ಸಂಪಾದಕೀಯ

ಪಡುವಾರಹಳ್ಳಿಯ ತರಕಾರಿ ರಾಮು

ಪಡುವಾರಹಳ್ಳಿಯಲ್ಲಿ ತಮ್ಮ 18ನೇ ವಯಸ್ಸಿನಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ಇವರ ಹೆಸರು ಬಿ. ರಾಮು ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಅಂಗಡಿಯ ಕದ ತೆರೆದರೆ, ಮುಚ್ಚುವುದು ರಾತ್ರಿ ಹತ್ತರ ಹೊತ್ತಿಗೆ ಹಬ್ಬ-ಹರಕೆಯ ದಿನಗಳಲ್ಲಿ ಒಮ್ಮೊಮ್ಮೆ ಬೆಳಿಗ್ಗೆ ಆರೂವರೆಗೆ ಅಂಗಡಿ ತೆರೆಯುತ್ತಾರೆ. 18ನೆಯ ವಯಸ್ಸಿನಲ್ಲಿ ತರಕಾರಿ ಅಂಗಡಿಯನ್ನು ತೆರೆದ ರಾಮು
ಅವರಿಗೆ ಈಗ ವಯಸ್ಸು 67. ಆಕಾಶವಾಣಿಯನ್ನು ಕೇಳುತ್ತಾ ತಮ್ಮ ಕಾಯಕದೊಂದಿಗೆ ದಿನಕಳೆಯುತ್ತಾರೆ. ಹಳೆಯ ಹಾಡುಗಳ ಪ್ರಸಾರ ಆದಾಗಲಂತೂ, ಬಂದ ಗ್ರಾಹಕರೊಡನೆ ಹಾಡು ಗುನುಗುವಿಕೆಯಲ್ಲಿ ಇವರ ವ್ಯವಹಾರ ಸಾಗುವುದು.

ಮೊದಲೆಲ್ಲಾ ಪಡುವಾರಹಳ್ಳಿಯಲ್ಲಿ ಇದ್ದದ್ದು ಇವರದ್ದೊಂದೇ ಅಂಗಡಿ, ಹಾಗಾಗಿ ಮಾಡಿದ ವ್ಯಾಪಾರ ಕೈಗೆಟುಕಿ, ಲಾಭ ನೀಡುತ್ತಿತ್ತು. ಈಗ ಎಲ್ಲೆಡೆ ತರಕಾರಿ ತಳ್ಳುಗಾಡಿ ಬಂದಿರುವುದರಿಂದ ವ್ಯಾಪಾರ ಕಡಿಮೆಯಾಗಿದೆಯೇ ಹೊರತು, ಬದುಕು ನಡೆಸುವುದಕ್ಕೇನೂ ಕೊರತೆಯಾಗಿಲ್ಲ ಎನ್ನುತ್ತಾ ಸಂತೃಪ್ತಿಯ ನಗು ಬೀರುತ್ತಾರೆ. ಅಂಗಡಿಯಲ್ಲೇ ತರಕಾರಿ ರೀದಿಸಬೇಕೆಂಬ ಜನರಿದ್ದಾರೆ. ತಂದೆಯಿಂದ ಕಲಿತ ಪಾಠವನ್ನು ಇವತ್ತಿಗೂ ಜೀವನಸೂತ್ರದಂತೆ ಪಾಲಿಸುತ್ತಿದ್ದಾರೆ. ಸುಮ್ಮನೆ ಕೂರುವುದೂ ಒಂದು ಕೆಲಸ. ಆದರೆ ಅದರಲ್ಲಿ ನೆಮ್ಮದಿ ಇಲ್ಲ. ಮಾಡುವ ಕೆಲಸದಲ್ಲಿ ನೆಮ್ಮದಿ ಮತ್ತು ಖುಷಿ ಸಿಗಬೇಕು ಎಂಬುದು ಇವರ ಅಭಿಪ್ರಾಯ.

 

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago