ಎಡಿಟೋರಿಯಲ್

ಡಾ.ರಾಜ್ ಕುಮಾರ್ ನೆನಪುಗಳು

ಗೋಕಾಕ್ ಚಳವಳಿ

    1982ನೇ ವರ್ಷಗೋಕಾಕ್ ಚಳವಳಿ ನಿಧಾನವಾಗಿ ರಾಜ್ಯಾದ್ಯಂತ ಹಬ್ಬುತ್ತಲಿತ್ತುಕನ್ನಡ ಸಂಘಟನೆಗಳುಸಾಹಿತಿಗಳೆಲ್ಲರೂ ಅಪೂರ್ವ ಬೆಂಬಲ ನೀಡಿ ಬೀದಿಗಿಳಿದಿದ್ದರುಆ ದಿನಗಳಲ್ಲಿ ಕಂಡಿದ್ದ ಬೃಹತ್ ಚಳವಳಿ ಎಂದರೆ ರೈತ ಚಳವಳಿ ಮಾತ್ರಆ ಬಗೆಯ ಜನಸೇರ್ಪಡೆ ಬೇರಾವುದೇ ಪ್ರತಿಭಟನೆಗಿರಲಿಲ್ಲಸಾಹಿತಿಗಳುಸಂಘಟನೆಗಳುವಿದ್ಯಾರ್ಥಿಗಳು ಒಕ್ಕೊರಲಿನಿಂದ ಏನೇ ಗರ್ಜಿಸಿ ಮೆರವಣಿಗೆ ತೆಗೆದರೂ ಅವುಗಳು ಕನ್ನಡದ ಕಿರು ಕಾಲುವೆಗಳಷ್ಟೇ.

ಆಗ ಬಂದವರೇ ಡಾ.ರಾಜ್ ಕುಮಾರ್ಕನ್ನಡ ಕಲಾವಿದರೊಂದಿಗೆ ಊರೂರಿಗೂ ಭೆಟ್ಟಿ ನೀಡಲು ಉದ್ಯುಕ್ತರಾದರುಅವರು ನಾಯಕತ್ವ ತೆಗೆದುಕೊಂಡಾಗಅಧಿಕಾರದಲ್ಲಿದ್ದವರು ಏನು ಮಹಾ ಎಂದು ಮೂಗು ಮುರಿದಿದ್ದರು. ‘ಜನ ಶೀಟಿ ಹೊಡೆದು ಬಿಟ್ಟರೆ ಅವನೊಬ್ಬ ದೊಡ್ಡ ನಾಯಕನಾದುಡ್ಡು ಕಾಸು ಸುರಿದುಲಾರಿ ಬಸ್ಸಲ್ಲಿ ಜನ ಸಂಘಟಿಸಿ ಮೆರವಣಿಗೆ ಮಾಡುವ ಶಕ್ತಿ ಇದೆಯೇನಟರನ್ನು ಕಂಡು ನಾಲ್ಕಾರು ಕಾಲಿ ಪೋಲಿಗಳು ಬಂದು ಶೀಟಿ ಚಪ್ಪಾಳೆ ಹೊಡೆದು ಹೋಗ್ತಾರೆ’ ಅಂತ ಅಧಿಕಾರಸ್ತರು ಉಪೇಕ್ಷೆ ಮಾಡಿದರು.

