್ರಸ್ತುತ ಸರ್ಕಾರವು ಅಽಕಾರಕ್ಕೆ ಬಂದಾಗಿನಿಂದಲೂ ಸ್ವಿಸ್ ಬ್ಯಾಂಕ್ನಿಂದ ಹಣ ಬರಲೇ ಇಲ್ಲ, ಉದ್ಯಮಿಗಳಿಗೆ ನೀಡಿದ ಸಾವಿರಾರು ಕೋಟಿ ರೂ. ಸಾಲದ ಹಣ ಸಂದಾಯವಾಗಿಲ್ಲ, ನೋಟು ಅಮಾನ್ಯೀಕರಣ ನಿರೀಕ್ಷೆಯ ಯಶಸ್ಸು ಕಾಣಲಿಲ್ಲ, ಭಾರತದ ಸಾಲದ ಹೊರೆ ಇಳಿಯಲಿಲ್ಲ, ಬ್ಯಾಂಕುಗಳ ವಿಲೀನ ಪ್ರಯೋಜನವಾಗಲಿಲ್ಲ, ಜನಧನ್ ಖಾತೆಯ ಸಫಲತೆಯೂ ಕಾಣಲಿಲ್ಲ, ಇವುಗಳನ್ನೆಲ್ಲ ಸರಿದೂಗಿಸಬೇಕಿದ್ದ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಧರ್ಮಗಳ ನಡುವೆ ಭಿನ್ನಾಭಿಪ್ರಾಯ, ಗಡಿವಿವಾದಗಳನ್ನು ಸೃಷ್ಟಿಸಲು ಆರಂಭಿಸಿದೆ.
ಕುಸಿಯುತ್ತಿರುವ ದೇಶದ ಆರ್ಥಿಕತೆ, ಹೆಚ್ಚಾಗುತ್ತಿರುವ ಕೋಮುವಾದ, ಅತ್ಯಾಚಾರದಂತಹ ಪ್ರಕರಣಗಳು ಮತ್ತು ಅತಿಯಾದ ಬೆಲೆ ಏರಿಕೆಗಳಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಆದರೆ, ಧರ್ಮದ ವಿಚಾರದ ಕಲಹ, ಹತ್ಯೆಗಳು, ಮಸೀದಿ-ದೇವಾಲಯಗಳ ಧ್ವಂಸ, ಟಿಪ್ಪುವಿನ ಹೆಸರಿನ ಕಲಹದ ಹೊರತಾಗಿ ಅಭಿವೃದ್ಧಿ, ಬಡತನ-ಹಸಿವು ನಿರ್ಮೂಲನೆಗೆ ಕ್ರಮ, ಜಾಗತಿಕ ಮಟ್ಟದಲ್ಲಿ ದೇಶದ ಪ್ರಗತಿಯ ಬಗ್ಗೆ ಯೋಜನೆಗಳು ಸಿದ್ಧವಾಗಲೇ ಇಲ್ಲ.
‘ಮತ ಎಂಬುದು ಎರಡು ಅಲಗಿನ ಖಡ್ಗವಿದ್ದಂತೆ, ಅದನ್ನು ಬೀಸಿದರೆ ಅಸಾಮಾಜಿಕ ಅಸಮಾನತೆ ತೊಲಗುತ್ತದೆ. ಮತೊಂದು ಕಡೆ ಬೀಸಿದರೆ ಆರ್ಥಿಕ ಅಸಮಾನತೆ ಸಂಹಾರವಾಗುತ್ತದೆ’ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಅದರಿಂದ ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…