By: ಶ್ರೀಮತಿ ಹರಿಪ್ರಸಾದ್
ಪ್ರಪಂಚದಲ್ಲಿ 80 ವರ್ಷ ದಾಟಿದವರು ಶೇ.6-7ರಷ್ಟು ಮಂದಿ ಇರಬಹುದು. ಇದರಲ್ಲಿ ನಾನೂ ಒಬ್ಬಳು. ಇದಕ್ಕಾಗಿ ಪ್ರಕೃತಿಗೆ ನಾನು ಚಿರಋಣಿ.
ವಯೋಮಾನಕ್ಕೆ ತಕ್ಕಂತೆ ಸಾಕಷ್ಟು ಕೊರತೆಗಳು ನನ್ನಲ್ಲಿಯೂ ತಲೆಯೆತ್ತಿವೆ. ವಯಸ್ಸು ಮತ್ತು ಕೆಲವು ದೈಹಿಕ ಕಾರಣಗಳಿಂದ ಪ್ರತಿವರ್ತನೆ ಅಥವಾ ರಿಪ್ಲೆಕ್ಸ್ ಗಳು ನಿಧಾನವಾಗಿವೆ. ನಡಿಗೆ ಕೂಡ ಒಂದು. ಕೆಲಸಗಳು ನಿಧಾನ. ಮರೆವು- ಥಟ್ಟನೆ ನೆನಪು ಬಾರದಿರುವುದು. ನನ್ನ ದೈಹಿಕ ಕೆಲಸಗಳನ್ನು ನಾನೇ ಮಾಡಿಕೊಳ್ಳುವೆನಾದರೂ ಬಹುಶಃ ಮೈಗಿಂತ ಮನಸ್ಸು ಸ್ವಲ್ಪ ಫಾಸ್ಟ್ ಇರುವುದರಿಂದಲೋ ಅಥವಾ ನನ್ನ ಸಾಮರ್ಥ್ಯ ಇನ್ನೂ ಮೊದಲಿನಂತೆ ಇದೆ ಎಂದುಕೊಂಡಿದ್ದೇನೋ ಅರಿವಿಲ್ಲ. ಆಗಾಗ್ಗೆ ಸಾಮಾನುಗಳನ್ನು ಬೀಳಿಸುವುದು, ಪದಾರ್ಥಗಳನ್ನು ಚೆಲ್ಲುವುದು ನಡೆಯುತ್ತಿರುತ್ತವೆ. ಆದರೆ ನೆನಪು ಅಷ್ಟಾಗಿ ಮಾಸಿಲ್ಲ. ನನ್ನ ವಿಜ್ಞಾನ ಸಂವಹನ ಕೆಲಸಕ್ಕಾಗಿ ಸ್ವಲ್ಪ ಮಟ್ಟಿಗೆ ಓದಿಕೊಳ್ಳಲೇಬೇಕಾದ, ಅರ್ಥ ಮಾಡಿಕೊಂಡು ಸಂವಹಿಸಬೇಕಾದ ಒತ್ತಡಗಳಿರುತ್ತವೆ. ಆ ನಿರ್ದಿಷ್ಟತೆ ಮತ್ತು ಪದಬಂಧದಂತಹ ಕಸರತ್ತೂ ಉಂಟು.
ವಿಜ್ಞಾನ ಕಾರ್ಯಕ್ರಮಗಳ ಸಂಘಟಕಿಯಾಗಿ ಎರಡೂವರೆ ದಶಕಗಳ ಕಾಲ ಕೆಲಸ ಮಾಡಿರುವುದರಿಂದ ಸಂಘಟನೆಗಳ ನೀಲಿನಕ್ಷೆ ಇನ್ನೂ ತಲೆಯಲ್ಲಿದೆ. ನಾನು ಸಿಎಫ್ ಟಿಆರ್ ಐನಿಂದ ನಿವೃತ್ತಳಾದವಳು. ಅಲ್ಲಿ ರಾಷ್ಟ್ರೀಯ ಸಮಾವೇಶಗಳ, 5 ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ಸಮಾವೇಶ ಸಂಘಟನಾತ್ಮಕ ಕೆಲಸಗಳೆ ನಮ್ಮ ವಿಭಾಗಕ್ಕೆ ಬರುತ್ತಿದ್ದವು. ಇದರಿಂದ ನನ್ನದೇ ಆದ ಪ್ರಜ್ಞೆಯಿಂದ ಆ ಸಂಸ್ಥೆಯ ಹೊರಗೆ ಕರ್ನಾಟಕ ರಾಜ್ಯ ವಿಜ್ಞಾನ
ಪರಿಷತ್ತು (ಎನ್ಜಿಓ) ಪರವಾಗಿ (ಅದರ ಸ್ಥಾಪಕ ಸದಸ್ಯರಲ್ಲಿ ನಾನೂ ಒಬ್ಬಳು) ಮೂರು ರಾಷ್ಟ್ರೀಯ ಮಟ್ಟದ ಸಮಾವೇಶಗಳ ಹಾಗೂ 2 ರಾಜ್ಯ ಮಟ್ಟದ ಸಮಾವೇಶಗಳ ಕೋ ಆರ್ಡಿನೇಟರ್ ಆಗಿ ಸಂಘಟಿಸಿ, ನಡೆಸಿದ್ದೇನೆ. ರಂಗಭೂಮಿ ಯಲ್ಲಿಯೂ ಆರು ದಶಕಗಳ ಕಾಲ ಕೆಲಸ ಮಾಡಿದ್ದೇನೆ. ಈಗಲೂ ಕೆಲ ಪಾತ್ರಗಳ ಸಂಭಾಷಣೆಗಳನ್ನು ಹೇಳುವ ನೆನಪಿದೆ. ಹೀಗೆ ನೆನಪಿಸಿಕೊಳ್ಳುವ ಪ್ರವೃತ್ತಿಯಿಂದಾಗಿ ನನ್ನ ನೆನಪು ಚುರುಕಾಗಿಯೇ ಉಳಿದಿದೆ. ದಶಕದಿಂದೀಚೆಗೆ ನನಗೆ ಸಮಯವಿಲ್ಲ ಎಂಬ ಅತಿ ಪರಿಚಿತ ಮಾತುಗಳನ್ನು ನಾವೆಲ್ಲ ಆಡುತ್ತಿರುತ್ತೇವೆ. ಆದರೆ ಕೆಲವು ವಿಷಯಗಳನ್ನು ಬಿಟ್ಟರೆ ಬೇರೆಯವರ ಹೆಗಲೂ ಬೇಕಾದಾಗ ಅಥವಾ ನಮ್ಮದೇ ಧೈಯ ಅತಿ ಹೆಚ್ಚಿನ ಸ್ತರದ್ದಾ ದರೆ ಮಾತ್ರ ಇದು ನಿಜ. ನಮ್ಮ ದೈನಂದಿನ ಚಟುವಟಿಕೆಗಳು, ತಲುಪಬೇಕಾದ ಗುರಿಗಳಿಗೆ ನಾವು ನಮ್ಮ ಸಮಯ ಹಂಚಿಕೆಯನ್ನು ಮಾಡಿಕೊಳ್ಳು ತ್ತಲೇ ಇಲ್ಲ ಎಂದು ನನ್ನ ನಂಬಿಕೆ. ಇದನ್ನು ನಾವೇ ಸಾಬೀತು ಮಾಡಿಕೊಳ್ಳಬಹುದು ಮುಂದಿರುವ ಅಂದಿನ ಕೆಲಸಗಳನ್ನು ಆತಂಕವಿಲ್ಲದ, ಆದಷ್ಟು ತಣ್ಣಗಿನ ಮನಸ್ಸಿನಿಂದ ಒಂದೊಂದಾಗಿ ಮುಗಿಸುತ್ತ ಹೋದರೆ ಪ್ರತಿಯೊಂದಕ್ಕೂ ಸಮಯಾವಕಾಶ ಇರುತ್ತದೆ. ನಾಳಿನ ಅಥವಾ ಒಂದು ವಾರದ ಕೆಲಸ ಗಳಿಗೆ ವೇಳಾಪಟ್ಟಿ ಗೊತ್ತುಮಾಡಿಕೊಂಡರೆ ಒಳಿತು. ನಮ್ಮ ವಯಸ್ಸಿನವರೆಲ್ಲ ಇಂಥದೊಂದು ಪ್ರಯೋಗ ಮಾಡಿ ನೋಡಬಹುದು. ಕ್ರಮವಾಗಿ ನಮ್ಮ ಕೆಲಸಗಳನ್ನು ಮುಗಿಸುತ್ತ ಹೋದರೆ, ನಮ್ಮ ಗುರಿಯನ್ನು ಮುಟ್ಟುತ್ತೇವೆ. ಇದು ಪೇರಾಸೆಯ ಲಕ್ಷ್ಯಗಳಿಗೆ ಅನ್ವಯವಾಗದೇ ಇರಬಹುದು. ಆದರೆ ನಮ್ಮ ವಯಸ್ಸಿನ ಜೀವನದಲ್ಲಿ ಅಂದಿನ ಮತ್ತು ನಿಕಟ ಭವಿಷ್ಯಗಳಿಗೆ ಇದು ಸಂಬಂಧಪಟ್ಟಿದೆ ಎಂದು ನನ್ನ ವಿಶ್ವಾಸ. ಈ ನನ್ನ ಹೇಳಿಕೆಗಳು ಸರಿಯೇ? ಒರೆಹಚ್ಚಿ ನೋಡಿ.
ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…
ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…