ಎಡಿಟೋರಿಯಲ್

ಬೇಡೋ ಗುಣ ಮನುಷ್ಯನ ಸಣ್ಣವನಾಗಿ ಮಾಡುತ್ತೆ

ಸಿದ್ದೇಶ್ವರ ಸ್ವಾಮೀಜಿ

ಸುಮ್ಮನೆ ಒಂದು ಸುಂದರ ಕಥೆ ಇದು. ಒಬ್ಬ ತಾಯಿ ಮಗ ಇದ್ರು, ತಂದೆ ತೀರಿಕೊಂಡಿದ್ದ. ಆವಾಗ ತಾಯಿ ಮಗನನ್ನು ಬೆಳೆಸಿದ್ಲು. ಆದರೆ, ಮಗ ಒಂದೂ ಚಲೋ ಕೆಲಸ ಮಾಡ್ಲಿಲ್ಲ, ಏನೇನು ಮಾಡಬಾರದು ಅಂತ ತಾಯಿ ಹೇಳ್ತಿದ್ಲೊ ಅದನ್ನ ಮಾಡ್ತಾ ಇದ್ದ. ಒಂದು ದಿವಸ ಇಬ್ಬರು ಒಂದೇ ಸಲ ಪ್ರಾಣ ಬಿಟ್ರು. ಅಲ್ಲಿಂದ ಇಬ್ರು ಹೋದರು ಆ ಕಡೆ ಸ್ವರ್ಗದ ಬಾಗಿಲು, ಈ ಕಡೆ ನರಕದ ಬಾಗಿಲು. ಸ್ವರ್ಗದ ಬಾಗಿಲ ತಟ್ಟಿದ್ಲು ತಾಯಿ. ಆಗ ದೇವದೂತ ಬಾಗಿಲ ತೆಗೆದ ಹುಡುಗ, ಹುಡಗನ ತಾಯಿ ಇಬ್ಬರನ್ನೂ ನೋಡ್ದ. ಆಗ ಅವನಿಗೆ ಗೊತ್ತಾಯಿತು ‘ಒಬ್ರು ಶುದ್ಧ, ಇನ್ನೊಬ್ಬರು ಅಶುದ್ಧ’. ಅವಾಗ ಆತ ಹೇಳ್ದ, ‘ತಾಯಿಯೇ ನಿನಗ ಬಾಗಿಲ ತೆರೆದದ ನಿನ್ನ ಮಗನಿಗಲ್ಲ’. ಆಗ ತಾಯಿ ಹೇಳಿದ್ಲು, ‘ನನಗೆ ಯಾಕ ತೆರೆದದೆ ಹೇಳು’ ಅಂದ್ಲು. ಅವ ಹೇಳ್ದ, ‘ನೀನು ಬಹಳ ಸ್ವಚ್ಛ’ ಆದ್ದರಿಂದ ತೆರೆದದೆ. ಆಗಿತ್ತು ಅಂದ್ರ, ‘ನಾನು ಯಾವುದನ್ನು ಅನುಭವಿಸಬೇಕೋ ಅದನ್ನು ಮಗನಿಗೆ ಕೊಡು, ಆತ ಏನನ್ನು ಅನುಭವಿಸಬೇಕೋ ನಾನು ಸ್ವೀಕರಿಸುತ್ತೇನೆ. ನಾನು ನರಕಕ್ಕೆ ಹೋಗ್ತೀನಿ’ ಅಂದ್ಲು. ಎಚ್ಚರ ಆಯ್ತು. ನೋಡಿದ್ರ ಕನಸಿದು. ಇದು ತಾಯಿಗೆ ಬಿದ್ದ ಕನಸಲ್ಲ ಹುಡುಗನಿಗೆ ಬಿದ್ದ ಕನಸು.

ಜೀವನ ಬದಲಾಯಿತು. ಹುಡುಗನಿಗೆ ಕಣ್ಣಲ್ಲಿ ನೀರು ಬಂತು. ತಾಯಿಯ ಪ್ರೇಮ ಎಂಬ ಅದ್ಭುತ ಅಂದ. ನಾನು ಆಕಿಯ ಒಂದೂ ಮಾತು ಕೇಳಲಿಲ್ಲ, ಜೀವನ ಹಾಳ ಮಾಡಕೊಂಡೆ. ಆಕೆ ಸ್ವರ್ಗವನ್ನೇ ನನಗಾಗಿ ಬಿಟ್ಟು, ನರಕಕ್ಕೆ ಹೊರಟಿದ್ಲು, ನಾನು ಆಕೆ ತೋರಿದ ಮಾರ್ಗಬಿಟ್ಟು ನರಕ ಕಟ್ಟಿಕೊಂಡೆ ಜೀವನದಲ್ಲಿ. ಎಂಥ ಅಪ್ರತಿಮಾ ಪ್ರೇಮ. ಮಿಶ್ರಣ ಇಲ್ಲ. ‘ಸ್ವಚ್ಛ ಕೊಡೋದೆ, ವಿನಃ ಬೇಡೋದಲ್ಲ’. ಅಂಥ ಶುದ್ಧ ಹೃದಯ ಅಲ್ಲಿ ತ್ಯಾಗ, ಭಕ್ತಿ ಎರಡೂ ಕೂಡಿ ಹೋಗ್ತಾವ. ತ್ಯಾಗ ಪರಮಪ್ರೇಮ ಎರಡು ಕೂಡಿ ಹೋಗ್ತಾವಾ. ಇದೇ ಹುಡುಗ ಮುಂದೆ ಒಬ್ಬ ಶ್ರೇಷ್ಠ ಸಂತನಾದ. ಬರೀ ಒಂದು ಕನಸಿನಿಂದ ಮನಸ್ಸು ಬದಲಾಗಿತ್ತು ಜೀವನ. ಕಲಿಸಿಕೊಟ್ಟಿತ್ತು ಏನು? ಪವಿತ್ರ ಪ್ರೇಮ. ಎಂಥ ಜೀವನ ಇದನ್ನು ಪರಿಶುದ್ಧಗೊಳಿಸಬೇಕು ಅಂತ ಹೊರಟ. ಆತನ ಮಾತುಗಳೆಲ್ಲ ಹರುವ್ಯಾವ ಐರೋಪ್ಯ ದೇಶದೊಳಗ ಆ ಮಾತುಗಳ ಮಧ್ಯದಲೆಲ್ಲ ‘ಲವ್ ಡಿವೈನ್’.

ಪ್ರೇಮ ಸುಮ್ಮನೆ ಹಿಂಗ ಹರವುಬೇಕು. ‘ತ್ಯಾಗ, ಪ್ರೇಮ ಎರಡರ ಮಿಶ್ರಣ ಅದೇ ಭಕ್ತಿ ಮಾರ್ಗ’. ಎಂಥ ಸುಂದರವಾದ ಮಾರ್ಗ ಇದು. ‘ಎಲ್ಲಿ ತ್ಯಾಗ ಇರ್ತದೆ, ಎಲ್ಲಿ ಭಕ್ತಿ ಇರ್ತದ, ಅಲ್ಲಿ ಸಂತೋಷ ಇರ್ತದೆ’. ‘ಎಲ್ಲಿ ಪ್ರೇಮದ ಕೊರತೆ ಇರ್ತದೆ, ಎಲ್ಲಿ ತ್ಯಾಗದ ಕೊರತೆ ಇರ್ತದ, ಅಲ್ಲಿ ಅಸಂತೋಷ ಹರವಿಕೊಂಡಿರುತ್ತದೆ’. ನಾವು ಇಷ್ಟೇಕೇ ಅಸಂತೋಷಿಗಳಾಗುತ್ತಿದ್ದೇವೆ? ನಮ್ಮಲ್ಲಿ ಎರಡರ ಕೊರತೆ, ಒಂದು ‘ಬೇಕು ಅನ್ನೊದು ಕಡಿಮೆಯಾಗ್ತಿಲ್ಲ, ಪ್ರೇಮ ಇದು ಹರುವುತಾಯಿಲ್ಲ’ ಅಷ್ಟೆ.

