ಸಂಪಾದಕೀಯ

ಇಡಿ ಅಧಿಕಾರಿಗಳಿಂದ ಮುಡಾ ಹಗರಣ ಮುಕ್ತ ಅಭಿಯಾನ ನಡೆಯಲಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಚೇರಿ ಮೇಲೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಎರಡು ದಿನಗಳ ಕಾಲ ಸತತವಾಗಿ ಕಡತಗಳನ್ನು ಪರಿಶೀಲಿಸಿದ್ದಾರೆ. ಮೈಸೂರು ತಾಲ್ಲೂಕು ಕಚೇರಿ ಮೇಲೆ ಕೂಡ ಅದೇ ಸಮಯದಲ್ಲಿ ಇಡಿ ದಾಳಿ ನಡೆದಿದೆ. ಮುಡಾದಿಂದ ಶೇ. 50:50 ಅನುಪಾತದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಆದರೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರನ್ನು ಆರೋಪಿಗಳು ಎನ್ನಲಾಗಿರುವ 14 ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವೇ ಇಡಿ ಅಧಿಕಾರಿಗಳಿಗೆ ಪ್ರಮುಖವಾಗಿದೆ. ಹಾಗಾಗಿಯೇ ಅವರು ಪಾರ್ವತಿ ಅವರಿಂದ ಭೂಮಿ ಸ್ವಾಧೀನಪಡಿಸಿಕೊಂಡಿರುವುದು, ನಿವೇಶನಗಳನ್ನು ಹಂಚಿಕೆ ಮಾಡಿರುವುದು ಮತ್ತಿತರ ದಾಖಲೆಗಳ ಬಗ್ಗೆ ಮುಡಾ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ದೇಶದ ಸಂವಿಧಾನಾತ್ಮಕವಾದ ಕಾನೂನುಗಳನ್ನು ಉಲ್ಲಂಘಿಸಿದವರು ಯಾರೇ ಆಗಿದ್ದರೂ ಶಿಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ. ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಇಡಿ ಅಧಿಕಾರಿಗಳು ಮುಡಾಗೆ ದಾಂಗುಡಿ ಇಟ್ಟಿದ್ದರು. ಹಿಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮುಡಾ ಅವ್ಯವಹಾರ ಕುರಿತು ಬರೆದಿದ್ದ ಪತ್ರವನ್ನೂ ತಂದಿದ್ದರು ಎನ್ನಲಾಗಿದೆ. ಇಲ್ಲಿ ಪ್ರಮುಖ ಪ್ರಶ್ನೆಯೆಂದರೆ ಒಂದೇ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಇಡಿ ಅಧಿಕಾರಿಗಳು ಮುಡಾ ಮೇಲೆ ಮುಗಿಬಿದ್ದಿರುವುದೇಕೆ? ಅವರು ಪರಿಶೀಲನೆ ನಡೆಸಿದ ವೇಳೆಯಲ್ಲಿ ಅಧಿಕಾರಿಗಳಿಂದ ಉತ್ತರ ಪಡೆಯಲು ಬಯಸಿರುವ ಪ್ರಶ್ನೆಗಳು ಕೇವಲ ಪಾರ್ವತಿ ಅವರ ಪ್ರಕರಣವನ್ನು ಮಾತ್ರವೇ ಗುರಿ ಮಾಡಿದ್ದಂತೆ ಇವೆ. ಈ ಪ್ರಕರಣವನ್ನು ಆಮೂಲಾಗ್ರವಾಗಿ ತನಿಖೆ ನಡೆಸುವ ಇಡಿ ಅಧಿಕಾರಿಗಳ ಇರಾದೆ ಸ್ವಾಗತಾರ್ಹ. ಆದರೆ, ಒಂದೇ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಡಾದಲ್ಲಿ ಅಪರಿಮಿತ ಭ್ರಷ್ಟಾಚಾರ ನಡೆದಿದೆ ನೀಡಿರುವ ವ್ಯಕ್ತಿಯೇ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಮುಡಾದಲ್ಲಿ ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ನಿರ್ಗಮಿತ ಮುಡಾ ಅಧ್ಯಕ್ಷರು ಕೂಡ ಆರೋಪ ಮಾಡಿದ್ದರು. ಆದರೆ, ಅದು ಅವರಿಗೇ ಮುಳುವಾಯಿತು. ಅಲ್ಲದೆ, ಸಿದ್ದರಾಮಯ್ಯ ಮತ್ತು ಅವರ ಪತ್ನಿ ಅವರನ್ನು ಸುತ್ತುವರಿಯಿತು. ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದರೂ, ಇಡಿ ಅಧಿಕಾರಿಗಳು ಮುಡಾದ ಮೇಲೆ ದಾಳಿ ನಡೆಸಿದ್ದು ಕುತೂಹಲಕಾರಿಯಾಗಿದೆ. ಅವರಿಗೆ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖೆ ಬಗ್ಗೆ ನಂಬಿಕೆ ಇಲ್ಲ ಅನಿಸುತ್ತದೆ.

