ಎಡಿಟೋರಿಯಲ್

ತರೀಕೆರೆ ಏರಿ ಮೇಲೆ: ಶಿಕಾರಿ ವ್ಯಸನ

ಳ್ಳ ಕೆರೆಹೊಳೆಗಳಿರುವ ಊರಿನವರಿಗೆ ಈಜು ಮತ್ತು ಮೀನು ಬೇಟೆಯ ಕಲೆ ಸಹಜವಾಗಿ ಸಿದ್ಧಿಸುತ್ತದೆಅದು ದುಡಿಮೆಯ ದೈನಿಕವನ್ನು ಮೀರುವ ಉಪಾಯವೂ ಇರಬಹುದುಆದರೂ ನಮ್ಮೂರ ಪಡ್ಡೆಗಳು ಕೆರೆಗೆ ಗಾಳ ಹಾಕಿ ದಿನವಿಡೀ ನೀರನ್ನು ದುರುಗುಡುತ್ತ ಕೂರುವುದು ಸೋಮಾರಿತನ ಎಂದು ನನ್ನ ಅಭಿಮತತಮ್ಮ ಇನಾಯತನ ಮಟ್ಟಿಗದು ಸಂಸಾರದ ಹೊಣೆಯಿಂದ ತಪ್ಪಿಸಿಕೊಳ್ಳುವ ವ್ಯಸನವಾಯಿತುಅವನ ಕುಟುಂಬ ಮೂರಾಬಟ್ಟೆಯಾಯಿತುಬದುಕಿಡೀ ಶಿಕಾರಿಯಲ್ಲಿ ಕಳೆದ ತಮ್ಮ ಬೇಗನೆ ಮೃತ್ಯುವಿನ ಶಿಕಾರಿಗೊಳಗಾದನುಕೊಂದವರುಳಿದರೇ ಕೂಡಲಸಂಗಮದೇವಾಅವನ ಶವಕ್ಕೆ ಸ್ನಾನ ಮಾಡಿಸಿ ಕಫನನ್ನು ಉಡಿಸುತ್ತಿರುವಾಗಮಾಡಿನ ಕೆಳಗೆ ನಮಗೆ ಅಪರಿಚಿತರಾದ ಕೆಲವರು ಗುಂಪಾಗಿ ಬಾಡಿದ ಮುಖದಲ್ಲಿ ಕೂತಿದ್ದರುಕುತೂಹಲದಿಂದ ‘ಯಾರಪ್ಪ ನೀವು?’ಎಂದು ಕೇಳಿದೆ. ‘ನಾವು ವಿನಾಯಕಣ್ಣನ ಜತೆಗಾರ್ರುಮೀನುಶಿಕಾರಿಗೆ ಹೋಗತಿದ್ದಿವಿ’ಎಂದು ಕಣ್ಣಲ್ಲಿ ನೀರು ತೆಗೆದರುಶಿಕಾರಿಯ ಗೆಳೆತನ ಇಷ್ಟು ಗಾಢವಾಗಿರುತ್ತದೆಯೆ?

