ಸಂಪಾದಕೀಯ

ಮಾಂಸಾಹಾರ ನಿಷೇಧ; ಸಮ್ಮೇಳನ ದಿಕ್ಕು ತಪ್ಪದಿರಲಿ

ಕಾವೇರಿ ನದಿ ಒಡಲಿನ ನಾಡು, ಮಂಡ್ಯ ನಗರವು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ಇದು ಮಂಡ್ಯದಲ್ಲಿ ನಡೆಯಲಿರುವ ೩ನೇ ಸಾಹಿತ್ಯ ಸಮ್ಮೇಳನ ಎಂಬುದು ಗಮನಾರ್ಹ. ೮೭ನೇ ಸಮ್ಮೇಳನಕ್ಕೆ ಸಿದ್ಧತೆ ಸುಸೂತ್ರವಾಗಿ ನಡೆಯುತ್ತಿರುವುದರ ನಡುವೆಯೇ ಮಾಂಸಾಹಾರದ ಪ್ರಸ್ತಾಪ ಬಹು ಚರ್ಚೆಗೆ ಗ್ರಾಸವಾಗಿದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಹಿರಿಯ ಸಾಹಿತಿಗಳು, ಕವಿಗಳು ಪಾಲ್ಗೊಳ್ಳುತ್ತಾರೆ. ಅವರನ್ನು ಹತ್ತಿರದಿಂದ ನೋಡುವುದು, ಅವರ ಸಾಹಿತ್ಯಕ ಸಾಧನೆ, ವಿಶೇಷಗಳನ್ನು ಮನಸ್ಸಿಗೆ ತುಂಬಿಕೊಳ್ಳುವುದು, ಅದರಲ್ಲಿ ಪಾಲ್ಗೊಳ್ಳುವ ಯುವ ಕವಿಗಳು, ಉದಯೋನ್ಮುಖ ಸಾಹಿತಿಗಳ ಆಶಯವಾಗಿರುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿರುವ ಲೇಖಕರ ಪುಸ್ತಕಗಳು, ಕಾದಂಬರಿಗಳು, ಕಾವ್ಯ ಸಂಕಲನಗಳನ್ನು ಖರೀದಿಸುವುದಕ್ಕೆ ಇಂತಹ ಸಮ್ಮೇಳನಗಳಲ್ಲಿ ಆದ್ಯತೆ ಇರುತ್ತದೆ. ಇವುಗಳ ನಂತರದ ಆದ್ಯತೆ ಭೋಜನದ್ದಾಗಿರುತ್ತದೆ. ಆದರೆ, ಈ ಬಾರಿ ಸಮ್ಮೇಳನದಲ್ಲಿ ಈ ಊಟದ ವಿಷಯವೇ ವಿವಾದದ ಸ್ವರೂಪಕ್ಕೆ ತಿರುಗಿರುವುದು ವಿಪರ್ಯಾಸ.

ಇಲ್ಲಿಯವರೆಗೆ ರಾಜ್ಯಾದ್ಯಂತ ನಡೆದಿರುವ ೮೬ ಸಮ್ಮೇಳನಗಳಲ್ಲಿ ಯಾವುದೇ ಕಾರಣಕ್ಕೂ ಪ್ರಸ್ತಾಪವಾಗದ ಅಥವಾ ನಿಷೇಧ ಎನ್ನದ ಮಾಂಸಾಹಾರದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ತಿಂಡಿತಿನಿಸುಗಳ ಮಾರಾಟ ಮಳಿಗೆಗಳಲ್ಲಿ ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಽಸಲಾಗಿದೆ ಎಂಬುದನ್ನು ಇತರ ಸೂಚನೆಗಳೊಂದಿಗೆ ಸೇರಿಸಲಾಗಿದೆ. ಇದಕ್ಕೆ ಮಾಂಸಾಹಾರಿಗಳಿಂದ ವಿರೋಧ ವ್ಯಕ್ತವಾದಾಗ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರು ಮಾಂಸಾಹಾರವು ಮದ್ಯ ಮತ್ತು ತಂಬಾಕುವಿಗೆ ಸಮ ಎನ್ನುವಂತೆ ಮಾತನಾಡಿದ್ದು, ರಾದ್ಧಾಂತಕ್ಕೆ ಕಾರಣವಾಗಿದೆ. ಜೋಶಿ ಅವರು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಮಾತನಾಡಿದರೋ ಎಂಬುದು ಇಲ್ಲಿ ನಗಣ್ಯ.

ಯಾವುದೇ ಕಾರಣಕ್ಕೂ ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಬಾಯಲ್ಲಿ ಅಂತಹ ಮಾತು ಹೊರಬೀಳಬಾರದಿತ್ತು. ಸಸ್ಯಾಹಾರಿಗಳು ಕೇವಲ ಸಸ್ಯಾಹಾರವನ್ನೇ ಸೇವಿಸುತ್ತಾರೆ. ಮಾಂಸಾಹಾರಿಗಳಾದರೆ ಎರಡನ್ನೂ ಉಪಯೋಗಿಸುತ್ತಾರೆ. ಹಾಗಾಗಿ ಸಮ್ಮೇಳನದಲ್ಲಿ ಮಾಂಸಾಹಾರ ಇಲ್ಲದಿದ್ದರೂ ಏನೂ ತಪ್ಪಿಲ್ಲ ಎಂಬ ಭಾವನೆ ಯಾರಿಗಾದರೂ ಇದ್ದರೆ, ಅದು ಸಮಂಜಸವಲ್ಲ. ಈ ನಿಲುವು ಆಹಾರ ಸಂಸ್ಕೃತಿಯ ಮೇಲಿನ ದಾಳಿಯಾಗುತ್ತದೆ. ಸಂವಿಧಾನವೇ ಧರ್ಮ, ಸಂಸ್ಕೃತಿ, ಆಹಾರ ಪ್ರಜೆಗಳ ಇಚ್ಛೆಗನುಸಾರ ಇರಬೇಕು ಎನ್ನುತ್ತದೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ ಮಾಂಸಾಹಾರಿ ಸಾಹಿತಿಗಳು, ಕವಿಗಳು, ಲೇಖಕರ ಸಂಖ್ಯೆ ಅಧಿಕವಾಗಿದ್ದಂತಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಸಮ್ಮೇಳನದಲ್ಲಿ ಆಹಾರದ ವಿಚಾರದಲ್ಲಿ ಯಾರೂ ಅಪಸ್ವರ ಎತ್ತಿರಲಿಲ್ಲ. ಈ ಬಾರಿ ಇದೆಂತಹ ವಿವಾದ ಸೃಷ್ಟಿಯಾಗಿದೆ?

ಮಾಂಸಾಹಾರ ನಿಷೇಧ ಎಂಬ ಮಾತಿನಿಂದ ರೊಚ್ಚಿಗೆದ್ದ ಮಂಡ್ಯದ ಬಹಳಷ್ಟು ಜನತೆ, ಬಾಡೂಟದ ಬಳಗ ಕಟ್ಟಿ ಸಮ್ಮೇಳನದಲ್ಲಿ ಮಾಂಸದಡುಗೆ ಮಾಡಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಪರಿಷತ್ ಅಧ್ಯಕ್ಷರ ಮಾತು ಕಾರಣ ಅಲ್ಲವೇ? ಏತನ್ಮಧ್ಯೆ, ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸುವುದು ಸರಿ ಎಂಬುದನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಮಂಡ್ಯದಲ್ಲಿ ಈ ಹಿಂದೆ ನಡೆದ ಎರಡು ಸಮ್ಮೇಳನಗಳಲ್ಲಿ ಮಾಂಸಾಹಾರದ ಸೊಲ್ಲು ಇರಲಿಲ್ಲ. ಅಂದರೆ ಆಗಿನ ಪರಿಷತ್ ಅಧ್ಯಕ್ಷರಿಗೆ ಅದೆಲ್ಲ ದೊಡ್ಡದು ಅನಿಸಿರಲೇ ಇಲ್ಲ. ‘ಊಟ ತನ್ನಿಚ್ಛೆ; ನೋಟ ಪರರಿಚ್ಛೆ’ ಎಂಬ ನಾಣ್ಣುಡಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೆ, ಅಲ್ಲಿ ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿದ ಸಾಹಿತ್ಯ ಸಮ್ಮಿಲನದ ಉತ್ಕಟೇಚ್ಛೆಯೇ ಪ್ರಧಾನವಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಎಲ್ಲ ಕನ್ನಡಿಗರಿಗೆ ಹಬ್ಬ ಅಥವಾ ಜಾತ್ರೆ ಇದ್ದಂತೆ. ಹಳ್ಳಿಗಳಲ್ಲಿ ಎಲ್ಲ ಸಮುದಾಯಗಳೂ ಸೇರಿ ಹಬ್ಬ ಮಾಡುವ ಸಂಪ್ರದಾಯಗಳಿವೆ. ಆಗ ಮಾಂಸಾಹಾರಿಗಳು ಅವರಿಷ್ಟದಂತೆ ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಸಮ್ಮೇಳನದಲ್ಲಿ ‘ಮಾಂಸಾಹಾರ ನಿಷೇಧ’ ಎಂಬ ಮಾತು ಕೇಳಿಬರದಿದ್ದರೆ, ಈಗಲೂ ಮಂಡ್ಯದ ಸಹೃದಯ ಜನರು ಅದಕ್ಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಜೋಶಿ ಅವರು ಸಮ್ಮೇಳನದ ಮೂರು ದಿನಗಳು ಕನ್ನಡಿಗರ ಮನೆಗಳ ಮೇಲೆ ಕನ್ನಡ ಧ್ವಜ ಹಾರಾಡಬೇಕು ಅಂತ ಬಯಸುತ್ತಿದ್ದಾರೆ. ಮಾಂಸಾಹಾರಿಗಳ ಮನೆಯ ಮೇಲೆ ಧ್ವಜ ಹಾರಿಸಬಾರದು ಎಂದು ಜೋಶಿ ಹೇಳಬಲ್ಲರೇ? ಯಾರನ್ನೋ ಮೆಚ್ಚಿಸುವುದಕ್ಕೆ ಅನುಚಿತ ಮಾತುಗಳನ್ನು ಆಡುವಾಗ, ಅದರ ಪರಿಣಾಮದ ಸಾಧಕ- ಬಾಧಕಗಳ ಬಗ್ಗೆಯೂ ಯೋಚಿಸಬೇಕು. ಜೋಶಿ ಅವರು ಹೇಳಿದ್ದಾರೆ ಎನ್ನಲಾದ ‘ಮಾಂಸಾಹಾರವು ಮದ್ಯ ಮತ್ತು ತಂಬಾಕಿಗೆ ಸಮ’ ಎಂಬ ಮಾತು ಸಂವಿಧಾನಬಾಹಿರವಾಗಿದೆ. ಇನ್ನು ಮುಂದೆಯಾದರೂ ಅವರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತುಗಳನ್ನು ತೂಗಿ ಆಡಬೇಕು. ಅಲ್ಲದೆ, ಮಾಂಸಾಹಾರದ ವಿವಾದವು ಸಕ್ಕರೆ ನಾಡಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಕಪ್ಪುಚುಕ್ಕೆ ಆಗದಿರಲಿ. ಇದು ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಬೇಕು ಎಂಬ ರಸಋಷಿ ಕುವೆಂಪು

