ಎಡಿಟೋರಿಯಲ್

ನಮ್ಮ ‘ಸ್ಟಾರ್ಟ್‌ಅಪ್’ಗಳಲ್ಲಿ ಎಲ್ಲೋ ಏನೋ ತಪ್ಪಾಗುತ್ತಿದೆಯೇ?

ಪ್ರೊ.ಆರ್.ಎಂ.ಚಿಂತಾಮಣಿ

    ಗ ಭಾರತದಲ್ಲಿ 80,000ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್ ಕಂಪೆನಿಗಳಿವೆ ಎಂದು ಒಂದು ಅಂದಾಜಿದೆಇವುಗಳಲ್ಲಿ 100ಕ್ಕೂ ಹೆಚ್ಚು ವೇಗವಾಗಿ ಬೆಳೆದು (ಮೌಲ್ಯವನ್ನು ಹೆಚ್ಚಿಸಿಕೊಂಡುಒಂದು ಬಿಲಿಯನ್ ಡಾಲರ್ (8,000 ಕೋಟಿ ರೂ.)ಗಳಿಗೂ ಹೆಚ್ಚು ಮೌಲ್ಯದ ದೊಡ್ಡ ಕಂಪೆನಿಗಳಾಗಿವೆಉಳಿದಂತೆ ಶೇ.25-30ರಷ್ಟು ತಂತ್ರಜ್ಞಾನವನ್ನು ಉನ್ನತೀಕರಿಸುತ್ತಾ ತಮ್ಮ ಮಿತಿಯಲ್ಲಿ ಸಮರ್ಥವಾಗಿ ಬೆಳೆಯುತ್ತಿರುವುದನ್ನು ಗಮನಿಸಬಹುದುಇನ್ನಿತರ ಶೇ.70ರಷ್ಟು ಸ್ಟಾರ್ಟ್‌ಅಪ್‌ಗಳು ಬಂಡವಾಳದ ಕೊರತೆಯೂ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವುದಾಗಿ ವರದಿಗಳು ಹೇಳುತ್ತವೆಈ ಗುಂಪಿನಲ್ಲಿ ಕೆಲವು ಯುನಿಕಾರ್ನ್‌ಗಳೂ ಸೇರಿದಂತೆ ಸಣ್ಣದೊಡ್ಡ ಸ್ಟಾರ್ಟ್‌ಅಪ್‌ಗಳಿವೆಕೆಲವು ತಪ್ಪು ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿದ್ದುಹೆಸರು ಕೆಡಿಸಿಕೊಂಡಿವೆಬಹಳಷ್ಟು ಈಗಲೋ ಆಗಲೋ ಮುಚ್ಚುವ ಸ್ಥಿತಿಯನ್ನು ತಲುಪಿವೆಇಂಥ ಗಂಭೀರ ಸ್ಥಿತಿಯಿಂದ ಹೊರಬಂದು ಸಮಸ್ಯೆಗಳನ್ನು ನಿವಾರಿಸಿಕೊಂಡುಚೇತರಿಸಿಕೊಂಡು ಮುನ್ನಡೆಯುವ ಸ್ಥಿತಿಗೆ ಮರಳುವುದಾದರೆ ಅದೊಂದು ಪವಾಡವೆಂದೇ ಹೇಳಬೇಕಾಗುತ್ತದೆಸರ್ಕಾರವೇನೋ ಹಲವು ತೆರಿಗೆ ವಿನಾಯಿತಿಗಳು ಮತ್ತು ಇತರೆ ಸವಲತ್ತುಗಳನ್ನು ಒದಗಿಸಿದೆಅವುಗಳನ್ನೆಲ್ಲ ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಈ ಸ್ಟಾಟ್‌ಅಪ್‌ಗಳು ಸಮರ್ಪಕ ವಾಗಿ ಕಾಯ್ದೆ ಪಾಲನೆ ಮಾಡಬೇಕಲ್ಲ.

ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಲು ತಂತ್ರಜ್ಞರ ತಂಡಗಳೇ ಸ್ಥಾಪಿಸಿ ನಡೆಸುತ್ತಿರುವ ಕಂಪೆನಿಗಳಿಗೆ ಸ್ಟಾರ್ಟ್ ಅಪ್‌ಗಳೆಂದು ಕರೆಯಲಾಗುತ್ತದೆಇವು ಆರ್ಥಿಕ ಚಟುವಟಿಕೆಗಳ ಎಲ್ಲ ವಲಯಗಳಲ್ಲೂ ಕಾರ್ಯನಿರ್ವಹಿಸುತ್ತಿವೆಆರಂಭಿಕ ಮತ್ತು ನಂತರ ಅವಶ್ಯಕತೆ ಇದ್ದಾಗ ಇವಕ್ಕೆ ಬಂಡವಾಳವನ್ನು ಒದಗಿಸುವವರು ಜಗತ್ತಿನಾದ್ಯಂತ ವೃತ್ತಿನಿರತ ವೆಂಚರ್ ಕ್ಯಾಪಿಟಲ್ ಫಂಡುಗಳು ಮತ್ತು ಖಾಸಗಿ ಇಕ್ವಿಟಿ ಫಂಡುಗಳಲ್ಲದೆಹೊಸ ಉದ್ಯಮಕ್ಕೆ ಉತ್ತೇಜನ ಕೊಡುವ ಆಸಕ್ತಿಯುಳ್ಳ ಶ್ರೀಮಂತ ಹೂಡಿಕೆದಾರ ವ್ಯಕ್ತಿಗಳು (high networth individuals).

