ಎಡಿಟೋರಿಯಲ್

ನಮ್ಮೂರ ಬಸ್ ಸ್ಟ್ಯಾಂಡು

 

ನ್ನ ಬಾಲ್ಯದಲ್ಲೆ ಎತ್ತಿನಗಾಡಿ ಕಟ್ಟಿಕೊಂಡು ನಂಟರ ಮನೆಗೆ ಹೋಗಿಬರುವ ಪದ್ಧತಿ ಕೊನೆಯ ದಿನಗಳನ್ನು ಎಣಿಸುತ್ತಿತ್ತುಆದರೂ ಅಂತರಗಟ್ಟೆಗೆ ಮದುವೆಗೆಸಂತೆಗೆಸಿನಿಮಾಕ್ಕಾಗಿ ಕೆಲವರಾದರೂ ಬಂಡಿ ಕಟ್ಟಿಸುತ್ತಿದ್ದರುಸಿನಿಮಾ ಟಾಕೀಸಿನ ಬದಿ ಬಂಡಿಗಳನ್ನು ನಿಲ್ಲಿಸಲು ಬೇಕಾದಷ್ಟು ಜಾಗವೂ ಇರುತ್ತಿತ್ತು.

ನಾನು ಕಂಡ ಮೊದಲನೇ ಬಸ್ಸು 1965ರ ಆಸುಪಾಸುತರೀಕೆರೆಯಿಂದ ಅಜ್ಜಂಪುರಕ್ಕೆ ಓಡುತ್ತಿತ್ತುಅದನ್ನು ಮುಂಭಾಗದಿಂದ ರಾಡು ಹಾಕಿ ತಿರುವಿ ಚಾಲೂ ಮಾಡಲಾಗುತ್ತಿತ್ತುಕ್ರಮೇಣ ಬಸ್ಸುಗಳ ಸಂಖ್ಯೆ ಹೆಚ್ಚುತ್ತ ಹೋಯಿತುತರೀಕೆರೆ ಜಂಕ್ಷನ್ಅಲ್ಲಿಂದ ಭದ್ರಾವತಿಶಿವಮೊಗ್ಗಕೊಪ್ಪಶೃಂಗೇರಿತುಮಕೂರುಬೆಂಗಳೂರುಕೆಮ್ಮಣ್ಣುಗುಂಡಿ– ಚಿಕ್ಕಮಗಳೂರುಹೊಸದುರ್ಗಚಿತ್ರದುರ್ಗದ ಕಡೆ ಬಸ್ಸುಗಳು ಹೊರಡು ತ್ತಿದ್ದವುಬೆಂಗಳೂರುಶಿವಮೊಗ್ಗ ನಡುವೆ ಸರ್ಕಾರಿ ಬಸ್ಸುಗಳಿದ್ದರೂಅವುಗಳ ಜತೆ ನಮ್ಮ ಸಂಬಂಧ ಕಡಿಮೆನಮ್ಮೂರ ಖಾಸಗಿ ಬಸ್ಸುಗಳೆಂದರೆಶಾಹಿನ್ಶಂಕರ್ಆಂಜನೇಯಗಜಾನನರಿಲಯಬಲ್ಜಯಪದ್ಮಉದಯಖಲೀಲ್ವಿನಾಯಕಮಹಾಬಲೇಶ್ವರಸಿದ್ದರಾಮೇಶ್ವರಸಿಪಿಸಿಎಚ್‌ಐಎಚ್ಕೊನೆಯ ಎರಡು ಬಸ್ಸುಗಳ ಅಕ್ಷರ ಅರ್ಥವೇನೆಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ.

ನಮಗೆಲ್ಲ ಬಸ್ಸುಗಳು ತಮ್ಮ ಬಣ್ಣ ಮತ್ತು ಹಾರನ್ ಸಮೇತ ಪರಿಚಿತವಾಗಿದ್ದವುಉದಯ ಬಸ್ಸಿನ ಬಣ್ಣ ಹುರುಳಿಕಟ್ಟಿನದುಸಿದ್ದರಾಮೇಶ್ವರ ಬೂದುಶಂಕರ್ ಬೆಳ್ಳಗೆ ಕೊಕ್ಕರೆಯಂತಿತ್ತುಎಲ್ಲವೂ ಟಾಟಾ ಕಂಪನಿಯವುಉದಯ ಮಾತ್ರ ಲೇಲ್ಯಾಂಡಿನದುಸಿಪಿಸಿ ಮೂರಕ್ಷರದ ಮುದ್ರೆಯನ್ನು ಹೊಟ್ಟೆಗೆ ಒತ್ತಿಸಿಕೊಂಡು ಸೈನಿಕ ವಾಹನದಂತೆ ಓಡಾಡುತ್ತಿತ್ತುಎಲ್ಲ ಬಸ್ಸುಗಳಿಗೂ ತಾಡಪಾಲಿನ ಪರದೆಈ ಪರದೆಯನ್ನು ಸುರುಳಿಸುತ್ತಿ ಕಿಟಕಿಯ ಮೇಲುಭಾಗಕ್ಕೆ ಕಟ್ಟಲಾಗುತ್ತಿತ್ತುಮಳೆ ಬಂದಾಗ ತಾಡುಪಾಲುಗಳ ಸುರುಳಿಯ ಬೆಲ್ಟನ್ನು ಬಿಚ್ಚಿ ಕೆಳಗೆ ಇಳಿಸಿಕೊಳ್ಳಬೇಕಿತ್ತುಶಂಕರ್‌ಗೆ ಮಾತ್ರ ಗಾಜಿನ ಕಿಟಕಿಅದು ಮಲೆನಾಡಿನ ಮೂಲಕ ಬರುತ್ತಿದ್ದರಿಂದ ಇದು ಅಗತ್ಯವಾಗಿತ್ತುಇದು ಸಮಯಪಾಲನೆಗೂ ಹೆಸರಾಗಿತ್ತುಬಸ್ಸುಗಳು ನಮ್ಮೂರ ಗಡಿಯಾರಗಳಾಗಿದ್ದವು. ‘ಅಲೇ ಶಂಕರ್ ಬಂತುಇನ್ನೂ ಸ್ಕೂಲಿಗೆ ಹೋಗಿಲ್ಲವಲ್ಲೊ’ ಎಂದು ತಾಯಂದಿರು ಎಚ್ಚರಿಸುತ್ತಿದ್ದರುಸಂಜೆಗೆ ಬರುತ್ತಿದ್ದ ಶಂಕರ್ ಬಸ್ಸಿನ ಗಾಜಿನ ಮೇಲೆ ಮೇಲ್ ಎಂದು ಬರೆದಿರುತ್ತಿತ್ತುಮಲೆನಾಡಿನ ಶೃಂಗೇರಿಕೊಪ್ಪಬಾಳೆಹೊನ್ನೂರು ಇತ್ಯಾದಿ ಊರುಗಳನ್ನು ಬೀರೂರುಕಡೂರಿನಂತಹ ಬಯಲ ಸೀಮೆಯ ಊರುಗಳ ಜತೆ ಲಗತ್ತಿಸುತ್ತಿದ್ದ ಈ ಬಸ್ ಮಲೆನಾಡ ಊರುಗಳಿಂದ ತರುತ್ತಿದ್ದ ಅಂಚೆಯನ್ನು ಬೀರೂರಿನ ರೈಲ್ವೆಸ್ಟೇಷನ್ನಿಗೆ ತಲುಪಿಸುತ್ತಿತ್ತುಇದಕ್ಕಾಗಿ ಬಸ್ಸಿನ ಕೊನೆಯ ಸೀಟಿನ ಕೆಳಗೆ ಒಂದು ಡಬ್ಬ ಇರಿಸಲಾಗಿತ್ತುತುರ್ತು ಪತ್ರಗಳನ್ನು ನಾವು ಅದರಲ್ಲಿ ಹಾಕುತ್ತಿದ್ದೆವು.

