ಎಡಿಟೋರಿಯಲ್

ನುಡಿದಂತೆ ನಡೆದ, ಬರೆದಂತೆ ಬದುಕಿದ ಶಿವರಾಮು ಕಾಡನಕುಪ್ಪೆ

ಪದ್ಮಾ ಶ್ರೀರಾಮ್

ಶಿವರಾಮ ಕಾಡನಕುಪ್ಪೆ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ ನವೆಂಬರ್‌ ೨೭ ರಂದು ಬೆಳಿಗ್ಗೆ ೧೦.೩೦ಕ್ಕೆ ವಿಜಯನಗರ ೧ನೇ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಾಡಾಗಿದೆ. ಹಿರಿಯಪತ್ರಕರ್ತ ಜಿ.ಪಿ. ಬಸವರಾಜು ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಮಡ್ಡೀಕೆರೆ ಗೋಪಾಲ್, ಪ್ರೊ. ಜಿ.ಚಂದ್ರಶೇರ್ಖ, ಡಾ.ಕೆ.ಕಾಳಚನ್ನೇಗೌಡ ನುಡಿನಮನ ಸಲ್ಲಿಸಲಿದ್ದಾರೆ. ಪ. ಮಲ್ಲೇಶ್ ಅಧ್ಯಕ್ಷತೆ ಸಮಾರಂಭದ ವಹಿಸಲಿದ್ದಾರೆ. ಡಾ.ರಾಗೌ ಪ್ರಧಾನ ಸಂಪಾದಕತ್ವದಲ್ಲಿ ಡಾ.ಬೋರೇಗೌಡ ಚಿಕ್ಕಮರಳಿ, ಡಾ.ಮ. ರಾಮಕೃಷ್ಣ ಅವರು ಶಿವರಾಮ ಕಾಡನಕುಪ್ಪೆ ಸಂಸ್ಮರಣ ಗ್ರಂಥವನ್ನು ಸಂಪಾದಿಸಿದ್ದಾರೆ.
ಕಳೆದ ಶತಮಾನದ ೭೦ ಮತ್ತು ೮೦ನೇ ದಶಕಗಳಲ್ಲಿ ಅನೇಕ ಗ್ರಾಮೀಣ ಪ್ರತಿಭೆಗಳು ವಿಶ್ವವಿದ್ಯಾನಿಲಯದ ವ್ಯಾಸಂಗಕ್ಕಾಗಿ ನಗರಗಳತ್ತ ಚಲಿಸಿದವು. ಈ ಚಲನಶೀಲ ಕ್ರಿಯೆಯ ಫಲವಾಗಿ ಶ್ರೀ ಶಿವರಾಮು ಕಾಡನಕುಪ್ಪೆಯವರು ತಮ್ಮ ವಿದ್ಯಾಭ್ಯಾಸಕ್ಕಾಗಿ ರಾಮನಗರದಿಂದ ಮೈಸೂರಿನ ಕಡೆಗೆ ಬಂದರು.
ಸಹಜವಾಗಿಯೇ ಅತ್ಯುತ್ತಮ ವಿದ್ಯಾರ್ಥಿಯಾಗಿ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು ಮಹಾರಾಜ ಕಾಲೇಜು, ಹೀಗೆ ಕೆಲವು ಕಾಲೇಜುಗಳಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ಅಂತಿಮವಾಗಿ ವಿದ್ಯಾವರ್ಧಕ ಕಾಲೇಜಿನಲ್ಲಿ ನೆಲೆಯೂರಿದರು.

