ಎಡಿಟೋರಿಯಲ್

ರಾಷ್ಟ್ರೀಯ ಹೆದ್ದಾರಿಗಳ ಬೆಳವಣಿಗೆ

ಪ್ರೊ.ಆರ್.ಎಂ.ಚಿಂತಾಮಣಿ

ನಮ್ಮ ಸಂವಿಧಾನದ ಪ್ರಕಾರ ದೇಶದಲ್ಲಿಯ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಕೇಂದ್ರ ಮತ್ತು ರಾಜ್ಯಗಳ ಜಂಟಿ ಜವಾಬ್ದಾರಿ ಪಟ್ಟಿಯಲ್ಲಿದೆ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು, ಗ್ರಾಮೀಣ ರಸ್ತೆಗಳು ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಕೇಂದ್ರ ಸರ್ಕಾರದ ಹೊಣೆ, ಉಳಿದ ಮೂರನ್ನೂ ರಾಜ್ಯ ಸರ್ಕಾರಗಳು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಿರ್ವಹಿಸುತ್ತವೆ. ಈ ವಿಷಯದಲ್ಲಿ ವಿಶೇಷ ಯೋಜನೆಗಳಿಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಿಶೇಷ ಅನುದಾನದ ರೂಪದಲ್ಲಿ ನೆರವನ್ನು ಒದಗಿಸುತ್ತದೆ.

ರಸ್ತೆಗಳು ಮೂಲ ಸೌಲಭ್ಯಗಳಲ್ಲಿಯೇ ಪ್ರಮುಖವಾಗಿದ್ದು ಪ್ರಾದೇಶಿಕ ಸಂಪರ್ಕ ಸಾಧನಗಳಾಗಿ ಮಹತ್ವದ ಪಾತ್ರವಹಿಸುತ್ತವೆ. ಬ್ರಿಟಿಷ್ ಕಾಲದಲ್ಲಿ ತಮ್ಮ ಆಡಳಿತದ ಅನುಕೂಲಕ್ಕಾಗಿ ರಸ್ತೆಗಳನ್ನು ನಿರ್ಮಿಸಿದರೂ ಅದು ನಮ್ಮ ಅಭಿವೃದ್ಧಿಯ ಉದ್ದೇಶಕ್ಕಾಗಿ ಇರಲಿಲ್ಲ. ದೇಶಿಯ ಸಂಸ್ಥಾನಿಕ ರಾಜರು ತಮ್ಮ ಪ್ರದೇಶಗಳ ಅಭಿವೃದ್ಧಿಗಾಗಿ ಮತ್ತು ಪಕ್ಕದ ರಾಜ್ಯಗಳ ಸಂಪರ್ಕಕ್ಕಾಗಿ ತಮ್ಮ ಮಿತಿಯಲ್ಲಿ ಸಾಕಷ್ಟು ರಸ್ತೆಗಳನ್ನು ನಿರ್ಮಿಸಿದ್ದರು. ಮೈಸೂರು ಅರಸರಿಂದ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಿತ್ತು.

ರಾಷ್ಟ್ರೀಯ ಹೆದ್ದಾರಿಗಳು

ಸ್ವಾತಂತ್ರ್ಯ ನಂತರ ರಸ್ತೆ ನಿರ್ಮಾಣದ ವೇಗ ಹೆಚ್ಚಾಯಿತು, ಯೋಜಿತ ಅಭಿವೃದ್ಧಿಯ ಭಾಗವಾಗಿ ಪಂಚವಾರ್ಷಿಕ ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ರಾಜಧಾನಿಗಳು, ಕೈಗಾರಿಕಾ ಕೇಂದ್ರಗಳು ಮತ್ತು ವ್ಯವಹಾರ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ಅಗಲವಾದ ಸುಸ್ಥಿರ ರಸ್ತೆಗಳನ್ನು ನಿರ್ಮಿಸಿತು. ಇವುಗಳಲ್ಲಿ ಪ್ರಮುಖ ಬಂದರು, ನಗರಗಳು, ಪ್ರವಾಸಿ ಕೇಂದ್ರಗಳು ಸೇರಿಕೊಂಡಿದ್ದವು. ಇವುಗಳನ್ನೇ ರಾಷ್ಟ್ರೀಯ ಹೆದ್ದಾರಿಗಳು ಎಂದು ಕರೆಯಲಾಯಿತು. ಅವುಗಳಿಗೆ ಒಂದೊಂದು ಸಂಖ್ಯೆಯನ್ನು ಕೊಡಲಾಯಿತು. ಹೆದ್ದಾರಿಗಳಲ್ಲಿ ಚಲಿಸುವಾಗ ವಾಹನಗಳ ವೇಗವೂ ಸೇರಿದಂತೆ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೂರ ಸಂಚರಿಸುವ ವಾಹನಗಳಿಗೆ ನಡುವೆ ಬರುವ ನಗರಗಳಲ್ಲಿಯ ಸಂಚಾರ ಅಡೆತಡೆಗಳಿಂದ ತೊಂದರೆಯಾಗದಂತೆ ನಗರಗಳ ಹೊರವಲಯಗಳ ಮೂಲಕ ಪ್ರತ್ಯೇಕ ಹೈವೇ ನಿರ್ಮಿಸಲಾಗಿರುತ್ತದೆ. ಜನ ಸಂಚಾರ ಮತ್ತು ಸರಕು ಸಾಗಣೆ ವಾಹನಗಳ ದಟ್ಟಣೆ ಹೆಚ್ಚಾಗಿರುವ ಎರಡು ಪ್ರಮುಖ ನಗರಗಳ ನಡುವೆ ನಿರ್ಮಿಸಲಾಗಿರುವ ‘ಎಕ್ಸ್‌ಪ್ರೆಸ್ ಹೈವೇಗಳು’ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಸೇರಿಕೊಂಡಿರುತ್ತದೆ. ಹೀಗೆ ರಾಷ್ಟ್ರೀಯ ಹೆದ್ದಾರಿಗಳ ಜಾಲ ವಿಸ್ತರಣೆಯಾಗುತ್ತಾ ಹೋಯಿತು.

