ಚಿಕ್ಕ ಗಡಿಯಾರದ ಪಕ್ಕದಲ್ಲಿರುವ ಗಾಡಿಯಲ್ಲಿ ದಿನವೂ ಮಹಾದೇವ ಅವರು ಸೊಪ್ಪು ಮಾರುತ್ತಿರುತ್ತಾರೆ. ಇವರದೇ ಸ್ವಂತ ಅಂಗಡಿಯಲ್ಲ. ಈ ಸಹಾಯಕ ಕೆಲಸಕ್ಕೆ ಸೇರಿ ಒಂದು ವರ್ಷ ಆಗಿದ್ದಷ್ಟೇ. ಈ ಹಿಂದೆ ಪಾಂಡವಪುರದ ಬಳಿ ಇರುವ ತಮ್ಮ ಗದ್ದೆಯಲ್ಲಿ ಉಳುಮೆ ಮಾಡುತ್ತಾ, ಸೊಪ್ಪು ಕಡಿಯುತ್ತಾ ಬದುಕು ಸಾಗಿಸುತ್ತಿದ್ದ ಇವರು ಒಮ್ಮೆ ಚಿಕ್ಕ ಗಡಿಯಾರದ ಬಳಿ ಸುಮ್ಮನೆ ಕೂತಿದ್ದಾಗ, ಕರಿಯಪ್ಪ ಅವರು ಬಂದು ಸೊಪ್ಪು ಮಾರುವ ಕೆಲಸಕ್ಕೆ ಕರೆದರು. ಮಧ್ಯಾಹ್ನದ ಬಿಡುವಿನಲ್ಲಿ ಬಂದು ಮಾಡಬಹುದಲ್ಲಾ ಎಂದು ಯೋಚಿಸಿ, ಕರಿಯಪ್ಪನವರೊಡನೆ ಸಹಾಯಕರಾಗಿ ಕೆಲಸಕ್ಕೆ ಸೇರಿದರು.
ಮಹಾದೇವ ಅವರ ವಯಸ್ಸು 64. ವಿಶೇಷವೆಂದರೆ ಇವರ ದೇಹ, ಮನಸ್ಸಿಗೆ ವಯಸ್ಸಿನ ಲೆಕ್ಕ ತಿಳಿದಿಲ್ಲ. ಹಾಗಾಗಿ ತುಂಬು ಉತ್ಸಾಹದಿಂದ, ಶ್ರದ್ಧೆಯಿಂದ ತಮ್ಮ ಕೆಲಸ ನಿರ್ವಹಿಸುತ್ತಾರೆ. ಸಂಜೆ ಐದರ ಹೊತ್ತಿಗೆ ಸೊಪ್ಪು ಮಾರುವುದಕ್ಕೆಂದು ನಿಂತವರು ಮರಳಿ ಮನೆ ಸೇರುವುದು ಹನ್ನೊಂದಕ್ಕೆ ಆದರೆ ಮಕ್ಕಳಿಗೆ ಹೊರೆಯಾಗಿ ಬದುಕಬಾರದು ಎಂಬ ಜೀವನ ಸೂತ್ರವನು ಇವರು ಪಾಲಿಸುತ್ತಿದ್ದಾರೆ. ರಟ್ಟೆಯಲ್ಲಿ ಶಕ್ತಿ ಇರುವ ತನಕ ಕೆಲಸ ಮಾಡುತ್ತೇನೆಂಬ ಭರವಸೆ ಇವರಿಗಿದೆ. ಒಂದು ಕೆಲಸ ಕೈಕೊಟ್ಟರೆ ಇನ್ನೊಂದು ಆಧಾರ ವಾಗಿರುತ್ತದೆ ಎನ್ನುತ್ತಲೇ ಹೊಟ್ಟೆಪಾಡಿನ ಕತೆ ಹೇಳು ತ್ತಾರೆ. ಕೆಲಸ ಮಾಡುತ್ತಿರಬೇಕೆಂಬ ಮಹಾದೇವ ಅವರಲ್ಲಿ ಆರೋಗ್ಯದ ಗುಟ್ಟು ಕೇಳಿದರೆ ರಾಗಿಮುದ್ದೆ ಮತ್ತು ಹುರುಳಿಕಾಳು ಎನ್ನುತ್ತಾರೆ.
ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…
ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…
ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…
ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…
ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…
ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…