ವಾಸ್ತವವಾಗಿ ಮುಡಾದಲ್ಲಿ ನಡೆದಿವೆ ಎನ್ನಲಾದ ಎಲ್ಲ ಹಗರಣಗಳನ್ನೂ ಬಯಲು ಮಾಡುವ ನಿಟ್ಟಿನಲ್ಲಿ ಇಡಿ ತನಿಖೆ ಸಾಗಬೇಕು. ಪ್ರಸ್ತುತ ಅಂತಹ ಬೆಳವಣಿಗೆಗಳು ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿರುವ ವ್ಯಕ್ತಿಯೇ ಮುಡಾದಲ್ಲಿ ನಡೆದಿರುವ ಎಲ್ಲ ಹಗರಣಗಳನ್ನೂ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಆದರೆ, ಸದ್ಯಕ್ಕೆ ಇಡಿ ನಡೆಯಲ್ಲಿ ಅಂತಹ ಯಾವುದೇ ಹೆಜ್ಜೆ ಕಾಣುತ್ತಿಲ್ಲ.

ಮುಡಾವನ್ನು ಸ್ವಚ್ಛಗೊಳಿಸುವ ಅಭಿಯಾನದ ರೀತಿಯಲ್ಲೇ ಇಡಿತನಿಖೆ ನಡೆಯಬೇಕು. ಒಂದೇ ಒಂದು ಪ್ರಕರಣವನ್ನು ಬಹು ಚರ್ಚೆಯಾಗುವಂತೆ ತನಿಖೆ ನಡೆಸುವ ಮೂಲಕ ಜನರ ಗಮನವನ್ನು ಅದರತ್ತಲೇ ಕೇಂದ್ರೀಕರಿಸುವಂತೆ ಮಾಡುವುದು ಸಮಾಜಕ್ಕೆ ಹಿತಕರವಲ್ಲ. ಮುಡಾದಪ್ರತಿಯೊಂದು ಹಗರಣವನ್ನೂತಾರ್ಕಿಕ ಅಂತ್ಯಕ್ಕೆಕೊಂಡೊಯ್ಯುವ ನಿಟ್ಟಿನಲ್ಲಿ ಇಡಿ ಹೆಜ್ಜೆಗಳಿದ್ದರೆ ಜನಸಾಮಾನ್ಯರಲ್ಲಿ ಕೂಡ ನಂಬಿಕೆ ಮೂಡುತ್ತದೆ. ಅಲ್ಲದೆ, ಮುಂದೆ ಯಾವುದೇ ಕಾರಣಕ್ಕೂ ಮುಡಾದಲ್ಲಿ ಹಗರಣಗಳು ನಡೆಯದಂತೆ ಎಚ್ಚರಿಕೆಯ ಘಂಟೆ ಬಾರಿಸಿದಂತೆ ಆಗುತ್ತದೆ. ಹಾಗಾದಾಗ ಸ್ವಂತ ಸೂರಿಗಾಗಿ ಪರಿತಪಿಸುತ್ತಿರುವ ಕಡುಬಡವರಿಗೂ ಮುಡಾದಿಂದ ನಿವೇಶನ ಅಥವಾ ಮನೆ ದೊರೆಯುವ ಕಾಲ ಬರಬಹುದು. ಅದೂ ಕೈಗೆಟುಕುವ ದರದಲ್ಲಿ. ಇದನ್ನು ಸಾಕಾರಗೊಳಿಸುವ ಮಹತ್ವದ ಜವಾಬ್ದಾರಿ ಇಡಿ ಮೇಲೆ ಇದೆ. ಹಾಗಾದಾಗ ಇಡಿ ಅಕ್ಷರಶಃ ಜನಸ್ನೇಹಿಯೂ ಆಗುತ್ತದೆ. ಲೋಕಾಯುಕ್ತ ಕೂಡ ಇದೇ ಹಾದಿಯಲ್ಲಿ ಮುನ್ನಡೆಯಬೇಕು. ಆಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಗೆ ನೈಜ ಅರ್ಥ ದೊರೆಯುತ್ತದೆ.

ವಾಸ್ತವವಾಗಿ ಮುಡಾದಲ್ಲಿ ನಡೆದಿವೆ ಎನ್ನಲಾದ ಎಲ್ಲ ಹಗರಣಗಳನ್ನೂ ಬಯಲು ಮಾಡುವ ನಿಟ್ಟಿನಲ್ಲಿ ಇಡಿ ತನಿಖೆ ಸಾಗಬೇಕು. ಪ್ರಸ್ತುತ ಅಂತಹ ಬೆಳವಣಿಗೆಗಳು ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿರುವ ವ್ಯಕ್ತಿಯೇ ಮುಡಾದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

4 hours ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

5 hours ago

ಮೈಸೂರಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ಹೇಗಿರಬೇಕು?

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…

5 hours ago

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

14 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

14 hours ago