ಆ ಮೊತ್ತ ಮೊದಲ ದಿನ ಬೆಂಗಳೂರಿನಿಂದ ಬೆಳಿಗ್ಗೆ ಹನ್ನೊಂದು ಗಂಟೆಗೆ ಡಾ.ರಾಜ್ ತಂಡ ಮೈಸೂರಿಗೆ ಬರಬೇಕಿತ್ತುಕಾರ್ಯಕ್ರಮವಾದರೂ ಎಷ್ಟು ಹೊತ್ತಿನದುಕೇವಲ ಅರ್ಧಗಂಟೆಅಲ್ಲಿಂದ ಮುಂದೆ ನಂಜನಗೂಡಿಗೆ ತೆರಳಲಿತ್ತುರಾಜ್ಯಾದ್ಯಂತ ಪ್ರವಾಸದ ನಾಂದಿ ಅದುಆದರೆ ಒಂದಿನಿತೂ ಪ್ರಚಾರವಿಲ್ಲಲೌಡ್ ಸ್ಪೀಕರ್ ಗದ್ದಲವಿಲ್ಲಪತ್ರಿಕೆಗಳಂತೂ ಮೂಲೆ ಸಾಲಿನ ಸುದ್ದಿ ಹಾಕಿ ಸುಮ್ಮನಾಗಿದ್ದವುಜನ ಬಂದಾರೆಯೇ ಮೈದಾನ ತುಂಬಬಲ್ಲದೇ?

ಆ ದಿನ ಮಧ್ಯಾಹ್ನ ಡಾ.ರಾಜ್ ನೇತೃತ್ವದಲ್ಲಿ ವಿಷ್ಣು ಮೊದಲಾಗಿ ಲೋಕೇಶ್ದ್ವಾರಕೀಶ್ ತನಕ ಕಲಾವಿದರ ದಂಡೇ ಬಸ್ಸಿನಲ್ಲಿ ಬಂದಿತುಎರಡು ಮೈಕ್ ಬಿಟ್ಟರೆ ವೇದಿಕೆಯೂ ಇಲ್ಲಎಲ್ಲರೂ ಟೌನ್‌ಹಾಲ್ ಮೇಲ್ಭಾಗದ ಕಾರಿಡಾರಿಗೆ ದಡದಡ ಹತ್ತಿದರುಅದೆಲ್ಲಿದ್ದರೋ ಜನ ಧಗಧಗ ನುಗ್ಗಿ ಬಂದರುನೋಡ ನೋಡುತ್ತಿದ್ದಂತೆ ಸಾವಿರಾರು ಜನರಿಂದ ಗಿಜಿಗುಟ್ಟಿತು.

ನಮ್ಮ ನೆಚ್ಚಿನ ರಾಜಣ್ಣನೇ ಮುಂದಿನ ಮುಖ್ಯಮಂತ್ರಿಅವರ ನೇತೃತ್ವದಲ್ಲಿ ನಾವೆಲ್ಲರೂ ಬಂದಿದ್ದೇವೆ’ ಎಂದು ನಟ ದ್ವಾರಕೀಶ್ ಘೋಷಿಸಿಯೇ ಬಿಟ್ಟರು. ಧಿರೇಂದ್ರ ಗೋಪಾಲ್ ಥೇಟ್ ಗುಂಡೂರಾಯರಂತೆಯೇ ಮಾತಾಡಿದರುಹೀಗೆ ಒಬ್ಬೊಬ್ಬ ನಟನಟಿಯರ ಮಾತೂ ಒಂದೊಂದು ಬಗೆಯ ವೀರಾವೇಶದಲ್ಲಿ ಮುಗಿಯಿತುಒಬ್ಬೊಬ್ಬರಿಗೂ ಜೋರು ಚಪ್ಪಾಳೆ ತಟ್ಟುತ್ತಿದ್ದ ಜನ ತಾಳ್ಮೆಯಿಂದಕುತೂಹಲದಿಂದ ಮುಂದಿನ ಮಾತಿಗಾಗಿ ಕಾದು ನಿಂತಿದ್ದರು.

ಇನ್ನೇನು ಡಾ.ರಾಜ್ ಮಾತನಾಡಲಿದ್ದಾರೆ ಎಂಬ ಸೂಚನೆ ವೈರ್‌ಲೆಸ್‌ನಲ್ಲಿ ಬಂತುಅದಾದರೆ ಸಭೆಯೇ ಬರಕಾಸ್ತುಡಾ.ರಾಜ್ ಮೈಕ್‌ನ ಮುಂದೆ ನಿಂತರುಕಲರವವಿದ್ದ ಇಡೀ ಜನಸಾಗರ ಫಕ್ಕನೇ ಶಾಂತವಾಯಿತುಇಂತಹ ಶಾಂತ ನೀರವತೆಯೇ ಪೊಲೀಸರಿಗೆ ಡೇಂಜರಸ್!

