ಎಡಿಟೋರಿಯಲ್

ಅಪ್ಪನ ಕೊನೆಯ ದಿನಗಳು

*ರಹಮತ್ ತರೀಕೆರೆ

  ಮ್ಮ ನಿಧನಳಾದ ಬಳಿಕ ಅಪ್ಪನ ಬಾಳು ಸೂತ್ರಹರಿದ ಪಟವಾಯಿತುನಮಗೆ ಅಮ್ಮನ ಜಾಗದಲ್ಲಿ ಮತ್ತೊಬ್ಬ ಮಹಿಳೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಯಿತುಈ ವಿಷಯದಲ್ಲಿ ಅಪ್ಪನಿಗೆ ಬೆಂಬಲ ಸಿಕ್ಕಿದ್ದು ದೊಡ್ಡಕ್ಕನಿಂದ ಮಾತ್ರನಡುಪ್ರಾಯದ ಅಪ್ಪ ಹಾದಿಗೆಡಬಹುದು ಎಂದಾಕೆ ಆಲೋಚಿಸಿರಬೇಕುಆದರೆ ಮರುಮದುವೆ ಅವನ ಸಾರ್ವಜನಿಕ ಸ್ಥಾನವನ್ನು ಕಿಂಚಿತ್ ತಗ್ಗಿಸಿತು. ‘ಬುಡೇ ವಖತ್ ಮೆ ಬುರೀ ಬಲಾ’ ಎಂದು ನಂಟರು ಆಡಿಕೊಂಡರುಮೊದಮೊದಲು ಬಿರುಸಾಗಿದ್ದ ನಾವುನಿಧಾನವಾಗಿ ಚಿಕ್ಕಮ್ಮನಿಗೆ ಹೊಂದಿಕೊಂಡೆವುಮೊದಲ ಗಂಡನಿಂದ ವಿಚ್ಛೇದಿತೆಯಾಗಿ ಸ್ಕಿಜೊಫ್ರೇನಿಯಾದಿಂದ ಬಳಲುತ್ತಿದ್ದ ಆಕೆಗೆ ಹೊಸಬಾಳು ಮತ್ತು ಮಲಮಕ್ಕಳ ಸಮಸ್ಯೆ ಒಟ್ಟಿಗೆ ಸಿಕ್ಕಿದ್ದವುನಮ್ಮ ಕಾಟ ಸಹಿಸಿಕೊಂಡು ಎಲ್ಲರ ಮನವನ್ನು ಆಕೆ ಗೆದ್ದರುಆದರೆ ಕಳೆದುಹೋದ ಸಾಮಾಜಿಕ ಪ್ರತಿಷ್ಠೆ ಹಾಗೂ ಪತ್ನಿಯ ಮಾನಸಿಕ ಕಾಯಿಲೆಯಿಂದ ಅಪ್ಪ ಒಳಗೆ ಕೊರಗುತ್ತಿದ್ದನುಸಣ್ಣತಪ್ಪಿಗೂ ಚಿಕ್ಕಮ್ಮನನ್ನು ದಂಡಿಸುತ್ತಿದ್ದನುಆಕೆಯ ಹೊಟ್ಟೆಯಲ್ಲೊಂದು ಕೂಸು ಕಂಡಿತುಬಾಣಂತನದ ಉಪಚಾರಕ್ಕೆ ಸಣ್ಣಕ್ಕನನ್ನು ಕರೆತರ ಹೋದೆಬಂಧುಗಳು ಮುಖ ವಿಕಾರಿಸಿಕೊಂಡು, ‘ಈ ವಯಸ್ನಾಗೆ ಇವೆಲ್ಲ ಬೇಕಿತ್ತೇನಪ್ಪನಿಮ್ಮವ್ವ ಹೋದಾಗಲೇ ಸಂಬಂಧ ಹರೀತುಬೆಲ್ಲವೇ ಹೋತುಅದರ ಮ್ಯಾಲೆ ಹೊಚ್ಚಿದ ಬಟ್ಟೆದೇನು ಹಂಗು?’ ಎಂದರು.

ಚಿಕ್ಕಮ್ಮ ಬಹಳ ಕಾಲ ಬದುಕಲಿಲ್ಲಅವರಿಲ್ಲವಾದ ಬಳಿಕ ಅಪ್ಪನ ಬಾಳು ಮತ್ತೊಮ್ಮೆ ಹಾಯಿಪಟ ಹರಿದ ನಾವೆಯಾಯಿತುಆ ಹೊತ್ತಿಗೆ ನಾವೆಲ್ಲ ಲಗ್ನವಾಗಿ ನೌಕರಿ ಹಿಡಿದು ಬೇರೆ ಊರುಗಳಲ್ಲಿ ನೆಲೆಸಿದ್ದವುಊರೊಳಗಿನ ಮನೆಯಲ್ಲಿ ಅವನು ಒಂಟಿಯಾದನುಗಂಡುಮಕ್ಕಳ ಮನೆಗೆ ಬರುತ್ತಿದ್ದರೂ ಅವನಿಗೆ ಹೆಣ್ಣುಮಕ್ಕಳ ಮನೆಯೇ ಇಷ್ಟಊರಲ್ಲಿದ್ದ ಅಣ್ಣನ ಜತೆ ಸಂಬಂಧ ಕೆಟ್ಟಿತ್ತುಮಕ್ಕಳಿಂದ ಹಣ ಪಡೆಯುವುದಕ್ಕೆ ಅಭಿಮಾನ ಅಡ್ಡಬರುತ್ತಿತ್ತುಬಂದ ದಿನ ಲವಲವಿಕೆಯಿಂದ ಇರುತ್ತಿದ್ದ ಆತಮಾರನೇ ದಿನ ಚಡಪಡಿಸುತ್ತಿದ್ದನುನಮಗೆ ಅವನೊಡನೆ ಮಾತಾಡಲು ಪುರುಸೊತ್ತು ಅಥವಾ ವಿಷಯ ಇರಲಿಲ್ಲಮೊಮ್ಮಕ್ಕಳ ಜತೆ ಸಮಯ ಕಳೆಯುತ್ತಿದ್ದನುಸಂಜೆ ಪೇಟೆ ತಿರುಗಾಡಿ ಬರುತ್ತಿದ್ದನುಮುನ್ಸಿಪಲ್ ಮೈದಾನಕ್ಕೆ ವಾಕಿಂಗ್ ಬರುವವರ ಗೆಳೆತನ ಮಾಡಲು ಸೂಚಿಸಿದೆಆತ ನಿವೃತ್ತ ನೌಕರರ ಕೂಟವೊಂದಕ್ಕೆ ಸೇರಿದನುಅವರು ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ವಾಕ್ ಮುಗಿಸಿದೇಶದ ವಿದ್ಯಮಾನಗಳನ್ನು ಚರ್ಚಿಸುತ್ತಿದ್ದರು.

ಚಿಕ್ಕಮಕ್ಕಳು ಶಾಲೆಗೆ ಹೋಗಲಾರೆ ಎಂಬಂತೆ ಒಂದು ದಿನ ಅಪ್ಪ ‘ನಾಳಿಂದ ಅವರೊಟ್ಟಿಗೆ ಹೋಗಲ್ಲಪ್ಪಕಳ್ಳನನ್ನ ಮಕ್ಕಳುನನಗೆ ಮಾತಾಡೋಕೇ ಕೊಡಲ್ಲ’ ಎಂದನುಬಹುಶಃ ಚರ್ಚೆಯಲ್ಲಿ ಇವನು ಅಡ್ಡಬಾಯಿ ಹಾಕಿ, ‘ಸ್ವಾಮೀಇಂದಿರಾ ಗಾಂಧಿ ಗಂಡಸಿದ್ದಂಗೆಅವಳು ಸತ್ತಿದ್ದೇ ದೇಶ ಬರ್ಬಾದ್ ಆತುಬಡವರಿಗೆ ಪೆನಶನ್ ಕೊಟ್ಟವಳೇ ಅವಳುನೂರು ರೂಪಾಯಿ ನೋಟು ಒಲೇಲಿ ಸುಟ್ಟು ಟೀ ಮಾಡಿ ಕುಡಿಯೋಳುದಿನಾ ಬೆಳಿಗ್ಗೆ ಕೋಳಿಪಿಳ್ಳೆಯ ಸೂಪ್ ಕುಡಿಯೋಳುನೂರು ಕಾರು ನಿಲ್ಲಿಸಿದರೆಆ ದಿನ ಯಾವ ಕಾರಿಗೆ ಬೆರಳು ತೋರಿಸ್ತಾಳೊ ಅದರ ಡ್ರೆ ವರ್ ಗಾಡಿ ತಗೀಬೇಕುಹಂಗೆ ಬೆಳದೋಳು’ ಇತ್ಯಾದಿ ಪಿಚ್ಚರ್ ಬಿಟ್ಟಿರಬೇಕುಇದುನಾವೇ ಕೇಳಿದಂತೆ ಅವನು ಕುಲುಮೆಯಲ್ಲಿ ಗಿರಾಕಿಗಳ ಮುಂದೆ ಬಿಗಿಯುತ್ತಿದ್ದ ಪ್ರವಚನಪೇಪರ್ ಓದುವಟಿವಿ ನೋಡುವ ವಾಕಿಂಗ್ ಗುಂಪಿನವರು ಇವನನ್ನು ಸ್ನಬ್ ಮಾಡಿರಬೇಕುಇವನಿಗೆ ಅವರ ಚರ್ಚೆ ಬೋರಾಗಿರಬೇಕುಈ ನಡುವೆ ವಾಯುವಿಹಾರಿಗಳಲ್ಲಿ ಒಬ್ಬರು ತೀರಿಕೊಂಡರುಅಪ್ಪ ಗುಂಪಿಗೆ ರಾಜೀನಾಮೆ ಕೊಟ್ಟನು.

ಒಂದು ಸಲನಮ್ಮ ಕುಟುಂಬ ಪ್ರತಿವರ್ಷವೂ ಹೋಗುತ್ತಿದ್ದ ಬಿ.ದುರ್ಗದ ಉರುಸಿಗೆ ಹೋಗಿದ್ದೆವುಉರುಸು ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ಬರುವಾಗಬಸ್ಸು ಹೊರಡುತ್ತಿರುವುದು ಕಂಡಿತುಎಲ್ಲರೂ ಅದರತ್ತ ಓಡಿದರುಅಪ್ಪ ಹಿಂದೆ ಬಿದ್ದಿದ್ದಬೇಗ ಬರುವಂತೆ ಬಸ್ಸಿನೊಳಗೆ ಇದ್ದವರು ಕೈಬೀಸಿದರುಅಪ್ಪ ಓಡಿಬರಲು ಯತ್ನಿಸಿ ತೊಡರುಗಾಲು ಹಾಕಿಕೊಂಡು ಬುಡಕಡಿದ ಬಾಳೆಯಂತೆ ಸುತ್ತಿಕೊಂಡು ಬಿದ್ದುಬಿಟ್ಟಓಡಿಹೋಗಿ ಎಬ್ಬಿಸಿದೆಮೊಣಕಾಲು ತರಿದಿತ್ತು. ‘ಹಿಂದ್‌ನಂಗೆ ನಡಿಯಕೆ ಆಗಲ್ಲ ಮಗನೆ’ ಎಂದು ಗೊಣಗಿದಆರಡಿ ಮನುಷ್ಯನಮ್ಮೆಲ್ಲರ ಎದುರು ತೋಯ್ದ ಬಟ್ಟೆಯಂತೆ ಬಿದ್ದ ದೃಶ್ಯಮುಪ್ಪು ತರುವ ದೈಹಿಕ,ಮಾನಸಿಕ ಅಸಹಾಯಕತೆಯ ಭೀಷಣ ಸತ್ಯ ಮನಗಾಣಿಸಿತುಅಪ್ಪ ಅಲ್ಲಿಂದಾಚೆ ಕೃಶವಾಗುತ್ತಮಕ್ಕಳು ಹೇಳಿದಂತೆ ಕೇಳುವ ಮಗುವಾಗುತ್ತ ನಡೆದನುಕುಲುಮೆಯಲ್ಲಿ ಅರ್ಧಶತಮಾನ ಕುಡಿದ ಹೊಗೆ ಮತ್ತು ಗಣೇಶ ಬೀಡಿಗಳು ಜಂಟಿ ಕಾರ್ಯಾಚರಣೆ ನಡೆಸಿ ಶ್ವಾಸಕೋಶ ಕೆಡಿಸಿದ್ದವು.

ಆಮ್ಲಜನಕದ ಕೊರತೆಯ ಸಂಕಷ್ಟವನ್ನು ಹಿಮಾಲಯ ಚಾರಣದಲ್ಲಿ ಅನುಭವಿಸಿರುವೆಅಪ್ಪನಿಗೆ ಉಸಿರಾಟ ತ್ರಾಸಾದಾಗ ನೀರಿಂದ ಹೊರಬಿದ್ದ ಮೀನಂತೆ ಆಡುತ್ತಿದ್ದನುಆಗ ತಕ್ಷಣ ಕೊಡುವಂತೆ ಡಾಕ್ಟರು ಇಂಜೆಕ್ಷನ್ ಬರೆದುಕೊಟ್ಟಿದ್ದರುಅದು ಡಿಸೆಂಬರ್ ಕೊನೆಯ ದಿನಭಯಂಕರ ಚಳಿದಮ್ಮಿದ್ದವರಿಗೆ ಕಷ್ಟದ ವಾತಾವರಣಅಪ್ಪನ ಮದ್ದು ತರಲೆಂದು ಬಜಾರಿಗೆ ಹೋದವನುಗೆಳೆಯರೊಂದಿಗೆ ಹೊಸ ವರ್ಷದ ಪಾರ್ಟಿಗೆ ಹೋದೆಹರಟೆಯಲ್ಲಿ ವೇಳೆ ಸರಿದಿದ್ದೇ ಅರಿವಾಗಲಿಲ್ಲಮನೆಗೆ ಬರುವಾಗ ಅಪ್ಪ ಅಂಗಳದ ಕಟ್ಟೆಯ ಮೇಲೆ ಸುಂಯ್‌ಗರೆಯುತ್ತ ಕೂತಿದ್ದನನ್ನ ಕಂಡವನೇ ಸಂಕಟದ ದನಿಯಲ್ಲಿ ‘ಕ್ಯಾದೋಸ್ತ್ಬಹುತ್ ಡೇರ್ ಕರದಿಯಾ?’ ಎಂದನುಆತ ವ್ಯಂಗ್ಯದ ಬಹುವಚನ ಬಳಸುವುದೇ ಸಿಟ್ಟುಅಸಹಾಯಕತೆಯಲ್ಲಿಇದು ಭರ್ಜಿಯಂತೆ ತಿವಿದು ನನ್ನ ಬೇಹೊಣೆ ಮನಗಾಣಿಸಿತುಇಂಜೆಕ್ಷನ್ ತೆಗೆದುಕೊಂಡ ಬಳಿಕ ಆತ ನಿರಾಳ ಮಲಗಿದನನ್ನ ನಿದ್ದೆ ಕದಡಿಹೋಯಿತು.

ಕೊನೆಯ ದಿನಗಳಲ್ಲಿ ಅಪ್ಪ ಮಕ್ಕಳ ಮನೆಗಳಲ್ಲಿ ವಾರೊಪ್ಪತ್ತು ತಿರುಗಾಡಿಕೊಂಡಿದ್ದಒಂದು ಮನೆಯಲ್ಲಿ ಸಿಕ್ಕ ಸರಕುಹಣ್ಣುಧಾನ್ಯರೊಕ್ಕವನ್ನು ಜರೂರತ್ತಿರುವ ಇನ್ನೊಂದು ಮನೆಗೆಚನ್ನೆಮಣೆಯಲ್ಲಿ ಹುಣಿಸೆಪಿಕ್ಕ ಹಾಕ್ಯಾಡುವಂತೆ ಒಯ್ಯುತ್ತಿದ್ದಅವನ ಏಕಾಂಗಿತನ ಕ್ರೂರವಾಗಿತ್ತುಇದ್ದಬದ್ದ ಮುತುವರ್ಜಿಯನ್ನೆಲ್ಲ ಮಲಪುತ್ರನ ಮೇಲೆ ಕೇಂದ್ರೀಕರಿಸಿದನನ್ನ ಚಿಕ್ಕಮಗಳನ್ನು ಕೂಸುಮಾರಿ ಮಾಡಿಕೊಂಡು ಶಾಲೆಗೆ ಬಿಟ್ಟು ಬರುತ್ತಿದ್ದಅವಳೇ ಮಾತ್ರೆಯನ್ನು ಬಾಯಿಗೆ ಹಾಕಬೇಕುನೀರು ಕುಡಿಸಬೇಕು. ‘ಸೊಸ್ತೇರು ಸರಿಯಾಗಿ ನೋಡಿಕೊಳ್ಳಲ್ಲ’ ಎಂದು ದೂರುತ್ತಿದ್ದತಮಾಷೆಗಾಡಿದ ಮಾತೂ ಮುಳ್ಳಿನಂತೆ ನೆಡುವಷ್ಟು ಸೂಕ್ಷ ನಾಗಿದ್ದ.

ಅಪ್ಪನ ತಿರುಗಾಟ ಸಂಪೂರ್ಣ ನಿಂತಿತುನಾಟಕದಲ್ಲಿ ಬಹುರೂಪಿ ಪಾತ್ರಗಳನ್ನು ನಿರ್ವಹಿಸಿದ ನಟ ರಂಗಬಿಡಲು ತಯಾರಾದನುಆತ ತಾನೇ ಮಾಡಿಸಿದ್ದ ಸಾಗುವಾನಿ ಮಂಚದ ಮೇಲೆಹೊಲಮಾರಿ ಕೊಂಡ ಮನೆಯೊಳಗೆಆರು ತಿಂಗಳು ಹಾಸಿಗೆಯಲ್ಲೇ ಎಲ್ಲ ಮಾಡುತ್ತ ಕಳೆದನುವಯಸ್ಸು ಕಾಯಿಲೆ ನಿರ್ದಯವಾಗಿದ್ದವುಸಲ್ಲೇಖನ ವ್ರತಹಿಡಿದ ಸವಣನಂತೆ ತೋರುತ್ತಿದ್ದನುಒಂದು ರಾತ್ರಿಪಾರ್ಟಿಗೆ ಗೆಳೆಯರೆಲ್ಲ ಸೇರಿದ್ದೆವುಊರಿಂದ ಫೋನುಎತ್ತಿಕೊಂಡೆ. ‘ಅಪ್ಪ ಸೀರಿಯಸ್’ ಆಗಿರುವ ಸಂದೇಶವಿತ್ತುಕರೆಯಲ್ಲಿರುವ ಕಂಪನದನಿ ಬೇರೆ ಸತ್ಯವನ್ನೇ ಸೂಚಿಸುತ್ತಿತ್ತುಸಾವು ನಿರೀಕ್ಷಿತವಾಗಿತ್ತುಅವನ ನರಳಿಕೆ ಕಾಣುವಾಗಸಾವೇ ಏಕಿಂತು ಕಾಡಿಸುತ್ತಿರುವೆ ಎಂದೂ ಸಿಟ್ಟು ಬರುತ್ತಿತ್ತುಪ್ರಿಯರ ಸಾವು ದುಗುಡದಾಯಕಅವರ ದೇಹಪಡುವ ಯಾತನೆ ಕಾಣುವಾಗ ಅದುವೇ ಬಿಡುಗಡೆಅಪ್ಪ ನೆಮ್ಮದಿಯ ಸಾವಿಗಾಗಿ ಪ್ರಾರ್ಥಿಸಲಿಲ್ಲಉಳಿಸಿಕೊಳ್ಳಿರೊ ಎಂದು ಗೋಗರೆಯುತ್ತಿದ್ದಅವನ ಮುಖದಲ್ಲಿದ್ದ ಆರ್ತತೆ ಅವನ ಧೀರಬದುಕಿನ ಚರಿತ್ರೆಗೆ ಹೊಂದಿಕೆ ಆಗುತ್ತಿರಲಿಲ್ಲಅವನೊಟ್ಟಿಗೆ ಮುಖ ಹರಿದುಕೊಂಡಿದ್ದ ಅಣ್ಣಹಿರಿಯ ಮಗನ ಹಕ್ಕಾಗಿ ಕಫನ್ ದಫನ್ ಖರ್ಚು ವಹಿಸಿಕೊಂಡಅಪ್ಪ ಕಣ್ಮರೆಯಾದ ಬಳಿಕ ಅವನ ಮಹತ್ವ ಮನವರಿಕೆಯಾಯಿತುಅವನು ನಮ್ಮನ್ನು ಬೆಳೆಸಲು ಮಾಡಿದ ಸೆಣಸಾಟದ ನೆನಪು ಒಜ್ಜೆಯಾಗಿ ಕಾಡತೊಡಗಿತುಆತ ಸತ್ತು ನಮ್ಮೊಳಗೆ ಮತ್ತೊಮ್ಮೆ ಹುಟ್ಟತೊಡಗಿದ.

ಕುಲುಮೆಗೆ ರಾತ್ರಿ ಕಾವಲಿಗೆ ನಾನೂ ಅವನೂ ಮಲಗಲು ಹೋಗುತ್ತಿದ್ದುದು ನೆನಪಾಗುತ್ತಿದೆಆಗವನು ನನಗೆ ಚಳಿಯಾಗದಂತೆ ಹೊಟ್ಟೆಯೊಳಗೆ ಹುದುಗಿಸಿಕೊಳ್ಳುತ್ತಿದ್ದನುಅವನ ಬಾಯಿಂದ ಬರುತ್ತಿದ್ದ ಪರಿಚಿತವೂ ಸಹ್ಯವೂ ಆಗಿದ್ದ ಗಣೇಶ ಬೀಡಿಯ ಪರಿಮಳಆಮ್ಲಜನಕದ ಹಾಗೆ ಗುಡಾರ ತುಂಬುತ್ತಿತ್ತುನಾನು ತಾಯಹೊಟ್ಟೆಗೆ ಮರಳಿಹೋದಂತೆ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದೆನು.

 

ಅಪ್ಪನ ಎರಡು ಮೂರು ಫೋಟೊಗಳಿವೆಅವುಗಳಲ್ಲಿ ಒಂದುಕೋವಿ ಲೈಸೆನ್ಸಿಗೆಂದು ತೆಗೆದಿದ್ದುಅದರಲ್ಲಿನ್ನೂ ಯೌವನವಿದೆಸಣ್ಣ ಕಟಿಂಗುಕ್ಯಾಮೆರಾ ಎದುರಿಸುವ ಗಾಬರಿಯಿಂದ ಅರಳಿದ ಕಣ್ಣುಗದ್ದದ ಬಳಿ ಚೂಪುಗೊಂಡ ಮುಖಇಂಗ್ಲಿಷ್ ಸಿನಿಮಾದ ಹಳೇ ನಟಇನ್ನೊಂದು ನನ್ನ ಮದುವೆ ದಿನ ಹೊರಡುವಾಗ ತೆಗೆದಿದ್ದುಐದು ಸಾವಿರದಲ್ಲಿ ಮದುವೆ ಮುಗಿಯಬೇಕು ಎಂದು ಯಾರಿಗೂ ಬಟ್ಟೆ ತೆಗೆಸಿರಲಿಲ್ಲಅಕ್ಕಂದಿರಿಗೆ ಅಪ್ಪನಿಗೆ ಮುಂದಿನ ಸಂಬಳದಲ್ಲಿ ಕೊಡಿಸುವೆನೆಂದು ಒಪ್ಪಿಸಿದ್ದೆಅಪ್ಪನಿಗಿದು ಇಷ್ಟವಾಗಿರಲಿಲ್ಲಮುಖದಲ್ಲಿ ಉದಾಸಭಾವವಿದೆನಾವು ಭಾವುಕವಾಗಿ ಹಿರಿಯರವು ಎಂದು ಉಳಿಸಿಕೊಳ್ಳುವ ಗುರುತುಗಳುನಮ್ಮ ದೋಷದ ಮುಳ್ಳನ್ನೂ ಸಾಧನೆಯ ಹೂವನ್ನೂ ಒಟ್ಟಿಗೆ ಕೂಡಿಸಿದ ಗುಚ್ಛದಂತೆ ಉಳಿದುಬಿಡುತ್ತವೆ.

