ಪಡುವಾರಹಳ್ಳಿಯಲ್ಲಿ ತಮ್ಮ 18ನೇ ವಯಸ್ಸಿನಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ಇವರ ಹೆಸರು ಬಿ. ರಾಮು ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಅಂಗಡಿಯ ಕದ ತೆರೆದರೆ, ಮುಚ್ಚುವುದು ರಾತ್ರಿ ಹತ್ತರ ಹೊತ್ತಿಗೆ ಹಬ್ಬ-ಹರಕೆಯ ದಿನಗಳಲ್ಲಿ ಒಮ್ಮೊಮ್ಮೆ ಬೆಳಿಗ್ಗೆ ಆರೂವರೆಗೆ ಅಂಗಡಿ ತೆರೆಯುತ್ತಾರೆ. 18ನೆಯ ವಯಸ್ಸಿನಲ್ಲಿ ತರಕಾರಿ ಅಂಗಡಿಯನ್ನು ತೆರೆದ ರಾಮು
ಅವರಿಗೆ ಈಗ ವಯಸ್ಸು 67. ಆಕಾಶವಾಣಿಯನ್ನು ಕೇಳುತ್ತಾ ತಮ್ಮ ಕಾಯಕದೊಂದಿಗೆ ದಿನಕಳೆಯುತ್ತಾರೆ. ಹಳೆಯ ಹಾಡುಗಳ ಪ್ರಸಾರ ಆದಾಗಲಂತೂ, ಬಂದ ಗ್ರಾಹಕರೊಡನೆ ಹಾಡು ಗುನುಗುವಿಕೆಯಲ್ಲಿ ಇವರ ವ್ಯವಹಾರ ಸಾಗುವುದು.
ಮೊದಲೆಲ್ಲಾ ಪಡುವಾರಹಳ್ಳಿಯಲ್ಲಿ ಇದ್ದದ್ದು ಇವರದ್ದೊಂದೇ ಅಂಗಡಿ, ಹಾಗಾಗಿ ಮಾಡಿದ ವ್ಯಾಪಾರ ಕೈಗೆಟುಕಿ, ಲಾಭ ನೀಡುತ್ತಿತ್ತು. ಈಗ ಎಲ್ಲೆಡೆ ತರಕಾರಿ ತಳ್ಳುಗಾಡಿ ಬಂದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆಯೇ ಹೊರತು, ಬದುಕು ನಡೆಸುವುದಕ್ಕೇನೂ ಕೊರತೆಯಾಗಿಲ್ಲ ಎನ್ನುತ್ತಾ ಸಂತೃಪ್ತಿಯ ನಗು ಬೀರುತ್ತಾರೆ. ಅಂಗಡಿಯಲ್ಲೇ ತರಕಾರಿ ರೀದಿಸಬೇಕೆಂಬ ಜನರಿದ್ದಾರೆ. ತಂದೆಯಿಂದ ಕಲಿತ ಪಾಠವನ್ನು ಇವತ್ತಿಗೂ ಜೀವನಸೂತ್ರದಂತೆ ಪಾಲಿಸುತ್ತಿದ್ದಾರೆ. ಸುಮ್ಮನೆ ಕೂರುವುದೂ ಒಂದು ಕೆಲಸ. ಆದರೆ ಅದರಲ್ಲಿ ನೆಮ್ಮದಿ ಇಲ್ಲ. ಮಾಡುವ ಕೆಲಸದಲ್ಲಿ ನೆಮ್ಮದಿ ಮತ್ತು ಖುಷಿ ಸಿಗಬೇಕು ಎಂಬುದು ಇವರ ಅಭಿಪ್ರಾಯ.
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ…
ಚಾಮರಾಜನಗರ : ಜಿಲ್ಲೆಯ ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ 5 ಹುಲಿಗಳ ಇರುವಿಕೆ ಡ್ರೋಣ್ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ…
ಮೈಸೂರು : ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸೋಮವಾರ ನಗರದಲ್ಲಿ…
ಬೆಂಗಳೂರು : ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು…
ವೆಲ್ಲಿಂಗ್ಟನ್ : ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಸೋಮವಾರ ಹೇಳಿದ್ದಾರೆ.…
ಮೈಸೂರು : ಸಂಸ್ಕೃತ ಗ್ರಂಥ, ಶಾಸ್ತ್ರ ಗ್ರಂಥ, ವೇದಾಂತ ವಿಚಾರದ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಜೀವನ ಸಾರ್ಥಕಗೊಳ್ಳಲಿದೆ ಎಂದು ಶೃಂಗೇರಿ…