ಓದುಗರ ಪತ್ರ

ಓದುಗರ ಪತ್ರ| ಕನ್ನಡ ಚಿತ್ರರಂಗಕ್ಕೆ ಕೃತಜ್ಞತೆ ಇದೆಯೇ?

ಡಾ.ಪಿ.ವಿ.ನಾಗರಾಜುರವರು ತಮ್ಮ ಸಂಶೋಧನಾ ಪ್ರಬಂಧವನ್ನು ‘ಹಚ್ಚೇವು ಕನ್ನಡದ ದೀಪ’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾ ರೆಂಬುದಾಗಿ ‘ಆಂದೋಲನ’ ದಿನಪತ್ರಿಕೆಯಲ್ಲಿ ಲೇಖನವೊಂದು ಪ್ರಕಟಗೊಂಡಿದ್ದು, ಪಿ.ವಿ.ನಾಗರಾಜುರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

‘ಕರ್ನಾಟಕ ರಾಜ್ಯವು ರೂಪುಗೊಳ್ಳುವಲ್ಲಿ, ರೂಪುಗೊಂಡ ಬಳಿಕ ತನ್ನ ಚಹರೆಯನ್ನು
ರೂಪಿಸಿಕೊಳ್ಳುವಲ್ಲಿ ಚಲನಚಿತ್ರೋದ್ಯಮವು ಹೇಗೆ ಉಪಕರಣವಾಗಿ ದುಡಿದಿದೆ’ ಎಂಬ ಚರಿತ್ರೆಯನ್ನು ಹಿಡಿದಿಡಲು ಯತ್ನಿಸಿರುವುದು ಈ ಮಹಾಪ್ರಬಂಧದಲ್ಲಿ ದಾಖಲಾಗಿದೆ ಎಂಬುದಾಗಿ ಲೇಖಕ ಡಾ.ರಹಮತ್ ತರೀಕೆರೆ ತಿಳಿಸಿದ್ದಾರೆ. ಕರ್ನಾಟಕದ ಅಸ್ಥಿತೆಯನ್ನು ಕೇಂದ್ರವಾಗಿಟ್ಟುಕೊಂಡು ಹಾಡುಗಳನ್ನು ವಿಶ್ಲೇಷಿಸಿದ್ದಾರೆ ಎಂಬುದಾಗಿಯೂ ಅವರು ಉಲ್ಲೇಖಿಸಿರುವುದು ಕುತೂಹಲದಾಯಕವಾದ ವಿಷಯ.

ಕನ್ನಡ ಚಿತ್ರರಂಗವನ್ನು ಬೆಳೆಸಿದ್ದು ಕನ್ನಡ ಚಳವಳಿಗಳು ಎಂದರೆ ತಪ್ಪಾಗಲಾರದು. ವರ್ಷಕ್ಕೆ 6-7 ಕನ್ನಡ ಚಿತ್ರಗಳು ನಿರ್ಮಾಣವಾಗುತ್ತಿದ್ದ ದಯನೀಯ ಸ್ಥಿತಿಯಲ್ಲಿ ಆರಂಭವಾದ ಈ ಕನ್ನಡ ಚಳವಳಿಯ ಉದ್ದಕ್ಕೂ ಕನ್ನಡ ಚಿತ್ರಗಳನ್ನು ನೋಡಬೇಕು, ಪರಭಾಷೆಯ ಚಿತ್ರಗಳ ಡಬ್ಬಿಂಗ್ ನಿಲ್ಲಬೇಕು, ಚಿತ್ರೋದ್ಯಮ ಕರ್ನಾಟಕದಲ್ಲಿ (ಆಗ ಮೈಸೂರು ರಾಜ್ಯ) ನೆಲೆ ನಿಲ್ಲಬೇಕು, ಸರ್ಕಾರ ಚಿತ್ರೋದ್ಯಮಕ್ಕೆ ನೆರವು ನೀಡಬೇಕು ಎಂಬ ಬೇಡಿಕೆಗಳನ್ನು ಕನ್ನಡ ಪರ ಚಳವಳಿಗಾರರಾದ ಕೋಣಂದೂರು ಲಿಂಗಪ್ಪ, ಅನಕೃ, ನಾಡಿಗೇರ ಕೃಷ್ಣರಾಯ, ಮ.ರಾಮಮೂರ್ತಿ, ಎಂ.ಎಸ್.ನಟರಾಜನ್, ಅನಂತರದ ದಿವಸಗಳಲ್ಲಿ ವಾಟಾಳ್ ನಾಗರಾಜ್ ಬಲವಾಗಿ ಪ್ರತಿಪಾದಿಸಿದರು. ಇದರಿಂದಾಗಿ ಕನ್ನಡ ಚಿತ್ರಗಳ ನಿರ್ಮಾಣ ಹೆಚ್ಚಾದವು. ಕಾದಂಬರಿಗಳ ಆಧಾರದ ಮೇಲೆ ಚಲನಚಿತ್ರಗಳು ತಯಾರಾದವು. ಸಬ್ಸಿಡಿ ಯೋಜನೆ ಬಂತು. ಅನೇಕ ಲೇಖಕರು ಚಿತ್ರಗಳತ್ತ ಗಮನಹರಿಸಿದರು.

ಕನ್ನಡ ಚಲನಚಿತ್ರಗಳನ್ನು ಈ ಚಳವಳಿಗಳ ಹಿನ್ನೆಲೆಯಲ್ಲಿ ಹಲವು ಸಲ ನೋಡಿದವರನ್ನೂ ನಾನು ಬಲ್ಲೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಯಾವ ಚಿತ್ರ ಮಂದಿರವೂ ಕನ್ನಡ ಚಿತ್ರ ಪ್ರದರ್ಶಿಸುತ್ತಿರಲಿಲ್ಲ. ಅದಕ್ಕೆ ಹೋರಾಟ ಮಾಡಿ, ಜಿ.ವಿ.ಅಯ್ಯರ್ ಅವರ ‘ಬಂಗಾರಿ’ (ಕೃಷ್ಣಮೂರ್ತಿ ಪುರಾಣಿಕರ ದೇವರಕೂಸು) ಮೊತ್ತ ಮೊದಲ ಬಾರಿಗೆ ಅಲಂಕಾ‌ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.

ಈಗಿನ ಚೆನ್ನೈನಲ್ಲಿ ಚಿತ್ರೀಕರಣಕ್ಕೆ ಅನುಭವಿಸುತ್ತಿದ್ದ ಸಂಕಟ ನಿವಾರಣೆಗೆ ಬಾಲಕೃಷ್ಣ ‘ಅಭಿಮಾನ್’ ಸ್ಟುಡಿಯೋಗೆ ಪ್ರಯತ್ನ ಶುರುಮಾಡಿದರು. ಇದರಿಂದಾಗಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಆರು ಫೋರುಗಳಲ್ಲಿ ಚಿತ್ರೀಕರಣ ನಡೆಯುವಂತಾಯಿತು. ಭಾರತೀಯ ಚಲನಚಿತ್ರರಂಗ ಕನ್ನಡದತ್ತ ನೋಡುವಂತಾಯಿತು. ಆದರೆ ಕನ್ನಡ ಚಿತ್ರರಂಗಕ್ಕೆ ಆ ನೆನಪು ಮತ್ತು ಕೃತಜ್ಞತೆ ಇದೆಯೇ?

-ಕೆ.ವೆಂಕಟರಾಜು, ಚಾಮರಾಜನಗರ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

26 mins ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

3 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

3 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

4 hours ago