ಈ ಶತಮಾನದ ಆರಂಭದಿಂದಲೇ ಸ್ಟಾರ್ಟ್‌ಅಪ್‌ಗಳು ಹುಟ್ಟಿ ಬೆಳೆಯಲಾರಂಭಿಸಿದವುಕಳೆದ ದಶಕದಲ್ಲಿ ಬೆಳವಣಿಗೆ ತೀವ್ರಗೊಂಡಿತುಅದು ಕೋವಿಡ್-19 ಅವಧಿಯಲ್ಲಿ ಹೆಚ್ಚಿನ ವೇಗ ಪಡೆಯಿತುಈ ಅವಧಿಯಲ್ಲಿ ಬೇರೆ ಕಡೆಗಳಲ್ಲಿ ಅವಕಾಶ ಇಲ್ಲವಾದ್ದರಿಂದಲೋಇಲ್ಲಿ ಬಂಡವಾಳ ಬೇಗ ವೃದ್ಧಿಯಾಗುವ ಸಾಧ್ಯತೆ ಹೆಚ್ಚಾಗಿರುವುದು ಎಂಬ ನಂಬಿಕೆಯಿಂದಲೋ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿತುನಂತರ ಬಂಡವಾಳದ ಒಳಹರಿವು ಕಡಿಮೆಯಾಗುತ್ತಾ ಬಂತು.

ಬಂಡವಾಳದ ಹರಿವು ಕುಸಿತ

ಆರಂಭದಿಂದ 2021ರ ಕೊನೆಯವರೆಗೂ ಸುಮಾರು 250 ಬಿಲಿಯನ್ ಡಾಲರ್‌ನಷ್ಟು ಹೂಡಿಕೆಗಳು (ಬಹುಭಾಗ ವಿದೇಶಿ ಬಂಡವಾಳಈ ಕಂಪೆನಿಗಳಿಗೆ ಹರಿದು ಬಂದಿದ್ದು ಒಂದು ದಾಖಲೆಯೇ ಸರಿ. 2022ರ ಮೊದಲರ್ಧದಲ್ಲಿ ಕೆಲವೇ ಯಶಸ್ವಿ ಸ್ಟಾರ್ಟ್‌ಅಪ್‌ಗಳಿಗೆ 18.3 ಬಿಲಿಯನ್ ಡಾಲರ್ ಬಂದಿದ್ದು ನಂತರ ತೀರಾ ಕಡಿಮೆಯಾಗುತ್ತಾ ಬಂತುಇದು ಈ ವರ್ಷ ಜೂನ್‌ವರೆಗೆ ಕೇವಲ 3.5 ಬಿಲಿಯನ್ ಡಾಲರ್‌ಗಳಿಗೆ ಇಳಿದಿದೆಶೇ.80ರಷ್ಟು ಕುಸಿತಇದನ್ನೇ ಹೂಡಿಕೆಯ ಆಕುಂಚನ ಕಾಲ ಎಂದು ಹೇಳುವುದು (investment winter).