ಮುಂದೆ ಹತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮೂಲ ಸೌಲಭ್ಯಗಳಿಗೆ ಒತ್ತು ಕೊಟ್ಟಿದ್ದರಿಂದ ರಸ್ತೆ ನಿರ್ಮಾಣ ಮತ್ತು ಉನ್ನತೀಕರಣ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಲ್ಪಟ್ಟಿತು. ಹೆದ್ದಾರಿಗಳ ನಿರ್ಮಾಣ, ಸುಧಾರಣೆ, ವಿಸ್ತರಣೆ ಮತ್ತು ನಿರ್ವಹಣೆ (ರಿಪೇರಿಗಳು ಸೇರಿ) ಮುಂತಾದ ಎಲ್ಲ ಜವಾಬ್ದಾರಿಗಳನ್ನೂ ಎನ್‌ಎಚ್‌ಎಐ ನಿರ್ವಹಿಸಬೇಕು. ಇವೆಲ್ಲಕ್ಕಾಗಿ ಬಜೆಟ್ ಅನುದಾನ ಇರುತ್ತದಲ್ಲದೆ ಬಾಂಡ್‌ಗಳನ್ನು ಮಾರಿ ಸಾಲ ಎತ್ತುವ ಅಽಕಾರವೂ ಇದೆ. ಖಾಸಗಿಯವರ ಪಾಲುದಾರಿಕೆಯಲ್ಲಿ ರಸ್ತೆ ಆಸ್ತಿಗಳ ನಗದೀಕರಣವೂ (ಟೋಲ್ ಸಂಗ್ರಹ) ಪೂರಕವಾಗಿ ನಡೆಯುತ್ತಿತ್ತು.

ಇದೇ ಸಮಯದಲ್ಲಿ ಹುಟ್ಟಿದ್ದು ಉತ್ತರ-ದಕ್ಷಿಣ ಮತ್ತು ಪೂರ್ವ-

ಪಶ್ಚಿಮಗಳ ನಡುವೆ ದೇಶದ ಉದ್ದಗಲಕ್ಕೂ ‘ಸುವರ್ಣ ಸಂಪರ್ಕ’ ಪರಿಕಲ್ಪನೆ. ಆಗ ಈ ಹೆದ್ದಾರಿಗಳ ನಿರ್ಮಾಣ ಮತ್ತು ವಿಸ್ತರಣೆ ಇನ್ನೂ ಹೆಚ್ಚು ತೀವ್ರಗೊಂಡಿತು. ರಾಷ್ಟ್ರೀಯ ಹೆದ್ದಾರಿಗಳ ಜಾಲಕ್ಕೆ ಹೆಚ್ಚು ಶಕ್ತಿ ತುಂಬಲಾಯಿತು. ಪೂರ್ವೋತ್ತರ ರಾಜ್ಯಗಳ ರಾಜಧಾನಿಗಳೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳನ್ನೂ ರಾಷ್ಟ್ರೀಯ ಹೆದ್ದಾರಿಗಳಿಂದ ಜೋಡಿಸಲಾಗಿದೆ. ಇದರಿಂದ ರಸ್ತೆ ಪ್ರಯಾಣದ ಅವಽಯೂ ಕಡಿಮೆಯಾಗಿದೆ. ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಮೂಲ ಸೌಲಭ್ಯ ನಿರ್ಮಾಣವಾಗಿದೆ.

ಆಗ ‘ಗ್ರಾಮ ಸಡಕ್’ ಯೋಜನೆಯೂ ಆರಂಭವಾಗಿ ಹೆದ್ದಾರಿಗಳ ಉಪಯುಕ್ತತೆ ಹೆಚ್ಚುವಂತಾಯಿತು. ಪ್ರತಿಯೊಂದು ಹಳ್ಳಿಗೂ ವಾಹನ ಓಡಾಟಕ್ಕೆ ಯೋಗ್ಯವಾದ ಪಕ್ಕಾ ರಸ್ತೆ ನಿರ್ಮಾಣ ಮಾಡುವುದಲ್ಲದೆ ಅದನ್ನು ಜಿಲ್ಲಾ ಪ್ರಮುಖ ರಸ್ತೆಗೆ ಜೋಡಿಸುವ ಕೆಲಸವು ಮುಂದುವರಿಯುತ್ತಿದೆ. ಜಿಲ್ಲಾ ರಸ್ತೆಗಳನ್ನು ಮತ್ತು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಜೋಡಿಸಿ ಜನ ಸಂಚಾರ ಮತ್ತು ಸರಕು ಸಾಗಣೆಗೆ ಅನುಕೂಲ ಕಲ್ಪಿಸುವಂತಾಯಿತು. ರೈತರ ಉತ್ಪನ್ನಗಳು ದೊಡ್ಡ ಪೇಟೆಗಳಿಗೆ ಕಡಿಮೆ ವೇಳೆಯಲ್ಲಿ ತಲುಪುವಂತಾಯಿತು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಿಂದಲೂ (ನರೇಗಾದಿಂದಲೂ) ಈ ಕಾರ್ಯದಲ್ಲಿ ಅನುಕೂಲವಾಯಿತು. ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಸಣ್ಣ ಹಳ್ಳಿಗೂ ಸಮೀಪದ ದೊಡ್ಡ ಗ್ರಾಮ ಅಥವಾ ಪಟ್ಟಣದೊಡನೆ ಪಕ್ಕಾ ರಸ್ತೆಯಿಂದ ಜೋಡಿಸುವ ಕೆಲಸ ಯಶಸ್ವಿಯಾಗಿ ಮುಂದುವರಿದಿದೆ.

೨೦೨೩-೨೪ರಲ್ಲಿ ೧೪೦೦೦ ಕಿ.ಮೀ. ಹೈವೇ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಅಧಿಕೃತ ವರದಿ ಹೇಳುತ್ತದೆ ಹಾಲಿ ಹಣಕಾಸು ವರ್ಷದಲ್ಲಿ ೧.೯೯ ಲಕ್ಷ ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿತ್ತು. ಮುಂಬರುವ ಬಜೆಟ್‌ನಲ್ಲಿ ೨.೧೦ ಲಕ್ಷ ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ. ಟೋಲ್ ಸಂಗ್ರಹದಿಂದಲೂ ಒಂದಿಷ್ಟು ಹೆಚ್ಚು ಸಂಪನ್ಮೂಲ ಸಿಗುವ ನಿರೀಕ್ಷೆ ಇದೆ.

ನಿರ್ಮಾಣ ಮತ್ತು ಪಥ ವಿಸ್ತರಣೆ (ಅಗಲೀಕರಣ) ಕಾರ್ಯಗಳು ಹೆಚ್ಚಾಗಿ ಆರಂಭಿಸಲಾಗುತ್ತಿರುವುದಾದರೂ ನಿಗದಿತ ಸಮಯದಲ್ಲಿ ಪೂರ್ಣಗೊಂಡು ಸಂಚಾರಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವುದು ವಿಳಂಬವಾಗುತ್ತಿದೆ. ಇದು ಅನನುಕೂಲವಷ್ಟೇ ಅಲ್ಲದೆ ದಿನೇ ದಿನೇ ವೆಚ್ಚಗಳು ಹೆಚ್ಚುವ ಅಪಾಯವಿದೆ. ಇದನ್ನು ತಪ್ಪಿಸಬೇಕು. ಇನ್ನೊಂದು ಆತಂಕವೆಂದರೆ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇ.೪೦ ರಷ್ಟು ಹೈವೇಗಳ ಮೇಲೆ ಆಗುತ್ತವೆ. ಇದಕ್ಕೆ ನಿರ್ಮಾಣ ದೋಷವೂ ಕಾರಣವಿದ್ದೀತು ಅದನ್ನು ಗಮನಿಸಲಿ.

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago