ಎಡಿಟೋರಿಯಲ್

ಕೋವಿಡ್: ಬೂಸ್ಟರ್ ಡೋಸ್ ಅಭಿಯಾನ ನಿರ್ಲಕ್ಷಿಸಬಾರದಿತ್ತು


ಮಂಜುಕೋಟೆ

ಕೊರೊನಾದಿಂದ ತತ್ತರಿಸಿದ್ದ ದೇಶಕ್ಕೆ ಇದೀಗ ಮತ್ತೆ ಕೊರೊನಾ ೪ನೇ ಅಲೆಯ ಆತಂಕ ಎದುರಾಗಿದ್ದು, ಸರ್ಕಾರ ತರಾತುರಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಹಾಗೂ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಆರಂಭಿಸಿದೆ. ಕೋವಿಡ್ ಸಾಂಕ್ರಾಮಿಕ ದೇಶಕ್ಕೆ ಕಾಲಿಟ್ಟ ವರ್ಷದ ಬಳಿಕ ದೇಶದಲ್ಲಿ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳು ಆರಂಭಗೊಂಡವು ಬಳಿಕ ಹಂತ ಹಂತವಾಗಿ ಸಾಮಾನ್ಯ ಜನರವರೆಗೂ ಲಸಿಕೆ ಪೂರೈಕೆಯಾಗುವಂತೆ ಕ್ರಮವಹಿಸಲಾಯಿತು. ಈ ವೇಳೆ ಲಸಿಕೆ ತೆಗೆದುಕೊಂಡ ಕೆಲವರಲ್ಲಿಯೂ ಮತ್ತೆ ಸೋಂಕು ಪತ್ತೆಯಾದ್ದರಿಂದ ಕೇಂದ್ರ ಸರ್ಕಾರ ಕೋವಿಡ್ ವಿರುದ್ಧ ೨೦೨೨ರ ಏಪ್ರಿಲ್‌ನಲ್ಲಿ ಬೂಸ್ಟರ್ ಡೋಸ್ ವಿತರಣೆಗೆ ಮುಂದಾಯಿತು.

ಮುಖ್ಯವಾಹಿನಿಯಲ್ಲಿ ನಿಂತು ಶ್ರಮಿಸುವ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಿ ಬಳಿಕ ಸಾರ್ವಜನಿಕರಿಗೂ ಬೂಸ್ಟರ್ ಡೋಸ್ ನೀಡುವ ಪ್ರಯತ್ನ ಮಾಡಿದ್ದರು. ಅದನ್ನು ಶೇ.೧೦೦ ಗುರಿ ಸಾಽಸುವವರೆಗೂ ಮುಂದುವರಿಸಬೇಕಿತ್ತು. ಅದರಿಂದ ಇಂದು ಕೋವಿಡ್ ೪ನೇ ಅಲೆ ಕುರಿತು ಇಷ್ಟೊಂದು ಆತಂಕಪಡಬೇಕಿರಲಿಲ್ಲ. ನಡುವೆ ತರಾತುರಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ಸರ್ಕಾರಕ್ಕೆ ಎದುರಾಗುತ್ತಿರಲಿಲ್ಲವೇನೋ.

ಈಗ ಪ್ರತಿ ತಾಲ್ಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಬೂಸ್ಟರ್ ಡೋಸ್‌ನ್ನು ಕಡ್ಡಾಯವಾಗಿ ವಿತರಿಸಲು ಮುಂದಾಗಿ. ಅಭಿಯಾನ ಚುರುಕುಗೊಂಡಷ್ಟೇ ವೇಗವಾಗಿ ಇದರ ವಿತರಣೆ ಮತ್ತು ಪೂರೈಕೆ ಚುರುಕಾಗಬೇಕಿದೆ. ನಮ್ಮ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಭಾಗಗಳಲ್ಲಿಯೂ ಬೂಸ್ಟರ್ ಡೋಸ್ ಪಡೆದಿರುವವರ ಸಂಖ್ಯೆ ತೀರಾ ಕಡಿಮೆ. ಈ ಬಗ್ಗೆ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ಕೋವಿಡ್ ಲಸಿಕೆ ಪಡೆಯದ ಹಾಗೂ ಪಡೆದಿರುವವರ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿವೆ.