ಮಂಡ್ಯದಲ್ಲಿ ಈ ಹಿಂದೆ ನಡೆದ ಎರಡು ಸಮ್ಮೇಳನಗಳಲ್ಲಿ ಮಾಂಸಾಹಾರದ ಸೊಲ್ಲು ಇರಲಿಲ್ಲ. ಅಂದರೆ ಆಗಿನ ಪರಿಷತ್ ಅಧ್ಯಕ್ಷರಿಗೆ ಅದೆಲ್ಲ ದೊಡ್ಡದು ಅನಿಸಿರಲೇ ಇಲ್ಲ. ‘ಊಟ ತನ್ನಿಚ್ಛೆ; ನೋಟ ಪರರಿಚ್ಛೆ’ ಎಂಬ ನಾಣ್ಣುಡಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೆ, ಅಲ್ಲಿ ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿದ ಸಾಹಿತ್ಯ ಸಮ್ಮಿಲನದ ಉತ್ಕಟೇಚ್ಛೆಯೇ ಪ್ರಧಾನವಾಗಿತ್ತು.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ವಿಕಸಿತ ಭಾರತಕ್ಕೆ ಕೈಜೋಡಿಸಿ : ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ

ಹೊಸದಿಲ್ಲಿ : ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಪ್ರಧಾನಿ…

6 mins ago

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಸದಾಶಿವನಗರದಲ್ಲಿರುವ ತಮ್ಮ…

3 hours ago

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…

4 hours ago

ಓದುಗರ ಪತ್ರ: ಮಹಿಳಾ ಸಿಬ್ಬಂದಿ ಲಂಚದ ಮಸಿ ಅಂಟಿಸಿಕೊಳ್ಳದಂತೆ ಎಚ್ಚರ ವಹಿಸಬೇಕು

ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…

5 hours ago

ಓದುಗರ ಪತ್ರ: ಅಡಕೆ ಬೆಳೆಗಾರರ ಹಿತವೂ ಮುಖ್ಯವಲ್ಲವೇ?

ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…

5 hours ago

ಓದುಗರ ಪತ್ರ: ಈ ಬಾರಿಯ ದಸರಾ ಉದ್ಘಾಟನೆಗೆ ಹೆಚ್.ಡಿ.ದೇವೇಗೌಡರನ್ನು ಆಯ್ಕೆಮಾಡಲಿ

ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…

5 hours ago