ಎಡಿಟೋರಿಯಲ್

ಕೋವಿಡ್: ಬೂಸ್ಟರ್ ಡೋಸ್ ಅಭಿಯಾನ ನಿರ್ಲಕ್ಷಿಸಬಾರದಿತ್ತು


ಮಂಜುಕೋಟೆ

ಕೊರೊನಾದಿಂದ ತತ್ತರಿಸಿದ್ದ ದೇಶಕ್ಕೆ ಇದೀಗ ಮತ್ತೆ ಕೊರೊನಾ ೪ನೇ ಅಲೆಯ ಆತಂಕ ಎದುರಾಗಿದ್ದು, ಸರ್ಕಾರ ತರಾತುರಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಹಾಗೂ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಆರಂಭಿಸಿದೆ. ಕೋವಿಡ್ ಸಾಂಕ್ರಾಮಿಕ ದೇಶಕ್ಕೆ ಕಾಲಿಟ್ಟ ವರ್ಷದ ಬಳಿಕ ದೇಶದಲ್ಲಿ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳು ಆರಂಭಗೊಂಡವು ಬಳಿಕ ಹಂತ ಹಂತವಾಗಿ ಸಾಮಾನ್ಯ ಜನರವರೆಗೂ ಲಸಿಕೆ ಪೂರೈಕೆಯಾಗುವಂತೆ ಕ್ರಮವಹಿಸಲಾಯಿತು. ಈ ವೇಳೆ ಲಸಿಕೆ ತೆಗೆದುಕೊಂಡ ಕೆಲವರಲ್ಲಿಯೂ ಮತ್ತೆ ಸೋಂಕು ಪತ್ತೆಯಾದ್ದರಿಂದ ಕೇಂದ್ರ ಸರ್ಕಾರ ಕೋವಿಡ್ ವಿರುದ್ಧ ೨೦೨೨ರ ಏಪ್ರಿಲ್‌ನಲ್ಲಿ ಬೂಸ್ಟರ್ ಡೋಸ್ ವಿತರಣೆಗೆ ಮುಂದಾಯಿತು.

ಮುಖ್ಯವಾಹಿನಿಯಲ್ಲಿ ನಿಂತು ಶ್ರಮಿಸುವ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಿ ಬಳಿಕ ಸಾರ್ವಜನಿಕರಿಗೂ ಬೂಸ್ಟರ್ ಡೋಸ್ ನೀಡುವ ಪ್ರಯತ್ನ ಮಾಡಿದ್ದರು. ಅದನ್ನು ಶೇ.೧೦೦ ಗುರಿ ಸಾಽಸುವವರೆಗೂ ಮುಂದುವರಿಸಬೇಕಿತ್ತು. ಅದರಿಂದ ಇಂದು ಕೋವಿಡ್ ೪ನೇ ಅಲೆ ಕುರಿತು ಇಷ್ಟೊಂದು ಆತಂಕಪಡಬೇಕಿರಲಿಲ್ಲ. ನಡುವೆ ತರಾತುರಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ಸರ್ಕಾರಕ್ಕೆ ಎದುರಾಗುತ್ತಿರಲಿಲ್ಲವೇನೋ.

ಈಗ ಪ್ರತಿ ತಾಲ್ಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಬೂಸ್ಟರ್ ಡೋಸ್‌ನ್ನು ಕಡ್ಡಾಯವಾಗಿ ವಿತರಿಸಲು ಮುಂದಾಗಿ. ಅಭಿಯಾನ ಚುರುಕುಗೊಂಡಷ್ಟೇ ವೇಗವಾಗಿ ಇದರ ವಿತರಣೆ ಮತ್ತು ಪೂರೈಕೆ ಚುರುಕಾಗಬೇಕಿದೆ. ನಮ್ಮ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಭಾಗಗಳಲ್ಲಿಯೂ ಬೂಸ್ಟರ್ ಡೋಸ್ ಪಡೆದಿರುವವರ ಸಂಖ್ಯೆ ತೀರಾ ಕಡಿಮೆ. ಈ ಬಗ್ಗೆ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ಕೋವಿಡ್ ಲಸಿಕೆ ಪಡೆಯದ ಹಾಗೂ ಪಡೆದಿರುವವರ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿವೆ.

ಬೂಸ್ಟರ್ ಡೋಸ್ ಅಭಿಯಾನದಲ್ಲಿ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ಶೇ.೫೦ರಷ್ಟು ಸಫಲತೆಯನ್ನೂ ಕೂಡ ಕಾಣಲೇ ಇಲ್ಲ. ಈಗಾಗಲೇ ತಯಾರಾಗಿರುವ ಲಸಿಕೆಗಳ ಬಳಕೆಯ ಅವಽ ಮುಗಿಯುವ ಹಂತಕ್ಕೆ ಬಂದು ವ್ಯರ್ಥವಾಗುವ ಸಾಧ್ಯತೆಗಳಿವೆ. ಇದರಿಂದ ದೇಶದ ಆರ್ಥಿಕತೆಗೂ ಕೂಡ ಹೊಡೆತ ಬೀಳುವ ಸಾಧ್ಯತೆಗಳಿವೆ. ಆದ್ದರಿಂದ ತಯಾರಾದ ಆರಂಭದಲ್ಲಿಯೇ ಸರ್ಕಾರ ಬೂಸ್ಟರ್ ಡೋಸ್ ಅನ್ನು ಕೂಡ ಶೇ.೧೦೦ ರಷ್ಟು ಪೂರ್ಣಗೊಳಿಸಿದ್ದರೆ. ಇಂದು ದೇಶ ಒತ್ತಡದಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ.

ಸರ್ಕಾರ ಮಾಸ್ಕ್ ಕಡ್ಡಾಯದ ಜೊತೆಗೆ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಿದ್ದು, ಈ ನಡುವೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಇಂಟ್ರಾನೇಸಲ್ ಲಸಿಕೆಯ ವಿತರಣೆ ಬಗ್ಗೆ ಸರ್ಕಾರ ಅನುಮತಿ ನೀಡಿದ್ದು, ಆರೋಗ್ಯ ಇಲಾಖೆಯವರು ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡಬೇಕಾದ ಅಗತ್ಯವಿದೆ.

ಇದೊಂದು ಇಂಜೆಕ್ಷನ್ ಮಾದರಿಯಲ್ಲದೆ. ಮೂಗಿನ ಮೂಲಕ ನೀಡಬಹುದಾದ ಹೊಸ ಮಾದರಿಯ ಲಸಿಕೆಯಾಗಿದ್ದು, ಜನ ಸಾಮಾನ್ಯರಿಗೂ ಇದು ಹೊಸದಾಗಿದೆ. ಅದರಲ್ಲಿಯೂ ಗ್ರಾಮಾಂತರ ಭಾಗಗಳಲ್ಲಿ, ಕೃಷಿಕರಲ್ಲಿ ಹಾಗೂ ರೈತರಲ್ಲಿ ಈ ಲಸಿಕೆಯ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಆತಂಕ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಬಳಕೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯ ಅಽಕಾರಿಗಳು, ಜಿಲ್ಲಾ ಆಡಳಿತ ಸೂಕ್ತ ಕ್ರಮವಹಿಸಿ ಈ ಲಸಿಕೆಯ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಕೋವಿಡ್, ಓಮಿಕ್ರಾನ್‌ನ ಉಪತಳಿಯಾಗಿರುವ ಬಿಎಫ್.೭ ಎಂಬ ಹೊಸ ವೈರಸ್‌ಗೆ ನೇಸಲ್ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದ್ದು, ಇದರ ಬಗ್ಗೆ ಮೊದಲು ಜಾಗೃತಿಯ ಮೂಡಿಸುವ ಅವಶ್ಯಕತೆ ಇದೆ. ಸರ್ಕಾರ ಆ ಬಗ್ಗೆ ಗಮನ ನೀಡಿ ನಂತರ ಲಸಿಕೆ ವಿತರಣೆ ಮಾಡಬೇಕಿದೆ.

ಗ್ರಾಮೀಣ ಭಾಗದಲ್ಲಿ ಇನ್ನೂ ಮೊದಲ ಲಸಿಕೆಯನ್ನು ಸಹ ಪಡೆಯದವರಿದ್ದಾರೆ. ಅವರನ್ನೂ ಸಹ ಗುರುತಿಸಿ ೧೮ ವರ್ಷ ಮೇಲ್ಪಟ್ಟ ಯುವಕ ಯುವತಿಯರಿಗೆ ಲಸಿಕೆಗಳನ್ನು ಪೂರೈಕೆ ಮಾಡಬೇಕಿದೆ. ಮತ್ತೆ ದೇಶದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗದಂತೆ ಕೂಡಲೇ ಮುಂಜಾಗ್ರತಾಕ್ರಮ ಕೈಗೊಂಡು ಲಸಿಕೆಗಳ ವಿತರಣೆಯನ್ನು ತೀವ್ರ ಪ್ರಮಾಣದಲ್ಲಿ ಚುರುಕುಗೊಳಿಸಬೇಕಿದೆ.

andolanait

Recent Posts

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

52 mins ago

ನಂಜನಗೂಡು | ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ ; 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು

ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…

54 mins ago

ಓದುಗರ ಪತ್ರ: ನಂಜನಗೂಡಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…

58 mins ago

ಓದುಗರ ಪತ್ರ: ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಆಟೋ ಸಂಚಾರ ನಿಯಂತ್ರಿಸಿ

ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…

1 hour ago

ಶತಾಯುಷಿ ಸುತಾರ್ ವಿಧಿವಶ ; ದೇಶ-ವಿದೇಶ ನಾಯಕರ ಪ್ರತಿಮೆ ಕೆತ್ತಿದ್ದ ಹೆಗ್ಗಳಿಕೆ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್‌ ಸುತಾರ್‌ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸದ್ದು ಮಾಡುತ್ತಿರುವ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ

ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…

2 hours ago