ಬಾಲ್ಯದಲ್ಲಿ ನಾನೂ ಶಿಕಾರಿ ಗೆಳೆಯರ ಜತೆ ಶಾಲೆ ತಪ್ಪಿಸಿ ಕೆರೆಹಳ್ಳಗಳನ್ನು ಅಲೆದವನೇನಾವಿದ್ದ ಮನೆಯು ಕೆರೆಕೋಡಿಯ ದಂಡೆಯಲ್ಲಿದ್ದರಿಂದಆರು ತಿಂಗಳು ಮೀನು ಹಿಡಿಯುವುದೇ ಕಾಯಕಕೋಡಿ ಬಿದ್ದಾಗ ಮನೆಯಂಗಳದವರೆಗೆ ಹರಡುತ್ತಿದ್ದ ನೀರಲ್ಲಿ ಬಾಲದಲ್ಲಿ ಕಪ್ಪುಚಿಕ್ಕೆಯಿದ್ದ ಕುರುಬರತಾಳಿ ಹೊಸಿಲಿಗೆ ಬರುತ್ತಿದ್ದವುಮರಳ ಮೀನಿಗಂತೂ ಹಳ್ಳ,ಅಂಗಳ ವ್ಯತ್ಯಾಸ ತಿಳಿಯುತ್ತಿರಲಿಲ್ಲಗಾಜಿನ ತುಂಡುಗಳಂತಿದ್ದ ಅವುಗಳ ದೇಹದೊಳಗಿನ ಮುಳ್ಳಿನ ಅಸ್ಥಿಪಂಜರ ಪಾರದರ್ಶಕವಾಗಿ ಕಾಣುತ್ತಿತ್ತುಅವನ್ನು ಗೋಚಿಚವಳಿಕಾಯಂತೆ ಸೋಸಿ ಸಾರು ಮಾಡುತ್ತಿದ್ದರುಹೆಂಗಸರೂಮಕ್ಕಳೂ ಇದ್ದ ಕೆಲಸಬಿಟ್ಟುಪುಟ್ಟಿಹರಕುಸೀರೆ ಹಿಡಿದು ಹಳ್ಳಕ್ಕೆ ಇಳಿಯುತ್ತಿದ್ದರುಬಿತ್ತೋಹೊಲ ಬಿಟ್ಟು ಹತ್ತೋ ಮೀನಿಗೆ ಹೋದಂತೆನಾವು ಬಗ್ಗಡನೀರು ರಭಸವಾಗಿ ಹರಿಯದೆ ಚಕ್ರಾಕಾರವಾಗಿ ಸುಳಿವ ಹಳ್ಳದ ಮೂಲೆಗಳಲ್ಲಿ ವಿಶ್ರಮಿಸುತ್ತಿರುವ ಮೀನಿಗೆ ಗಾಳ ಹಾಕುತ್ತಿದ್ದೆವುನೆಲ ಅಗೆದು ಎರೆಹುಳ ತೆಗೆವಅದನ್ನು ಗಾಳದೊಳಗೆ ಪೋಣಿಸುವಗಾಳಹಾಕುವ ಘನಕಾರ್ಯ ವೀಕ್ಷಿಸಲು ಪೇಟೆಯಿಂದ ಸಹಪಾಠಿಗಳು ಬರುತ್ತಿದ್ದರು.

ಅಪ್ಪ ಕುಲುಮೆ ಕೆಲಸದ ಏಕತಾನದಿಂದ ತಪ್ಪಿಸಿಕೊಳ್ಳಲು ಶಿಕಾರಿಗೆ ಎದ್ದುಬಿಡುತ್ತಿದ್ದನುನಾವು ಬಂಡಿ ಹೂಡಿಕೊಂಡು ಬಟ್ಟೆ ಒಗೆಯಲು ಬುತ್ತಿ ಕಟ್ಟಿಕೊಂಡು ಕಟ್ಟೆಹೊಳೆಗೆ ಯುದ್ಧಕ್ಕೆ ಸೈನ್ಯದ ಪಥಸಂಚಲನದಂತೆ ಹೋಗುತ್ತಿದ್ದೆವುಹಳೇ ಸೀರೆಯ ತುಂಡುಗಳನ್ನೇ ಬಲೆಯಾಗಿಸಿ ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದೆವುಅಕ್ಕ ಹಳ್ಳದ ದಂಡೆಯ ಮೇಲೆ ಒಲೆಹೂಡಿ ಶೇಂಗಾ ಹುರಿದುಟೀ ಕಾಸುತ್ತಿದ್ದಳುಅಪ್ಪ ಕಸಕಡ್ಡಿ ತುಂಬಿದ ಮಡುವಿನಲ್ಲಿ ಗಾಳ ಬಿಟ್ಟುಕೊಂಡು ಕೂರುತ್ತ್ತದ್ದನುಗಾಳದಿಂದ ಎತ್ತಿಹಾಕುವ ಮೀನನ್ನು ಹೆಕ್ಕಲು ಅಡಕೆ ಹಾಳೆಯ ಕೊಟ್ಟೆ ಹಿಡಿದು ಬಾಲಂಗೋಚಿಯಾದ ನಾನುಒಮ್ಮೆ ನಾನೂ ಅಪ್ಪನೂ ನಿರ್ಜನವಾಗಿದ್ದ ಅಡಿಕೆ ತೋಟದೊಳಕ್ಕೆ ಹೋದೆವುಅಲ್ಲೊಂದು ತೆರೆದ ಬಾವಿಕಂಟಿ ಬೆಳೆದು ನೀರಿನ ಮೇಲೆ ಬಾಗಿದ್ದವುಜಲವು ಬಾವಿಯ ಕಟಬಾಯಿಂದ ಹೊರಗೆ ಹರಿಯುತ್ತಿತ್ತುತೋಟದ ನೆರಳಿಗೆ ನೀರು ಕಪ್ಪಗೆ ಆಳವಾಗಿ ಕಾಣುತ್ತಿತ್ತುಅಪ್ಪ ಕಂಟಿಗಳ ಸಂದಿಯಲ್ಲಿ ಗಾಳ ಬಿಟ್ಟನುಚಕ್ಕನೆ ಕೊರವ ಕಚ್ಚಿತುಎರೆಹುಳ ತಿನ್ನದೆ ಎಷ್ಟು ದಿನದಿಂದ ಹಸಿದಿದ್ದವೊ ಎಂಬಂತೆ ಒಂದಾದ ಮೇಲೊಂದು ಗಾಳಕ್ಕೆ ಬಿದ್ದವುಅಂದು ರಾತ್ರಿ ಮೀನುಹುಳಿ ಮುದ್ದೆ ಉಣ್ಣುವಾಗ ಭರ್ಜರಿ ಶಿಕಾರಿಯದೇ ಚರ್ಚೆ.

ಕೆರೆಗಳನ್ನು ಹರಾಜಿನಲ್ಲಿ ಹಿಡಿದವರುಮೀನು ಹಿಡಿದು ಮುಗಿಸಿದ ಮೇಲೆಊರವರಿಗೆ ಸೂರೆ ಹೊಡೆಯಲು ಅವಕಾಶ ಕಲ್ಪಿಸುತ್ತಿದ್ದರುಮುದುಕರಿಂದ ಹಿಡಿದು ಚಿಳ್ಳೆಪಿಳ್ಳೆ ತನಕ ಊರಿಗೂರೇ ಕೆರೆಯ ಮೇಲೆ ಬೀಳುತ್ತಿತ್ತುನೀರನ್ನು ಬಗ್ಗಡವೆಬ್ಬಿಸಿಉಸಿರುಗಟ್ಟಿ ಅಂಗಾತ ತೇಲುವ ಮೀನುಗಳನ್ನು ತುಡುಕುತ್ತಿದ್ದರುಕೆಲವರು ದೆಣ್ಣೆಯಿಂದ ದೊಡ್ಡಮೀನಿಗೆ ಬಡಿದು ಎತ್ತಿತೋರಿಸಿ ಕೇಕೆ ಹಾಕುತ್ತಿದ್ದರುದಪ್ಪಮೀನನ್ನು ಅಡುಗೆ ಮಾಡಿಸಣ್ಣಮೀನನ್ನು ಉಪ್ಪು ಹಚ್ಚಿ ಒಣಗಿಸುತ್ತಿದ್ದರುಹಳ್ಳಿಯ ಕೆರೆ ಬತ್ತುವುದನ್ನು ಅಪ್ಪ ಹದ್ದುಗಣ್ಣಲ್ಲಿ ಕಾಯುತ್ತಿದ್ದನುಒಮ್ಮೆ ಕೆರೆಹೊಸಳ್ಳಿಯ ಕೆರೆ ಬತ್ತಿನಡುಭಾಗದ ಗುಂಡಿಯಲ್ಲಿ ತುಸುವೇ ನೀರುನಿಂತಿತ್ತುಅಪ್ಪ ಅದರಲ್ಲಿ ಮೀನಿರುವುದನ್ನು ಪತ್ತೆಮಾಡಿ ಕಾರ್ಯಾಚರಣೆ ಆಯೋಜಿಸಿದನುಮನೆಗೊಂದು ಆಳಿನಂತೆ ಕಲೆತು ನಡುರಾತ್ರಿ ಹೋಗಿ ಕೆರೆಯ ಗುಂಡಿಯಲ್ಲಿದ್ದ ನೀರನ್ನು ಉಗ್ಗತೊಡಗಿದೆವುಚಳಿಗಾಲದ ಬೆಳದಿಂಗಳಿತ್ತುಗುಂಡಿಯಲ್ಲಿ ನೀರು ಕಡಿಮೆಯಾಗುತ್ತ ಮೀನು ಚಳಪಳಿಸತೊಡಗಿದವುತೋಟ ಕಾಯಲು ಬಂದಿದ್ದ ಯಾರೊ ಒಬ್ಬನಿಗೆ ಇದರ ಸುಳಿವು ಸಿಕ್ಕಿತುಆತ ಊರಿಗೆ ವರ್ತಮಾನ ಕೊಡಲುಊರೇ ದಂಡೆತ್ತಿ ಬಂದಿತುಬತ್ತಿದ ಕೆರೆಯ ಸೂರೆಹಕ್ಕು ಅದರ ಮಜರೆಗೆ ಸೇರಿದ ಊರಿನವರದುಪರಸ್ಥಳದವರಾಗಿ ನಮ್ಮೂರ ಕೆರೆಗೆ ಹೆಂಗೆ ಬಂದಿರಿ ಎಂಬುದು ಅವರ ಪ್ರಶ್ನೆದಂಡರೂಪದಲ್ಲಿ ಮೀನಲ್ಲಿ ಅರ್ಧಪಾಲು ಕೊಡಬೇಕಾಯಿತುಕೊಟ್ಟುಕೆಸರಿನ ಮೈಕೈಯಲ್ಲಿ ಮನೆ ಸೇರುವಾಗ ಪಡುವಣದಲ್ಲಿ ಬೆಳ್ಳಿ ಕಾಣಿಸಿತು.