ನಮ್ಮೂರಿಂದ ಹೊರಡುತ್ತಿದ್ದ ಬಸ್ಸಗಳೆಂದರೆ ವಿನಾಯಕ ಮತ್ತು

ಎಚ್‌ಐಎಚ್ವಿನಾಯಕ ಲಕ್ಕವಳ್ಳಿಭದ್ರಾವತಿಚನ್ನಗಿರಿ ಮೂಲಕ ದಾವಣಗೆರೆಗೆ ಹೋಗುತ್ತಿತ್ತುಎಚ್‌ಐಎಚ್ ಹೊಸದುರ್ಗಮಾರಿಕಣಿವೆ ಮೂಲಕ ಹಿರಿಯೂರನ್ನು ಮುಟ್ಟುತ್ತಿತ್ತುಇದು ನಿಧಾನ ಚಲನೆಗೂಸಿಕ್ಕಲ್ಲೆಲ್ಲ ನಿಲ್ಲುವುದಕ್ಕೂ ಖ್ಯಾತಿಯಾಗಿತ್ತುಚಲಿಸುವಾಗಲೇ ಕೆಳಗಿಳಿದು ಮೂತ್ರಮಾಡಿ ಓಡಿಹೋಗಿ ಮತ್ತೆ ಹತ್ತಬಹುದಿತ್ತುಅವಸರಕ್ಕೆ ಹೋಗುವವರು ಇದರ ಹಿಂದಿನ ಬಸ್ಸುಗಳನ್ನು ಹಿಡಿದು ಊರು ಮುಟ್ಟುತ್ತಿದ್ದರುಅದರಲ್ಲೂ ಗುರುವಾರ ಸಂಜೆ ಬಸ್ಸುಗಳಿಗೆ ಕೂತವರಿಗೆ ಮಹಾಸಹನೆ ಬೇಕುಅವು ಪ್ರತಿ ಹಳ್ಳಿಯಲ್ಲೂ ನಿಂತು ಗೇಟಿನಲ್ಲಿದ್ದ ಮೂಟೆಗಳನ್ನು ಏರಿಸಿಕೊಳ್ಳುತ್ತಿದ್ದವುಕ್ಲೀನರ್ ಬಸ್ಸು ನಿಧಾನವಾದೊಡನೆ ಇಳಿದು ಓಡುತ್ತಾ ಪಯಣಿಕರನ್ನು ಹತ್ತಿಸಿಲಗೇಜನ್ನು ಎತ್ತಿ ಒಳಗಿಟ್ಟು ನಾಲಗೆಯನ್ನು ಪಾನುಬೀಡದಂತೆ ಮಡಚಿ ಶಿಳ್ಳೆ ಹಾಕುತ್ತಿದ್ದನುಟಾಪಿಗೆ ಹತ್ತಿ ಕೆಳಗಿಂದ ರೈತರು ಎತ್ತಿಕೊಡುವ ಮೂಟೆಗಳನ್ನು ಚಕಚಕ ಎಳೆದು ಜೋಡಿಸುತ್ತಿದ್ದನುಪ್ರಯಣಿಗರ ತೂಕ ಕಾಲುಭಾಗಮೂಟೆಗಳದ್ದು ಮುಕ್ಕಾಲು ಭಾಗರೂಟಿನ ಊರುಗಳನ್ನು ಹೋಟೆಲಿನ ಮಾಣಿ ಗಿರಾಕಿಗಳ ಮುಂದೆ ತಿಂಡಿಗಳ ಪಟ್ಟಿ ಒದರುವಂತೆ ಹೇಳುತ್ತಿದ್ದನುಮೂಟೆಗಳನ್ನು ಒಳಗೆ ಮೇಲೆ ಮೇಲೆ ಹೇರಿಕೊಂಡು ಬಸ್ಸು ತುಂಬಿದ ದಿಮ್ಮನಿಸಿಯಾಗುತ್ತಿತ್ತುಅದು ಊರು ಮುಟ್ಟುವ ಹೊತ್ತಿಗೆ ಪಯಣಿಕರ ಹಸಿವಿನಿಂದ ಹೊಟ್ಟೆಯೊಳಗಿನ ಹುಳ ಸತ್ತು ಹೋಗಿರುತ್ತಿದ್ದವುಒಳ್ಳೆಯ ಬಟ್ಟೆ ಧರಿಸಿ ಮದುವೆಗೆ ಹೋಗುವವರು ಎಚ್‌ಐಎಚ್ ಹತ್ತುತ್ತಿರಲಿಲ್ಲಮಳೆಗೆ ಸೋರುತ್ತಿತ್ತುಅದರ ಹಿಂಬದಿಯ ಕೊನೆಯ ಸೀಟುಗಳನ್ನು ತೆಗೆದು ಅಂಕಣ ಮಾಡಲಾಗಿತ್ತುಅದರಲ್ಲಿ ಶುಕ್ರವಾರದ ಸಂತೆಗೆ ಕುರಿಯನ್ನು ತುಂಬಲಾಗುತ್ತಿತ್ತುಕುರಿಯ ಗಂಜಳ ಹಿಕ್ಕೆಗಳ ಪರಿಮಳದಿಂದ ಬಸ್ಸು ಘಮಗುಡುತ್ತಿತ್ತು.

