ಡಾ.ದುಷ್ಯಂತ್
ವೃದ್ಧರಲ್ಲಿ ಮೂಳೆಗಳ ಸವೆತ (Osteoporosis) ಒಂದು ಗಂಭೀರ ಕಾಯಿಲೆ. ಇದು ಯಾರಿಗೂ ತಿಳಿಯದಂತೆ ಮುಂದುವರಿಯುತ್ತಾ ಒಮ್ಮಿಂದೊಮ್ಮೆಲೇ ಮೂಳೆ ಮುರಿತದಂತಹ ಲಕ್ಷಣದೊಂದಿಗೆ ಕಾಣಿಸಬಹುದು. ಇದು ಒಂದು ವಯೋ ಸಹಜ ರೋಗವಾಗಿದೆ. ನಮ್ಮ ದೇಹದಲ್ಲಿ ಮೂಳೆಗಳು ಸವೆದು , ಹೊಸ ಜೀವಕೋಶಗಳ ಮೂಲಕ ಪುನಃ ಉತ್ಪತ್ತಿ ಆಗುತ್ತಿರುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ವೃದ್ಧರಲ್ಲಿ ಈ ಕಾರ್ಯ ಸರಿಯಾಗಿ ನಡೆಯದೆ ಮೂಳೆಗಳಲ್ಲಿ ಸವೆತ ಉಂಟಾಗುತ್ತದೆ.
ವೃದ್ಧರಲ್ಲಿ ಕೇವಲ ವಯಸ್ಸಿನ ಕಾರಣವಲ್ಲದೆ ಇತರ ಕಾರಣಗಳಿಂದಲೂ ಮೂಳೆ ಸವೆತ ಉಂಟಾಗಬಹುದು. ಮಹಿಳೆಯರಲ್ಲಿ ಇದು ಸಂಭವಿಸುವ ಸಾಧ್ಯತೆ ಹೆಚ್ಚು. ಮಹಿಳೆಯರ ವಯಸ್ಸು ೪೦ ವರ್ಷ ದಾಟುತ್ತಿದ್ದಂತೆ ಅವರಲ್ಲಿ ಈಸ್ಟ್ರೋಜೆನ್ ಹಾರ್ಮೋನ್ (Estrogen) ಕಡಿಮೆಯಾಗುತ್ತದೆ.
ಮೂಳೆಗಳು ಸವೆಯದಂತೆ ಅದರ ಬಲ ಹೆಚ್ಚಿಸಲು ಈಸ್ಟೋಜೆನ್ ಸಹಕಾರಿ. ಅದು ದೇಹದಲ್ಲಿ ಕಡಿಮೆಯಾದಂತೆ ಮೂಳೆಗಳ ಸವೆತವೂ ಹೆಚ್ಚುತ್ತದೆ. ಮೂಳೆಗಳ ಸವೆತಕ್ಕೆ ಮತ್ತೊಂದು ಪ್ರಮುಖ ಕಾರಣ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸಲು ಬೇಕಾದ ಅಂಶಗಳು, ಇವು ನಮಗೆ ಆಹಾರದಿಂದ ದೊರೆಯುತ್ತವೆ.
ವೃದ್ಧರು ಸೇವಿಸುವ ಆಹಾರದಲ್ಲಿ ಇವುಗಳು ಸರಿಯಾದಪ್ರಮಾಣದಲ್ಲಿ ಇಲ್ಲದೆ ಇದ್ದಾಗ, ಮೂಳೆಗಳ ಸವೆತ ಹೆಚ್ಚಾಗುತ್ತದೆ. ನಾವು ದೈಹಿಕ ಚಲನೆ ಮತ್ತು ವ್ಯಾಯಾಮ ಮಾಡದೆ ಇದ್ದರೆ, ಸ್ನಾಯುಗಳು ಬಲಹೀನವಾಗಿ ನಂತರ ಮೂಳೆಗಳ ಸವೆತ ಹೆಚ್ಚಾಗುತ್ತದೆ.
ನಾವು ದೈಹಿಕ ಚಲನೆ ಮತ್ತು ವ್ಯಾಯಾಮ ಮಾಡದೆ ಇದ್ದರೆ, ಸ್ನಾಯುಗಳು ಬಲಹೀನವಾಗಿ ನಂತರ ಮೂಳೆಗಳ ಸವೆತ ಉಂಟಾಗಬಹುದು. ವೃದ್ಧರು ದೀರ್ಘಾವಧಿ ಕಾಯಿಲೆಗಳಾದ ಡಯಾಬಿಟೀಸ್, ರಕ್ತದೊತ್ತಡ, ಆರ್ಥ್ರೈಟಿಸ್ ಇವುಗಳಿಂದ ಬಳಲುತ್ತಿದ್ದರೆ, ಅವರಲ್ಲಿ ಮೂಳೆಗಳ ಸವೆತ ಹೆಚ್ಚು. ಕೀಲು ನೋವಿಗೆ ಕೆಲವೊಮ್ಮೆ ವೃದ್ಧರು ತಪ್ಪು ಮಾಹಿತಿಯಿಂದ ವೈದ್ಯಕೀಯ ಸಲಹೆ ಇಲ್ಲದೆ, ಸ್ಟೀರಾಯ್ಡ್ (ಖಠಿಛ್ಟಿಟಜಿb) ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ, ಇದು ಮೂಳೆಗಳಿಗೆ ಬಹಳ ಅಪಾಯಕಾರಿ. ಸ್ಟೀರಾಯ್ಡ್ ಮಾತ್ರೆ ಹೆಚ್ಚು ಕಾಲ ಬಳಸಿದರೆ, ಮೂಳೆಗಳು ಬೇಗನೆ ಸವೆದು ಮೂಳೆ ಮುರಿತ ಉಂಟಾಗಬಹುದು.
ಮೂಳೆಗಳ ಸವೆತ ಉಂಟಾಗಿದೆಯೇ ಎಂದು ತಿಳಿದುಕೊಳ್ಳಲು, Bone Mineral Density (BMD) ಈ ಪರೀಕ್ಷೆಯನ್ನು ಮಾಡಿಸಬಹುದು. ಇದು ನಮ್ಮ ದೇಹದಲ್ಲಿ ಇರುವ ವಿವಿಧ ಮೂಳೆಗಳ ಸಾಂದ್ರತೆಯನ್ನು ಪರೀಕ್ಷಿಸಿ ವರದಿ ನೀಡುತ್ತದೆ. ಸವೆತ ಉಂಟಾಗಿದ್ದರೆ, ವೈದ್ಯಕೀಯ ಸಲಹೆ ಪಡೆಯಬೇಕು.
ಸವೆತದ ಪ್ರಮಾಣಕ್ಕೆ ತಕ್ಕಂತೆ, ಮಾತ್ರೆ ಅಥವಾ ಚುಚ್ಚು ಮದ್ದು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ವೈದ್ಯರು ವೃದ್ಧರಿಗೆ ಅದರಲ್ಲೂ ಮಹಿಳೆಯರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಇದರಿಂದ ಪೌಷ್ಟಿಕಾಂಶದ ಕೊರತೆ ಕಡಿಮೆಯಾಗಿ ಮೂಳೆಗಳು ಬಲಗೊಳ್ಳಲು ಸಹಾಯವಾಗುತ್ತದೆ.
” ವೃದ್ಧರಲ್ಲಿ ಮೂಳೆ ಮುರಿತ ((Bone fracture) ಇದು ಒಂದು ಗಂಭೀರ ಸಮಸ್ಯೆ. ಮೂಳೆಗಳ ಸವೆತ ಉಂಟಾಗಿದ್ದರೆ ಸಣ್ಣ ಆಘಾತವು ವೃದ್ಧರಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುತ್ತದೆ ಮತ್ತು ಅದರಿಂದ ಗುಣಮುಖರಾ ಗಲೂ ಸಹ ವಿಳಂಬವಾಗುತ್ತದೆ. ಇದರಿಂದಾಗಿ ಇದರ ಬಗ್ಗೆ ಗಮನಹರಿಸಿ ಮೂಳೆಗಳ ಸವೆತವನ್ನು ತಡೆಗಟ್ಟುವುದು ಬಹಳ ಮುಖ್ಯ.”
ಪಟ್ಟಣಂತಿಟ್ಟ: ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ವಾರ್ಷಿಕ ಮಕರ ಜ್ಯೋತಿ ಇಂದು ದರ್ಶನವಾಗಲಿದೆ. ಇಂದು ಸಂಜೆ ಮಕರ ಜ್ಯೋತ…
ನಂಜನಗೂಡು: ನಾಳೆಯಿಂದ ಜನವರಿ.20ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದ್ದು, ಇಂದು ಮಹಾದಾಸೋಹಕ್ಕೆ ಅಧಿಕೃತ ಚಾಲನೆ ದೊರೆಯಿತು. ಮೈಸೂರು ಜಿಲ್ಲೆ ನಂಜನಗೂಡು…
ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಹಣಗಳಿಕೆಗಾಗಿ ಸುಳ್ಳು, ಮೋಸ, ಕೊಲೆ ಸುಲಿಗೆ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿವೆ. ನಿಧಿಗಾಗಿ ವಾಮಾಚಾರ…
ಪ್ರಸ್ತುತ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಅಕಾಲಿಕ ತುಂತುರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು,…
ಪ್ರತಿಯೊಬ್ಬರೂ ಇಷ್ಟಪಡುವ ವಸ್ತುಗಳಲ್ಲಿ ಚಿನ್ನ ಪ್ರಮುಖವಾಗಿದೆ. ಮಧ್ಯಮ ವರ್ಗದ ಜನರು ಪೈಸೆ ಪೈಸೆ ಕೂಡಿಟ್ಟು ಚಿನ್ನ ಖರೀದಿಸುತ್ತಿದ್ದು, ಮದುವೆ ಮೊದಲಾದ…
ಪಂಜುಗಂಗೊಳ್ಳಿ ೭,೫೦೦ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಆಸರೆಯಾದ ಆನಂದ ಶಿಕ್ಷಾ ನಿಕೇತನ ಪಶ್ಚಿಮ ಬಂಗಾಳದ ಮುರ್ಷಿದಾಬಾದಿನ ಶಂಕರಪಾದ ಗ್ರಾಮದ ಒಂಬತ್ತು…