ಎಡಿಟೋರಿಯಲ್

‘ಕಾಡು ಬಾ ಎನ್ನುವ, ನಾಡು ಹೋಗೆನ್ನುವ ಹಕ್ಕಿಪಿಕ್ಕಿಗಳು’

 

    ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ 800ಕ್ಕೂ ಹೆಚ್ಚು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದುಅವರಲ್ಲಿ 31 ಜನ ಕರ್ನಾಟಕದ ಹಕ್ಕಿಪಿಕ್ಕಿ ಎಂಬ ಬುಡಕಟ್ಟು ಜನಾಂಗದವರು ಎಂಬ ಸುದ್ದಿ ಆತಂಕಕ್ಕೂಕುತೂಹಲಕ್ಕೂ ಕಾರಣವಾಗಿದೆಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಕರ್ನಾಟಕದ ಒಂದು ಬುಡಕಟ್ಟಿನ ಇಷ್ಟೊಂದು ಜನ ವಿದೇಶಕ್ಕೆ ಏಕೆ ಹೋದರುಹೇಗೆ ಹೋದರು ಮತ್ತು ಅಲ್ಲಿ ಏನು ಮಾಡುತ್ತಿದ್ದಾರೆಂಬುದು ಸಹಜವಾಗಿಯೇ ಹಲವರಲ್ಲಿ ಕುತೂಹಲ ಹುಟ್ಟಿಸಿದೆ.

ಹಕ್ಕಿಪಿಕ್ಕಿ ಜನಾಂಗ ಕಾಡುಗಳಲ್ಲಿ ಹಕ್ಕಿಪ್ರಾಣಿಗಳನ್ನು ಬೇಟೆಯಾಡುವುದುಬೇಟೆಯಾಡಿದ ಪ್ರಾಣಿಪಕ್ಷಿಗಳ ಉಗುರುಹಲ್ಲುಮೂಳೆರೆಕ್ಕೆಪುಕ್ಕಗಳಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರುವುದುಕಾಡುತ್ಪನ್ನಗಳನ್ನು ಸಂಗ್ರಹಿಸಿ ಮಾರುವುದನ್ನು ತನ್ನ ಜೀವನೋಪಾಯ ಮಾಡಿಕೊಂಡಿತ್ತುಹಕ್ಕಿಪಿಕ್ಕಿಗಳು ಜೀವನೋಪಾಯಕ್ಕೆ ಕಂಡುಕೊಂಡ ಇನ್ನೊಂದು ದಾರಿಯೆಂದರೆ ಗಿಡಮೂಲಿಕೆ ಔಷಧಿಗಳ ಮಾರಾಟಸದ್ಯ ಸುಡಾನಿನಲ್ಲಿ ಸಿಕ್ಕಿಹಾಕಿಕೊಂಡಿರುವ 31 ಜನ ಹಕ್ಕಿಪಿಕ್ಕಿಗಳು ಅಲ್ಲಿಗೆ ಹೋಗಿರುವುದು ಈ ಗಿಡಮೂಲಿಕೆ ಔಷಧಿಗಳನ್ನು ಮಾರಲುಕಡು ಬಡದೇಶಗಳಲ್ಲೊಂದಾದ ಸುಡಾನಿನ ಸಾಮಾನ್ಯ ಜನರಿಗೆ ಆಧುನಿಕ ಔಷಧಿಗಳು ಗಗನ ಕುಸುಮಹಕ್ಕಿಪಿಕ್ಕಿಗಳು ಇದನ್ನೇ ತಮ್ಮ ಗಿಡಮೂಲಿಕೆಗಳ ಮಾರುಕಟ್ಟೆಗೆ ಅವಕಾಶವನ್ನಾಗಿಸಿಕೊಂಡು ಅಲ್ಲಿಗೆ ಹೋದರು. 31 ಜನರಲ್ಲಿ ಗಂಡಸರು ಹೆಂಗಸರು ಸೇರಿದ್ದಾರೆಆದರೆಹೆಚ್ಚೂ ಕಡಿಮೆ ಅನಕ್ಷರಸ್ಥ ಸಮುದಾಯವಾದ ಹಕ್ಕಿಪಿಕ್ಕಿಗಳು ಅಷ್ಟು ದೂರದ ಸುಡಾನಿನ ಈ ವಿಚಾರವನ್ನು ಹೇಗೆ ತಿಳಿದುಕೊಂಡರು ಮತ್ತು ಹೇಗೆ ಆ ದೇಶಕ್ಕೆ ಹೋದರು ಎಂಬುದು ಇನ್ನಷ್ಟೇ ತಿಳಿಯಬೇಕು.

ಕಾಡನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದ ಹಕ್ಕಿಪಿಕ್ಕಿಗಳನ್ನು 1950-60ರ ದಶಕದಲ್ಲಿ ಜಾರಿಗೆ ಬಂದ ಬೇಟೆಅರಣ್ಯಗಳಿಗೆ ಸಂಬಂಧಿತ ಕಾನೂನುಗಳು ಕಾಡಿನಿಂದ ನಗರಪ್ರದೇಶಗಳಿಗೆ ಒಕ್ಕಲೆಬ್ಬಿಸಿದವುಕಾಡಿನಿಂದ ಹೊರಬಂದ ಹಕ್ಕಿಪಿಕ್ಕಿಗಳು ಬೆಂಗಳೂರುಮೈಸೂರುಮಂಡ್ಯಹಾಸನರಾಮನಗರಶಿವಮೊಗ್ಗಚಿಕ್ಕಮಗಳೂರುತುಮಕೂರುದೊಡ್ಡಬಳ್ಳಾಪುರ ಮತ್ತು ತಮಿಳುನಾಡು ಮತ್ತು ಆಂಧ್ರಪ್ರದೇಶ ಗಡಿಗಳ ತನಕ ಚದುರಿ ಹೋಗಿದ್ದಾರೆಹಕ್ಕಿಪಿಕ್ಕಿಗಳು ಹೀಗೆ ನೆಲೆ ಕಂಡುಕೊಂಡ ಹೊಸ ಪ್ರದೇಶಗಳಲ್ಲಿ ಭದ್ರಾಪುರ ಮುಖ್ಯವಾದುದುಕರ್ನಾಟಕದಲ್ಲಿ ಇವರ ಸಂಖ್ಯೆ ಸುಮಾರು 15,000 ಎನ್ನಲಾಗುತ್ತದೆಸಂಖ್ಯೆಯ ದೃಷ್ಟಿಯಲ್ಲಿ ಹಕ್ಕಿಪಿಕ್ಕಿಗಳು ಅಳಿವಿನ ಅಂಚಿನಲ್ಲಿರುವ ಜನಾಂಗವಾಗಿದ್ದಾರೆಅರಣ್ಯಗಳಿಂದ ಹೊರಹಾಕಲ್ಪಟ್ಟ ಹಕ್ಕಿಪಿಕ್ಕಿಗಳು ಅತ್ತ ಕಾಡಿನ ಆಸರೆ ತಪ್ಪಿ ಇತ್ತ ನಗರ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ಅತಂತ್ರರಾದರುಸರ್ಕಾರ ಅವರಿಗೆ ಜೀವಿಸಲು ಪರ್ಯಾಯ ಜಮೀನು ನೀಡಿದರೂ ಜೀವನೋಪಾಯಕ್ಕೆ ಯಾವುದೇ ದಾರಿಯಿಲ್ಲದ ಕಾರಣ ಅನೇಕ ಹಕ್ಕಿಪಿಕ್ಕಿಗಳು ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿದರು.

ಹಕ್ಕಿಪಿಕ್ಕಿಗಳು ಮೂಲತಃ ಗುಜರಾತಿನ ಒಂದು ಯೋಧ ಜನಾಂಗದವರೆಂದು ಹೇಳಲಾಗುತ್ತದೆಪ್ರತಾಪ ಸಿಂಹ ರಾಣಾ ವಂಶಿಗರು ಎಂದು ಹೇಳಿಕೊಳ್ಳುವ ಹಕ್ಕಿಪಿಕ್ಕಿ ಜನಾಂಗದವರು ಮೊಘಲರ ಆಳ್ವಿಕೆ ಕಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬಂದುಇಲ್ಲಿನ ಕಾಡುಗಳಲ್ಲಿ ನೆಲೆ ಕಂಡುಕೊಂಡಿದ್ದರು ಎನ್ನುತ್ತಾರೆಗುಜರಾತಲ್ಲಿ ಇವರನ್ನು ವಾಗ್ರಿತಮಿಳುನಾಡಿನಲ್ಲಿ ನರಿ ಕುರವರ್ ಎಂದು ಕರೆಯುತ್ತಾರೆಸೈನಿಕ ವೃತ್ತಿ ಕಳೆದುಕೊಂಡ ನಂತರ ಹಕ್ಕಿಪಿಕ್ಕಿಗಳು ಕಾಡುಗಳಲ್ಲಿ ಹಕ್ಕಿಪ್ರಾಣಿಗಳ ಬೇಟೆಬೇಟೆಯಾಡಿದ ಪ್ರಾಣಿಪಕ್ಷಿಗಳ ಉಗುರುಹಲ್ಲುಮೂಳೆರೆಕ್ಕೆಪುಕ್ಕಗಳಿಂದ ಮಾಡಿದ ಅಲಂಕಾರಿಕ ವಸ್ತುಗಳ ಮಾರಾಟಕಾಡುತ್ಪನ್ನಗಳ ಮಾರಾಟ ಮತ್ತು ಗಿಡಮೂಲಿಕೆ ಔಷಧಿಗಳ ಮಾರಾಟದಿಂದ ಜೀವನೋಪಾಯ ನಡೆಸುತ್ತಿದ್ದರುಆದರೆಅರಣ್ಯ ಕಾನೂನಿನ ಹೆಸರಲ್ಲಿ ಸರ್ಕಾರಗಳು ಇವರನ್ನು ಬಲವಂತವಾಗಿ ಕಾಡಿನಿಂದ ಒಕ್ಕಲೆಬ್ಬಿಸಿನಗರ ಪ್ರದೇಶಗಳಲ್ಲಿ ಭಿಕ್ಷಾಟನೆಯ ಮೂಲಕ ಜೀವಿಸಬೇಕಾದ ಹೀನಾಯ ಸ್ಥಿತಿಗೆ ತಳ್ಳಿದವುಇದರ ಜೊತೆಯಲ್ಲಿಕಾಡುಗಳಲ್ಲಿ ಹಕ್ಕಿಗಳಂತೆ ಸ್ವಚ್ಛಂದವಾಗಿ ಬದುಕಿದ್ದ ಹಕ್ಕಿಪಿಕ್ಕಿಗಳ ಜೀವನಕ್ರಮವೂ ಸಂಪೂರ್ಣವಾಗಿ ನೆಲೆ ತಪ್ಪಿತು.

ಗುಜರಾತಿಯಂತೆ ಕೇಳಿಸುವ ವಾಗ್ರಿಬೋಲಿ ಎಂಬುದು ಹಕ್ಕಿಪಿಕ್ಕಿಗಳ ಮೂಲ ಭಾಷೆಇದರ ಜೊತೆಯಲ್ಲಿ ಅವರು ಕನ್ನಡತೆಲುಗುತಮಿಳುಮಲಯಾಳಂ ಮೊದಲಾಗಿ 14 ಭಾಷೆಗಳನ್ನು ಆಡಬಲ್ಲರುಇಷ್ಟೊಂದು ಭಾಷೆಗಳನ್ನು ಮಾತಾಡುವುದರಿಂದ ಸಹಜವಾಗೇ ಇವರ ಭಾಷೆ ಹತ್ತಾರು ಭಾಷೆಗಳ ಒಂದು ಮಿಶ್ರಣದಂತೆ ಕೇಳಿಸುತ್ತದೆಅವರ ಸಾಮಾಜಿಕ ರೀತಿರಿವಾಜುಗಳೂ ಭಿನ್ನಅವರಲ್ಲಿ ವರದಕ್ಷಿಣೆ ಬದಲಿಗೆ ಮದುವೆ ಸಮಯದಲ್ಲಿ ಗಂಡೇ ಹೆಣ್ಣಿಗೆ ವಧುದಕ್ಷಿಣೆ ಕೊಡಬೇಕುಮದುವೆ ನಡೆಯುವುದು ರಾತ್ರಿ ಹೊತ್ತಲ್ಲಿವಿವಾಹ ವಿಚ್ಛೇದನೆ ಸಮಯದಲ್ಲಿ ಹೆಂಡತಿಯು ಮದುವೆ ಸಮಯದಲ್ಲಿ ತನಗೆ ಕೊಡಲ್ಪಟ್ಟ ವಧುದಕ್ಷಿಣೆಯಲ್ಲಿ ಅರ್ಧಾಂಶವನ್ನು ಗಂಡಿಗೆ ಹಿಂತಿರುಗಿಸಬೇಕು.

ಇವೆಲ್ಲಕ್ಕೂ ಹೆಚ್ಚು ಸ್ವಾರಸ್ಯಕರವಾದುದು ಹಕ್ಕಿಪಿಕ್ಕಿಗಳ ಹೆಸರುಗಳುಬಸ್ಸುಟ್ರೈನ್ವಿಮಾನಕಾಂಪೌಂಡ್ಆಧಾರ್ ಕಾರ್ಡ್ಪಾಸ್ ಪೋರ್ಟ್ಪಿಸ್ತೂಲ್ವೋಟರ್ ಐಡಿ ಮೊದಲಾದವು ವಸ್ತುಗಳ ಹೆಸರು ಅನ್ನುವುದು ಎಲ್ಲರಿಗೂ ತಿಳಿದ ವಿಚಾರಹೈಕೋರ್ಟ್ಸುಪ್ರೀಂ ಕೋರ್ಟ್ಹೋಟೆಲ್ ಮೊದಲಾದವು ಕಟ್ಟಡಗಳ ಹೆಸರೆಂದು ಯಾರೂ ಹೇಳಬಹುದುಮೈಸೂರ್ ಪಾಕ್ಕಾಫಿಗ್ಲುಕೋಸ್ ಮೊದಲಾದವು ತಿಂಡಿಪಾನೀಯಗಳ ಹೆಸರೆನ್ನುವುದು ಯಾರಿಗೆ ತಿಳಿಯದುಹಾಗೆಯೇ ಕಾಂಗ್ರೆಸ್ಜನತಾಬಿಜೆಪಿ ಅನ್ನುವುದು ರಾಜಕೀಯ ಪಕ್ಷಗಳ ಹೆಸರೆನ್ನುವುದು ಮಕ್ಕಳಿಗೂ ಗೊತ್ತಿರುವ ವಿಚಾರಆದರೆಇವುಗಳೆಲ್ಲವೂ ಹಕ್ಕಿಪಿಕ್ಕಿ ವ್ಯಕ್ತಿಗಳ ಹೆಸರುಗಳು ಅಂದರೆ ನಂಬಲಾಗದಿದ್ದರೂ ನಂಬಲೇಬೇಕು!

ಹಕ್ಕಿಪಿಕ್ಕಿಗಳ ಹೆಸರುಗಳು ಮೇಲುನೋಟಕ್ಕೆ ತಮಾಷೆಯಾಗಿ ಕಂಡರೂ ವಾಸ್ತವದಲ್ಲಿ ಅವುಗಳು ಈ ಜನಾಂಗದ ದುರಂತಮಯ ಬದುಕಿನ ಸ್ಥಿತಿಯನ್ನು ಹೇಳುತ್ತವೆಕಾಡುಗಳಲ್ಲಿ ವಾಸಿಸುತ್ತಿದ್ದಾಗ ಹಕ್ಕಿಪಿಕ್ಕಿಗಳು ತಮ್ಮ ಮಕ್ಕಳಿಗೆ ತಾವು ಪೂಜಿಸುವ ಬೆಟ್ಟಗುಡ್ಡನದಿತೊರೆಗಳ ಹೆಸರಿಡುತ್ತಿದ್ದರುಕಾಡಿನಿಂದ ಹೊರದಬ್ಬಲ್ಪಟ್ಟು ತಮ್ಮದಲ್ಲದ ನೆಲೆಗಳಲ್ಲಿ ವಾಸಿಸಲು ಶುರುಮಾಡಿದಂದಿನಿಂದ ಅವರ ಸಾಮಾನ್ಯ ಜೀವನದೊಂದಿಗೆ ಅವರು ತಮ್ಮ ಮಕ್ಕಳಿಗೆ ಹೆಸರಿಡುವ ಕ್ರಮವೂ ಬದಲಾಯಿತುನದಿ ತೊರೆ ಬೆಟ್ಟಗುಡ್ಡಗಳ ಬದಲಿಗೆ ನಗರ ಪ್ರದೇಶಗಳಲ್ಲಿ ಕಾಣಸಿಗುವ ವಸ್ತುಗಳುಸಿನಿಮಾಗಳಲ್ಲಿ ಕಾಣಿಸುವ ಹೀರೋ ಹೀರೋಯಿನ್‌ಗಳುಚುನಾವಣೆ ಸಮಯದಲ್ಲಿ ಮನೆ ಮನೆಗೆ ಓಡಾಡುವ ರಾಜಕಾರಣಿಗಳು ಮೊದಲಾದವರ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಡಲು ಶುರು ಮಾಡಿದರುನಗರವಾಸಿಗಳ ಬಾಯಲ್ಲಿ ಆಗಾಗ್ಗೆ ಉಚ್ಚರಿಸಲ್ಪಡುವ ಗೂಗಲ್ಇಂಗ್ಲಿಷ್ಒನ್ ಬೈ ಟೂ ಮೊದಲಾದ ಶಬ್ದಗಳೂ ಅವರ ಮಕ್ಕಳ ಹೆಸರಾದವುಶಾರುಖ್ ಖಾನ್ಸೋನಿಯಾ ಗಾಂಧಿಅಮಿತಾಭ್ ಬಚ್ಚನ್ಅನಿಲ್ ಕಪೂರ್ಜಿತೇಂದ್ರಎಲಿಜಬೆತ್ ಮೊದಲಾದ ಹೆಸರಿನ ಹಕ್ಕಿಪಿಕ್ಕಿಗಳೂ ಇದ್ದಾರೆಕಲೆಕ್ಟರ್ಮಿಲಿಟರಿಡಾಲರ್ಡಿವಿಸನ್ಬ್ರಿಟಿಷ್ಅಮೆರಿಕ ಎಂದು ಕರೆಯಲ್ಪಡುವ ಹಕ್ಕಿಪಿಕ್ಕಿಗಳೂ ಇದ್ದಾರೆ.

 

ಹೆಸರಿನಲ್ಲೇನಿದೆ?‘ ಎಂದು ಕೇಳಿದ್ದ ಶೇಕ್ಸ್‌ಪಿಯರ್ ಈಗೇನಾದರೂ ಇದ್ದು ಈ ಹಕ್ಕಿಪಿಕ್ಕಿಗಳನ್ನು ನೋಡಿದ್ದರೆ ಏನನ್ನುತ್ತಿದ್ದನೋಏನೇ ಇರಲಿದೂರದ ಯುದ್ಧಗ್ರಸ್ತ ಸುಡಾನಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಈ ಬಡಪಾಯಿಗಳು ಸುರಕ್ಷಿತವಾಗಿ ವಾಪಸ್ ಬರುವಂತಾಗಲಿ ಎಂದು ಹಾರೈಸೋಣಕಾಡುಗಳಿಂದ ಹಕ್ಕಿಪಿಕ್ಕಿಗಳನ್ನು ಹೊರ ಹಾಕಿದ ಸರ್ಕಾರ ಇನ್ನಾದರೂ ನಾಡಿನಲ್ಲಿ ಇವರು ಇತರರಂತೆ ಗೌರವಯುತ ಬದುಕು ನಡೆಸಲು ಬೇಕಾದುದನ್ನು ಒದಗಿಸಲಿ ಎಂದು ಒತ್ತಾಯಿಸೋಣ.

andolanait

Recent Posts

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

5 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

5 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

5 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

8 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

8 hours ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

8 hours ago