ಬಾಬಾಬುಡನಗಿರಿಗೆ ಹೋಗುವ ಬಸ್ಸು ಆಂಜನೇಯಖಲೀಲ್ ಹಳೆಯದಾಗಿದ್ದುಬೆಟ್ಟ ಹತ್ತುವಾಗ ಇಂಜಿನ್ನಿನ ನೀರು ಕೊತಕೊತ ಕುದಿಯುತ್ತ ಪ್ರಯಾಣಿಕರ ಮೇಲೆ ಸಿಡಿದು ಹಾಹಾಕಾರ ಎಬ್ಬಿಸುತ್ತಿತ್ತುಅಪ್ಪಿನಲ್ಲಿ ಗೇರು ಬದಲಾವಣೆ ಮಾಡಲು ಡ್ರೈವರು ಹರಸಾಹಸ ಮಾಡುತ್ತಿದ್ದನುಅದು ಬೀಳದಿದ್ದಾಗ ಕಂಡಕ್ಟರ್ ಬಂದು ಅದನ್ನು ಹಾರೆಯನ್ನು ಬಂಡೆಗಲ್ಲು ಎಬ್ಬಿಸಲು ಮೀಟುವಂತೆ ಎತ್ತುತ್ತ್ತಿದ್ದನುಅದು ಹೊಗೆಕೊಳವೆಯಿಂದ ಕಲ್ಲಿದ್ದಲ ರೈಲು ಇಂಜಿನಿನಂತೆ ಕಪ್ಪನೆಹೊಗೆ ಬಿಡುತ್ತಿತ್ತುಆಂಜನೇಯ ಬಸ್ಸಿಗೆ ಈ ಹೆಸರಿಡಲು ಕಾರಣಅದು ಗಿರಿಗಳನ್ನು ಹತ್ತಿ ಬಾಬಾಬುಡನಗಿರಿಗೆಚಿಕ್ಕಮಗಳೂರಿಗೆ ಹೋಗುವುದೇ ಆಗಿತ್ತುಆಂಜ ಶಬ್ದದ ಬಳಿಕ ಹನುಮಂತನು ಬೆಟ್ಟವನ್ನು ಕೈಯಲ್ಲಿಟ್ಟು ಹಾರುವ ಚಿತ್ರವಿದ್ದು ಬಳಿಕ ನೇಯ ಶಬ್ದವನ್ನು ಬೋರ್ಡಿನಲ್ಲಿ ಬರೆಯಲಾಗಿತ್ತುಶಾಹಿನ್ ಬಸ್ಸು ಚಿಕ್ಕಮಗಳೂರಿನಿಂದ ಬರುತಿತ್ತುಅದರ ಹಾರ್ನು ಉದ್ದವಾಗಿ ಮಧುರವಾಗಿ ಇರುತಿತ್ತುಉದಯ ಬಸ್ಸಿನದು ಬಲೂನನ್ನು ಒತ್ತುವ ಮೂಲಕ ಎಮ್ಮೆಕರ ಅರಚಿದಂತೆ ಪೋಂಪೋಂ ಸದ್ದುಸಿದ್ದರಾಮೇಶ್ವರ ಬಸ್ಸುಗಳು ಚೌಳಹಿರಿಯೂರಿಗೆ ಹೋಗುತ್ತಿದ್ದವುಒಂದು ಬಸ್ಸು ತಣಿಗೆ ಬಯಲಿಗೆ ಹೋಗಿ ರಾತ್ರಿ ಹಾಲ್ಟ್ ಆಗುತ್ತಿತ್ತುಬಜಾರಿಗೆ ಬಂದ ಕಾಫಿ ಎಸ್ಟೇಟುಗಳ ಕಾರ್ಮಿಕರು ಅದನ್ನು ಏರುತ್ತಿದ್ದರುಅದರಲ್ಲಿ ಹೆಚ್ಚಿನವರು ಎಣ್ಣೆಪಾರ್ಟಿಗಳೇ ಇರುತ್ತಿದ್ದರು.

