ಶಬನಾ ಎರಡು ವರ್ಷಗಳ ಹಿಂದೆಯೇ ಎನ್ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು. ಆ ಪರೀಕ್ಷೆಯಲ್ಲಿ ಪಾಸಾಗಿದ್ದರೂ ತಾನು ಪಡೆದ ಅಂಕಗಳ ಬಗ್ಗೆ ಅವಳಿಗೆ ತೃಪ್ತಿಯಿಲ್ಲದ ಕಾರಣ ಪುನಃ ಕಳೆದ ವರ್ಷದ ಪರೀಕ್ಷೆಯಲ್ಲಿ ಕುಳಿತುಕೊಂಡಳು. ಈ ಬಾರಿ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಫಲಳಾದಳು. ಮತ್ತು, ಔರಂಗಾಬಾದ್ನ ಒಂದು ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಸೀಟು ಕೂಡಾ ಸಿಕ್ಕಿತು. ಶಬನಾ ಶೇಖ್ ಗೆ ತನ್ನ ತಾಯಿ, ತಂದೆ ಅಥವಾ ತನ್ನ ಕುಟುಂಬದ ಯಾವ ನೆನಪೂ ಇಲ್ಲ. ಆಕೆಯ ಹೆತ್ತವರು ಅವಳನ್ನು ಆಸ್ಪತ್ರೆಯ ಬಳಿ ಬಿಟ್ಟು ಅನಾಥಗೊಳಿಸಿ ಹೋದಾಗ ಅವಳಿಗಿನ್ನೂ ನಾಲ್ಕು ವರ್ಷ ಪ್ರಾಯ ಮತ್ತು, ಅವಳ ತಮ್ಮ ಒಂದು ವರ್ಷದ ಹಸುಗೂಸು.
ಹದಿನೆಂಟು ವರ್ಷಗಳ ಹಿಂದೆ, ಮುಂಬೈಯ ಒಂದು ಆಸ್ಪತ್ರೆಯ ಬಳಿ ಹೆತ್ತವರು ಬಿಟ್ಟು ಹೋದ ಕಾರಣ ತನ್ನ ತಮ್ಮನೊಂದಿಗೆ ಅನಾಥಳಾದ ಶಬನಾ ಶೇಖ್ಳನ್ನು ಯಾರೋ ಪುಣ್ಯಾತ್ಮರು ಮುಂಬೈ ಹೊರ ವಲಯದ ಬದ್ಲಾಪುರ ಎಂಬಲ್ಲಿನ ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ಎಂಬ ಬಾಲಾಶ್ರಮಕ್ಕೆ ಸೇರಿಸುತ್ತಾರೆ. ಸಮಾಜ ಸಾಮಾನ್ಯವಾಗಿ ಇಂತಹ ಮಕ್ಕಳ ಬಗ್ಗೆ ಒಂದಷ್ಟು ಕರುಣೆ ತೋರುವುದರ ಹೊರತಾಗಿ ಹೆಚ್ಚೇನೂ ಮಾಡದು. ಆದರೆ, ಸೂಕ್ತ ಪೋಷಣೆ ಸಿಕ್ಕರೆ ಇಂತಹ ಮಕ್ಕಳೂ ಅಸಮಾನ್ಯವಾದುದನ್ನು ಸಾಧಿಸಬಲ್ಲರು ಎನ್ನುವುದನ್ನು ಶಬನಾ ಶೇಖ್ ತೋರಿಸಿಕೊಟ್ಟಿದ್ದಾಳೆ.
ಶಬನಾ ಶೇಖ್ ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ಸೇರಿದ ಪ್ರಾರಂಭದ ದಿನಗಳಲ್ಲಿ ಯಾರೊಂದಿಗೂ ಮಾತಾಡದೆ, ಯಾರೊಂದಿಗೂ ಬೆರೆಯದೆ ತನ್ನಷ್ಟಕ್ಕೆ ತಾನಿರುತ್ತಿದ್ದಳು. ಆದರೆ, ಕಲಿಕೆಯಲ್ಲಿ ಅವಳು ಇತರ ಮಕ್ಕಳಿಗಿಂತ ಯಾವತ್ತೂ ಮುಂದಿರುತ್ತಿದ್ದುದು ಅಲ್ಲಿನ ಸಿಬ್ಬಂದಿಗಳ ಗಮನಕ್ಕೆ ಬರಲು ಹೆಚ್ಚು ದಿನಗಳು ಬೇಕಾಗಲಿಲ್ಲ. ‘ಮುಂದೆ ದೊಡ್ಡವಳಾದ ಮೇಲೆ ನೀನು ಏನಾಗಬೇಕು ಅಂತಿದ್ದಿಯಾ?’ ಎಂದು ಯಾರಾದರೂ ಕೇಳಿದರೆ, ‘ನಾನು ಡಾಕ್ಟರಾಗುತ್ತೇನೆ’ ಅನ್ನುತ್ತಿದ್ದಳು. ಸಹಜವಾಗಿಯೇ ಯಾರೊಬ್ಬರೂ ಅವಳ ಉತ್ತರವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.
ಆದರೆ, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಎನ್ಇಇಟಿ (ಘೆಅಐಘೆಅಔ ಉಔಐಎಐಆಐಔಐಖ್ಗ ಇಖಿ ಉಘೆಖ್ಕಅಘೆಇಉ ಉಖ) ಪರೀಕ್ಷೆಯಲ್ಲಿ ಅವಳು ಪಾಸಾಗಿ, ಔರಂಗಾಬಾದಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಪಡೆದಾಗ ಅವರೆಲ್ಲರಿಗೂ ಸಂತೋಷದ ಜೊತೆ ಆಶ್ಚರ್ಯವಾದುದರಲ್ಲಿ ಅಸಹಜವಾದುದೇನೂ ಇಲ್ಲ.
ಶಬನಾಳಿಗೆ ಈಗ ೨೨ ವರ್ಷ ಪ್ರಾಯ. ಕಲಿಕೆಯಲ್ಲಿ ಅವಳಿಗಿರುವ ಆಸಕ್ತಿ ಮತ್ತು ಚುರುಕುತನ ಕಂಡು ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ನ ಟ್ರಸ್ಟಿಗಳು ಅವಳ ಡಾಕ್ಟರಾಗುವ ಕನಸಿಗೆ ಒತ್ತಾಸೆಯಾಗಿ ನಿಂತರು. ಅವಳಿಗೆ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಿಕೊಟ್ಟರು.
ಶಬನಾ ಎರಡು ವರ್ಷಗಳ ಹಿಂದೆಯೇ ಎನ್ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು. ಆ ಪರೀಕ್ಷೆಯಲ್ಲಿ ಪಾಸಾಗಿದ್ದರೂ ತಾನು ಪಡೆದ ಅಂಕಗಳ ಬಗ್ಗೆ ಅವಳಿಗೆ ತೃಪ್ತಿಯಿಲ್ಲದ ಕಾರಣ ಪುನಃ ಕಳೆದ ವರ್ಷದ ಪರೀಕ್ಷೆಯಲ್ಲಿ ಕುಳಿತುಕೊಂಡಳು. ಈ ಬಾರಿ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಫಲಳಾದಳು. ಮತ್ತು, ಔರಂಗಾಬಾದ್ನ ಒಂದು ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಸೀಟು ಕೂಡಾ ಸಿಕ್ಕಿತು.
ಶಬನಾ ಶೇಖ್ ಗೆ ತನ್ನ ತಾಯಿ, ತಂದೆ ಅಥವಾ ತನ್ನ ಕುಟುಂಬದ ಯಾವ ನೆನಪೂ ಇಲ್ಲ. ಆಕೆಯ ಹೆತ್ತವರು ಅವಳನ್ನು ಆಸ್ಪತ್ರೆಯ ಬಳಿ ಬಿಟ್ಟು ಅನಾಥಗೊಳಿಸಿ ಹೋದಾಗ ಅವಳಿಗಿನ್ನೂ ನಾಲ್ಕು ವರ್ಷ ಪ್ರಾಯ ಮತ್ತು, ಅವಳ ತಮ್ಮ ಒಂದು ವರ್ಷದ ಹಸುಗೂಸು.
‘ನನ್ನನ್ನು ಮತ್ತು ನನ್ನ ತಮ್ಮನನ್ನು ಬೀದಿ ಪಾಲು ಮಾಡಿದ ನನ್ನ ಹೆತ್ತವರು ಯಾರೆಂಬುದು ನನಗೆ ತಿಳಿದಿಲ್ಲ. ನನ್ನ ಆ ಹಿಂದಿನ ಪರಿಸ್ಥಿತಿಯನ್ನು ನೆನೆಯುತ್ತ ನನ್ನ ಬಗ್ಗೆ ನಾನೇ ಕನಿಕರ ಪಡುತ್ತ ಕುಳಿತುಕೊಳ್ಳುವುದರ ಬದಲಿಗೆ ನನಗೊಂದು ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳುವುದರ ಬಗ್ಗೆ ನನ್ನ ಗಮನವನ್ನು ಕೇಂದ್ರೀಕರಿಸತೊಡಗಿದೆ. ನನ್ನ ಈ ಪ್ರಯತ್ನಕ್ಕೆ ನನ್ನ ಮನೆಯೇ ಆಗಿರುವ ಈ ಬಾಲಾಶ್ರಮ ಉದ್ದಕ್ಕೂ ನನ್ನ ಬೆಂಬಲಕ್ಕೆ ನಿಂತಿತು. ಆಶ್ರಮದ ನನ್ನ ಗೆಳತಿಯರು ನನ್ನ ಬಗ್ಗೆ ಬರೀ ಹೆಮ್ಮೆ ಪಟ್ಟುಕೊಳ್ಳುವುದು ಮಾತ್ರವಲ್ಲ, ನನ್ನ ದಿನನಿತ್ಯದ ಕೆಲಸಗಳನ್ನು ಅವರು ವಹಿಸಿಕೊಂಡು ನನಗೆ ಓದಲು ಹೆಚ್ಚು ಸಮಯ ಸಿಗುವಂತೆ ನೋಡಿಕೊಂಡರು. ಅವರ ಈ ಸಹಾಯದಿಂದಾಗಿಯೇ ನನಗೆ ದಿನಾಲು ಎಂಟು-ಹತ್ತು ಗಂಟೆಗಳ ಕಾಲ ಓದಲು ಸಾಧ್ಯವಾಗಿ, ಒಳ್ಳೆಯ ಅಂಕಗಳನ್ನು ಪಡೆದೆ’ ಎನ್ನುವ ಶಬನಾಳಿಗೆ ಸಂಗೀತ ಅಚ್ಚುಮೆಚ್ಚಿನ ಹವ್ಯಾಸ. ಮುಂದೆ ಗೈನಾಕಾಲಾಜಿಸ್ಟ್ ಆಗಿ ತನ್ನಂತೆಯೇ ನಿರಾಶ್ರಿತರು, ದುರ್ಬಲ ಜನಗಳ ಸೇವೆ ಮಾಡುವುದು ತನ್ನ ಮುಖ್ಯ ಗುರಿ ಎನ್ನುತ್ತಾಳೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…