ಮೀನು ಶಿಕಾರಿಯಲ್ಲಿ ನೀರಹಾವುಗಳದ್ದು ಒಂದು ಕಿರಿಕಿರಿಕೆರೆಹಳ್ಳದಲ್ಲಿ ಏಡಿಗಾಗಿ ಬಿಲದಲ್ಲಿ ಕೈತೂರಿಸಿದರೆ ಅವು ಸಿಗುತ್ತಿದ್ದವುರಾತ್ರಿ ಕಟ್ಟಿದ ಕೂಳಿಯನ್ನು ಬೆಳಿಗ್ಗೆ ಎತ್ತಿದರೆಬಿದ್ದ ಮೀನುಗಳನ್ನೆಲ್ಲ ತಿಂದು ಹಾಯಾಗಿ ಮಲಗಿರುತ್ತಿದ್ದವುಅವನ್ನು ಹೊರಗೆಳೆದು ಚಚ್ಚಿ ಹಾಕುತ್ತಿದ್ದೆವುಈ ತರಬೇತಿ ಬೇರೆಬೇರೆ ಬಗೆಯ ಸರ್ಪಗಳ ಸಂಹಾರಕ್ಕೆ ಬಳಕೆಯಾಯಿತುನಮ್ಮ ಗಲ್ಲಿಯಲ್ಲಿ ಬಿದಿರಿನ ತಟ್ಟಿಗೋಡೆ ಕಟ್ಟಿಕೊಂಡಿದ್ದ ಮೇದಾರರು ಕೋಳಿ ಸಾಕಿದ್ದರುಕೋಳಿವಾಸನೆಗೆ ಹಾವು ಬಂದಾಗಲೆಲ್ಲ ನನಗೆ ಕರೆ ಬರುತ್ತಿತ್ತುಹಾವು ಹೊಡೆಯುವುದರಲ್ಲಿ ನಾನು ಖ್ಯಾತನಾದೆ.

