ಸಂಪಾದಕೀಯ

ಗುದ್ದಾಡಿದ್ದವರೀಗ ದೋಸ್ತಿಗಳು

ದಸರಾ ಗಜಪಡೆಯ ಎರಡು ಆನೆಗಳ ಸಾಮರಸ್ಯದ ಕತೆ

ಮೈಸೂರು: ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆಯಲ್ಲಿರುವ ಆನೆಗಳ ಪೈಕಿ ಎರಡು ಆನೆಗಳು ಇತ್ತೀಚೆಗೆ ಜಗಳ ಆಡಿಕೊಂಡಿದ್ದನ್ನು ಜನತೆಯೇ ಗಮನಿಸಿದ್ದಾರೆ. ಇದೀಗ ಆ ಎರಡೂ ಗಜಗಳು ಮತ್ತೆ ಸ್ನೇಹಿತರಾಗಿ ಒಡನಾಟ ಮುಂದುವರಿಸಿದ್ದು, ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕ್ಷಣಗಳಿಗಾಗಿ ಎದುರು ನೋಡುತ್ತಿರುವುದು ವಿಶೇಷವೇ ಆಗಿದೆ. ಕಂಜನ್ ಪಟ್ಟದ ಆನೆಯಾಗಿದ್ದು, ಅದಕ್ಕೆ ಧನಂಜಯಗಿಂತ ಹೆಚ್ಚು ಜವಾಬ್ದಾರಿ ಇರುತ್ತದೆ.

ದ್ವೇಷ, ಅಸೂಯೆಗಳಿಂದ ದೂರಾಗುವ ಮನುಷ್ಯರು ಮತ್ತೆ ಒಂದು ಗೂಡುವುದು ಬಹಳ ಅಪರೂಪ. ಆದರೆ, ಈ ವನ್ಯಜೀವಿಗಳು ಮತ್ತರ ಮರೆತು ಒಂದಾಗಿರುವುದು ಒಂದು ರೀತಿಯಲ್ಲಿ ಮನುಷ್ಯರಿಗೂ ಮಾದರಿ ಎನ್ನಬಹುದು.

ಹೌದು, ದಸರಾ ಗಜಪಡೆಯಲ್ಲಿರುವ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಇತ್ತೀಚೆಗೆ ಜಯಮಾರ್ತಾಂಡ ವಿಶೇಷ ದ್ವಾರದ ಬಳಿ ರಸ್ತೆಯಲ್ಲೇ ಕಾಳಗ ನಡೆದಿತ್ತು. ಮಾವುತರ ಸಮಯಪ್ರಜ್ಞೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಈ ಘಟನೆಯಿಂದ ಸಾರ್ವಜನಿಕರಲ್ಲಿ ಭೀತಿ ಉಂಟಾಗಿತ್ತು. ಈ ಆಘಾತಕಾರಿ ಘರ್ಷಣೆಯ ಕೆಲವೇ ದಿನಗಳಲ್ಲಿ, ಕಂಜನ್ ಮತ್ತು ಧನಂಜಯ ಆನೆಗಳು ಆಶ್ಚರ್ಯಕರ ರೀತಿಯಲ್ಲಿ ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಸೌಹಾರ್ದತೆಯಿಂದ ಅರಮನೆ ಅಂಗಳದಲ್ಲಿ ಸೌಮ್ಯವಾಗಿ ಸೊಂಡಿಲನ್ನು ಆಡಿಸುತ್ತಾ, ‘ಕಚ್ಚಾಡುವವರನು ಕೂಡಿಸಿ ಒಲಿಸು’ ಎಂಬ ಕುವೆಂಪು ಅವರ ಕವಿತೆಯ ಸಾಲನ್ನು ನೆನಪು ಮಾಡುವಂತೆ ತಾಲೀಮು, ಜಳಕವನ್ನು ಆಸ್ವಾದಿಸುತ್ತಾ, ಸುಗ್ರಾಸ ಭೋಜನವನ್ನು ಸವಿಯುತ್ತಾ ದಿನ ಕಳೆಯುತ್ತಿವೆ. ಇದರಿಂದ ಅರಣ್ಯಾಧಿಕಾರಿಗಳು, ಜನಸಾಮಾನ್ಯರು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಆನೆಗಳು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವುದು ಅಸಹಜವೇನಲ್ಲ. ವಿಶೇಷವಾಗಿ ಮಿಥುನ ಸಮಯದಲ್ಲಿ ಅಥವಾ ಪ್ರಾಬಲ್ಯಕ್ಕಾಗಿ ಸ್ಪರ್ಧಿಸುವಾಗ ಕೆರಳುವುದು, ಮೊಂಡಾಟಕ್ಕೆ ಇಳಿಯುವುದು ನಿರೀಕ್ಷಿತವಾಗಿದೆ. ಆದರೆ, ಅವುಗಳನ್ನು ಸೂಕ್ತ ಕಾಳಜಿಯಿಂದ ಆರೈಕೆ ಮಾಡಬೇಕು. ಆಗ ಎಲ್ಲ ರೊಚ್ಚು ಕೆಚ್ಚುಗಳನ್ನು ತೊರೆದು, ಹೇಳಿದ್ದನ್ನು ಮಾತ್ರ ಮಾಡುವ ‘ಕೋಲೆ ಬಸವ’ನಂತೆ ಆಗುತ್ತವೆ. ಆದರೆ, ಇದು ಮಾತಿನಲ್ಲಿ ಹೇಳಿದಷ್ಟು ಸುಲಭ ಅಲ್ಲ. ಇದರಲ್ಲಿ ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಶ್ರಮ ಅಪಾರವಾಗಿರುತ್ತದೆ. ಕಂಜನ್ ಮತ್ತು ಧನಂಜಯ ಆನೆಗಳ ಹೊಂದಾಣಿಕೆಯು ಸಾಮರಸ್ಯ ಮತ್ತು ಕ್ಷಮಾಗುಣವನ್ನು ಸಂಕೇತಿಸುತ್ತದೆ. ಕಡು ವೈರಿಗಳೂ ಸ್ನೇಹಿತರಾಗಬಹುದು ಎಂಬುದಕ್ಕೆ ಕಂಜನ್ ಹಾಗೂ ಧನಂಜಯ ಸ್ನೇಹ ಸಾಕ್ಷಿಯಾಗಿದೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಧನಂಜಯ ಮತ್ತು ಕಂಜನ್ 750 ಕೆಜಿ ತೂಕದ ಅಂಬಾರಿಯನ್ನು ಹೊರಲಿರುವ ಅಭಿಮನ್ಯುವಿನ ನೇತೃತ್ವ ದಲ್ಲಿ ಹೆಜ್ಜೆ ಹಾಕಲಿರುವ ಇತರ ಆನೆಗಳೊಂದಿಗೆ ಭಾಗವಹಿಸಲಿವೆ. ಹಾಗಾಗಿ ಧನಂಜಯ್ ಮತ್ತು ಕಂಜನ್ ಆನೆಗಳ ನಡುವಿನ ಕಚ್ಚಾಟ ಎಲ್ಲರನ್ನೂ ಆತಂಕಕ್ಕೆ ಎಡೆಮಾಡಿತ್ತು. ಆದರೆ, ಅನುಭವಿ ಮಾವುತ ದೇವರಾಜ್ ಆನೆಗಳ ನಡುವೆ ಸಾಮರಸ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು ಮೊದಲು ಆನೆಗಳನ್ನು ತಾತ್ಕಾಲಿಕವಾಗಿ ಪ್ರತ್ಯೇಕಿಸಿದರು. ಅವುಗಳ ತರಬೇತಿ ಅವಧಿಯನ್ನು ಕಡಿಮೆ ಮಾಡಲಾಯಿತು. ದೇವರಾಜ್ ಅವರ ಪರಿಣತಿಯ ಕಾರಣದಿಂದಾಗಿ ಈ ಎರಡೂ ಆನೆಗಳ ಯೋಗಕ್ಷೇಮವನ್ನು ಖಾತ್ರಿಗೊಳಿಸಲಾಯಿತು. ‘ಈಗ ಎರಡೂ ಆನೆಗಳು ತಮ್ಮ ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತಿವೆ’ ಎನ್ನುತ್ತಾರೆ ವರ್ಷಗಳಿಂದ ಆನೆಗಳ ಆರೈಕೆ ಮಾಡುತ್ತಿರುವ ದೇವರಾಜ್.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago