ಎಡಿಟೋರಿಯಲ್

ಮರಳಿ ಬಾಲ್ಯದ ಕಾಲು ದಾರಿಯಲಿ

ನನ್ನ ಅಪ್ಪ ನನ್ನ ಮಗಳಿಗೆ ಆಟ ಆಡಿಸುವಾಗ ಯಾವಾಗಲೂ ಹೇಳುತ್ತಿದ್ದ ಮಾತು, ನಾನು ನೀನು ಇಬ್ಬರು ಒಂದೇ ನನಗೂ ಹಲ್ಲಿಲ್ಲ ನಿನಗೂ ಹಲ್ಲುಗಳಿಲ್ಲ, ನನಗೂ ಕೂದಲಿಲ್ಲ ನಿನಗೂ ಇಲ್ಲ ಅಂತ, ಆದರೆ ಇಂದು ಅವರ ನೆನಪಿನಲ್ಲಿ ಅದು ನಿಜ ಅನಿಸುತ್ತಿದೆ. ಹೌದು ತಿನ್ನಲು ಹಲ್ಲುಗಳಿರುವುದಿಲ್ಲ ಆದರೆ ತಿನ್ನೋ ಆಸೆ , ಅದೇ ರೀತಿ ನಡೆಯಲು ಶಕ್ತಿ ಇರುವುದಿಲ್ಲ ಎಲ್ಲಾ ಕಡೆ ಓಡುವ ಮನಸ್ಸು ನೋಡಿ, ನಮ್ಮ ದೇಹವನ್ನು ಭಗವಂತ ಮರಳಿ ಬಾಲ್ಯದೊಳಗೆ ಕಳುಹಿಸುತ್ತಾನೆ ಎಂದರೆ ತಪ್ಪಾಗುವುದಿಲ್ಲ.

ನೋಡಿ ಆಹಾರ ಪದ್ಧತಿಯಲ್ಲೂ ಸಹ ಮೆತ್ತಗಿನ ಆಹಾರವನ್ನು ನಮ್ಮ ದೇಹ ಒಪ್ಪುತ್ತದೆ ಅಲ್ಲವೇ. ನಾವು ನಮ್ಮ ಬಾಲ್ಯದಲ್ಲಿ ಆಡಿದ ಹಲವಾರು ಆಟಗಳನ್ನು ಮೊಮ್ಮಕ್ಕಳೊಂದಿಗೆ ಆಡಬಹುದು. ಸಾಮಾನ್ಯವಾಗಿ ಎಲ್ಲರಿಗೂ ಅಪ್ಪ-ಅಮ್ಮನಿಗಿಂತ ಅಜ್ಜಿ ತಾತನನ್ನು ಕಂಡರೆ ಒಂದು ಚೂರು ಪ್ರೀತಿ ಹೆಚ್ಚು . ಕಾರಣ ಮಕ್ಕಳ ಜೊತೆ ಆಡಲು ಆಗ ಜವಾಬ್ದಾರಿ ಹಾಗೂ ಸಮಯ ಇರುವುದಿಲ್ಲ.

ಈಗ ನಿವೃತ್ತಿಯ ಸಮಯ ಅದರ ಜೊತೆಗೆ ಮಕ್ಕಳೊಂದಿಗೆ ಆಡದ ಆಟಗಳನ್ನು ಮೊಮ್ಮಕ್ಕಳೊಂದಿಗೆ ಮತ್ತೆ ಆಡಬಹುದು. ಚೌಕಾಬಾರ ಆಟವಾಡುತ್ತಾ ಗಣಿತವನ್ನು ಹೇಳಿಕೊಟ್ಟರೆ, ಅಳುಗುಳಿ ಮನೆ ಆಡುತ್ತಾ ನೆನಪಿನ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ, ಅಷ್ಟೇ ಅಲ್ಲದೆ ಅಂತ್ಯಾಕ್ಷರಿ ಹಾಡುಗಳು , ಮೊಮ್ಮಕ್ಕಳೊಂದಿಗೆ ಕಾರ್ಟೂನ್ ವೀಕ್ಷಣೆ, ಕದ್ದು ಮುಚ್ಚಿ ಮೊಮ್ಮಕ್ಕಳೊಂದಿಗೆ ತಿನ್ನುವ ಐಸ್ ಕ್ರೀಮ್, ನಿಜಕ್ಕೂ ಮರಳಿ ಬಾಲ್ಯಕ್ಕೆ ಹೋಗಬಹುದು. ಎಷ್ಟೋ ಜನ ಅಜ್ಜಿ ತಾತಂದಿರು ಮೊಮ್ಮಕ್ಕಳಿಗೋಸ್ಕರ ಇಂಟರ್‌ನೆಟ್ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಬಳಸುವುದನ್ನ ಕಲಿತಿದ್ದಾರೆ ಕಾರಣ ಫೋನ್ನಲ್ಲಾದರೂ ಅವರೊಂದಿಗೆ ಮಾತನಾಡಬಹುದು ಎಂದು.