ಕಾರಣಗಳು ಹಲವುಬೇರೆ ಕಡೆಗೆ ಲಾಭದಾಯಕ ಮತ್ತು ಮೌಲ್ಯ ವೃದ್ಧಿ ಹೂಡಿಕೆಗಳ ಅವಕಾಶಗಳು ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆನಮ್ಮ ಸ್ಟಾರ್ಟ್‌ಅಪ್‌ಗಳಲ್ಲಿಯ ಲೋಪದೋಷಗಳು ಮಹತ್ವದ ಕಾರಣ ವೆಂದು ಹೇಳಲೇಬೇಕಾಗುತ್ತದೆಹೂಡಿಕೆದಾರರು ಎಷ್ಟು ಉದಾರಿಗಳಾಗಿದ್ದರೂ ತಮ್ಮ ಹಣದ ಸದುಪಯೋಗಭದ್ರತೆ ಮತ್ತು ಲಾಭದಾಯಕತೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆಹಲವು ವರ್ಷಗಳಾದರೂ ನಷ್ಟದಲ್ಲೇ ಮುಂದುವರಿಯುತ್ತಿರುವುದು ಆದರೂ ಇನ್ನೊಂದು ಸುತ್ತಿನ ಹೆಚ್ಚುವರಿ ಬಂಡವಾಳ ಕೇಳುವುದು ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿರಬಹುದುಹಳೆಯ ಪ್ರಸಿದ್ಧ ಕಂಪೆನಿಗಳಾದ ಒ ವೈ ಒನೈಕಾಪೇಟಿಎಂ ಮುಂತಾದ ಮನೆಮಾತಾಗಿರುವ ಕಂಪೆನಿಗಳು ಸಹಿತ ತಮ್ಮ ಹಿಂದಿನ ನಷ್ಟಗಳನ್ನು ತುಂಬಿಕೊಂಡು ಲಾಭದ ಕಡೆಗೆ ಈಗ ಬರುತ್ತೇವೆಇನ್ನೊಂದು ವರ್ಷಕ್ಕೆ ಬರುತ್ತೇವೆ ಎಂದು ಹೇಳುತ್ತಲೇ ಇರುತ್ತವೆ.

ಷೇರುಪೇಟೆಯಲ್ಲಿ ವ್ಯವಹರಿಸಲ್ಪಡುವ ಹಲವು ಸ್ಟಾರ್ಟ್‌ಅಪ್ ಷೇರುಗಳ ಬೆಲೆಗಳನ್ನು ಆರಂಭದ ದಿನ ಮೇಲ್ಮಟ್ಟದಲ್ಲಿ ನಿಗದಿಪಡಿಸಲಾಗಿತ್ತುಆದರೆ ಪೇಟೆಯಲ್ಲಿ ಅಂದಿನ ಬೆಲೆಗಿಂತ ತೀರಾ ಕೆಳಗೆ ಕುಸಿಯುವುದುಸ್ವಲ್ಪ ಮೇಲೆ ಬರುವುದುಮತ್ತೆ ಕುಸಿಯುವುದು ಹೀಗೆ ಏರುಪೇರುಗಳು ಹೆಚ್ಚಾಗಿರುವುದು ಕಂಡುಬಂದಿದೆಇದರಿಂದ ಹೂಡಿಕೆದಾರರು ತಮ್ಮ ಹೂಡಿಕೆಗಳ ಮೌಲ್ಯ ಗಳನ್ನು ಲೆಕ್ಕ ಹಾಕುವುದೇ ಕಷ್ಟವಾಗುತ್ತಿದೆಹೀಗಾಗಿ ಕೆಲವು ದೊಡ್ಡ ಹೂಡಿಕೆದಾರರು ತಮ್ಮ ಹೂಡಿಕೆಗಳ ಮೌಲ್ಯಗಳನ್ನು ಅರ್ಧಕ್ಕೆ ಇಳಿಸಿಕೊಂಡಿರುವುದು ವರದಿಯಾಗಿದೆ.

ಸ್ಟಾರ್ಟ್‌ಅಪ್‌ಗಳಿಂದ ಜನಜೀವನಕ್ಕೆ ಅನುಕೂಲವಾಗಿರುವುದು ನಿಜನಗದು ರಹಿತ ವ್ಯವಹಾರಗಳು ಹೆಚ್ಚಾಗಿವೆಮನೆಯಲ್ಲೇ ಕುಳಿತು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದುಆಡಳಿತನೈತಿಕತೆ ಹೆಚ್ಚಬೇಕಷ್ಟೆ.

ಆಡಳಿತ ಮತ್ತು ನೈತಿಕ ಸವಾಲುಗಳು

ನಮ್ಮಲ್ಲಿಯ ಅನೇಕ ಸ್ಟಾರ್ಟ್‌ಅಪ್‌ಗಳು ಅಮೆರಿಕದ ಕಂಪೆನಿಗಳ ನಕಲುಗಳು ಎಂದು ಹೇಳಲಾಗುತ್ತದೆತಂತ್ರಜ್ಞಾನದಲ್ಲಿ ನಿರಂತರ ನಾವೀನ್ಯತೆ ಮತ್ತು ಸ್ವಂತಿಕೆ ಮುಖ್ಯಅವುಗಳಿಲ್ಲದಿದ್ದರೆ ಯಶಸ್ಸು ಕಷ್ಟಸಂಶೋಧನೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ (ಮಾನವ ಬಂಡವಾಳದಲ್ಲಿಹೆಚ್ಚು ಹೂಡಿಕೆ ಮಾಡಿದರೆ ಅದು ದೀರ್ಘಾವಽಯಲ್ಲಿ ಫಲ ಕೊಡುತ್ತದೆ.

ಸ್ಟಾರ್ಟ್‌ಅಪ್‌ಗಳಲ್ಲಿ ಗಿಗ್ ವರ್ಕರ್ಸ್ ಸೇರಿ ಹಲವು ಕಂಪೆನಿಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಲಾಗಿದೆಆದರೆ ಬಂಡವಾಳದ ಒಳಹರಿವು ಕಡಿಮೆಯಾದ ನಂತರ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇದ್ದ ನಗದು ರಕ್ಷಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ತೆಗೆಯಲಾಗುತ್ತದೆಈ ಆರು ತಿಂಗಳಲ್ಲೇ 70ಕ್ಕೂ ಹೆಚ್ಚು ಸಣ್ಣದೊಡ್ಡ ಸ್ಟಾರ್ಟ್‌ಅಪ್‌ಗಳಲ್ಲಿ 17,000ಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆಅವರಲ್ಲಿ ತಂತ್ರಜ್ಞಾನ ಪರಿಣತರೇ ಹೆಚ್ಚುಬೈಜೂಸ್ ಸೇರಿ ಎಜ್ಯುಟೆಕ್ ಕಂಪೆನಿಗಳಲ್ಲಿಯೇ ಇದು ಹೆಚ್ಚುಇದು ಒಂದು ರೋಗದಂತೆ ಹರಡುತ್ತಿದೆ.

ನಾಯಕತ್ವ ವಹಿಸಿಕೊಂಡವರ ಒರಟುತನಸರ್ವಾಧಿಕಾರ ಮನೋಭಾವ ಮತ್ತು ಸ್ವಾರ್ಥಗಳು ಕಂಪೆನಿಗಳು ಹಿನ್ನಡೆ ಕಾಣಲು ಕಾರಣವಾಗಿವೆಭಾರತ ಪೇ ಕಂಪೆನಿಯ ಅಶನೀರ ಗ್ರೋವರ ಅವ್ಯವಹಾರಗಳು ಜನಜನಿತವಾಗಿವೆಬೈಜೂಸ್‌ನ ರವೀಂದ್ರನ್ ಇಂಥ ನಡೆಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆಸ್ಥಾಪಕ ತಂಡಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆಇದರಿಂದ ನಿರ್ದೇಶಕರುಸ್ವತಂತ್ರ ನಿರ್ದೇಶಕರು ಮತ್ತು ಆಡಿಟರ್‌ಗಳು ಹೊರ ಹೋಗುತ್ತಿರುವ ಪ್ರಸಂಗಗಳು ಸರ್ವೇಸಾಮಾನ್ಯವಾಗಿವೆ.

ಕಂಪೆನಿಯ ನೈತಿಕ ಆಡಳಿತ (corporate governanceವಿಷಯದಲ್ಲಿ ಸ್ಟಾರ್ಟ್‌ಅಪ್‌ಗಳಲ್ಲಿ ಲೋಪದೋಷಗಳು ಕಂಡುಬರುತ್ತವೆಸರಿಪಡಿಸಲು ಸಲಹೆಕೊಟ್ಟ ಪರಿಣತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದನ್ನೂ ಇಲ್ಲಿ ಗಮನಿಸಬಹುದುಇನ್ನೂ ಹಲವು ಸರಿಪಡಿಸಬೇಕಾದ ದೋಷಗಳಿವೆ.

ತಂತ್ರಜ್ಞಾನ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವುದರಿಂದ ನಮ್ಮ ಸ್ಟಾರ್ಟ್‌ಅಪ್‌ಗಳು ಇದೆಲ್ಲ ಗೊಂದಲ ಗಳಿಂದ ಹೊರಬಂದು ಬೆಳೆಯಲೇಬೇಕಾದ ಅನಿವಾರ್ಯತೆಯಿದೆ.

 

ಒಂದು ಮಾತುಯಾವುದೇ ಉದ್ದಿಮೆ ವ್ಯವಹಾರದಲ್ಲಿವಿಶೇಷವಾಗಿ ತಂತ್ರಜ್ಞಾನ ಕಂಪೆನಿಗಳಲ್ಲಿ ತಂಡ ಪ್ರಜ್ಞೆ ಮತ್ತು ಒಮ್ಮತದ ನಿರ್ಧಾರ (team workಮುಖ್ಯನಾಯಕನಾದವನಿಗೆ ಇತರರ ಮನಸ್ಸಿನಲ್ಲ್ಲಿ ಇರುವುದನ್ನು ಅರಿಯುವ (empathyಸಾಮರ್ಥ್ಯವಿರಬೇಕುಎಲ್ಲರ ಅಭಿಪ್ರಾಯ ಕೇಳುವ ತಾಳ್ಮೆ ಇರಬೇಕುಇದು ಯಶಸ್ಸಿನ ರಾಜಮಾರ್ಗ.

andolanait

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

33 mins ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

53 mins ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

1 hour ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

1 hour ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

1 hour ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

2 hours ago