ಡಾ.ರಾಜ್ ಒಂದೆರಡು ನಿಮಿಷ ಏನೂ ಮಾತಾಡಲಿಲ್ಲಮೈಕನ್ನು ಗಟ್ಟಿಯಾಗಿ ಹಿಡಿದು ನಿಂತರುಏನು ಮಾತಾಡುತ್ತಾರೋಜನರೂ ಕಾತರರಾಗಿ ಕಾಯುತ್ತಿದ್ದರುಮೌನದ ನಂತರ ನಿಧಾನವಾಗಿ ಗದ್ಗದ ದನಿಯಲ್ಲಿ ರಾಜ್ ಮಾತು ಶುರುವಾಯಿತು. ‘ನಮ್ಮನ್ನೆಲ್ಲ ಸಾಕಿ ಬೆಳೆಸಿದ ನಮ್ಮ ಕನ್ನಡ ತಾಯಿ… ತನ್ನ ನೆಲದಲ್ಲೇ ಈವತ್ತು ಅನಾಥಳಾಗಿ…’ ಮುಂದಿನ ಮಾತಾಡಲಾಗದೇ ಬಿಕ್ಕಳಿಸುತ್ತಾ, ‘ನನ್ನ ತಾಯಿ ತನ್ನ ಈ ನೆಲದಲ್ಲೇ ತಬ್ಬಲಿಯಾಗಿದ್ದಾಳೆ…’ ಗಂಟಲುಬ್ಬಿ ಕಣ್ಣೀರು ಮಿಡಿದರು.

ಅಷ್ಟೇ ಸಾಕಾಯ್ತುನೆರೆದ ಜನರ ಕಣ್ಣಲ್ಲಿ ಝಿಲ್ಲನೆ ನೀರು ಹರಿಯಿತುನಮ್ಮ ಕಣ್ಣುಗಳೂ ಹನಿದವುಆವತ್ತಿನ ಸನ್ನಿವೇಶದ ವಿಹಂಗಮತೆ ಈ ಲೇಖನ ಓದುತ್ತಿರುವ ಅನೇಕರಿಗಾದರೂ ನೆನಪಿರಲೇಬೇಕುಯಾವುದೇ ವ್ಯಕ್ತಿಯೊಬ್ಬ ಮಾತನ್ನೇ ಪೂರ್ಣವಾಗಿ ಆಡದೆ ಜನಸಮುದ್ರದ ಕಣ್ಣೀರು ಮಿಡಿಸಿದ್ದನ್ನು ನಾನೆಂದೂ ನೋಡಿರಲಿಲ್ಲಇಂದಿಗೂ ನೋಡಿಲ್ಲ.

ಆ ಜನರೋಎಲ್ಲೆಲ್ಲಿಂದಲೋ ಹೇಗೋ ಬಂದು ಸಭೆಗೆ ಸೇರಿಕೊಂಡಿದ್ದವರುಊಟದ ಸಮಯ ಮೀರಿತ್ತುರಾಜ್‌ಗೆ ಮುನ್ನ ಮಾತಾಡಿದ ನಟ ನಟಿಯರದೆಲ್ಲವೂ ನಾನಾ ಬಗೆಯ ತಾಲಿ-ಬಜಾವ್ ಆರ್ಭಟದ ಮಾತುಗಳುಕನ್ನಡ ಚಳವಳಿಯ ಅಂಶವೇ ಅಲ್ಲಿ ಹರಳು ಗಟ್ಟಿರಲಿಲ್ಲಇಡೀ ಜನಜಂಗುಳಿಯ ಮನೋಭಾವವೇ ಬೇರೆ ಮೂಡ್‌ನಲ್ಲಿತ್ತುಅದು ಹೇಗೆ ರಾಜ್‌ರ ನಾಲ್ಕಾರು ಅರ್ಧಂಬರ್ಧ ಮಾತುಗಳು ಕಣ್ಣೀರು ಚಿಮ್ಮಿಸಿದವು ಎಂಬುದು ಈಗಲೂ ಅರ್ಥವಾಗದ ಯಕ್ಷ ವಿಸ್ಮಯ.

ಡಾ.ರಾಜ್ ಅವರ ತಾದಾತ್ಮ್ಯತೆ ಯಾವಾಗಲೂ ವಿಸ್ಮಯಕಾರಿಅವರ ಹತ್ತಾರು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಹತ್ತಿರದಿಂದ ಗಮನಿಸಿದ್ದೆಒಂದೆರಡು ಸಂಗೀತ ಸಂಜೆಗಳ ಉದ್ಘೋಷಕನಾಗಿಯೂ ಕಾರ್ಯನಿರ್ವಹಿಸಿದ್ದೆಅವರೆಂದೂ ಗೀತೆಗಳನ್ನು ನೋಡಿಕೊಂಡು ಹಾಡುತ್ತಿರಲಿಲ್ಲ ಅಥವಾ ಬರೆದಿರುವ ಗೀತೆಗಳ ಮೇಲೆ ಎಲ್ಲೆಲ್ಲಿ ಉಸಿರೆಳೆದುಕೊಳ್ಳಬೇಕುಏರಿಳಿತಗಳ ಗತಿ ಹೇಗೆ ಸಾಗಬೇಕು ಎಂಬುದನ್ನೂ ಗುರ್ತು ಹಾಕಿಕೊಳ್ಳುತ್ತಿರಲಿಲ್ಲಮೈಕ್ ಹಿಡಿದರೆಂದರೆ ಮುಗಿಯಿತುರೆಕಾರ್ಡೆಡ್ ನೆನಪು ಅವರದುಮೂಲ ಗೀತೆಯ ಅದೇ ಪಿಚ್ಅದೇ ರಾಗಅದೇ ಧಾಟಿ ಪಡೆ ಮೂಡುತ್ತಿತ್ತುಸಹ ಗಾಯಕಿಯರೇನಾದರೂ ತಪ್ಪಿದರೂ ಅದನ್ನು ತಾವೂ ಜೊತೆ ಜೊತೆಯಲ್ಲೇ ಹಾಡುತ್ತಾ ಸರಿದೂಗಿಸಿಬಿಡುತ್ತಿದ್ದರುಎಲ್ಲಿ ಲೋಪವಾಗಿತ್ತು ಅಂತಲೇ ಗೊತ್ತಾಗುತ್ತಿರಲಿಲ್ಲ.

ಕಾರ್ಗಿಲ್ ನಿಧಿ ಸಂಗ್ರಹಣೆ ಮತ್ತು ಶಕ್ತಿಧಾಮದ ಸಂಗೀತ ಸಂಜೆಗಳ ಉದ್ಘೋಷಕ (compererನಾನಾಗಿದ್ದೆಹಾಡುವ ಮೊದಲು ರಂಗದ ಹಿಂದೆ ಗೀತೆಯನ್ನು ಯಾವ ರೀತಿ ನೋಡಿ ಸಿದ್ಧತೆ ಮಾಡಿಕೊಳ್ಳುತ್ತಾರೋ ಹೇಗೆ ಎಂದು ಗಮನಿಸುತ್ತಿದ್ದೆಹೊಸ ಹಾಡಿಗೆ ಮೊದಲು ಬಟ್ಟೆ ಬದಲಿಸಿ ತಕ್ಷಣ ಬಂದು ಸೈಡ್ ವಿಂಗಿನಲ್ಲಿ ನಿಂತಿರುತ್ತಿದ್ದರುಆಗಲೂ ಚೀಟಿ ಇತ್ಯಾದಿ ನೋಡಿಕೊಳ್ಳುತ್ತಿರಲಿಲ್ಲಅವರಿಗೆ ಸ್ಟೇಜ್ ಎಂಬುದು ದೈವ ಸಮಾನಮಂಡಿನೋವಿನ ಸಮಸ್ಯೆಯಿದ್ದರೂ ಕುರ್ಚಿಯಲ್ಲಿ ಕೂರುತ್ತಿರಲಿಲ್ಲಓಡಲು ಸಿದ್ಧವಾದ ಕುದುರೆಯ ತವಕ ಅವರಲ್ಲಿತ್ತುಹಾಡಿನ ಶಕ್ತಿಯನ್ನು ಮೈದುಂಬಿಕೊಳ್ಳುವವರಂತೆ ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಿರುತ್ತಿದ್ದರು.

ಕಾರ್ಗಿಲ್ ಯೋಧರಿಗಾಗಿ ನಿಧಿ ಸಂಗ್ರಹಿಸಲುಡಾ.ರಾಜ್ ಅವರ ರಸಮಂಜರಿ ಕಾರ್ಯಕ್ರಮ ಮೈಸೂರಿನ ಕಲಾಮಂದಿರದಲ್ಲಿ ಏರ್ಪಾಡಾಗಿತ್ತುಉದಯ ಟಿವಿಯಲ್ಲಿ ಲೈವ್ ಪ್ರಸಾರನನ್ನದೇ ಕಂಪೀರಿಂಗ್ ನಿರೂಪಣೆರಾಜ್ ಹಾಡುವ ಪ್ರತಿ ಗೀತೆಗೂ ಒಂದೊಂದು ಹಿನ್ನೆಲೆಯ ವಿವರಣೆ ಸಿದ್ಧಪಡಿಸಿಕೊಂಡಿದ್ದೆಅಂದು ಡಾ.ರಾಜ್ ವಿಶೇಷ ಸ್ಛೂರ್ತಿಯಲ್ಲಿದ್ದರುನಟಿ ಜಯಮಾಲ ಮತ್ತು ಜ್ಯೋತಿ ಸಹ ಗಾಯಕಿಯರುಒಂದೊಂದು ಹಾಡೂ ಸೂಪರ್ ಸಕ್ಸಸ್ಮುಂದಿನ ಗೀತೆಯೇ ‘ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು’ಡಾ.ರಾಜ್ ಸೈಡ್ ವಿಂಗಿನಲ್ಲಿ ರೆಡಿಯಾಗಿ ನಿಂತಿದ್ದರುಅನೌನ್ಸ್ ಮಾಡಿದೆ: ‘ಸಂಗೀತದ ದೃಷ್ಟಿಯಿಂದ ನೋಡಿದರೆ ಇದೊಂದು ಸಾಧಾರಣ ಗೀತೆಆದರೆ ಅಸಾಧಾರಣ ಯಶಸ್ಸನ್ನು ಕಾಣುವಂತಾಗಲು ಡಾ.ರಾಜ್ ಹಾಡಿರುವುದು ಮುಖ್ಯ ಕಾರಣಇದೇ ನಮ್ಮ ನಾಡಗೀತೆಯೇನೋ ಎಂಬಷ್ಟು ಪ್ರಸಿದ್ಧಿ ಪಡೆಯುವಂತಾಗಲು ಡಾ.ರಾಜ್ ಅವರ ಸಿರಿ ಕಂಠದ ಮಾಂತ್ರಿಕ ಸ್ಪರ್ಶ ಕಾರಣ…’ ಎಂದೇನೇನೋ ಹೇಳುತ್ತಿದ್ದೆ.

ತೆರೆಯ ಹಿನ್ನೆಲೆಯಲ್ಲಿದ್ದ ಡಾ.ರಾಜ್ ತಕ್ಷಣ ಸ್ಟೇಜಿಗೆ ಧಾವಿಸಿ ಬಂದರುತಮ್ಮ ಹಸ್ತವನ್ನು ಚಾಚಿ ತಡೆಯಿರಿ ತಡೆಯಿರಿ ಎಂಬಂತೆ ಸಂಜ್ಞೆ ಮಾಡಿದರುಮಾತು ನಿಲ್ಲಿಸಿದೆ. ‘ಈ ಗೀತೆಯ ಯಶಸ್ಸಿಗೆ ನಾನೊಬ್ಬನೇ ಕಾರಣ ಅಂದರೆ ದೊಡ್ಮಾತುಅದನ್ನು ಕೂತು ಬರೆದು ರಾಗ ಸಂಯೋಜನೆ ಮಾಡಿದವರು ನಮ್ಮ ಹಂಸಲೇಖ ಅವರುಈ ಹಾಡಿನ ಕೀರ್ತಿ ಅವರಿಗೆ ಸಲ್ಲಬೇಕುಇದುನಾವೆಲ್ಲರೂ ಸೇರಿ ಕಡೆದ ಗೀತೆಇದರ ಯಶಸ್ಸು ಒಬ್ಬ ರಾಜಕುಮಾರನದಲ್ಲಎಲ್ಲರದೂಆ ಹಾಡಿನ ಕೀರ್ತಿ ನಮ್ಮೆಲ್ಲರದು’ ಎಂದರು.

ಎಷ್ಟೊಂದು ಚೆನ್ನಾಗಿ ಹೇಳಿದರು ಡಾ.ರಾಜ್ನನ್ನ ಮಾತನ್ನು ಅವರು ತಿದ್ದಿದರು ಎಂಬ ಬೇಸರ ನನಗೂ ಆಗಕೂಡದು ಅಷ್ಟು ಚೆನ್ನಾಗಿಕ್ಲುಪ್ತವಾಗಿ ಹೇಳಿದರುಅವರೆಂದೂ ನಾನತ್ವದ ನಾನಾಗಿರಲಿಲ್ಲನಾವು ಆಗಿದ್ದರು!

(ಮುಂದುವರಿಯುವುದು)

andolanait

Recent Posts

ಚಾ.ನಗರ | ಶೆಡ್‌, 4ಸಾವಿರ ಕೋಳಿ ಬೆಂಕಿಗಾಹುತಿ ; 25 ಲಕ್ಷ ನಷ್ಟ

ಚಾಮರಾಜನಗರ : ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಳಿ ಫಾರಂ ಶೆಡ್‌ಗೆ ಬೆಂಕಿ ತಗುಲಿ ಸುಮಾರು 4…

9 hours ago

ಸಿಎನ್‌ಜಿ ಸಮಸ್ಯೆ ಇಲ್ಲ : ಸಚಿವ ಮುನಿಯಪ್ಪ

ದಾವಣಗೆರೆ : ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ…

9 hours ago

ಬಲಮುರಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಶ್ರೀರಂಗಪಟ್ಟಣ : ಪ್ರವಾಸಕ್ಕೆ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ…

10 hours ago

ದಿನಗೂಲಿ ನೌಕರರಿಗೂ ಆರೋಗ್ಯ ವಿಮಾ ಸೌಲಭ್ಯ

ಬೆಂಗಳೂರು : ಕರ್ನಾಟಕ ಸರ್ಕಾರವು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ…

10 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹೈಕೋರ್ಟ್‌ ಅಸ್ತು

ಬೆಂಗಳೂರು : ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್…

10 hours ago

ಜನಗಣತಿಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿ ; ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ

ಮೈಸೂರು : ಜಿಲ್ಲೆಯಲ್ಲಿ ಏ.16 ರಿಂದ ಮೇ 15ರವರೆಗೆ ನಡೆಯುವ ಜನಗಣತಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜನಗಣತಿಗೂ ಮುನ್ನ ‘ಸ್ವಯಂ…

10 hours ago