ಒಮ್ಮೆ ಅಮ್ಮನ ಜತೆ ಹೊಲಕ್ಕೆ ಹೋಗುತ್ತಿದ್ದೆಬದುವಿನ ಮೇಲೆ ಬೆಳಗಿನ ಇಬ್ಬನಿಯಲ್ಲಿ ನೆಂದ ಹುಲ್ಲಿನ ಮೇಲೆ ನಾಗರ ಪವಡಿಸಿತ್ತುಅರಗಲಾರದ್ದನ್ನು ತಿಂದು ಸುಸ್ತಾಗಿತ್ತೊಪೊರೆಬಂದು ಕಣ್ಣು ಮಂಜಾಗಿತ್ತೊಅಮ್ಮ ಮುಂದಿನ ಹೆಜ್ಜೆ ಅದರ ಮೇಲಿಡುವವಳು ಕಿಟಾರನೇ ಕಿರುಚಿ ‘ಮುನ್ನಾ ಸಾಂಪ್‌ರೇ’ ಎಂದಳುಹಸಿಕೋಲನ್ನು ಮುರಿದುಕೊಂಡು ತಲೆಗೊಂದು ಪೆಟ್ಟುಕೊಟ್ಟೆನುಲಿನುಲಿದು ತಣ್ಣಗಾಯಿತುಮತ್ತೊಂದು ಮಧ್ಯಾಹ್ನ ತೋಟದ ಮನೆಯಲ್ಲಿ ಮಲಗಿದ್ದೆಚಿಕ್ಕಮ್ಮ ತಂಬಿಗೆ ತೆಗೆದುಕೊಂಡು ಬೇಲಿಸಾಲಿಗೆ ಹೋಗಿದ್ದವರು ಓಡಿಬಂದು ‘ನಮ್ಮ ಕೋಳಿ ಹಾವು ಹಾವು..’ಎಂದು ಒದರಿದರುಎದ್ದವನೇ ಭರ್ಜಿ ಹಿಡಿದು ಓಡಿದೆಬಳ್ಳಿಬೆಳೆದು ಪೊದೆಪೊದೆಯಾಗಿದ್ದ ಬೇಲಿಯ ಮೇಲೆ ಮಲಗಿದ್ದ ನಾಗರಾವು ಪಕ್ಷಿಯನ್ನು ನುಂಗುತ್ತಿತ್ತುಪಕ್ಷಿಯ ಕಾಲಷ್ಟೆ ಹೊರಗುಳಿದಿದ್ದವುಬೇಲಿಯ ಕೆಳಗಿಂದ ನುಸುಳಿ ಹೊಟ್ಟೆಗೆ ಚುಚ್ಚಿದೆಅದು ಬೇಟೆಯನ್ನು ಉಗುಳಿಸರ್ರನೆ ಕೆಳಗಿಳಿದು ಬೆಳೆದಿದ್ದ ಹುಲ್ಲಿನಲ್ಲಿ ತಪ್ಪಿಸಿಕೊಳ್ಳಲು ಹರಿಯತೊಡಗಿತುಹಿಂದಿನಿಂದ ಹೋಗಿ ಹೊಟ್ಟೆಗೆ ಹೊಡೆದೆಬೇಲಿಯಲ್ಲಿ ಅಂಕುಡೊಂಕಾಗಿ ಸಣ್ಣದಾಗಿ ಕಂಡ ಹಾವು ಸತ್ತಮೇಲೆ ಎರಡುಮಾರು ನೀಳವಾಗಿ ಮಲಗಿತುಅದು ತಿಂದಿದ್ದು ನಮ್ಮ ಕೋಳಿಯನ್ನಲ್ಲಗೌಜಲಹಕ್ಕಿಯನ್ನು ಎಂದು ತಿಳಿಯಿತುವಿಷದಿಂದ ನೀಲಿಯಾಗಿ ಎಂಜಲಿಂದ ಒದ್ದೆಮುದ್ದೆಯಾಗಿ ಗೌಜವು ಬಿದ್ದಿತ್ತು.

 

ಹುಲ್ಲು ಕೊಯ್ಯುವಾಗ ಕಿತ್ತುಹಾಕಿದ ಹುರುಳಿಶೇಂಗಾ ಸೊಪ್ಪನ್ನು ಎತ್ತುವಾಗಕೆಳಗೆ ಬೆಚ್ಚಗೆ ಮಲಗಿದ್ದ ಹಾವು ಕಚ್ಚುತ್ತಿದ್ದವುಹೊಲತೋಟಕಾಡುಗಳಲ್ಲಿ ಸುತ್ತುವ ಎಲ್ಲರಿಗೂ ನಮ್ಮ ಕಡೆ ಹಾವು ಹೊಡೆವ ಅಭ್ಯಾಸವಿರುತ್ತದೆಇದರಲ್ಲಿ ಆತ್ಮರಕ್ಷಣೆಯ ಜತೆಗೆಮೃಗಯಾವಿನೋದ ಲೋಕೋಪಕಾರ ಸಾಹಸಪ್ರದರ್ಶನ ಹಿಂಸಾಮನೋಭಾವಗಳೂ ಬೆರೆತಿರುತ್ತವೆಕುರುಚಲು ಕಾಡಿನಲ್ಲಿ ಕಟ್ಟಿದ ಹಂಪಿಯ ವಿಶ್ವವಿದ್ಯಾಲಯದ ಮೊದಲ ದಿನಗಳಲ್ಲಿ ಮೂಲನಿವಾಸಿ ಹಾವುಗಳಿಗೂ ನಮಗೂ ಸಂಘರ್ಷ ಆಗುತ್ತಿತ್ತುಆದರೆ ಬೇಗನೆ ಜ್ಞಾನೋದಯವಾಯಿತುಈಗ ಬೀದಿಯ ಯಾರದೇ ಹಿತ್ತಲಲ್ಲಿ ಹಾವು ಕಾಣಿಸಿದರೂಹೊಡೆಯದೆ ಹಿಡಿಸಿ ದೂರ ಬಿಟ್ಟುಬರುತ್ತೇನೆಆದರೂ ರಕ್ಷಿಸಿದ ಹಾವುಗಳಿಗೆ ಹೋಲಿಸಿದರೆ ಚಚ್ಚಿಸಾಯಿಸಿದ ಹಾವುಗಳ ಸಂಖ್ಯೆ ದೊಡ್ಡದುಹಳೇ ಶಿಕಾರಿದಾರರು ಬೇಟೆಯಾಡಿದ ಪ್ರಾಣಿಗಳ ಮೇಲೆ ಕಾಲುಮೆಟ್ಟಿ ಕೆವಿಯನ್ನು ನೆಲಕ್ಕೂರಿ ತೆಗೆಸಿಕೊಂಡಿರುವ ಪಟಗಳನ್ನು ನೋಡುವಾಗ ನಾನೂ ಅವರಂತೆ ಅಪರಾಧಿ ಎಂದು ಪರಿತಪಿಸುತ್ತೇನೆ

andolanait

Recent Posts

ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರಿಂದ ಪಾದಯಾತ್ರೆ: ಪೊಲೀಸರಿಂದ ಬ್ಯಾರಿಕೇಡ್‌ ಹಾಕಿ ಜಾಗೃತಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ…

23 mins ago

ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು: ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಶಾಸಕರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಆದರೆ ಶಾಸಕರು ಯಾವಾಗ ಬೇಕಾದರೂ ಪ್ರವಾಸಕ್ಕೆ ಹೋಗಬಹುದು ಎಂದು ಆರೋಗ್ಯ…

36 mins ago

ಟಾಕ್ಸಿಕ್‌ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದಿಂದ ದೂರು ಸಲ್ಲಿಕೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲು ಸಾಲು ವಿವಾದಗಳಿಗೆ ಗುರಿಯಾಗುತ್ತಿದೆ. ಇದೀಗ…

52 mins ago

ನಾನು ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ. ಸಿಎಂ…

2 hours ago

ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: ಡಿ.ಕೆ.ಸುರೇಶ್‌ ಪುನರುಚ್ಛಾರ

ಬೆಂಗಳೂರು: ನನಗೆ ಈಗಲೂ ಭರವಸೆಯಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಈ…

3 hours ago

ಸಚಿವ ಎಂ.ಬಿ.ಪಾಟೀಲ್‌ ನಡೆ ಸ್ವಾಗತಿಸಿದ ಸಚಿವ ಚಲುವರಾಯಸ್ವಾಮಿ: ಕಾರಣ ಇಷ್ಟೇ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 500 ಕೋಟಿ ವೆಚ್ಚದಲ್ಲಿ ಆಟೋ ಮೋಟಿವ್ ರಿಸರ್ಚ್ ಆಸೋಸಿಯೇಷನ್ ಆಪ್ ಇಂಡಿಯಾ ಸಂಶೋಧನಾ ಕೇಂದ್ರ…

3 hours ago