ತಮ್ಮ ವಿದ್ಯಾರ್ಥಿದೆಸೆಯಿಂದಲೇ ಸಮಾಜವಾದಿ ಆಂದೋಲನಗಳಲ್ಲಿ ಭಾಗವಹಿಸಿ ಜಾತಿ ವ್ಯವಸ್ಥೆ, ಇಂಗ್ಲೀಷ್ ಹೇರಿಕೆ ಇತ್ಯಾದಿಗಳ ಬಗ್ಗೆ ಬದಲಾವಣೆಯನ್ನು ಬಯಸುವ ಎಲ್ಲರಂತೆ ಶಿವರಾಮು ಸಹ ಎಲ್ಲ ಆಂದೋಲನಗಳಲ್ಲಿ ಭಾಗವಹಿಸಿದ್ದರು.
ನುಡಿದಂತೆ ನಡೆಯಬೇಕು, ಬರೆದಂತೆ ಬದುಕಬೇಕು ಎನ್ನುವ ಆಶಯದಂತೆ ತಮ್ಮ ವೃತ್ತಿಜೀವನದಲ್ಲಿ ಸತತವಾಗಿ ಆ ಆಶಯವನ್ನು ಪಾಲಿಸಲು ಹೋರಾಡುತ್ತಲೇ ಬಂದಿದ್ದಾರೆ.

ಜಾತಿ ಕಟ್ಟಳೆಗಳನ್ನು ನಿರ್ಮೂಲನ ಮಾಡುವ ದಿಶೆಯಲ್ಲಿ ಅನೇಕ ಅಂತರ್ಜಾತೀಯ ಮದುವೆಗಳನ್ನು ಪ್ರೋತ್ಸಾಹಿಸಿ, ಕೆಲವು ಸಂಘಟಣೆಗಳ ಮೂಲಕ ಇದಕ್ಕಾಗಿ ಹೋರಾಡಿದ್ದಲ್ಲದೆ ಸ್ವತಃ ತಾವೂ ಅಂತರ್ಜಾತೀಯ ಮದುವೆ ಆದರು.
ಇದೇ ರೀತಿಯ ‘ಲಿಬರಲ್’ ವಾತಾವರಣವನ್ನು ತಮ್ಮ ಮಕ್ಕಳಿಗೂ ಕಲ್ಪಿಸಿದರು.

ಶ್ರೀ ಶಿವರಾಮು ಅವರು ಎಂತಹ ಕಷ್ಟ ಪರಿಸ್ಥಿತಿಯಲ್ಲೂ ಧೃತಿಗೆಡದೆ ಗಟ್ಟಿತನವನ್ನು ಪ್ರದರ್ಶಿಸಿದರು. ಇದಕ್ಕೆ ಇವರನ್ನು ಕಾಡಿದ ಕಾಯಿಲೆಗಳು, ಅಪಘಾತಗಳೇ ಕಾರಣ. ಸತತವಾಗಿ ಶಿವರಾಮು ಅವರನ್ನು ಕಾಡಿದ ಅನಾರೋಗ್ಯವನ್ನು ಧೈರ್ಯದಿಂದ ಎದುರಿಸಿ, ಆ ಸಂಕಷ್ಟಗಳನ್ನೆಲ್ಲಾ ಮಿತ್ರರಿಗೆ ವಿವರಿಸಿ ತಮ್ಮ ನೋವನ್ನು ಕಡಿಮೆ ಮಾಡಿಕೊಂಡರು.
ರೋಗ ರಟ್ಟಾಗಬೇಕೆಂಬ ಗಾದೆಯಂತೆ ತಮ್ಮ ಯಾವ ಬಾಧೆಗಳನ್ನೂ ಮುಚ್ಚಿಡದೆ ವೈದ್ಯರು, ಮಿತ್ರರ ಜೊತೆಯಲ್ಲಿ ಚರ್ಚಿಸಿ ಸದಾ ಯಾರಾದರೊಬ್ಬ ಧನ್ವಂತರಿಗೆ ಛಾಲೆಂಜಾಗಿ ಪರಿಣಮಿಸುತ್ತಿದ್ದರು.