ಸಂಜೆ ವಾಕಿಂಗಿಗೆ ಹೋದಾಗ ತೆಂಗಿನ ಗರಿಯನ್ನು ಕಿತ್ತು ಅದರೊಂದಿಗೆ ಮೊಮ್ಮಕ್ಕಳಿಗೆ ವಾಚ್ ಮಾಡಿ ನಾವು ನಮ್ಮ ಕಾಲದಲ್ಲಿ ಈ ರೀತಿ ಹಾಕಿಕೊಳ್ಳುತ್ತಿದ್ದೆವು ಎಂದಾಗ ಅವರ ಮುಖದಲ್ಲಿ ಮೂಡುವ ನಗು ವಿಶೇಷ. ಅಷ್ಟೇ ಅಲ್ಲ ಅಜ್ಜಿ ಮಡಿಲಲ್ಲಿ ಓಡಿ ಬಂದು ಮಲಗಿದಾಗ ಅಜ್ಜಿಮೊಮ್ಮಕ್ಕಳ ತಲೆಯನ್ನು ಸವರುತ್ತಾ ಕಥೆ ಹೇಳುವುದೇ ಒಂದು ಸಂಭ್ರಮ. ಅದರಲ್ಲೂ ಆ ಕಥೆಗಳು ನಮ್ಮ ಪುರಾಣದ ಕಥೆಗಳಾಗಿದ್ದರೆ ಮೊಮ್ಮಕ್ಕಳಿಗೆಇನ್ನೂ ಆಸಕ್ತಿ ಹೆಚ್ಚು . ಅದರೊಂದಿಗೆ ನಮ್ಮ ಪುರಾಣದ ಕಥೆಗಳನ್ನು ಮುಂದಿನ ಪೀಳಿಗೆಗೆ ಹೇಳಿದಂತಹ ಸಂಭ್ರಮ. ಅಷ್ಟೇ ಅಲ್ಲ ಪಿಜ್ಜಾ, ಬರ್ಗರ್ ಎನ್ನುತ್ತಿದ್ದ ಮಕ್ಕಳಿಗೆ ವಿವಿಧ ಬಗೆಯ ಸಂಜೆಯ ತಿನಿಸುಗಳನ್ನುಮಾಡಿ ಇದನ್ನು ರುಚಿ ನೋಡು ಎಂದಾಗ ನಮ್ಮ ಬಾಲ್ಯವೂ ಸಹ ನೆನಪಾಗುತ್ತದೆ .

ಅದರಲ್ಲೂ ಈಗಿನ ಮಕ್ಕಳಿಗೆ ಮೊಬೈಲನ್ನು ಹೇಗೆ ಬಳಸಬೇಕು ಎಂದು ಕೇಳಿದಾಗ ಅವರು ನಮಗೆ ಗುರುಗಳಾಗಿ ಹೇಳಿಕೊಡುತ್ತಾರೆ . ನಮ್ಮ ಎಲ್ಲಾ ಸಂಪ್ರದಾಯದ ಗುರುಗಳಾಗಿ ನೀವು ನಿಮ್ಮ ಮುಂದಿನ ಪೀಳಿಗೆಗೆ ಎಲ್ಲವನ್ನೂ ಧಾರೆ ಎರೆದು ಕೊಡಿ ಹಾಗೂ ನಿಮ್ಮ ಅನುಭವದ ಆ ಪಾಠ ಎಷ್ಟೇ ಹಣ ಕೊಟ್ಟರೂ ಸಿಗುವುದಿಲ್ಲ ಅದೆಲ್ಲವೂ ನಿಮ್ಮ ಮೊಮ್ಮಕ್ಕಳಿಗೆ ಸಿಗಲಿ ಎಂದು ಆಶಿಸುವೆ.

-ಸೌಮ್ಯ ಕೋಠಿ, ಮೈಸೂರು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

11 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

11 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

11 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

11 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

11 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

11 hours ago