ಎಡಿಟೋರಿಯಲ್

ಗೌರವಧನ ಏರಿಕೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ

ಎಂ.ಕೆ.ಕೆಂಪೇಗೌಡ

ನಿವೃತ್ತ ನಿರ್ದೇಶಕ, ಪಂಚಾಯತ್ ರಾಜ್ ಇಲಾಖೆ, ಹಾಗೂ ಸಲಹೆಗಾರರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಸರ್ಕಾರವು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಗೌರವಧನ ಏರಿಕೆ ಮಾಡಿರುವುದು ದೊಡ್ಡ ಪ್ರಮಾಣದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲತುಂಬುವ ದಿಶೆಯಲ್ಲಿ ಪ್ರಮುಖ ನಿರ್ಧಾರವಾಗಿದೆ.

ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳಿಗೆ ಆರ್ಥಿಕ ಬೆಂಬಲ ನೀಡಿದರೆ ಸದಸ್ಯರೂ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಿದಂತಾಗಿ ಅವರು ಹೆಚ್ಚು ಗ್ರಾಮ ಪಂಚಾಯಿತಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.

ದೇಶದ ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕವು ಪಂಚಾಯತ್ ರಾಜ್ ಮತ್ತು ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಸಂವಿಧಾನದ ೭೩ನೇ ತಿದ್ದುಪಡಿಗೆ ಅನುಗುಣವಾಗಿ ವಿಕೇಂದ್ರಿಕರಣವನ್ನು ಜಾರಿಗೆ ತಂದಿರುವುದರಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಸಂವಿಧಾನದ ಪ್ರಕಾರ ೩ ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವುದು ಕಡ್ಡಾಯವಾಗಿರುತ್ತದೆ. ಆದರೆ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಹಾಗೂ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಜಿಲ್ಲಾ ಪರಿಷತ್, ಮಂಡಲ ಪಂಚಾಯತ್, ತಾಲ್ಲೂಕು ಪಂಚಾಯಿತಿ ಎಂಬ ೩ ಹಂತದ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು.

ಪ್ರಸ್ತುತ ರಾಜ್ಯದಲ್ಲಿ ಪ್ರತಿ ೬೦೦೦ದಿಂದ ೮೦೦೦ದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು ೬೦೦೦ದಷ್ಟು ಗ್ರಾಮ ಪಂಚಾಯಿತಿಗಳಿವೆ. ಅದರಲ್ಲಿ ೯೨೦೦೦ರಷ್ಟು ಚುನಾಯಿತ ಪ್ರತಿನಿಧಿಗಳಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯೂ ಅವರಿಂದಲೇ ನಡೆಯುತ್ತದೆ. ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಪ.ಜಾತಿ ಮತ್ತು ಪ.ಪಂಗಡಗಳಿಗೆ ಮೀಸಲಾತಿ ಇದೆ. ಜೊತೆಗೆ ಹಿಂದುಳಿದ ವರ್ಗಕ್ಕೆ ಶೇ.೨೭ ಮತ್ತು ಎಲ್ಲ ವರ್ಗದಲ್ಲೂ ಶೇ.೫೦ರಷ್ಟು ಮೀಸಲಾತಿ ಮಹಿಳೆಯರಿಗಿದೆ. ಹೀಗಾಗಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವೂ ದೊಡ್ಡದಿದೆ.

ಪಂಚಾಯತ್ ರಾಜ್ ವ್ಯವಸ್ಥೆಗೆ ಭದ್ರ ಬನಾದಿ ಹಾಕುವಲ್ಲಿ ಸದಸ್ಯರ ಪಾತ್ರ ಹೆಚ್ಚಿದೆ. ಯಾವುದೇ ಯೋಜನೆ ತಯಾರಿಕೆಯಲ್ಲಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ, ಗ್ರಾಮಸಭೆಗಳ ಮೂಲಕ ಫಲಾನುಭವಿಗಳ ಆಯ್ಕೆ, ವಾರ್ಡ್‌ಸಭೆಗಳನ್ನು ನಡೆಸುವುದು ಹೀಗೆ ಪ್ರತಿ ಹಂತದಲ್ಲೂ ಚುನಾಯಿತ ಪ್ರತಿನಿಧಿಗಳ ಪಾತ್ರವಿದೆ. ತೆರಿಗೆ, ಸೇವಾ ಶುಲ್ಕ ವಿಽಸುವ ಮೂಲಕ ಪಂಚಾಯಿತಿಗಳಿಗೆ ಸ್ವಂತ ಸಂಪನ್ಮೂಲ ಕ್ರೋಡೀಕರಿಸುವ ಅಧಿಕಾರವಿದೆ. ಈ ಎಲ್ಲಾ ಕೆಲಸಗಳಿಗೆ ಸದಸ್ಯರು ತಮ್ಮ ಮನೆಯ ಕೆಲಸ ಬಿಟ್ಟು ಹೆಚ್ಚಾಗಿ ಪಂಚಾಯಿತಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಿಗೆ ಆರ್ಥಿಕವಾಗಿ ಭದ್ರತೆ ನೀಡಲು ಸರ್ಕಾರ ಮಾಸಿಕ ಗೌರವಧನ ನೀಡುತ್ತಿರುವುದು ಉಚಿತವಾಗಿದೆ.

೧೯೯೪ರಲ್ಲಿ ಸದಸ್ಯರಿಗೆ ಗೌರವ ಧನವಿರಲಿಲ್ಲ. ಅಧ್ಯಕ್ಷರಿಗೆ ೧೫೦ರೂ. ಮತ್ತು ಉಪಾಧ್ಯಕ್ಷರಿಗೆ ೭೫ರೂ. ಮಾತ್ರ ಇತ್ತು. ನಂತರ ೨೦೦೩ರಲ್ಲಿ ಅಧ್ಯಕ್ಷರಿಗೆ ೩೦೦ರೂ. ಉಪಾಧ್ಯಕ್ಷರಿಗೆ ೧೫೦ರೂ. ನಿಗದಿ ಮಾಡಲಾಯಿತು. ಆದರೆ ಮೊದಲ ಬಾರಿಗೆ ೨೦೦೯ರಲ್ಲಿ ಶೋಭಾ ಕರಂದ್ಲಾಜೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಸದಸ್ಯರಿಗೂ ಗೌರವಧನ ನೀಡಲಾಯಿತು. ಅಧ್ಯಕ್ಷರಿಗೆ ೬೦೦ರೂ. ಉಪಾಧ್ಯಕ್ಷರಿಗೆ ೩೦೦ರೂ. ಮತ್ತು ಸದಸ್ಯರಿಗೆ ೨೫೦ರೂ. ಗೌರವಧನ ನಿಗದಿ ಮಾಡಿದರು. ಬಳಿಕ ೨೦೧೪ರಲ್ಲಿ ಎಚ್.ಕೆ.ಪಾಟೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿದ್ದಾಗ ಅಧ್ಯಕ್ಷರಿಗೆ ೧೦೦೦ರೂ. ಉಪಾಧ್ಯಕ್ಷರಿಗೆ ೬೦೦ರೂ. ಮತ್ತು ಸದಸ್ಯರಿಗೆ ೫೦೦ರೂ. ಮಾಡಿದ್ದರು. ಬಳಿಕ ೨೦೧೭ರಲ್ಲಿ ಎಚ್.ಕೆ.ಪಾಟೀಲರ ಅವಽಯಲ್ಲಿಯೇ ಅಧ್ಯಕ್ಷರಿಗೆ ೩೦೦೦ರೂ. ಉಪಾಧ್ಯಕ್ಷರಿಗೆ ೨೦೦೦ರೂ. ಸದಸ್ಯರಿಗೆ ೧೦೦೦ರೂ.ಗೆ ಹೆಚ್ಚಳ ಮಾಡಲಾಯಿತು. ಇದಾದ ಬಳಿಕ ಈಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಮೂಲಕವು ಸದಸ್ಯರ ಗೌರವಧನ ಏರಿಕೆಗೆ ಒತ್ತಡವಿತ್ತು. ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ ಅಧ್ಯಕ್ಷರಿಗೆ ೬೦೦೦ರೂ. ಉಪಾಧ್ಯಕ್ಷರಿಗೆ ೪೦೦೦ರೂ. ಮತ್ತು ಸದಸ್ಯರಿಗೆ ೨೦೦೦ರೂ. ಏರಿಕೆ ಮಾಡಿದೆ. ಆ ಮೂಲಕ ಗೌರವಧನ ದ್ವಿಗುಣಗೊಂಡಂತಾಗಿದೆ.

ಅಧ್ಯಕ್ಷರು ಗ್ರಾ.ಪಂ. ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದು, ಪ್ರತಿದಿನ ಪಂಚಾಯಿತಿಗೆ ಬರಬೇಕು ಮತ್ತು ಆಡಳಿತದ ಜವಾಬ್ದಾರಿ ಜೊತೆಗೆ ಹಣ ತೆಗೆಯುವ ಅಽಕಾರವೂ ಇರುವುದರಿಂದ ಪಂಚಾಯಿತಿ ಕಾರ್ಯದಲ್ಲಿ ಹೆಚ್ಚಿನ ಸಮಯ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ಆರ್ಥಿಕ ಭದ್ರತೆ ನೀಡುವುದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿದೆ. ಇದು ಪಂಚಾಯತ್ ರಾಜ್ ಸಬಲೀಕರಣ ಹಾಗೂ ಶೇ.೫೦ರಷ್ಟು ಮಹಿಳೆಯರಿರುವುದರಿಂದ ಮಹಿಳೆಯರ ಸಬಲೀಕರಣಕ್ಕೂ ಅನುಕೂಲಕರವಾಗಿದೆ. ಸದಸ್ಯರು ಗ್ರಾಮ ಸಭೆಗಳ ಮೂಲಕ ಯೋಜನೆ ತಯಾರಿ, ಫಲಾನುಭವಿಗಳ ಆಯ್ಕೆ, ಕಾಮಗಾರಿಗಳ ಮೇಲುಸ್ತುವಾರಿ, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ ಸಂಗ್ರಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾದಷ್ಟು ಯೋಜನೆಗಳು, ಸೇವೆಗಳು ಜನರಿಗೆ ತಲುಪಲು ಅನುಕೂಲವಾಗುವ ದೃಷ್ಟಿಯಿಂದ ಗೌರವಧನ ಹೆಚ್ಚಳ ನ್ಯಾಯೋಚಿತ ನಿರ್ಧಾರವಾಗಿದೆ.

andolanait

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

28 mins ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

30 mins ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

32 mins ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

33 mins ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

35 mins ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

39 mins ago