ಟಿಕೆಟ್ ಬುಕ್ ಮಾಡುವ ಏಜೆಂಟರುಗಳಿಂದ ಬಸ್ಸು ನಿಲ್ದಾಣ ಗದ್ದಲದಿಂದ ಕೂಡಿರುತ್ತಿತ್ತುಅವರಲ್ಲಿ ಮಹಾ ಸಿಟ್ಟಿನ ಏಜೆಂಟೆಂದರೆ ಜಯಣ್ಣನವರುಚಿಲ್ಲರೆ ಕೊಡದವರಿಗೆಅಗತ್ಯಕ್ಕಿಂತ ಹೆಚ್ಚು ಲಗೇಜು ತಂದವರಿಗೆಯಾಕಿಷ್ಟು ಚಾರ್ಜು ಎಂದು ಚೌಕಾಸಿ ಮಾಡುವವರಿಗೆಚಿಕ್ಕಮಕ್ಕಳ ವಯಸ್ಸನ್ನು ಕಮ್ಮಿ ಹೇಳುವವರಿಗೆ ನಿಷ್ಠುರವಾಗಿ ಮಾತಾಡುತ್ತಿದ್ದರುಸಡಿಲವಾದ ಅಂಗಿ ಚೊಣ್ಣ ತೊಟ್ಟ ದಡೂತಿ ಬ್ಯಾರಿ ಏಜೆಂಟನುಏನಾದರೂ ಹೇಳಿ ಪ್ರಯಾಣಿಕರನ್ನು ನಗಿಸುತ್ತಿದ್ದನುಅವನು ಚಿಲ್ಲರೆ ಕೊಡುವಾಗ ಪೈಸೆಗಳನ್ನು ರೂಪಾಯಿಗೆ ಬದಲಿಸಿ ಹೇಳುತ್ತಿದ್ದನುನಾಲ್ಕಾಣೆ ಚಿಲ್ಲರೆ ಬಾಕಿ ಉಳಿಸಿಕೊಂಡರೆ ಇಪ್ಪತ್ತೈದು ರೂಪಾಯಿ ಆಮೇಲೆ ಕೊಡ್ತೇನೆ ಎನ್ನುತ್ತಿದ್ದನು.

ಶುಕ್ರವಾರದ ದಿನ ಸೀಟು ಹಿಡಿಯಲು ಜನ ತಮ್ಮ ಟವೆಲು ಬ್ಯಾಗುಗಳನ್ನು ಮಾತ್ರವಲ್ಲದೆಸಣ್ಣಕಿರುವ ಮಕ್ಕಳನ್ನು ಕೆಲವೊಮ್ಮೆ ಹೆಂಡತಿಯನ್ನು ಎತ್ತಿ ಕಿಟಕಿಯಲ್ಲಿ ತೂರಿಸುತ್ತಿದ್ದರುಇಕ್ಕಟ್ಟಿನಲ್ಲಿ ತನ್ನ ದೇಹವನ್ನು ತೂರಿಸಿಕೊಂಡು ಕಂಡಕ್ಟರ್ ಬರುತ್ತಿದ್ದನುಮಹಿಳೆಯರು ಮೈತಾಗಿಸ್ತೀಯಲ್ಲ ನಿನಗೇನು ಮನ್ಯಾಗೆ ಅಕ್ಕತಂಗಿಯರಿಲ್ಲವೇ ಎಂದು ಗದರುತ್ತಿದ್ದರುಸುಧಾರಿಸಕೋಬೇಕಮ್ಮಇವತ್ತು ಸಂತೆ ಎಂದು ಮುನ್ನಡೆಯುತ್ತಿದ್ದನುಒಳಗೆ ಜಾಗ ಸಾಲದಿದ್ದರೆ ಜನ ಗಂಟುಮೂಟೆ ಇಟ್ಟುಕೊಂಡು ಟಾಪುಗಳ ಮೇಲೆ ಕೂತು ಪಯಣಿಸುವ ಅವಕಾಶವಿತ್ತುಕೆಲವರು ಗೇರು ಬಾಕ್ಸಿರುವ ಶವಪೆಟ್ಟಿಗೆ ಆಕಾರದ ಡೂಮಿನ ಮೇಲೆ ಕೂರುತ್ತಿದ್ದರುಬಸ್ಸುಗಳಲ್ಲಿ ದಯವಿಟ್ಟು ಇಲ್ಲಿ ಕೂರಬೇಡಿ ಎಂದು ಬರೆದಿರುತ್ತಿತ್ತುಒಂದು ಬಸ್ಸಿನಲ್ಲಿ ಮಾತ್ರ ಎದ್ದೇಳು ಮಂಗ ಎಂದು ಬರೆಯಲಾಗಿತ್ತುಇನ್ನೊಂದು ಬಸ್ಸಿನಲ್ಲಿ ಗೇರ್‌ಬಾಕ್ಸಿನ ಮೇಲೆ ಯಾರೂ ಕೂರದಂತೆ ಸಲಾಕಿಗಳನ್ನು ಮೊಳೆಗಳಂತೆ ನಿಲ್ಲಿಸಿ ವೆಲ್ಡ್ ಮಾಡಲಾಗಿತ್ತು.

