ಓದುಗರ ಪತ್ರ
ಮೈಸೂರು ದಸರಾ ಮಹೋತ್ಸವದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಯೂ ಒಂದು . ಈ ಹಿಂದೆ ಎಲ್ಲ ಚಿಗುರು ಕವಿಗೋಷ್ಠಿ , ಅರಳು ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಹಾಸ್ಯಗೋಷ್ಠಿ, ಯುವ ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ ಇರುತ್ತಿದ್ದವು. ಇವುಗಳಲ್ಲಿ ಚುಟುಕು ಕವಿಗೋಷ್ಠಿ ಪ್ರಮುಖ ವಾದ ಆಕರ್ಷಣೆಯ ಗೋಷ್ಠಿಯಾಗಿತ್ತು. ಈ ಬಾರಿ ದಸರಾ ಕಾವ್ಯ ಸಂಭ್ರಮ ಶೀರ್ಷಿಕೆಯಡಿ ಯುವ ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ, ಹಾಸ್ಯ ಕವಿಗೋಷ್ಠಿ, ಸೆ.೨೮ರಿಂದ ಅ.೩ರವರೆಗೆ ನಡೆಯಲಿದೆ ಎಂದು ಕವಿಗೋಷ್ಠಿ ಸಮಿತಿಯವರು ತಿಳಿಸಿದ್ದಾರೆ . ಆದರೆ ಚುಟುಕು ಕವಿಗೋಷ್ಠಿಯನ್ನು ರದ್ದು ಮಾಡಲಾಗಿದೆ. ಇದರಿಂದ ಚುಟುಕು ಪ್ರಿಯರಿಗೆ ನಿರಾಸೆಯಾಗಿದೆ . ಚುಟುಕು ಸಾಹಿತ್ಯದಲ್ಲಿ ಬದುಕಿನ ಲಾಲಿತ್ಯವಿದೆ. ಚುಟುಕು ಕವಿಗೋಷ್ಠಿ ಆರಂಭಿಸುವುದರಿಂದ ದಸರೆಗೂ ಕಳೆ ಬರಲಿದೆ. ಆದ್ದರಿಂದ ಕವಿಗೋಷ್ಠಿ ಸಮಿತಿಯವರು ಈ ಬಾರಿಯ ದಸರಾ ಮಹೋತ್ಸವದಲ್ಲಿ ಚುಟುಕು ಕವಿಗೋಷ್ಠಿಗೆ ಅವಕಾಶ ಕಲ್ಪಿಸಬೇಕು.
–ಅಹಲ್ಯ ಸಿ.ನಾ.ಚಂದ್ರ, ಜನತಾ ನಗರ, ಮೈಸೂರು
ಚಂದ್ರಶೇಖರ್ ಮೂರ್ತಿ.ಕೆ.ಎಸ್ ಟೀ ಅಂದರೆ ಬೇರೆ, ಚಹ ಅಂದರೆ ಬೇರೆ ಎಂದು ಹೇಳಿ ಚಕಿತಗೊಳಿಸಿದವರು ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ…
ಸಿರಿ ಮೈಸೂರು ಇದು ಬೇಸಿಗೆ ಕಾಲ. ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್ನಲ್ಲಿ ಕ್ಯಾನ್ಸ್ ಫಿಲಂ ಫೆಸ್ಟಿವಲ್ ನಡೆಯಿತು. ಜಗತ್ತಿನಾದ್ಯಂತದಿಂದ ಸುರಸುಂದರ…
ವಿಕ್ರಮ್ ಹತ್ವಾರ್ ಮೊನ್ನೆ ತಮಿಳುನಾಡಿನಲ್ಲಿ ಸಿನಿಮಾ ನಟ ವಿಜಯ್ ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಕುರಿತು ಅಲ್ಲಿ ಯಾವೆಲ್ಲ ಸಂಗತಿಗಳು ಪ್ರಭಾವ…
ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ…
ನವೀನ್ ಕುಮಾರ್: ಪಿರಿಯಾಪಟ್ಟಣ ತಾಲ್ಲೂಕು ವರದಿಗಾರರು ಪಿರಿಯಾಪಟ್ಟಣ: ಸಿಡಿಲು ಬಡಿದು ಎರಡು ಹಸುಗಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ…