ಎಡಿಟೋರಿಯಲ್

ಗರ್ಗೇಶ್ವರಿಯಲ್ಲಿ ಪುರಾತನ ಗಾರ್ಗೇಶ್ವರ ದೇವಾಲಯ

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ಪಾರ್ವತಿ ಸಮೇತ ಗಾರ್ಗೇಶ್ವರ ದೇವಸ್ಥಾನ ಈ ಭಾಗದ ಜನರ ಶ್ರದ್ಧಾ, ನಂಬಿಕೆಯ ಕೇಂದ್ರವಾಗಿದೆ. ಗರ್ಗೇಶ್ವರಿ ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಈ ದೇವಸ್ಥಾನದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ.

ಶ್ರೀ ಗಾರ್ಗ್ಯರು ತಪವನ್ನು ಆಚರಿಸಲು ವಿಘ್ನೇಶ್ವರನನ್ನು ಪ್ರತಿಷ್ಠಾಪಿಸಿದ್ದರು. ಶ್ರೀ ಶಂಕರಾಚಾರ್ಯರು ಪರಕಾಯ ಪ್ರವೇಶ ಮಾಡಿದಾಗ, ಅವರು ಗಣಪತಿಗೆ ಯಂತ್ರವನ್ನು ಹಾಕಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಅಂದಿನಿಂದ ಇದು ಶ್ರೀ ಯಂತ್ರಪ್ರಶ್ನೆ ಮಹಾಗಣಪತಿ ಎಂದು ಪ್ರಸಿದ್ಧಿಯಾಯಿತು.

ದೇವಸ್ಥಾನದ ಮಹಾದ್ವಾರಕ್ಕೆ ಸೇರಿದಂತೆ ಹನ್ನೆರಡು ಕಂಬಗಳ ಬೃಹತ್ ಮಂಟಪವನ್ನು ಕಟ್ಟಲಾಗಿದೆ. ಹೊರ ಪ್ರಾಕಾರದ ಗೋಡೆಯನ್ನು ೧೫ ಅಡಿಗಳಷ್ಟು ಎತ್ತರವಾಗಿ ನಿರ್ಮಿಸಲಾಗಿದೆ. ದೇವಸ್ಥಾನದ ಎರಡನೇ ಬಾಗಿಲಿನಲ್ಲಿ ಒಂದು ಮಂಟಪ ನಿರ್ಮಿಸಿರುತ್ತಾರೆ. ಈ ಮಂಟಪದಲ್ಲಿ ಅನೇಕ ಭಕ್ತಾದಿಗಳು ಮದುವೆ, ಮುಂಜಿ ಮೊದಲಾದ ಶುಭ ಕಾರ್ಯಗಳನ್ನು ಆಯೋಜಿಸುತ್ತಾರೆ. ಒಳಗಡೆ ನವರಂಗ ಅಂಕಣವನ್ನು ನಿರ್ಮಿಸಲಾಗಿದೆ. ಗಾರ್ಗ್ಯ ಮುನಿ ಧ್ಯಾನ ನಿರತರಾಗಿದ್ದಾಗ ಯವನರಾಜ ದಂಪತಿ ಹಲವಾರು ವರ್ಷ ರಾಜ್ಯಭಾರ ನಡೆಸಿ ಅವಸಾನದ ಕಾಲದಲ್ಲಿ ಶ್ರೀ ಪ್ರಸನ್ನ ಪಾರ್ವತಿ ಸಮೇತ ಗಾರ್ಗೇಶ್ವರಸ್ವಾಮಿ ದೇವಾಲಯದ ಪಾದ ಬಳಿ ಬಂದು ಸೇವೆ ಮಾಡಿದ್ದರು. ಆ ನೆನಪಿಗಾಗಿ ಯವನರಾಜ ದಂಪತಿ ಉತ್ಸವದ ಗುಡಿಯನ್ನು ನಿರ್ಮಿಸಿದರು ಎನ್ನಲಾಗಿದೆ.

ನಂತರ ಆ ಗುಡಿಯ ಇನ್ನುಳಿದ ಕಟ್ಟಡದ ಭಾಗವನ್ನು ಪಾಳೇಗಾರರು ಮುಖಾಶುರ ಪಟ್ಟಣವನ್ನು ಸೂರೆ ಮಾಡಿದ ಬಳಿಕ ನಿರ್ಮಿಸಿದರು ಎಂದು ಹೇಳಲಾಗಿದೆ. ಪಾಳೇಗಾರರು ಸೈನ್ಯದಿಂದ ಗೆದ್ದು ಹಿಂದಿರುಗಿ ಬರುವಾಗ ಅದೇ ಸೈನ್ಯದಿಂದ ಶ್ರೀ ಪಾರ್ವತಿ ಪರಮೇಶ್ವರ ಅಥವಾ ಅರ್ಧನಾರೀಶ್ವರ ಆಕಾರದಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದಾರೆ. ದೇವಸ್ಥಾನದ ಮಹಾದ್ವಾರದಲ್ಲಿ ಅರ್ಧಚಂದ್ರ ಮತ್ತು ಯವನರಿಬ್ಬರು ನಮಾಜು ಮಾಡುವ ಚಿಹ್ನೆಯನ್ನು, ಹೆಬ್ಬಾಗಿಲಿಗೆ ಸೇರಿದಂತೆ ಕಮಲದ ಚಿಹ್ನೆಯನ್ನು ಮತ್ತು ಬಳ್ಳಿಯನ್ನು ಸರಪಣಿ ಆಕಾರದಲ್ಲಿ ರಚಿಸಲಾಗಿದೆ.

ಗರ್ಭಗುಡಿಯ ಹಿಂಭಾಗದಲ್ಲಿ ಪಶ್ಚಿಮದ ಗೋಡೆಯಲ್ಲಿ ಮಯೂರ ಚಿತ್ರ ರಚಿಸಿದ್ದರೆ, ಒಳಭಾಗದ ಗೋಡೆಯಲ್ಲಿ ಆಂಜನೇಯ ಚಿತ್ರವನ್ನು ಬಿಡಿಸಲಾಗಿದೆ. ಪ್ರತಿವರ್ಷದ ಮಹಾಶಿವರಾತ್ರಿ ದಿನದಂದು ಈ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಪೂಜೆ ನಡೆಯುತ್ತದೆ

ಗಣಪತಿ ಎತ್ತಲು ಕಾಣಿಕೆ: ಮನಸ್ಸಿನಲ್ಲಿ ಹೊತ್ತ ಹರಕೆ ಈಡೇರಲಿದೆಯೋ, ಇಲ್ಲವೋ ಎನ್ನುವುದನ್ನು ತಿಳಿಯಲು ೫೦ ರೂ. ಕಾಣಿಕೆ ಕೊಟ್ಟು ಗಣಪತಿ ಮೂರ್ತಿಯನ್ನು ಎತ್ತಬಹುದಾಗಿದೆ. ಇಷ್ಟಾರ್ಥಸಿದ್ಧಿ ನೆರವೇರಿದರೆ ಸುಲಭವಾಗಿ ಗಣಪತಿ ಎತ್ತಬಹುದು ಎಂಬ ಪ್ರತೀತಿ ಇದೆ

ಕ್ಷೇತ್ರಕ್ಕೆ ಹೋಗುವುದು ಹೇಗೆ?:  ಮೈಸೂರಿನಿಂದ ಗರ್ಗೇಶ್ವರಿ ಕ್ಷೇತ್ರಕ್ಕೆ ತೆರಳಲು ೨೬ ಕಿ.ಮೀ. ಪ್ರಯಾಣಿಸಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಖಾಸಗಿ ಬಸ್‌ಗಳ ಸೌಕರ್ಯ ಇದೆ. ಖಾಸಗಿ ಬಸ್ಸಿನಲ್ಲಿ ಗರ್ಗೇಶ್ವರಿಗೆ ತಲುಪಬಹುದು. ನಂಜನಗೂಡಿನಿಂದ ೩೦ ಕಿ. ಮೀ., ಕೊಳ್ಳೇಗಾಲದಿಂದ ೩೦ ಕಿ.ಮೀ., ಚಾಮರಾಜನಗರದಿಂದ ೩೨ಕಿ.ಮೀ. ಬೆಂಗಳೂರಿನಿಂದ ೧೪೦ ಕಿ.ಮೀ., ತಿ.ನರಸೀಪುರದಿಂದ ಗರ್ಗೇಶ್ವರಿಗೆ ಮೂರು ಕಿ.ಮೀ. ತಿರುಮಕೂಡಲು ಕ್ಷೇತ್ರದಿಂದ ೧.೫.ಕಿ.ಮೀ., ತಲಕಾಡಿನಿಂದ ೩೦ ಕಿ.ಮೀ. ಆಗುತ್ತದೆ.

ಆಂದೋಲನ ಡೆಸ್ಕ್

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

3 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

5 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

6 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

8 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

14 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

20 hours ago