ಬೂಸ್ಟರ್ ಡೋಸ್ ಅಭಿಯಾನದಲ್ಲಿ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ಶೇ.೫೦ರಷ್ಟು ಸಫಲತೆಯನ್ನೂ ಕೂಡ ಕಾಣಲೇ ಇಲ್ಲ. ಈಗಾಗಲೇ ತಯಾರಾಗಿರುವ ಲಸಿಕೆಗಳ ಬಳಕೆಯ ಅವಽ ಮುಗಿಯುವ ಹಂತಕ್ಕೆ ಬಂದು ವ್ಯರ್ಥವಾಗುವ ಸಾಧ್ಯತೆಗಳಿವೆ. ಇದರಿಂದ ದೇಶದ ಆರ್ಥಿಕತೆಗೂ ಕೂಡ ಹೊಡೆತ ಬೀಳುವ ಸಾಧ್ಯತೆಗಳಿವೆ. ಆದ್ದರಿಂದ ತಯಾರಾದ ಆರಂಭದಲ್ಲಿಯೇ ಸರ್ಕಾರ ಬೂಸ್ಟರ್ ಡೋಸ್ ಅನ್ನು ಕೂಡ ಶೇ.೧೦೦ ರಷ್ಟು ಪೂರ್ಣಗೊಳಿಸಿದ್ದರೆ. ಇಂದು ದೇಶ ಒತ್ತಡದಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ.

ಸರ್ಕಾರ ಮಾಸ್ಕ್ ಕಡ್ಡಾಯದ ಜೊತೆಗೆ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಿದ್ದು, ಈ ನಡುವೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಇಂಟ್ರಾನೇಸಲ್ ಲಸಿಕೆಯ ವಿತರಣೆ ಬಗ್ಗೆ ಸರ್ಕಾರ ಅನುಮತಿ ನೀಡಿದ್ದು, ಆರೋಗ್ಯ ಇಲಾಖೆಯವರು ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡಬೇಕಾದ ಅಗತ್ಯವಿದೆ.

ಇದೊಂದು ಇಂಜೆಕ್ಷನ್ ಮಾದರಿಯಲ್ಲದೆ. ಮೂಗಿನ ಮೂಲಕ ನೀಡಬಹುದಾದ ಹೊಸ ಮಾದರಿಯ ಲಸಿಕೆಯಾಗಿದ್ದು, ಜನ ಸಾಮಾನ್ಯರಿಗೂ ಇದು ಹೊಸದಾಗಿದೆ. ಅದರಲ್ಲಿಯೂ ಗ್ರಾಮಾಂತರ ಭಾಗಗಳಲ್ಲಿ, ಕೃಷಿಕರಲ್ಲಿ ಹಾಗೂ ರೈತರಲ್ಲಿ ಈ ಲಸಿಕೆಯ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಆತಂಕ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಬಳಕೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯ ಅಽಕಾರಿಗಳು, ಜಿಲ್ಲಾ ಆಡಳಿತ ಸೂಕ್ತ ಕ್ರಮವಹಿಸಿ ಈ ಲಸಿಕೆಯ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಕೋವಿಡ್, ಓಮಿಕ್ರಾನ್‌ನ ಉಪತಳಿಯಾಗಿರುವ ಬಿಎಫ್.೭ ಎಂಬ ಹೊಸ ವೈರಸ್‌ಗೆ ನೇಸಲ್ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದ್ದು, ಇದರ ಬಗ್ಗೆ ಮೊದಲು ಜಾಗೃತಿಯ ಮೂಡಿಸುವ ಅವಶ್ಯಕತೆ ಇದೆ. ಸರ್ಕಾರ ಆ ಬಗ್ಗೆ ಗಮನ ನೀಡಿ ನಂತರ ಲಸಿಕೆ ವಿತರಣೆ ಮಾಡಬೇಕಿದೆ.

ಗ್ರಾಮೀಣ ಭಾಗದಲ್ಲಿ ಇನ್ನೂ ಮೊದಲ ಲಸಿಕೆಯನ್ನು ಸಹ ಪಡೆಯದವರಿದ್ದಾರೆ. ಅವರನ್ನೂ ಸಹ ಗುರುತಿಸಿ ೧೮ ವರ್ಷ ಮೇಲ್ಪಟ್ಟ ಯುವಕ ಯುವತಿಯರಿಗೆ ಲಸಿಕೆಗಳನ್ನು ಪೂರೈಕೆ ಮಾಡಬೇಕಿದೆ. ಮತ್ತೆ ದೇಶದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗದಂತೆ ಕೂಡಲೇ ಮುಂಜಾಗ್ರತಾಕ್ರಮ ಕೈಗೊಂಡು ಲಸಿಕೆಗಳ ವಿತರಣೆಯನ್ನು ತೀವ್ರ ಪ್ರಮಾಣದಲ್ಲಿ ಚುರುಕುಗೊಳಿಸಬೇಕಿದೆ.

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

10 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

10 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

10 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

10 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

10 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

10 hours ago