ಬಸ್ಸು ನಿಲ್ದಾಣಕ್ಕೆ ಬಂದು ನಿಂತೊಡನೆ ಒಳಗೆ ಹೊರಗೆ ನುಗ್ಗಿ ವೀಳ್ಯದೆಲೆಬಾಳೆಹಣ್ಣುಕಿತ್ತಲೆಮಾವಿನಹಣ್ಣುಪಿನ್ನುಪೆನ್ನುಕಲ್ಲಂಗಡಿಸೀಳುಸೌತೆಕಾಯಿ ಮಾರುವವರು ಮುಕುರಿಬಿಡುತ್ತಿದ್ದರುಭಿಕ್ಷುಕರು ಕೂಡಅನೇಕ ಬಸ್ಸುಗಳಲ್ಲಿ ಚಾಲಕರು ನಮ್ಮ ಬಂಧುಗಳೇ ಇರುತ್ತಿದ್ದರುನಾವು ಅವರಿಗೆ ಬಸ್ಸು ಬರುವ ವೇಳೆಯಲ್ಲಿ ರಸ್ತೆಬದಿ ನಿಂತು ಟಾಟಾ ಮಾಡುತ್ತಿದ್ದೆವುಬಸ್ಸುಗಳಲ್ಲಿ ಎಲ್ಲಿಗಾದರೂ ಹೋಗುವುದು ಎಂದರೆ ನಮಗೆ ರೆಕ್ಕೆ ಬರುತ್ತಿದ್ದವುಬಸ್ಸುಗಳು ಸ್ಥಳಬಂಧಿತರಾದ ನಮ್ಮನ್ನು ಹೊಸ ಸ್ಥಳಕ್ಕೆ ಕರೆದೊಯ್ಯುವ ದೇವದೂತರಾಗಿದ್ದವು.

 

ಸಂಶೋಧನ ಲೋಕದಲ್ಲಿ ಒಂದು ವಾಡಿಕೆ ಮಾತಿದೆಸಂಶೋಧಕರಿಗೆ ತಮ್ಮದೇ ಆದ ಒಂದು ಲೋಕದೃಷ್ಟಿ,ಸ್ಟ್ಯಾಂಡು ಇರಲೇಬೇಕುಅದು ಇರದಿದ್ದರೆ ಅದು ಬಸ್‌ಸ್ಟ್ಯಾಂಡುಅಂದರೆ ಯಾವುದೇ ದಿಕ್ಕಿಲ್ಲದೆ ಚಲಿಸುವವರು ಎಂದರ್ಥಆದರೆ ಈ ಜೋಕು ನಮ್ಮೂರ ಬಸ್‌ಸ್ಟ್ಯಾಂಡಿಗೆ ಅನ್ವಯವಾಗದುಅಲ್ಲಿ ಬಂದು ದಿಕ್ಕನ್ನು ಕಂಡುಕೊಳ್ಳುವವರೇ ಇದ್ದರು

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago