ಸಂಪಾದಕೀಯ

ಉದ್ಯೋಗ ಸೃಷ್ಟಿಯೂ ಬಜೆಟ್ ಭರವಸೆಗಳೂ

ಕೇಂದ್ರ ಬಜೆಟ್‌ನಲ್ಲಿ ಬಿಂಬಿಸಿರುವಂತೆ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯೇ?

  • ನಾ.ದಿವಾಕರ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆಯ ಮಾದರಿಗಳ ನಿನ್ನಾಗಲೀ, ಆಡಳಿತ ನಿರ್ವಹಿಸುವ ಸರ್ಕಾರಗಳನ್ನಾಗಲೀ ಪರಾಮರ್ಶಿ ಸುವ ಬೌದ್ಧಿಕ ಪ್ರಕ್ರಿಯೆಗಳು ಅರ್ಥಶಾಸ್ತ್ರಜ್ಞರು ಮತ್ತು ಆರ್ಥಿಕ ವಿದ್ವಾಂಸರ ಮೂಲಕ ನಡೆಯುತ್ತವೆ. ಆದರೆ ಆರ್ಥಿಕ ನೀತಿಗಳ ಅನುಸರಣೆಯಲ್ಲಿ ಕಂಡುಬರುವ ಲೋಪಗಳು ಮತ್ತು ಅದರಿಂದ ಉಂಟಾಗುವ ತಳಮಟ್ಟದ ವ್ಯತ್ಯಯಗಳ ಬಗ್ಗೆ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ವಿದ್ವತ್ ವಲಯದ ಹೊರಗಿನ ಸಮಾಜವೂ ಮಾಡುತ್ತದೆ. ಅದು ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮುಖಾಂತರ, 2024ರ ಲೋಕಸಭಾ ಚುನಾವಣೆಗಳ ಫಲಿತಾಂಶ ಇದನ್ನು ಮತ್ತೊಮ್ಮೆ ನಿರೂಪಿಸಿದೆ. ಹತ್ತು ವರ್ಷಗಳ ಬಲಿಷ್ಠ ಸರ್ಕಾರದ ಆಡಳಿತ ಪೂರೈಸಿದ ಬಿಜೆಪಿ ಈ ವಾಸ್ತವವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿರುವುದು ಭಾರತೀಯ ಮತದಾರರ ಹಿರಿಮೆ.

ಹಾಗಾಗಿಯೇ ಈ ವರ್ಷದ ಬಜೆಟ್‌ನಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಿ ಕಾಣುತ್ತದೆ. ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ “ಉದ್ಯೋಗ-ಉದ್ಯೋಗಾವಕಾಶ” ಪದಗಳನ್ನು 23 ಸಲ ಉಚ್ಚರಿಸಿರುವುದು ಇದರ ಸಂಕೇತವಾಗಿದೆ. ಆದರೆ ಎನ್ ಡಿಎ ಸರ್ಕಾರದ ಸಂಭಾವ್ಯ ಉಪಕ್ರಮಗಳ ಹಿನ್ನೆಲೆಯಲ್ಲೇ ಬಜೆಟ್ ಪೂರ್ವದಲ್ಲಿ ಪ್ರಕಟಿಸಲಾದ ಆರ್ಥಿಕ ಸಮೀಕ್ಷೆಯ ದತ್ತಾಂಶಗಳತ್ತಲೂ ಗಮನಹರಿಸಬೇಕಿದೆ. ಈ ಸಮೀಕ್ಷೆಯ ಅನುಸಾರ 2022-23ರಲ್ಲಿ ಭಾರತದಲ್ಲಿ ದುಡಿಮೆಗಾರರ ಸಂಖ್ಯೆ 56.5 ಕೋಟಿಯಷ್ಟಿತ್ತು. ಇವರ ಪೈಕಿ ಶೇ.45ರಷ್ಟು ಕೃಷಿ ಕ್ಷೇತ್ರದಲ್ಲಿ, ಶೇ.11.4ರಷ್ಟು ಉತ್ಪಾದನಾ ವಲಯದಲ್ಲಿ, ಶೇ.28.9ರಷ್ಟು ಸೇವಾ ಕ್ಷೇತ್ರದಲ್ಲಿ ಮತ್ತು ಶೇ.13ರಷ್ಟು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಪಡೆದವರಾಗಿದ್ದರು. ಅಧಿಕೃತ ಅಂಕಿ ಅಂಶಗಳ ಅನುಸಾರ ನಿರುದ್ಯೋಗ ಪ್ರಮಾಣ ಈ ಅವಧಿಯಲ್ಲಿ ಶೇ.3.2ರಷ್ಟಿತ್ತು.

ಆದರೆ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಈ ಅಂಕಿಅಂಶಗಳು ನೆಲದ ವಾಸ್ತವಗಳನ್ನು (Ground realities) ಬಿಂಬಿಸುವುದಿಲ್ಲ. ಏಕೆಂದರೆ ಭಾರತದ ಅರ್ಥವ್ಯವಸ್ಥೆಯಲ್ಲಿ ಪೂರ್ಣ ಪ್ರಮಾಣದ ಉದ್ಯೋಗ ಹೊಂದಿರದ ಅಸಂಪೂರ್ಣ ಉದ್ಯೋಗಿಗಳ (Underemployed) ಸಂಖ್ಯೆ ತುಸು ಹೆಚ್ಚಾಗಿಯೇ ಇದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಬೇಸಾಯ ಭೂಮಿಯಲ್ಲಿ, ಅಸಂಘಟಿತ ಚಿಲ್ಲರೆ ವ್ಯಾಪಾರ ವಲಯದಲ್ಲಿ (Retail sector) ದುಡಿಯುತ್ತಿದ್ದು, ಇನ್ನೂ ಹೆಚ್ಚಿನ ಜನರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಲಭ್ಯ ಮಾಹಿತಿಗಳ ಅನುಸಾರ ಒಟ್ಟು ಉದ್ಯೋಗಿಗಳ ಪೈಕಿ ಐವರಲ್ಲಿ ಒಬ್ಬರು, ಅಂದರೆ ಶೇ.18.3ರಷ್ಟು ಮಹಿಳೆ ಯರೇ ಇದ್ದಾರೆ. ಈ ಉದ್ಯೋಗಿಗಳು ಶ್ರಮಕ್ಕೆ ಯಾವುದೇ ಕೂಲಿ ಪಡೆಯುವುದಿಲ್ಲ. ಏಕೆಂದರೆ, ಇವರು ಕೌಟುಂಬಿಕ ಗೃಹೋದ್ಯಮಗಳಲ್ಲಿ ಕೂಲಿರಹಿತ ದುಡಿಮೆ ಮಾಡುವವರಾಗಿರುತ್ತಾರೆ. 2024ರ ಮಾರ್ಚ್ ಮಾಸಾಂತ್ಯಕ್ಕೆ ನಗರ ನಿರುದ್ಯೋಗದ ಪ್ರಮಾಣ ಶೇ.6.7ರಷ್ಟಿತ್ತು. ಯುವಸಮೂಹದ ನಿರುದ್ಯೋಗ ಪ್ರಮಾಣ 2022-23ರಲ್ಲಿ ಶೇ.10ರಷ್ಟಿತ್ತು. ನಿಯತಕಾಲಿಕ ವೇತನ ಪಡೆಯುವ ದುಡಿಮೆಗಾರರ ಪ್ರಮಾಣವು 2017-18ರಲ್ಲಿ ಶೇ.22.8ರಷ್ಟಿದ್ದುದು 2023-24ರಲ್ಲಿ ಶೇ.20.9ಕ್ಕೆ ಕುಸಿದಿದೆ. ಕಾರ್ಮಿಕಪಡೆಯನ್ನು ಔಪಚಾರಿಕಗೊಳಿಸುವ ಆಡಳಿತ ನೀತಿಗಳ ಹೊರತಾಗಿಯೂ ಐದು ವರ್ಷಗಳಲ್ಲಿ ಈ ಕುಸಿತ ದಾಖಲಾಗಿದೆ. ಅಷ್ಟೇ ಅಲ್ಲದೆ ಅನೇಕ ರೀತಿಯ ಸಾಮಾಜಿಕ ಸುರಕ್ಷತಾ ಅನುಕೂಲಗಳು ಮತ್ತು ಸಂಪರ್ಕಗಳು ಔಪಚಾರಿಕ ಕಾರ್ಮಿಕ ಎಂದೇ ಗುರುತಿಸಲ್ಪಡುವ ವೇತನ ಪಡೆಯುವವರಿಗೆ ಸರ್ಕಾರವು ಔಪಚಾರಿಕೀಕರಣ ಗೊಂಡ (Formalisation) ಕಾರ್ಮಿಕರ ಸಂಖ್ಯೆಯನ್ನು ಬಿಂಬಿಸಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ಒದಗಿಸುವ ದತ್ತಾಂಶಗಳನ್ನು ಆಧರಿಸುತ್ತದೆ. ಈ ಸಂಸ್ಥೆಯಲ್ಲಿನ ಚಾಲ್ತಿಯಲ್ಲಿರುವ/ನಿಷ್ಕ್ರಿಯವಾದ ಖಾತೆಗಳ ಸಂಖ್ಯೆ 30 ಕೋಟಿ ಇದ್ದರೂ ಸಕ್ರಿಯ ಚಂದಾದಾರರ ಸಂಖ್ಯೆ ಕೇವಲ 7.3 ಕೋಟಿಗಳಷ್ಟಿದೆ.

ಬಜೆಟ್ ಪ್ರಸ್ತಾವಿತ ಯೋಜನೆಗಳು: 2024-25ರ ಬಜೆಟ್‌ನಲ್ಲಿ ಉದ್ಯೋ ಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿಯೇ ಮೂರು ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಲಾಗಿದೆ. ಮೊದಲನೇ ಯೋಜನೆಯು ಮೊದಲ ಬಾರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದ್ದು, ಉದ್ಯೋಗಿಗೆ ಪಾವತಿಸುವ 15,000 ರೂ.ಗಳ ವೇತನದವರೆಗೆ ಸಬ್ಸಿಡಿಯನ್ನು ನೀಡುತ್ತದೆ ಮತ್ತು ಒಂದು ಕೋಟಿ ಜನರನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಎರಡನೆಯದು ನಿರ್ದಿಷ್ಟವಾಗಿ ಉತ್ಪಾದನಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಉತ್ತೇಜಿಸುವ ಸಲುವಾಗಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ನಾಲ್ಕು ವರ್ಷಗಳವರೆಗೆ ವೇತನ ಸಬ್ಸಿಡಿಗಳನ್ನು ಪಾವತಿಸಲಾಗುತ್ತದೆ. 25,000 ರೂ.ಗಳ ಮಾಸಿಕ ವೇತನದ ಗರಿಷ್ಟ ಶೇ.24 ಪ್ರೋತ್ಸಾಹಕ ಸಬ್ಸಿಡಿ ಒದಗಿಸಲಾಗುತ್ತದೆ. ಮೂರನೇ ಯೋಜನೆಯಡಿ ಉದ್ಯೋಗದಾತರನ್ನು ಉತ್ತೇಜಿಸುವ ಸಲುವಾಗಿ ಅವರ ಮಾಸಿಕ EPFO ಕೊಡುಗೆಯ 3,000 ರೂ. ಗಳವರೆಗೆ ಮರುಪಾವತಿ ಮಾಡಲಾಗುತ್ತದೆ. ತನ್ಮೂಲಕ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯೋಗದಾತರನ್ನು ಬೆಂಬಲಿಸುತ್ತದೆ. ವಾಸ್ತವವಾಗಿ ಈ ಮೂರೂ ಯೋಜನೆಗಳು EPFOದಲ್ಲಿ ನೋಂದಾಯಿಸಲ್ಪಟ್ಟ ಉದ್ಯೋಗಿಗಳ ಮೇಲೆ ಅವಲಂಬಿತವಾಗಿವೆ. ನಾಲ್ಕನೇ ಯೋಜನೆಯಡಿ ಒಂದು ವರ್ಷದ ಅವಧಿಗೆ ಮಾಸಿಕ 5,000 ರೂ.ಗಳ ಭತ್ಯೆಯೊಂದಿಗೆ ಕಂಪೆನಿಗಳು ತರಬೇತಿ ವೆಚ್ಚ ಮತ್ತು ಶೇ.10ರಷ್ಟು ಭತ್ಯೆಯನ್ನು ಭರಿಸುತ್ತವೆ.

ಅರ್ಥಶಾಸ್ತ್ರಜ್ಞರು ಹಾಗೂ ಸಣ್ಣ ಉದ್ದಿಮೆದಾರರ ಅಭಿಪ್ರಾಯದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳೇ ಪರಿಣಾಮಕಾರಿ ಅನುಷ್ಠಾನಕ್ಕೆ ಅಡೆತಡೆಗಳನ್ನು ಒಡ್ಡುತ್ತವೆ. ಉದಾಹರಣೆಗೆ ಮೊದಲ ಬಾರಿಯ ಉದ್ಯೋಗಿಗಳಿಗೆ ನೀಡಲಾಗುವ 15,000 ರೂ.ಗಳ ಉತ್ತೇಜಕ ಸಬ್ಸಿಡಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಎರಡನೇ ಕಂತು ಪಡೆಯುವ ಮುನ್ನ ಉದ್ಯೋಗಿಯು ಕಡ್ಡಾಯವಾಗಿ ಆನ್‌ಲೈನ್ ಹಣಕಾಸು ಸಾಕ್ಷರತೆ ಕೋರ್ಸ್ ಪೂರ್ಣಗೊಳಿಸಬೇಕಾಗುತ್ತದೆ. ಇದು ಬಹುಪಾಲು ಅಸಂಭವ ಎಂದೇ ತಜ್ಞರು ಹೇಳುತ್ತಾರೆ. ಹಣಕಾಸು ಸಾಕ್ಷರತೆಯ ಕಲಿಕೆಗೆ ಅಗತ್ಯವಿಲ್ಲದ ವಲಯಗಳಲ್ಲಿರುವ ಉದ್ಯೋಗಿಗಳಿಗೆ ಇದು ಅನಪೇಕ್ಷಿತವಾಗಿದ್ದು, ಉತ್ತೇಜಕ ಮೊತ್ತವನ್ನು ಪಡೆಯಲು ಅನಗತ್ಯ ವಲಯಗಳಲ್ಲಿ ಇದನ್ನೇಕೆ ಕಡ್ಡಾಯಗೊಳಿಸಬೇಕು ಎಂದು ಜೆಎನ್‌ ಯು ಪ್ರಾಧ್ಯಾಪಕ ಹಿಮಾಂಶು ಪ್ರಶ್ನಿಸುತ್ತಾರೆ. ಅಲ್ಲದೆ ಮೊದಲ ಬಾರಿ ಉದ್ಯೋಗ ಪಡೆಯುವ ಕಾರ್ಮಿಕರು ನೇಮಕಗೊಂಡ ಒಂದು ವರ್ಷದೊಳಗಾಗಿ ನೌಕರಿ ತೊರೆದರೆ ಉದ್ಯೋಗದಾತರು ಸಬ್ಸಿಡಿ ಮೊತ್ತವನ್ನು ಹಿಂತಿರುಗಿಸಬೇಕಾಗು ಇದೆ. ಒಂದು ವೇಳೆ ಉದ್ಯೋಗಿಯು ಹತ್ತು ತಿಂಗಳ ನಂತರ ಬೇರೆ ಉದ್ಯೋಗಕ್ಕೆ ಹೋದರೆ ಆತನಿಗೆ ಆಕೆಗೆ ಸಬ್ಸಿಡಿ ಆ ವೇಳೆಗಾಗಲೇ ದೊರೆತಿರುವುದರಿಂದ, ಆ ಮೊತ್ತವನ್ನು ಉದ್ಯೋಗದಾತರು ಭರಿಸಬೇಕಾಗುತ್ತದೆ. ಈ ಹೊರೆಯನ್ನು ವಹಿಸಿಕೊಳ್ಳಲು ಸಣ್ಣ ಪ್ರಮಾಣದ ಉದ್ಯೋಗದಾತರು ಮುಂದೆ ಬರುವುದಿಲ್ಲ ಎಂದೇ ತಜ್ಞರು ಹೇಳುತ್ತಾರೆ.

