ಓದುಗರ ಪತ್ರ
ಎಚ್.ಡಿ.ಕೋಟೆ ತಾಲ್ಲೂಕಿನ ಶೀರನಹುಂಡಿ ಗ್ರಾಮದ ಬದಿಯಲ್ಲಿರುವ ತಾರಕ ಜಲಾಶಯದ ಬಲದಂಡೆ ನಾಲೆ (ಶೀರನಹುಂಡಿ ಕಾಲುವೆ)ಗೆ ನಿತ್ಯ ಮಾಂಸದ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದು, ದುರ್ವಾಸನೆ
ಬೀರಲಾರಂಭಿಸಿದೆ.
ಈ ಕಾಲುವೆಗೆ ತಂದು ಸುರಿಯುತ್ತಿರುವ ಮಾಂಸದ ತ್ಯಾಜ್ಯ ಹಾಗೂ ಮೂಳೆಗಳನ್ನು ಗಮನಿಸಿದರೆ, ಮಾಂಸಕ್ಕಾಗಿ ಗೋ-ಹತ್ಯೆ ಮಾಡಿ ಅದರ ತ್ಯಾಜ್ಯವನ್ನು ಇಲ್ಲಿ ತಂದು ಬೀಸಾಡುತ್ತಿರಬಹುದು ಅನಿಸುತ್ತದೆ. ಈ
ತ್ಯಾಜ್ಯದಿಂದಾಗಿ ಈ ಭಾಗದಲ್ಲಿ ದುರ್ವಾಸನೆ ಹೆಚ್ಚಾಗುವ ಜತೆಗೆ ಮಾಂಸದ ತ್ಯಾಜ್ಯ ತಿನ್ನಲು ಕಾಡುಪ್ರಾಣಿಗಳು ಬರುವ ಆತಂಕವೂ ಎದುರಾಗಿದೆ. ಈ ಕಾಲುವೆ ಮೇಲಿನ ರಸ್ತೆಯ ಮೂಲಕವೇ ಜನರು ಜಮೀನುಗಳಿಗೆ ಹೋಗಬೇಕಿದ್ದು, ದುರ್ವಾಸನೆಯನ್ನು ತಾಳಲಾರದೆ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.
ಅಲ್ಲದೆ ಕಾಲುವೆಗಳನ್ನು ಸ್ವಚ್ಛಗೊಳಿಸದ ಪರಿಣಾಮ ಕಾಲುವೆಗಳ ಒಳಗೆ ಗಿಡಗಂಟಿಗಳು ಮಾತ್ರವಲ್ಲದೇ ಮರಗಳೂ ಬೆಳೆದುಕೊಂಡಿದ್ದು, ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಜತೆಗೆ ಕಾಲುವೆಗೆ ಮಾಂಸದ ತ್ಯಾಜ್ಯವನ್ನು ತಂದು ಸುರಿಯುವವರಿಗೆ ಕಡಿವಾಣ ಹಾಕಬೇಕಿದೆ.
-ಪ್ರಶಾಂತ್, ಎಚ್.ಡಿ.ಕೋಟೆ ತಾ.
ಮೈಸೂರು : ಶಿಷ್ಯವೇತನಕ್ಕೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಭಾನುವಾರ ಬೆಳಿಗ್ಗೆ 11ಕ್ಕೆ ವಿಶ್ವವಿದ್ಯಾನಿಲಯದ ಕ್ರಾಫರ್ಡ್…
ಮುಂಬೈ : ಇಲ್ಲಿನ ಪರ್ಭಾನಿಯಲ್ಲಿರುವ ನಿರ್ಮಾಣ ಹಂತದ ಹನುಮನ ದೇವಾಲಯದ ಛಾವಣಿ ಕುಸಿದು 7 ಭಕ್ತರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ…
ಸಿದ್ದಾಪುರ : ಟಿಂಬರ್ ಯೂನಿಯನ್ ಸಭೆಯಲ್ಲಿ ಮಾರಾಮಾರಿ ನಡೆದು ಇಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಆರೋಪದಡಿ ಐವರ ವಿರುದ್ಧ ಸಿದ್ದಾಪುರ…
ಹನೂರು : ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಕೊಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಚಿರತೆಯನ್ನು ಕೊನೆಗೂ ಸೆರೆ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದ ಮಳೆ ಬಾರದೇ ಇದ್ದರೂ, ಮುಂದಿನ ಎರಡು ತಿಂಗಳ ಕಾಲ ಕುಡಿಯುವ ನೀರಿಗೆ…
ಬೈರುತ್: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಬ್ಜೊಲ್ಲಾ ನಡುವೆ ಕದನ ವಿರಾಮ ಜಾರಿಗೆ…