ಎಡಿಟೋರಿಯಲ್

ಅನಾಥಳಾದರೂ ಬದುಕು ಕಟ್ಟಿಕೊಂಡು ಡಾಕ್ಟರಾಗುತ್ತಿರುವ ಶಬನಾ

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಎನ್‌ಇಇಟಿ ಪರೀಕ್ಷೆಯಲ್ಲಿ ಪಾಸಾಗಿ, ಔರಂಗಾಬಾದಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಪಡೆದಳು
ಪಂಜುಗಂಗೊಳ್ಳಿ

ಶಬನಾ ಎರಡು ವರ್ಷಗಳ ಹಿಂದೆಯೇ ಎನ್‌ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು. ಆ ಪರೀಕ್ಷೆಯಲ್ಲಿ ಪಾಸಾಗಿದ್ದರೂ ತಾನು ಪಡೆದ ಅಂಕಗಳ ಬಗ್ಗೆ ಅವಳಿಗೆ ತೃಪ್ತಿಯಿಲ್ಲದ ಕಾರಣ ಪುನಃ ಕಳೆದ ವರ್ಷದ ಪರೀಕ್ಷೆಯಲ್ಲಿ ಕುಳಿತುಕೊಂಡಳು. ಈ ಬಾರಿ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಫಲಳಾದಳು. ಮತ್ತು, ಔರಂಗಾಬಾದ್‌ನ ಒಂದು ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಸೀಟು ಕೂಡಾ ಸಿಕ್ಕಿತು. ಶಬನಾ ಶೇಖ್ ಗೆ ತನ್ನ ತಾಯಿ, ತಂದೆ ಅಥವಾ ತನ್ನ ಕುಟುಂಬದ ಯಾವ ನೆನಪೂ ಇಲ್ಲ. ಆಕೆಯ ಹೆತ್ತವರು ಅವಳನ್ನು ಆಸ್ಪತ್ರೆಯ ಬಳಿ ಬಿಟ್ಟು ಅನಾಥಗೊಳಿಸಿ ಹೋದಾಗ ಅವಳಿಗಿನ್ನೂ ನಾಲ್ಕು ವರ್ಷ ಪ್ರಾಯ ಮತ್ತು, ಅವಳ ತಮ್ಮ ಒಂದು ವರ್ಷದ ಹಸುಗೂಸು.

ಹದಿನೆಂಟು ವರ್ಷಗಳ ಹಿಂದೆ, ಮುಂಬೈಯ ಒಂದು ಆಸ್ಪತ್ರೆಯ ಬಳಿ ಹೆತ್ತವರು ಬಿಟ್ಟು ಹೋದ ಕಾರಣ ತನ್ನ ತಮ್ಮನೊಂದಿಗೆ ಅನಾಥಳಾದ ಶಬನಾ ಶೇಖ್ಳನ್ನು ಯಾರೋ ಪುಣ್ಯಾತ್ಮರು ಮುಂಬೈ ಹೊರ ವಲಯದ ಬದ್ಲಾಪುರ ಎಂಬಲ್ಲಿನ ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ಎಂಬ ಬಾಲಾಶ್ರಮಕ್ಕೆ ಸೇರಿಸುತ್ತಾರೆ. ಸಮಾಜ ಸಾಮಾನ್ಯವಾಗಿ ಇಂತಹ ಮಕ್ಕಳ ಬಗ್ಗೆ ಒಂದಷ್ಟು ಕರುಣೆ ತೋರುವುದರ ಹೊರತಾಗಿ ಹೆಚ್ಚೇನೂ ಮಾಡದು. ಆದರೆ, ಸೂಕ್ತ ಪೋಷಣೆ ಸಿಕ್ಕರೆ ಇಂತಹ ಮಕ್ಕಳೂ ಅಸಮಾನ್ಯವಾದುದನ್ನು ಸಾಧಿಸಬಲ್ಲರು ಎನ್ನುವುದನ್ನು ಶಬನಾ ಶೇಖ್ ತೋರಿಸಿಕೊಟ್ಟಿದ್ದಾಳೆ.

ಶಬನಾ ಶೇಖ್ ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ಸೇರಿದ ಪ್ರಾರಂಭದ ದಿನಗಳಲ್ಲಿ ಯಾರೊಂದಿಗೂ ಮಾತಾಡದೆ, ಯಾರೊಂದಿಗೂ ಬೆರೆಯದೆ ತನ್ನಷ್ಟಕ್ಕೆ ತಾನಿರುತ್ತಿದ್ದಳು. ಆದರೆ, ಕಲಿಕೆಯಲ್ಲಿ ಅವಳು ಇತರ ಮಕ್ಕಳಿಗಿಂತ ಯಾವತ್ತೂ ಮುಂದಿರುತ್ತಿದ್ದುದು ಅಲ್ಲಿನ ಸಿಬ್ಬಂದಿಗಳ ಗಮನಕ್ಕೆ ಬರಲು ಹೆಚ್ಚು ದಿನಗಳು ಬೇಕಾಗಲಿಲ್ಲ. ‘ಮುಂದೆ ದೊಡ್ಡವಳಾದ ಮೇಲೆ ನೀನು ಏನಾಗಬೇಕು ಅಂತಿದ್ದಿಯಾ?’ ಎಂದು ಯಾರಾದರೂ ಕೇಳಿದರೆ, ‘ನಾನು ಡಾಕ್ಟರಾಗುತ್ತೇನೆ’ ಅನ್ನುತ್ತಿದ್ದಳು. ಸಹಜವಾಗಿಯೇ ಯಾರೊಬ್ಬರೂ ಅವಳ ಉತ್ತರವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.

ಆದರೆ, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಎನ್‌ಇಇಟಿ (ಘೆಅಐಘೆಅಔ ಉಔಐಎಐಆಐಔಐಖ್ಗ ಇಖಿ ಉಘೆಖ್ಕಅಘೆಇಉ ಉಖ) ಪರೀಕ್ಷೆಯಲ್ಲಿ ಅವಳು ಪಾಸಾಗಿ, ಔರಂಗಾಬಾದಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಪಡೆದಾಗ ಅವರೆಲ್ಲರಿಗೂ ಸಂತೋಷದ ಜೊತೆ ಆಶ್ಚರ್ಯವಾದುದರಲ್ಲಿ ಅಸಹಜವಾದುದೇನೂ ಇಲ್ಲ.

ಶಬನಾಳಿಗೆ ಈಗ ೨೨ ವರ್ಷ ಪ್ರಾಯ. ಕಲಿಕೆಯಲ್ಲಿ ಅವಳಿಗಿರುವ ಆಸಕ್ತಿ ಮತ್ತು ಚುರುಕುತನ ಕಂಡು ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ನ ಟ್ರಸ್ಟಿಗಳು ಅವಳ ಡಾಕ್ಟರಾಗುವ ಕನಸಿಗೆ ಒತ್ತಾಸೆಯಾಗಿ ನಿಂತರು. ಅವಳಿಗೆ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಿಕೊಟ್ಟರು.

ಶಬನಾ ಎರಡು ವರ್ಷಗಳ ಹಿಂದೆಯೇ ಎನ್‌ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು. ಆ ಪರೀಕ್ಷೆಯಲ್ಲಿ ಪಾಸಾಗಿದ್ದರೂ ತಾನು ಪಡೆದ ಅಂಕಗಳ ಬಗ್ಗೆ ಅವಳಿಗೆ ತೃಪ್ತಿಯಿಲ್ಲದ ಕಾರಣ ಪುನಃ ಕಳೆದ ವರ್ಷದ ಪರೀಕ್ಷೆಯಲ್ಲಿ ಕುಳಿತುಕೊಂಡಳು. ಈ ಬಾರಿ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಫಲಳಾದಳು. ಮತ್ತು, ಔರಂಗಾಬಾದ್‌ನ ಒಂದು ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಸೀಟು ಕೂಡಾ ಸಿಕ್ಕಿತು.

ಶಬನಾ ಶೇಖ್ ಗೆ ತನ್ನ ತಾಯಿ, ತಂದೆ ಅಥವಾ ತನ್ನ ಕುಟುಂಬದ ಯಾವ ನೆನಪೂ ಇಲ್ಲ. ಆಕೆಯ ಹೆತ್ತವರು ಅವಳನ್ನು ಆಸ್ಪತ್ರೆಯ ಬಳಿ ಬಿಟ್ಟು ಅನಾಥಗೊಳಿಸಿ ಹೋದಾಗ ಅವಳಿಗಿನ್ನೂ ನಾಲ್ಕು ವರ್ಷ ಪ್ರಾಯ ಮತ್ತು, ಅವಳ ತಮ್ಮ ಒಂದು ವರ್ಷದ ಹಸುಗೂಸು.

‘ನನ್ನನ್ನು ಮತ್ತು ನನ್ನ ತಮ್ಮನನ್ನು ಬೀದಿ ಪಾಲು ಮಾಡಿದ ನನ್ನ ಹೆತ್ತವರು ಯಾರೆಂಬುದು ನನಗೆ ತಿಳಿದಿಲ್ಲ. ನನ್ನ ಆ ಹಿಂದಿನ ಪರಿಸ್ಥಿತಿಯನ್ನು ನೆನೆಯುತ್ತ ನನ್ನ ಬಗ್ಗೆ ನಾನೇ ಕನಿಕರ ಪಡುತ್ತ ಕುಳಿತುಕೊಳ್ಳುವುದರ ಬದಲಿಗೆ ನನಗೊಂದು ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳುವುದರ ಬಗ್ಗೆ ನನ್ನ ಗಮನವನ್ನು ಕೇಂದ್ರೀಕರಿಸತೊಡಗಿದೆ. ನನ್ನ ಈ ಪ್ರಯತ್ನಕ್ಕೆ ನನ್ನ ಮನೆಯೇ ಆಗಿರುವ ಈ ಬಾಲಾಶ್ರಮ ಉದ್ದಕ್ಕೂ ನನ್ನ ಬೆಂಬಲಕ್ಕೆ ನಿಂತಿತು. ಆಶ್ರಮದ ನನ್ನ ಗೆಳತಿಯರು ನನ್ನ ಬಗ್ಗೆ ಬರೀ ಹೆಮ್ಮೆ ಪಟ್ಟುಕೊಳ್ಳುವುದು ಮಾತ್ರವಲ್ಲ, ನನ್ನ ದಿನನಿತ್ಯದ ಕೆಲಸಗಳನ್ನು ಅವರು ವಹಿಸಿಕೊಂಡು ನನಗೆ ಓದಲು ಹೆಚ್ಚು ಸಮಯ ಸಿಗುವಂತೆ ನೋಡಿಕೊಂಡರು. ಅವರ ಈ ಸಹಾಯದಿಂದಾಗಿಯೇ ನನಗೆ ದಿನಾಲು ಎಂಟು-ಹತ್ತು ಗಂಟೆಗಳ ಕಾಲ ಓದಲು ಸಾಧ್ಯವಾಗಿ, ಒಳ್ಳೆಯ ಅಂಕಗಳನ್ನು ಪಡೆದೆ’ ಎನ್ನುವ ಶಬನಾಳಿಗೆ ಸಂಗೀತ ಅಚ್ಚುಮೆಚ್ಚಿನ ಹವ್ಯಾಸ. ಮುಂದೆ ಗೈನಾಕಾಲಾಜಿಸ್ಟ್ ಆಗಿ ತನ್ನಂತೆಯೇ ನಿರಾಶ್ರಿತರು, ದುರ್ಬಲ ಜನಗಳ ಸೇವೆ ಮಾಡುವುದು ತನ್ನ ಮುಖ್ಯ ಗುರಿ ಎನ್ನುತ್ತಾಳೆ.

andolana

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

5 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

5 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

16 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

16 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

16 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

16 hours ago