“ಭಾರತದ ಆರ್ಥಿಕತೆಯು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿರುವುದಕ್ಕೆ ಇನ್ನೂ ದೊಡ್ಡ ಸಂರಚನಾತ್ಮಕ ಕಾರಣಗಳಿವೆ. ಅವು ಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯ ಕೊರತೆ ಇರುವುದು, ಇದರಿಂದ ಉಂಟಾಗುವ ಬಳಕೆಯ ಕುಸಿತ ಮತ್ತು ಖಾಸಗಿ ಬಂಡವಾಳ ಹೂಡಿಕೆಯ ಕೊರತೆ ಮುಖ್ಯವಾಗಿ ಕಾಣುತ್ತವೆ. ಈ ಮೂರೂ ಅಂಶಗಳಲ್ಲಿ ಸುಧಾರಣೆಯಾದರೆ, ಹೆಚ್ಚಿನ ವೇತನಗಳು ಗಣನೆಗೆ ಬರುವುದಿಲ್ಲ’ ಎಂದು ಅಜೀಂ ಪ್ರೇಮ್ಂಜಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಮಿತ್ ಬೋಪ್ಲೆ ಅವರು ಹೇಳುತ್ತಾರೆ. ಕಾರ್ಮಿಕ ಸಮೂಹದ ಔಪಚಾರಿಕೀಕರಣಕ್ಕೆ ಸಂಬಂಧಿಸಿದಂತೆ, ದುಡಿಮೆಯ ವಲಯಕ್ಕೆ ಹೊಸಬರ ಪ್ರವೇಶದೊಂದಿಗೇ, ಅಸಂಖ್ಯಾತ ದುಡಿಮೆಗಾರರು ಕೃಷಿ ಕ್ಷೇತ್ರ, ಸಣ್ಣ ವ್ಯಾಪಾರ, ಅಸಂಘಟಿತ ರಿಟೇಲ್ ವಲಯ ಮತ್ತು ಗೃಹ ಸೇವೆಯಿಂದ ನಿರ್ಗಮಿಸುತ್ತಿರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸುತ್ತಾರೆ. ಮಾರುಕಟ್ಟೆಯಲ್ಲಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಬೇಡಿಕೆಯನ್ನು ಹೆಚ್ಚಿಸುವುದು ತುರ್ತು ಅವಶ್ಯಕತೆ ಆಗಿದ್ದಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೀಡುವ ವೇತನವನ್ನು ಹೆಚ್ಚಿಸಬೇಕಾಗುತ್ತದೆ. ಇದು ಆರ್ಥಿಕತೆಯಲ್ಲಿ ಬಳಕೆ ಪ್ರಮಾಣವನ್ನು ಹೆಚ್ಚಿಸುವ ನೇರ ಮಾರ್ಗವಾಗಿರುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ದುರದೃಷ್ಟವಶಾತ್ ಕೇಂದ್ರ ಸರ್ಕಾರವು ನರೇಗಾ ಯೋಜನೆಗೆ ನೀಡುವ ಅನುದಾನವನ್ನು ಕಡಿಮೆ ಮಾಡುತ್ತಲೇ ಇದೆ.

ಈ ವಿಶ್ಲೇಷಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, 2024-25ರ ಬಜೆಟ್ ಆರ್ಥಿಕತೆಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎನ್ನುವ ಭರ ವಸೆಯು ಎಷ್ಟರ ಮಟ್ಟಿಗೆ ವಾಸ್ತವವಾಗಿ ಈಡೇರುತ್ತದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲುಂಟಾಗಬಹುದಾ ಬದಲಾವಣೆಗಳಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವೇ ಎಂಬುದನ್ನು ಕಾದುನೋಡಬೇಕಿದೆ.

 

ಅರ್ಥಶಾಸ್ತ್ರಜ್ಞರು ಹಾಗೂ ಸಣ್ಣ ಉದ್ದಿಮೆದಾರರ ಅಭಿಪ್ರಾಯದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳೇ ಪರಿಣಾಮಕಾರಿ ಅನುಷ್ಠಾನಕ್ಕೆ ಅಡೆತಡೆಗಳನ್ನು ಒಡ್ಡುತ್ತವೆ. ಉದಾಹರಣೆಗೆ ಮೊದಲ ಬಾರಿಯ ಉದ್ಯೋಗಿಗಳಿಗೆ ನೀಡಲಾಗುವ 15,000 ರೂ.ಗಳ ಉತ್ತೇಜಕ ಸಬ್ಸಿಡಿಯನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಎರಡನೇ ಕಂತು ಪಡೆಯುವ ಮುನ್ನ ಉದ್ಯೋಗಿಯು ಕಡ್ಡಾಯವಾಗಿ ಆನ್‌ಲೈನ್ ಹಣಕಾಸು ಸಾಕ್ಷರತೆ ಕೋರ್ಸ್ ಪೂರ್ಣಗೊಳಿಸಬೇಕಾಗುತ್ತದೆ. ಇದು ಬಹುಪಾಲು ಅಸಂಭವ ಎಂದೇ ತಜ್ಞರು ಹೇಳುತ್ತಾರೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago