ಎಡಿಟೋರಿಯಲ್

ಮರಳಿ ಬಾಲ್ಯದ ಕಾಲು ದಾರಿಯಲಿ

ನನ್ನ ಅಪ್ಪ ನನ್ನ ಮಗಳಿಗೆ ಆಟ ಆಡಿಸುವಾಗ ಯಾವಾಗಲೂ ಹೇಳುತ್ತಿದ್ದ ಮಾತು, ನಾನು ನೀನು ಇಬ್ಬರು ಒಂದೇ ನನಗೂ ಹಲ್ಲಿಲ್ಲ ನಿನಗೂ ಹಲ್ಲುಗಳಿಲ್ಲ, ನನಗೂ ಕೂದಲಿಲ್ಲ ನಿನಗೂ ಇಲ್ಲ ಅಂತ, ಆದರೆ ಇಂದು ಅವರ ನೆನಪಿನಲ್ಲಿ ಅದು ನಿಜ ಅನಿಸುತ್ತಿದೆ. ಹೌದು ತಿನ್ನಲು ಹಲ್ಲುಗಳಿರುವುದಿಲ್ಲ ಆದರೆ ತಿನ್ನೋ ಆಸೆ , ಅದೇ ರೀತಿ ನಡೆಯಲು ಶಕ್ತಿ ಇರುವುದಿಲ್ಲ ಎಲ್ಲಾ ಕಡೆ ಓಡುವ ಮನಸ್ಸು ನೋಡಿ, ನಮ್ಮ ದೇಹವನ್ನು ಭಗವಂತ ಮರಳಿ ಬಾಲ್ಯದೊಳಗೆ ಕಳುಹಿಸುತ್ತಾನೆ ಎಂದರೆ ತಪ್ಪಾಗುವುದಿಲ್ಲ.

ನೋಡಿ ಆಹಾರ ಪದ್ಧತಿಯಲ್ಲೂ ಸಹ ಮೆತ್ತಗಿನ ಆಹಾರವನ್ನು ನಮ್ಮ ದೇಹ ಒಪ್ಪುತ್ತದೆ ಅಲ್ಲವೇ. ನಾವು ನಮ್ಮ ಬಾಲ್ಯದಲ್ಲಿ ಆಡಿದ ಹಲವಾರು ಆಟಗಳನ್ನು ಮೊಮ್ಮಕ್ಕಳೊಂದಿಗೆ ಆಡಬಹುದು. ಸಾಮಾನ್ಯವಾಗಿ ಎಲ್ಲರಿಗೂ ಅಪ್ಪ-ಅಮ್ಮನಿಗಿಂತ ಅಜ್ಜಿ ತಾತನನ್ನು ಕಂಡರೆ ಒಂದು ಚೂರು ಪ್ರೀತಿ ಹೆಚ್ಚು . ಕಾರಣ ಮಕ್ಕಳ ಜೊತೆ ಆಡಲು ಆಗ ಜವಾಬ್ದಾರಿ ಹಾಗೂ ಸಮಯ ಇರುವುದಿಲ್ಲ.

ಈಗ ನಿವೃತ್ತಿಯ ಸಮಯ ಅದರ ಜೊತೆಗೆ ಮಕ್ಕಳೊಂದಿಗೆ ಆಡದ ಆಟಗಳನ್ನು ಮೊಮ್ಮಕ್ಕಳೊಂದಿಗೆ ಮತ್ತೆ ಆಡಬಹುದು. ಚೌಕಾಬಾರ ಆಟವಾಡುತ್ತಾ ಗಣಿತವನ್ನು ಹೇಳಿಕೊಟ್ಟರೆ, ಅಳುಗುಳಿ ಮನೆ ಆಡುತ್ತಾ ನೆನಪಿನ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ, ಅಷ್ಟೇ ಅಲ್ಲದೆ ಅಂತ್ಯಾಕ್ಷರಿ ಹಾಡುಗಳು , ಮೊಮ್ಮಕ್ಕಳೊಂದಿಗೆ ಕಾರ್ಟೂನ್ ವೀಕ್ಷಣೆ, ಕದ್ದು ಮುಚ್ಚಿ ಮೊಮ್ಮಕ್ಕಳೊಂದಿಗೆ ತಿನ್ನುವ ಐಸ್ ಕ್ರೀಮ್, ನಿಜಕ್ಕೂ ಮರಳಿ ಬಾಲ್ಯಕ್ಕೆ ಹೋಗಬಹುದು. ಎಷ್ಟೋ ಜನ ಅಜ್ಜಿ ತಾತಂದಿರು ಮೊಮ್ಮಕ್ಕಳಿಗೋಸ್ಕರ ಇಂಟರ್‌ನೆಟ್ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಬಳಸುವುದನ್ನ ಕಲಿತಿದ್ದಾರೆ ಕಾರಣ ಫೋನ್ನಲ್ಲಾದರೂ ಅವರೊಂದಿಗೆ ಮಾತನಾಡಬಹುದು ಎಂದು.

