ಆಂದೋಲನ ವಿ4: 29 ಸೋಮವಾರ 2022

ಅವಳಿ ಕಟ್ಟಡಗಳನಾಶ!

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್‌ಟೆಕ್ ರಿಯಲ್ ಎಸ್ಟೇಟ್ ಸಂಸ್ಥೆಗೆ ಸೇರಿದ ಅವಳಿ ಕಟ್ಟಡಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡಲಾಗಿದೆ. ೩೦ ಅಂತಸ್ತುಗಳ ಈ ಕಟ್ಟಡವನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿತ್ತು. ನಿಯಮ ಉಲ್ಲಂಘಿಸಿದ್ದರಿಂದ ಕಟ್ಟಡವನ್ನೇ ಹೊಡೆದುರುಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದೇಶವನ್ನು ಈಗ ಅನುಷ್ಠಾನ ಮಾಡಲಾಗಿದೆ. ಇಂತಹದ್ದೊಂದು ಬೃಹತ್ ಕಟ್ಟಡವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾಶ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು. ಸುತ್ತಮುತ್ತಲೆಲ್ಲ ವಸತಿ ಪ್ರದೇಶಗಳಿವೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಕಟ್ಟಡ ನಾಶ ಮಾಡಲಾಗಿದೆ. ೭೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಅವಳಿ ಗೋಪುರಗಳ ನಾಶ ಮಾಡಲಿಕ್ಕೆ ಆಗಿರುವ ವೆಚ್ಚ ಸುಮಾರು ೨೦ ಕೋಟಿ ರೂಪಾಯಿಗಳು. ಈ ಪೈಕಿ ೫ ಕೋಟಿ ರೂಪಾಯಿಗಳನ್ನು ಅಕ್ರಮ ಎಸಗಿದ ಸೂಪರ್ ಟೆಕ್ ಕಂಪೆನಿಯೇ ನೀಡುತ್ತಿದೆ. ಉಳಿದ ೧೫ ಕೋಟಿ ರೂ.ಗಳನ್ನು ಕಟ್ಟಡದ ಅವಶೇಷಗಳನ್ನು ಮಾರಾಟ ಮಾಡಿ ಸಂಗ್ರಹಿಸಲಾಗುತ್ತದೆ.


ಮೇಕಪ್ ಇಲ್ಲದ ಮೊದಲ ಸುಂದರಿ!

ಮೇಕಪ್ಪಿಲ್ಲದೇ ಮನೆಯಿಂದ ಹೊರಗೆ ಬರಲು ಅಳುಕುವ ಈ ಕಾಲದಲ್ಲಿ, ಸೌಂದರ್ಯ ಸ್ಪರ್ಧೆಗೆ ಹೋಗುವುದು ಸಾಧ್ಯವೇ? ಅಂತಹದ್ದೊಂದು ಅದ್ಭುತ ನಡೆದಿದೆ! ಇದು ನಡೆದಿದ್ದು ಲಂಡನ್‌ನಲ್ಲಿ. ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಪಾಲ್ಗೊಂಡ ೨೦ ವರ್ಷದ ಯುವತಿ ಮೇಕಪ್ಪೇ ಇಲ್ಲದೇ ಕ್ಯಾಟ್ ವಾಕ್ ಮಾಡಿ ತೀರ್ಪುಗಾರರ ಮನಗೆದ್ದು ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾಳೆ. ಆಕೆ ಹೆಸರು ಮೆಲಿನಾ ರವೂಫ್. ಸಿಎನ್‌ಎನ್ ವರದಿ ಪ್ರಕಾರ, ಮೆಲಿನಾ ರವೂಫ್ ಸೆಮಿಫೈನಲ್ ಸ್ಪರ್ಧೆಯಲ್ಲಿ ಮೇಕಪ್ಪಿಲ್ಲದೇ ಹೆಜ್ಜೆ ಹಾಕಿದ್ದಾಳೆ. ಅಕ್ಟೋಬರ್ ತಿಂಗಳಲ್ಲಿ ಮಿಸ್ ಇಂಗ್ಲೆಂಡ್ ಅಂತಿಮ ಸ್ಪರ್ಧೆ ನಡೆಯಲಿದೆ. ಆ ಸ್ಪರ್ಧೆಯಲ್ಲೂ ಆಕೆ ಮೇಕಪ್ಪಿಲ್ಲದೇ ಕ್ಯಾಟ್ ವಾಕ್ ಮಾಡುತ್ತಾಳೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಆದರೆ, ಶತಮಾನದಷ್ಟು ಇತಿಹಾಸ ಇರುವ ಸೌಂದರ್ಯ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಮೆಲಿನಾ ರಪೂಫ್ ಮೇಕಪ್ಪಿಲ್ಲದೇ ಸ್ಪರ್ಧಿಸಿ ಹೊಸ ಇತಿಹಾಸ ಬರೆದಿದ್ದಾಳೆ! ಆಕೆಯ ಸೌಂದರ್ಯಕ್ಕಿಂತ ಆಕೆಯ ಆತ್ಮವಿಶ್ವಾಸಕ್ಕೆ ಬಹಳಷ್ಟು ಜನರು ಮನಸೋತಿದ್ದಾರೆ. ಮೇಕಪ್ ಸುಂದರಿಯರಿಗೆ ಈರ್ಷೆ ಆಗಿದ್ದರೆ ಅದು ಅಸಹಜವೇನಲ್ಲ ಬಿಡಿ!


ಟಿಆರ್‌ಎಸ್- ಬಿಜೆಪಿ ಜಿದ್ದಾ ಜಿದ್ದಿ!

ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಮತ್ತು ಬಿಜೆಪಿ ನಡುವೆ ಮಾತಿನ ಯುದ್ಧ ಮುಗಿಯುತ್ತಲೇ ಇಲ್ಲ. ಆರೋಪ ಪ್ರತ್ಯಾರೋಪಗಳ ಸರಣಿ ಮುಂದುವರಿದೇ ಇದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ ನಂತರ ಬಿಜೆಪಿ ಪ್ರತಿದಾಳಿ ಆರಂಭಿಸಿದೆ. ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಉಭಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇವೆ. ಇದು ಪರಸ್ಪರ ನಿಂದನೆಯ ಮಟ್ಟಕ್ಕೂ ಇಳಿದಿದೆ. ಇತ್ತೀಚಿನ ಆರೋಪ ಎಂದರೆ, ಟಿಆರ್‌ಎಸ್ ಸರ್ಕಾರವು ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಅಭಿವೃದ್ಧಿಗೆ ಬಳಸದೇ ಬೇರೆ ಉದ್ದೇಶಕ್ಕೆ ಬಳಸುತ್ತಿದೆ ಎಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ. ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಬಿಜೆಪಿ ದೇಶದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ, ಉದ್ಯಮಿಗಳ ಪರವಾಗಿ ಆಡಳಿತ ನಡೆಸುತ್ತಿದೆ. ಜನಸಾಮಾನ್ಯರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬರುವ ದಿನಗಳಲ್ಲಿ ಮತ್ತಷ್ಟು ಆರೋಪ – ಪ್ರತ್ಯಾರೋಪ ನಿರೀಕ್ಷಿಸಬಹುದು.


ಸಾಲದ ಸುಳಿಯಲ್ಲಿ ಮೋದಿ ಆಪ್ತ ಉದ್ಯಮಿ

ಎಂಟು ವರ್ಷಗಳ ಹಿಂದೆ ಶ್ರೀಮಂತರ ಪಟ್ಟಿಯಲ್ಲಿ ಹೆಸರೇ ಇಲ್ಲದ ಅದಾನಿ ಸಮೂಹದ ಗೌತಮ್ ಅದಾನಿ ಈಗ ವಿಶ್ವದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಇವರ ಸಂಪತ್ತು ಕ್ಷಿಪ್ರವೇಗದಲ್ಲಿ ವೃದ್ದಿಸಿದೆ. ಮೋದಿ ಸರ್ಕಾರ ಅವಧಿಯಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಸಿಕ್ಕಸಿಕ್ಕದ್ದನ್ನೆಲ್ಲ ಖರೀದಿ ಮಾಡಿದ್ದಾರೆ. ಭಾರತ ಸರ್ಕಾರದ ಹಲವು ವಿಮಾನ ನಿಲ್ದಾಣಗಳೀಗ ಅದಾನಿ ಸಮೂಹಕ್ಕೆ ಸೇರಿವೆ. ಇಂತಹ ಗೌತಮ್ ಅದಾನಿ ಅವರ ಕಂಪೆನಿಗಳು ತೀವ್ರವಾದ ಸಾಲ ಮಾಡಿವೆ. ಈ ಬೃಹತ್ ಸಾಲ ತೀರಿಸುವುದು ಕಷ್ಟವೆಂದು ಎಸ್‌ಅಂಡ್‌ಪಿ ಜಾಗತಿಕ ರೇಟಿಂಗ್ ಏಜೆನ್ಸಿ ತಿಳಿಸಿದೆ. ೨,೧೮,೨೭೧ ಕೋಟಿ ರೂಪಾಯಿ ಸಾಲದ ಹೊರೆ ಅದಾನಿ ಕಂಪೆನಿಗಳ ಮೇಲಿದೆ. ದೇಶದ ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪೆನಿಗಳೂ ಸಾಲ ಮಾಡುತ್ತವೆ, ತೀರಿಸುತ್ತವೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಅದಾನಿ ಸಮೂಹದ ಕಂಪೆನಿಗಳು ಮಾಡಿರುವ ಸಾಲ ತೀರಿಸಲು ಕಷ್ಟ ಸಾಧ್ಯ ಅಥವಾ ತೀರಿಸಲು ಸಾಧ್ಯವೇ ಆಗುವುದಿಲ್ಲ ಎಂಬುದು ರೇಟಿಂಗ್ ಏಜೆನ್ಸಿಯ ಅಂದಾಜು. ಸಾಲ ತೀರಿಸಲಾಗದಿದ್ದರೆ, ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ ಎಂಬ ವಿಶ್ವಾಸ ಅದಾನಿ ಸಮೂಹಕ್ಕೆ ಇದ್ದಿರಬಹುದೇನೋ?

andolana

Recent Posts

ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ಅಟ್ಯಾಕ್: ಮಗು ಸೇರಿ ಮೂವರಿಗೆ ಗಂಭೀರ ಗಾಯ

ನಂಜನಗೂಡು: ಜಮೀನಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ರೈತ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗು ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿರುವ…

5 mins ago

ತಗಡೂರು ಖಾದಿ ಕೇಂದ್ರ ಪುನಶ್ಚೇತನಕ್ಕೆ ಪಣ

ಹಿರಿಯ ರಂಗಕರ್ಮಿ ಹೆಗ್ಗೂಡು ಪ್ರಸನ್ನ ನೇತೃತ್ವದಲ್ಲಿ ನಡೆದ ಸಭೆ; ಸುರೇಂದ್ರ ಕೌಲಗಿ ಮತ್ತಿತರರು ಭಾಗಿ ನಂಜನಗೂಡು: ಮಹಾತ್ಮ ಗಾಂಧೀಯವರ ಸರ್ವೋದಯದ…

11 mins ago

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್‌…

47 mins ago

ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

ಬೆಂಗಳೂರು: ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ…

1 hour ago

ನಿಗೂಢ ವಸ್ತು ಸ್ಫೋಟ: 6 ಶಾಲಾ ಮಕ್ಕಳಿಗೆ ಗಂಭೀರ ಗಾಯ

ಬೀದರ್:‌ ನಿಗೂಢ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಆರು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ನಡೆದಿದೆ.…

2 hours ago

ಮೈಸೂರು| ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಮಾಜಿ ಸಚಿವ ಸಿ.ಟಿ.ರವಿ

ಮೈಸೂರು: ಮಾಜಿ ಸಚಿವ ಸಿ.ಟಿ.ರವಿ ಅವರಿಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌…

3 hours ago