andolanait

Recent Posts

ಇರಾನ್‌ಗೆ ತೆರಳಲಾಗದೆ ಕೊಡಗಿನಲ್ಲಿ ಸಿಲುಕಿದ ದಂಪತಿ

ಚೆಟ್ಟಳ್ಳಿ: ಯುದ್ಧ ಪರಿಸ್ಥಿತಿಯಿಂದಾಗಿ ದಂಪತಿ ಇರಾನ್‌ಗೆ ಮರಳಲಾಗದೆ ಕೊಡಗು ಜಿಲ್ಲೆಯ ಮೂರ್ನಾಡು ಸಮೀಪದ ಕಾಂತೂರಿನಲ್ಲಿ ಪರಿತಪಿಸುವಂತಾಗಿದೆ. ಕಾಂತೂರು ನಿವಾಸಿ ಪತ್ನಿ…

15 mins ago

ಬಿಜೆಪಿ-ಆರ್‌ಎಸ್‌ಎಸ್-ಮೋದಿ ವಿರುದ್ಧ ಏನೆಲ್ಲಾ ಮಾತಾಡಿದ್ದಾರೆ ಗೊತ್ತಾ? ; ಸಿಎಂ ಹೀಗಂದಿದ್ಯಾರಿಗೆ

ದಾವಣಗೆರೆ: ಎಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಚಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ-RSS-ಮೋದಿಯವರ ಬಗ್ಗೆ ಎಂತೆಂಥಾ ಮಾತಾಡಿದ್ದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

1 hour ago

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಈ ವಾರ ದೇಶದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ…

1 hour ago

ಅಮೇರಿಕಾ-ಇಸ್ರೇಲ್‌ ದಾಳಿಯಲ್ಲಿ ಇರಾನ್‌ ಗುಪ್ತಚರ ಮುಖ್ಯಸ್ಥ ಮಜೀದ್‌ ಖಾದೇಮಿ ಹತ್ಯೆ

ಟೆಹರಾನ್:‌ ಅಮೇರಿಕಾ-ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್‌ ಕಾಪ್ಸ್‌ ಗುಪ್ತಚರ ಮುಖ್ಯಸ್ಥ ಮಜೀದ್‌ ಖಾದೇಮಿ ಹತ್ಯೆಯಾಗಿದ್ದಾರೆ…

2 hours ago

ಬೂತ್ ಮಟ್ಟದಲ್ಲಿ ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು: ಯಡಿಯೂರಪ್ಪ ಸಲಹೆ

ಬಾಗಲಕೋಟೆ: ಬೂತ್ ಮಟ್ಟದಲ್ಲಿ ನಾವು ಜನರ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಮಾಜಿ…

2 hours ago

ಬಸವತತ್ವ ಪ್ರಸಾರ, ಪ್ರಚಾರ ಇಂದಿನ ಅಗತ್ಯ: ಸಚಿವ ಈಶ್ವರ್ ಖಂಡ್ರೆ‌

ದೇವನಹಳ್ಳಿ: ಸಮಸಮಾಜದ ನಿರ್ಮಾಣಕ್ಕೆ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಬಸವ ತತ್ವಗಳ ಪ್ರಚಾರ, ಪ್ರಸಾರ ಇಂದಿನ ಅಗತ್ಯವಾಗಿದೆ ಎಂದು…

3 hours ago