ಸಂಜೆ ವಾಕಿಂಗಿಗೆ ಹೋದಾಗ ತೆಂಗಿನ ಗರಿಯನ್ನು ಕಿತ್ತು ಅದರೊಂದಿಗೆ ಮೊಮ್ಮಕ್ಕಳಿಗೆ ವಾಚ್ ಮಾಡಿ ನಾವು ನಮ್ಮ ಕಾಲದಲ್ಲಿ ಈ ರೀತಿ ಹಾಕಿಕೊಳ್ಳುತ್ತಿದ್ದೆವು ಎಂದಾಗ ಅವರ ಮುಖದಲ್ಲಿ ಮೂಡುವ ನಗು ವಿಶೇಷ. ಅಷ್ಟೇ ಅಲ್ಲ ಅಜ್ಜಿ ಮಡಿಲಲ್ಲಿ ಓಡಿ ಬಂದು ಮಲಗಿದಾಗ ಅಜ್ಜಿಮೊಮ್ಮಕ್ಕಳ ತಲೆಯನ್ನು ಸವರುತ್ತಾ ಕಥೆ ಹೇಳುವುದೇ ಒಂದು ಸಂಭ್ರಮ. ಅದರಲ್ಲೂ ಆ ಕಥೆಗಳು ನಮ್ಮ ಪುರಾಣದ ಕಥೆಗಳಾಗಿದ್ದರೆ ಮೊಮ್ಮಕ್ಕಳಿಗೆಇನ್ನೂ ಆಸಕ್ತಿ ಹೆಚ್ಚು . ಅದರೊಂದಿಗೆ ನಮ್ಮ ಪುರಾಣದ ಕಥೆಗಳನ್ನು ಮುಂದಿನ ಪೀಳಿಗೆಗೆ ಹೇಳಿದಂತಹ ಸಂಭ್ರಮ. ಅಷ್ಟೇ ಅಲ್ಲ ಪಿಜ್ಜಾ, ಬರ್ಗರ್ ಎನ್ನುತ್ತಿದ್ದ ಮಕ್ಕಳಿಗೆ ವಿವಿಧ ಬಗೆಯ ಸಂಜೆಯ ತಿನಿಸುಗಳನ್ನುಮಾಡಿ ಇದನ್ನು ರುಚಿ ನೋಡು ಎಂದಾಗ ನಮ್ಮ ಬಾಲ್ಯವೂ ಸಹ ನೆನಪಾಗುತ್ತದೆ .

ಅದರಲ್ಲೂ ಈಗಿನ ಮಕ್ಕಳಿಗೆ ಮೊಬೈಲನ್ನು ಹೇಗೆ ಬಳಸಬೇಕು ಎಂದು ಕೇಳಿದಾಗ ಅವರು ನಮಗೆ ಗುರುಗಳಾಗಿ ಹೇಳಿಕೊಡುತ್ತಾರೆ . ನಮ್ಮ ಎಲ್ಲಾ ಸಂಪ್ರದಾಯದ ಗುರುಗಳಾಗಿ ನೀವು ನಿಮ್ಮ ಮುಂದಿನ ಪೀಳಿಗೆಗೆ ಎಲ್ಲವನ್ನೂ ಧಾರೆ ಎರೆದು ಕೊಡಿ ಹಾಗೂ ನಿಮ್ಮ ಅನುಭವದ ಆ ಪಾಠ ಎಷ್ಟೇ ಹಣ ಕೊಟ್ಟರೂ ಸಿಗುವುದಿಲ್ಲ ಅದೆಲ್ಲವೂ ನಿಮ್ಮ ಮೊಮ್ಮಕ್ಕಳಿಗೆ ಸಿಗಲಿ ಎಂದು ಆಶಿಸುವೆ.

-ಸೌಮ್ಯ ಕೋಠಿ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮನೆಯ ಚಾವಣಿ ಕುಸಿದು ನಾಲ್ವರು ಸಾವು ; ತಲಾ 5 ಲಕ್ಷ ಪರಿಹಾರ ಘೋಷಣೆ

ವಿಜಯಪುರ : ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ…

14 hours ago

ಡಿ.ಕೆ.ಶಿವಕುಮಾರ್‌ ಜನ್ಮದಿನಾಚರಣೆ : ರಾರಾಜಿಸಿದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಬ್ಯಾನರ್‌ಗಳು

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ದಂಡೇ…

15 hours ago

ದರ್ಶನ್‌ಗೆ ಇನ್ನೂ ಒಂದು ವರ್ಷ ಜಾಮೀನು ಇಲ್ಲ : ಅರ್ಜಿ ವಜಾಗೊಳಿಸಿದ ಸುಪೀಂ

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು, ಇನ್ನು ಒಂದು…

15 hours ago

ಜೂನ್‌ 21ರಂದು ನೀಟ್-ಯುಜಿ 2026ರ ಮರು ಪರೀಕ್ಷೆ

ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ‘ನೀಟ್-ಯುಜಿ 2026’ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಜೂನ್…

17 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

20 hours ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

21 hours ago