ಓದುಗರ ಪತ್ರ

ಓದುಗರ ಪತ್ರ | ವಿದ್ಯುತ್ ಗ್ರಾಹಕರ ಹೊರೆ ತಪ್ಪಿಸಿ

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ಜುಲೈ ೧ರಿಂದ ಪ್ರಸ್ತುತ ಇರುವ ೯೦೦ ರೂ. ಬೆಲೆಯ ಮೀಟರ್‌ನ ಬದಲಾಗಿ ೯೦೦೦ ರೂ. ಬೆಲೆಯ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಕೆಪಿಟಿಸಿಎಲ್, ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ.

ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು, ಸದ್ಯ ಈ ಪ್ರಕರಣ ಹೈ ಕೋರ್ಟ್ ವಿಚಾರಣೆ ಯಲ್ಲಿದೆ. ಆದರೂ ಅದನ್ನು ಪರಿಗಣಿಸದೆ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯವೇ ಆದರೆ ಅದರ ವೆಚ್ಚವನ್ನು ಸರ್ಕಾರ ಅಥವಾ ಕೆಪಿಟಿಸಿಎಲ್ ಭರಿಸಲಿ.

ಈಗಾಗಲೇ ವಿದ್ಯುತ್ ದರ ಮುಗಿಲು ಮುಟ್ಟಿದೆ. ಜೊತೆಗೆ ಕಳೆದ ಏಪ್ರಿಲ್‌ನಲ್ಲಿ ವಿದ್ಯುತ್ ದರಗಳ ಜೊತೆಗೆ ನಿಗದಿತ ಶುಲ್ಕಗಳನ್ನು ಪ್ರತಿ ಕಿಲೋವ್ಯಾಟ್‌ಗೆ ಒಂದೇ ಬಾರಿಗೆ ೨೫ ರೂ. ಗಳಷ್ಟು ಏರಿಕೆ ಮಾಡಿ ಕನಿಷ್ಠ ದರವನ್ನು ೧೨೦ ರೂ. ನಿಂದ ೧೪೫ ರೂ. ಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ ೩ ಕಿಲೋವ್ಯಾಟ್ ಸಾಮರ್ಥ್ಯದ ಮನೆಗೆ ಕನಿಷ್ಠ ವಿದ್ಯುತ್ ದರವೇ ೪೩೫ ರೂಪಾಯಿಗಳಾಗಿದೆ.

ವಿದ್ಯುತ್ ಬಿಲ್ ೯೦೦ ರೂ. ಗಳಾದರೆ ಅದರಲ್ಲಿ ಅರ್ಧ ಕನಿಷ್ಠ ದರವೇ ಆಗಿರುತ್ತದೆ. ಎಂದರೆ ನಾವು ಒಂದು ಯೂನಿಟ್ ವಿದ್ಯುತ್ ಬಳಸದಿದ್ದರೂ ಕೂಡ ತಿಂಗಳಿಗೆ ಕನಿಷ್ಠ ೪೫೦-೫೦೦ ರೂ. ಕಟ್ಟಲೇಬೇಕು. ಇದು ಯಾವ ಲೆಕ್ಕ? ನಾವು ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್‌ಗೆ ನಿಗದಿಯಾದ ದರ ವನ್ನು ಕಟ್ಟಲು ಬದ್ಧರಾಗಿದ್ದೇವೆ. ಆದರೆ ಮಿನಿಮಂ ಹೆಸರಿನಲ್ಲಿ ಈ ರೀತಿಯ ಸುಲಿಗೆ ಮಾಡುವುದು ತರವಲ್ಲ. ಕನಿಷ್ಠ ದರವನ್ನು ರದ್ದು ಮಾಡಬೇಕು. ಹೀಗೆ ದರಗಳನ್ನು ಪ್ರತಿ ವರ್ಷ, ವರ್ಷದಲ್ಲಿ ೨ ಬಾರಿ ಏರಿಕೆ ಮಾಡಿದರೆ ಜನರಿಗೆ ವಿದ್ಯುತ್ ದರ ಭರಿಸುವುದು ಕಷ್ಟವಾಗುತ್ತದೆ. ಈಗ ಬಹುತೇಕ ಗ್ರಾಹಕರು ಗ್ಯಾರಂಟಿ ಯೋಜನೆ (ಗೃಹ ಜ್ಯೋತಿ)ಯಡಿ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಕಟ್ಟುತ್ತಿದೆ. ಇದರಿಂದಾಗಿ ವಿದ್ಯುತ್ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟದೇ ಇರುವುದರಿಂದ ಕೆಪಿಟಿಸಿಎಲ್ ಎಷ್ಟಾದರೂ ದರ ಏರಿಕೆ ಮಾಡಿಕೊಳ್ಳಲಿ ಎಂದು ಉದಾಸೀನ ಮನೋಭಾವನೆಯಿಂದ ಇದ್ದಾರೆ.

ಆದರೆ ಉಚಿತ ವಿದ್ಯುತ್ ಯೋಜನೆಯೇನಾದರೂ ರದ್ದಾದರೆ ಇದರ ಹೊರೆ ವಿದ್ಯುತ್ ಗ್ರಾಹಕರ ಮೇಲೆ ಬೀಳುತ್ತದೆ. ಸರ್ಕಾರ ಹಾಗೂ ಕೆಪಿಟಿಸಿಎಲ್ ಈ ರೀತಿ ವಿದ್ಯುತ್ ದರ ಪರಿಷ್ಕರಣೆಗೆ ಅವಕಾಶ ನೀಡದೆ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಗ್ರಾಹಕರ ಹೊರೆಯನ್ನು ತಪ್ಪಿಸಬೇಕಾಗಿದೆ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ: ಹಳ್ಳಿಗಳಲ್ಲಿ ಹೊನ್ನೇರು ಕಟ್ಟಿ ಸಂಭ್ರಮಿಸಿದ ಅನ್ನದಾತರು

ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…

12 mins ago

ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ

ಮೈಸೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಜನರು ಸಾಂಪ್ರದಾಯಿಕವಾಗಿ…

22 mins ago

ಓದುಗರ ಪತ್ರ: ಮೈಸೂರಿನಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾಣವಾಗಲಿ

ಸಾಂಸ್ಕೃತಿಕ ನಗರಿ ಮೈಸೂರು ಆಹಾರ ಪ್ರಿಯರ ಸ್ವರ್ಗವೂ ಹೌದು. ಮೈಸೂರು ಪಾಕ್‌ನಿಂದ ಹಿಡಿದು ಮೈಲಾರಿ ದೋಸೆಯವರೆಗೆ ಇಲ್ಲಿನ ರುಚಿ ಪ್ರಸಿದ್ಧವಾಗಿದೆ.…

37 mins ago

ಓದುಗರ ಪತ್ರ: ಗೀತೆ ರಚನಾಕಾರರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ

ಪ್ರೇಮ್ ನಿರ್ದೇಶನದ ಕನ್ನಡ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ.. ಎಂಬ ಗೀತೆ ದ್ವಂದ್ವಾರ್ಥದ ಕೀಳು ಅಭಿರುಚಿಯ ಹಾಡು…

39 mins ago

ಓದುಗರ ಪತ್ರ: ಪರೀಕ್ಷೆ ವೇಳೆ ವಿದ್ಯುತ್ ಕಡಿತ ಮಾಡದಿರಿ

ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷಾ ಸಮಯ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಎಸ್ಕಾಂಗಳು ವಿದ್ಯುತ್ ಕಡಿತ ಮಾಡುತ್ತಿರುವುದು ಸರಿಯಲ್ಲ.…

42 mins ago

ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಇಲ್ಲ

ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಾಕಷ್ಟು ಸಂಗ್ರಹ ವಿದ್ದು, ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ…

46 mins ago