ಈ ಎಲ್ಲ ಕೋಟಲೆಗಳ ನಡುವೆ ತಮ್ಮ ಬರಹಗಳನ್ನೇನೂ ಕಡೆಗಣಿಸಿರಲಿಲ್ಲ. ಕತೆ, ಕಾದಂಬರಿ, ಕವನ, ವಿಮರ್ಶೆ ಈ ಪ್ರಾಕಾರಗಳಲ್ಲಿ ಸಮರ್ಥವಾಗಿಯೇ ತಮ್ಮನ್ನು ತೊಡಗಿಸಿಕೊಂಡರು. ವಿಮರ್ಶಕರಾಗಿಯೂ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಿದ್ದಾರೆ. ಶಿವರಾಮು ಅವರು ಅನೇಕ ವರ್ಷಗಳು ಕುಕ್ಕರಹಳ್ಳಿಯಲ್ಲಿ ದಲಿತರೊಡನೆ ಜೀವಿಸಿದ ಜೀವನಾನುಭವವನ್ನು ಕುಕ್ಕರಹಳ್ಳಿ ಎಂಬ ಕೃತಿಯಲ್ಲಿ ತುಂಬಾ ಮನೋಜ್ಞವಾಗಿ ದಾಖಲಿಸಿದ್ದಾರೆ. ಎಲ್ಲ ಸಾಹಿತ್ಯಪ್ರಿಯರು ಓದಲೇಬೇಕಾದ ಈ ಕೃತಿ, ನನ್ನ ಅಚ್ಚುಮೆಚ್ಚು.

ಸರ್ಕಾರಿ ಮಟ್ಟದಲ್ಲಿ ಅನೇಕ ಅಕಾಡೆಮಿಗಳು, ಯೂನಿವರ್ಸಿಟಿ ಮಟ್ಟದಲ್ಲಿ ಅನೇಕ ಆಡಳಿತಾತ್ಮಕ ಮಂಡಳಿಗಳ ಸದಸ್ಯರಾಗಿ ಎಲ್ಲರೂ ಮೆಚ್ಚುವಂತಹ ನಿಷ್ಪಕ್ಷಪಾತ ಧೋರಣೆಯನ್ನು ಶಿವರಾಮು ಪ್ರದರ್ಶಿಸಿದ್ದಾರೆ. ಇವೆಲ್ಲಕ್ಕೂ ಕಿರೀಟ ಪ್ರಾಯವಾಗಿ ರಾಮನಗರದಲ್ಲಿ ನಡೆದ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಪ್ರಿಯ ಸ್ನೇಹಿತ ಶಿವರಾಮು ಕಾಡನಕುಪ್ಪೆಯವರ ನಿರ್ಗಮನದಿಂದ ನಮ್ಮ ಮನಸ್ಸಿನ ಒಂದು ಭಾಗವನ್ನು ಕಳೆದುಕೊಂಡಂತಾಗಿದೆ.

andolanait

Recent Posts

ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ಮನವಿ : ಸ್ಪೀಕರ್‌ಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…

4 hours ago

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ : ವರದಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ

ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…

5 hours ago

ಹವಾಮಾನ ವೈಪರೀತ್ಯ : ವಿಮಾನದಲ್ಲೇ ಸಿಲುಕಿದ್ದ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು

ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…

5 hours ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ದಿಲ್ಲಿ ಪೊಲೀಸರ ನೋಟಿಸ್‌ಗೆ ಕಾಲಾವಕಾಶ ಕೋರುವೆ ಎಂದ ಡಿಕೆಶಿ

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…

6 hours ago

ಆಕಸ್ಮಿಕ ಬೆಂಕಿ : ಯಮಹಾ ಬೈಕ್‌ ಸಾಗಿಸುತ್ತಿದ್ದ ಲಾರಿ ಭಸ್ಮ : ಸುಟ್ಟು ಕರಕಲಾದ 40ಬೈಕ್‌ಗಳು

ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…

6 hours ago

ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ : ದಿಲ್ಲಿ, ಬೆಂಗಳೂರಿನಲ್ಲಿ ಹೈ ಅಲರ್ಟ್‌

ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…

8 hours ago