ಪ್ರತಿಯೊಂದು ವಸ್ತುವಿಗೆ ನಾವು ಬೆಲೆ ಕಟ್ಟೋಕೆ ಶುರು ಮಾಡೀವಿ. ಮನಿಗೆ ಯಾರಾದರೂ ಬಂದು ಒಂದು ಕಪ್ಪು ನೀರ ಕೊಡಿ ಅಂತ ಕೇಳಿದ್ದರ, ನಮ್ಮ ಮನಸ್ಸಿನಲ್ಲಿ ಒಂದು ಕಪ್ಪಂದರೆ ಎಷ್ಟು? ಒಂದು ಬಾಟಲಿ. ಬಾಟಲಿ ಕಿಮ್ಮತ್ತು ಎಷ್ಟು? ೧೫ ರೂ. ಈ ಮನುಷ್ಯನಿಗೆ ಒಂದು ಬಾಟಲು ನೀರು ಕೊಟ್ರೇ ೧೫ ರೂ. ಖರ್ಚಾಗ್ತದ. ಹಿಂಗಾ, ಆಲೋಚನಿ. ಆದರೆ, ಆಕಾಶದಿಂದ ಧಾರಾಕಾರವಾಗಿ ಜಗತ್ತು ನೀರಾ ಕಂಡಿತ್ತು. ಮೇಘ ಏನಾರ ಬಿಲ್ ಕಳುಹಿಸಿದರೇ ಮನುಷ್ಯನ ಗತಿ ಏನು? ಮನುಷ್ಯ ಬದುಕಲು ಸಾಧ್ಯವೇ? ಹತ್ತು ನಿಮಿಷದಾಗ ನೀರು ಜಗತ್ತಿನಾದ್ಯಂತ. ಆದರೆ ಅದು ಒಂದು ದಿವಸ ಇಂಥವರ ಮನಿಗೆ ನೀರಾ ಕೊಟ್ಟಿನೀ ಅಂತ ಅಂದಿಲ್ಲ. ಸುಮ್ಮನೆ ಸುರುಸ್ತ ಹೋಗ್ತದೆ. ‘ಭೂಮಿ ಬೆಳೆದು ಹಸಿರಾಗ್ತದೆ. ಮನುಷ್ಯ ಉಸಿರಾಡುತ್ತಾನೆ’. ಅದೇ ನೀರು ತಕೊಂಡು ಭಿಕ್ಷಾ ಬೇಡ್ತಾನೆ ಅಂದ್ರ ನಮ್ಮ ಮನಸ್ಸು ಎಷ್ಟು ಸಣ್ಣದಾಗಿ ಅದೆ. ಮನಸ್ಸೇ ಹಂಗ ಹಾಗ್ತದೆ ಏನು ಮಾಡಕ ಆಗ್ತದೆ. ಒಂದು ಕಪ್ ನೀರು ಕೊಟ್ರೇ, ಕರ್ಮಷಿಯಲ್ ಚಿಂತನೆ ಶುರುವಾಗ್ತದಲ್ಲ ಇದೆಂತಹ ಯೋಚನೆ. ಪ್ರತಿಯೊಂದಕ್ಕೂ ಬೆಲೆ. ಒಂದು ಮಗುವನ್ನು ನೋಡಿಕೊಳ್ಳೊಕೆ ಒಂದು ತಾಯಿ ಹತ್ರ ಕೊಟ್ರೇ ಒಂದು ತಾಸಿಗೆ ೩೦ ರೂಪಾಯಿ. ಪರದೇಶದಾಗ ಈ ಪರಿಸ್ಥಿತಿ ಇದೆ.

ಎಂಥ ಸುಂದರ ಜಗತ್ತು ಇತ್ತು. ಆದರೆ ಮನಸ್ಸುಗಳು ಎಷ್ಟು ಬದಲಾಗಿಬಿಟ್ಟೂ, ಸುರಿಯುವ ನೀರ ಇನ್ನಾ ಸುರಿಸ್ತಾದ, ಹರಿಯುವ ನದಿಗಳು ಇನ್ನಾ ಹರೀತಾವೆ. ಆದರೆ ನಮ್ಮ ಮನಸ್ಸುಗಳು ಹೊಲಸಾಗವೆ. ಅಷ್ಟೆ ಯಾಕೆ? ಹೊಲಸು ಅಂದರೇನು? ಶುದ್ಧವಾದ ಪ್ರೇಮದ ಕೊರತೆ, ಆ ಬಳಿಕ ಭಿಕ್ಷಾವೃತ್ತಿ. ಭಗವಂತನೇ ಇಷ್ಟದಲ್ಲ ಸಾಕು ಅಂತ ಒಂದು ಸಲ ಒಬ್ಬರೇ ವರ? ಈಗ ವರನೇ ಹೆಣ್ಣು ಮಕ್ಕಳ ಎದುರ ಬೀಕ್ಷಾ ಬೇಡಕತ್ತಿದ್ರಾ ವರ ಹೆಂಗ ಆಗ್ತಾನೆ? ಅವ. ಸುಮ್ಮನೆ ವಿಚಾರ ಮಾಡ್ರೀ, ಯಾರು ಯಾರ ಎದರು ಬೇಡಬೇಕು? ಯಾರು ಪುರುಷರು, ಸಮರ್ಥರೋ ಅವರು ಕೊಡಬೇಕು, ಆದರೆ ಅವರೇ ಬೇಡಾಕ ನಿಂತರೇ ಗತಿ ಏನು? ಬೇಡೋ ಗುಣ ಅದಲ್ಲ, ಇದು ಬಳ ವಿಚಿತ್ರ. ಅದ ನಮ್ಮನ್ನ ಸಣ್ಣವರನ್ನಾಗಿ ಮಾಡ್ತದಾ. ಮನುಷ್ಯ ಯಾಕೆ ಸಣ್ಣವ ಆದಾ ಅಂದ್ರ ‘ಎದಿ ಕಡಿಮೆಯಾಗ್ತ ಬಂತು. ತಲಿ ಬೆಲೆ ಕಟ್ಟಿತ್ತು’. ಎದಿ ಬಾಡಿ ಹೋಯ್ತು.

andolanait

Recent Posts

ಸಂವಿಧಾನದಿಂದಲೇ ನಾನಿಂದು ಮುಖ್ಯಮಂತ್ರಿ ಆಗಿದ್ದೇನೆ : ಸಿದ್ದರಾಮಯ್ಯ

ಬೆಂಗಳೂರು : ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು ಮುಖ್ಯಮಂತ್ರಿಯಾಗಿ ಜನಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ…

8 mins ago

ಐಪಿಎಲ್‌ ಪಂದ್ಯ : ಏಪ್ರಿಲ್‌ 15, 24ರಂದು ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರು : ಟಾಟಾ ಐಪಿಎಲ್‌ನ ಕ್ರಿಕೆಟ್‌ ಪಂದ್ಯಗಳು ಏಪ್ರಿಲ್ ‌15 ಹಾಗೂ ಏಪ್ರಿಲ್ ‌24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.…

16 mins ago

ನಿತೀಶ್ ಕುಮಾರ್ ರಾಜೀನಾಮೆ; ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ

ಪಾಟ್ನಾ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಬಿಹಾರದ ಹೊಸ…

25 mins ago

ಟಿಪ್ಪರ್-ಕಾರು ನಡುವೆ ಅಪಘಾತ : ತಾಯಿ ಮಗಳು ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ : ಕೇರಳ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್‌ಗೆ ಕಾರುವೊಂದು ಡಿಕ್ಕಿ ಹೊಡೆದು ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಮಂಗಳವಾರ…

39 mins ago

ಸಿಎಂ ರಾಜಕೀಯ ಕಾರ್ಯದರ್ಶಿ ವಜಾ : ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಜೀರ್‌ ಅಹಮ್ಮದ್‌ ಬಿಡುಗಡೆಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ…

1 hour ago

ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌, ಸ್ಟವ್‌ ಪತ್ತೆ

ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿರುವ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ…

3 hours ago