ಎಡಿಟೋರಿಯಲ್

ಆಂದೋಲನ ವಿ4 : 09 ಭಾನುವಾರ 2022

ರೂಪಾಯಿ ಕುಸಿತದ  ಮತ್ತೊಂದು ದಾಖಲೆ

ಎರಡು ವಾರಗಳ ಹಿಂದಷ್ಟೇ ರೂಪಾಯಿ ಡಾಲರ್ ವಿರುದ್ಧ 81ರ ಗಡಿದಾಟಿತ್ತು. ಈಗ ಮತ್ತೊಂದು ದಾಖಲೆಯಾಗಿದೆ.  ಡಾಲರ್ ವಿರುದ್ಧ ೮೨ರ ಗಡಿದಾಟಿದೆ. ಅಂದರೆ, ರೂಪಾಯಿ ಮೌಲ್ಯ  ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದಕ್ಕಿಂತಲೂ ತ್ವರಿತವಾಗಿ ಕುಸಿಯುತ್ತಿದೆ. ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಉದಯಿಸುತ್ತಿರುವ ಮಾರುಕಟ್ಟೆ ದೇಶಗಳಷ್ಟೇ ಅಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳ ಕರೆನ್ಸಿಗಳು  ಡಾಲರ್ ವಿರುದ್ಧ ಕುಸಿಯುತ್ತಿವೆ. ಆದರೆ, ರೂಪಾಯಿ ಕುಸಿತದ ತೀವ್ರತೆ ಹೆಚ್ಚಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ದರ, ಹಿಡಿತಕ್ಕೆ ಸಿಗದ ಹಣದುಬ್ಬರ ರೂಪಾಯಿ ಮೌಲ್ಯ ತೀವ್ರ ಕುಸಿತಕ್ಕೆ ಕಾರಣವಾದರೆ, ದೇಶದ ಆಮದು ರಫ್ತುಗಳಲ್ಲಿನ ಅಸಮತೋಲವೂ ಮತ್ತೊಂದು ಕಾರಣ. ನಮ್ಮ ಆಮದು ರಫ್ತಿನ ದುಪ್ಪಟ್ಟಾಗಿದೆ. ಹೀಗಾಗಿ ಆಮದು ಬಿಲ್ಲುಗಳ ಪಾವತಿಗೆ ಹೆಚ್ಚಿನ ಡಾಲರ್‌ಗಳು ಬೇಕಿದೆ. ಹೀಗಾಗಿ ಹಿಂದೆಂದಿಗಿಂತಲೂ ಭಾರತ ಹೆಚ್ಚು ಡಾಲರ್ ವಿನಿಯೋಗಿಸುತ್ತಿದೆ. ಈ ನಡುವೆ, ರಷ್ಯಾದೊಂದಿಗಿನ ತೈಲ ಆಮದು ವಹಿವಾಟು ರೂಪಾಯಿ ಲೆಕ್ಕದಲ್ಲಿ ಆಗುತ್ತಿರುವುದರಿಂದ ರೂಪಾಯಿಗೆ ಒಂದಷ್ಟು ಮೌಲ್ಯ ದಕ್ಕಿದೆ!


ಮಂಗಳದಲ್ಲಿ ಕಂಡಿದ್ದು ಸರೋವರವಲ್ಲ!
ಮಂಗಳ ಗ್ರಹದಲ್ಲಿ ಪತ್ತೆಯಾಗಿದ್ದ ಸರೋವರವೊಂದರ ಸಮಾಧಿ ಎಂದು ನಂಬಲಾಗಿದ್ದ ಸ್ಥಳದಲ್ಲಿ ಸರೋವರವಿರಲಿಲ್ಲ ,ಅದು  ಕೇವಲ ಮಂಜುಗಡ್ಡೆ ಮತ್ತು ಬಂಡೆಯ ಪದರಗಳಾಗಿರಬಹುದು ಎಂದು ನೂತನ ಅಧ್ಯಯನದಿಂದ ದೃಢಪಟ್ಟಿದೆ.  ಭೂಮಿಯಾಚೆಗಿನ ಜೀವವನ್ನು ಹುಡುಕಲು ನೀರನ್ನು ಹಿಂಬಾಲಿಸು ಎಂಬುದು  ವಿಜ್ಞಾನಿಗಳ ಮಂತ್ರವಾಗಿದೆ. ಆದರೆ ಈಗ ಮಂಗಳ ಗ್ರಹದಲ್ಲಿ ದ್ರವರೂಪದ ನೀರಿನ ಸಂಭಾವ್ಯ ಆವಿಷ್ಕಾರವು ಜಲನಿರೋಧಕವಾಗಿ–ರುವುದಿಲ್ಲ ಎಂದು ಸೂಚಿಸುವ ಹೆಚ್ಚಿನ ಪುರಾವೆಗಳಿವೆ ಎಂದು ಸಂಶೋಧಕರು ‘ನೇಚರ್ ಅಸ್ಟ್ರಾನಮಿ’ಯಲ್ಲಿ ವರದಿ ಮಾಡಿದ್ದಾರೆ. 2018ರಲ್ಲಿ, ವಿಜ್ಞಾನಿಗಳು ಮಂಗಳದ ದಕ್ಷಿಣ ಧ್ರುವದ ಬಳಿ ದೊಡ್ಡ ಉಪಮೇಲ್ಮೈ ಸರೋವರದ ಆವಿಷ್ಕಾರ ಮಾಡಿರುವುದಾಗಿ ಘೋಷಿಸಿದರು. ಮಂಗಳ ಗ್ರಹದಲ್ಲಿ ಕಂಡು ಬಂದ ಸಮಾಧಿಯಾದ ನೀರಿನ ಸರೋವರವು   ಜೀವಕ್ಕೆ ಅನುಕೂಲಕರವಾದ ಭೂಮ್ಯತೀತ ಜಗತ್ತನ್ನು ಕಂಡುಕೊಳ್ಳುವ ಉತ್ಸಾಹವನ್ನು ಹೆಚ್ಚಿಸಿತ್ತು.  ಆ ಬಗ್ಗೆ ಮತ್ತಷ್ಟು ಅನುಸರಣಾ ಅವಲೋಕನಗಳ ಅಗತ್ಯವಿದೆ ಸಂಶೋಧಕರು ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಸಂಶೋಧನೆಗಳು ಮುಂದುವರಿದಿವೆ.

ನಾಯಿಯ ಕೃತಜ್ಞತೆ!
ನಾಯಿಗಳ ನಿಯತ್ತಿನ ಬಗ್ಗೆ ಶತಶತಮಾನಗಳಿಂದಲೂ ಮಾತನಾಡುತ್ತಾ ಬಂದಿದ್ದೇವೆ. ಇದು ಇತ್ತೀಚಿನದು. ಮುಂಬೈನಲ್ಲಿ ಪ್ರಿಯಾಂಕಾ ಚೌಬಾಲ್ ಎಂಬವರು ಕೋವಿಡ್ ಲಾಕ್‌ಡೌನ್ ಅವಧಿ–ಯಲ್ಲಿ ನಾಯಿಯೊಂದಕ್ಕೆ ಕೆಲವು ದಿನಗಳ ಕಾಲ ಊಟ– ವನ್ನು ನೀಡಿದ್ದರು. ಅದಾಗಿ ಹೆಚ್ಚು ಕಮ್ಮಿ ಒಂದು ವರ್ಷ ದಾಟಿದೆ. ಅವರು ಸಾಕಷ್ಟು ಬೀದಿ ನಾಯಿಗಳಿಗೆ ಆಗಾಗ್ಗೆ ಊಟ ನೀಡುವುದ–ರಿಂದ ಎಲ್ಲಾ ನಾಯಿಗಳನ್ನು ನೆನಪಿಟ್ಟುಕೊಂಡಿರಲಾರರು. ಆದರೆ, ಊಟ ತಿಂದ ನಾಯಿಗಳು ಮಾತ್ರ ನೆನಪಿಟ್ಟುಕೊಂಡಿರುತ್ತವೆ. ಇತ್ತೀಚೆಗೆ ಪ್ರಿಯಾಂಕ ಕಚೇರಿ ಬಸ್ ತಪ್ಪಿಸಿಕೊಂಡಿದ್ದರು. ಮತ್ತೊಂದು ಬಸ್ ಬರುವವರೆಗೆ ದೇವ–ಸ್ಥಾನಕ್ಕೆ ತೆರಳಿದ್ದರು. ಏನಾಶ್ಚರ್ಯ. ಅಲ್ಲಿದ್ದ ನಾಯಿಯೊಂದು ಆಕೆಯ ಬಳಿ  ಓಡಿ ಬಂದು ಬಾಲ ಅಲ್ಲಾಡಿಸಿ ತನ್ನ ಪ್ರೀತಿ  ವ್ಯಕ್ತಪಡಿಸಿತು. ಪ್ರಿಯಾಂಕ ಅವರಿಗೆ ಆಗಲೇ ನೆನಪಾಗಿದ್ದು, ಆ ನಾಯಿಗೆ ಅವರು ಕೋವಿಡ್ ಲಾಕ್‌ಡೌನ್ ಅವಧಿ ಯಲ್ಲಿ ಊಟ ನೀಡಿದ್ದು. ಈ ಅಪರೂಪದ ಭೇಟಿ–ಯನ್ನು ಅವರು ಇನ್‌ಸ್ಟ್ರಾ ಗ್ರಾಮ್‌ನ ‘ಸ್ಟ್ರೇಡಾಗ್ ಫೀಡರ್ ಅಂಧೇರಿ’ ಪುಟದಲ್ಲಿ  ಹಂಚಿಕೊಂಡಿದ್ದಾರೆ. ವರ್ಷವಾದರೂ ನಾಯಿ ಆಕೆಯನ್ನು ನೆನಪಿಟ್ಟು–ಕೊಂಡು ಬಂದು ಪ್ರೀತಿ ವ್ಯಕ್ತಪಡಿಸಿದ ಪರಿಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಸುವರ್ಣಾವತಿ ಜಲಾಶಯ
ಚಾಮರಾಜನಗರ ತಾಲ್ಲೂಕಿನ ಅಟ್ಟುಗುಳಿಪುರ ಬಳಿ ಸುವರ್ಣಾವತಿ ಜಲಾಶಯವಿದೆ. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(209)ಯ ಬದಿಯಲ್ಲಿದೆ. 1977 ರಲ್ಲಿ ಈ ಜಲಾಶಯವನ್ನು ನಿರ್ಮಿಸಲಾಯಿತು. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಂಚಿನಲ್ಲಿರುವ ಈ ಜಲಾಶಯವು ಒಂದು ದಿನದ ಪಿಕನಿಕ್‌ಗೆ  ಉತ್ತಮ ಸ್ಥಳವಾಗಿದೆ. ಅಪಾರ ಜಲರಾಶಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ತಣ್ಣಗೆ ಇರುವ ಜಲಾಶಯವನ್ನು ನೋಡುವುದೇ ಒಂದು ಸೋಜಿಗ. ಜಿಂಕೆ, ಆನೆ, ಚಿರತೆ, ಹುಲಿ ಹಾಗೂ ಇತರೆ ವನ್ಯಜೀವಿಗಳು ಕುಡಿಯುವ ನೀರಿಗಾಗಿ ಜಲಾಶಯವನ್ನು ಆಶ್ರಯಿಸಿವೆ. ಆಗಾಗ ಜಲಾಶಯಕ್ಕೆ ಬಂದು ಹೋಗುತ್ತವೆ. ಈ ಪ್ರವಾಸಿ ತಾಣವು ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 16 ಕಿ.ಮೀ.ದೂರದಲ್ಲಿದೆ. ವಾರಾಂತ್ಯದ ದಿನಗಳಲ್ಲಿ ಕುಟುಂಬ ಸಮೇತ ಹೋದರೆ ಜಲಾಶಯದ ಏರಿ ಮೇಲೆ ಓಡಾಡಿಕೊಂಡು ಆಹ್ಲಾದಕರ ವಾತಾವರಣವನ್ನು ಸವಿಯಬಹುದು. ನಗರದ ಶಬ್ದ, ವಾಯು ಮಾಲಿನ್ಯದಿಂದ ದೂರವಾಗಿ ಶುದ್ಧಗಾಳಿ, ನಿಸರ್ಗದ ರಮಣೀಯತೆಯನ್ನು ಸವಿಯಬಹುದು.
andolana

Recent Posts

ರಾಜ್ಯದಲ್ಲಿ ಒಂದು ವಾರ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ.20ರಿಂದ 26ರವರೆಗೆ ರಾಜ್ಯದ…

2 mins ago

ಪಾರ್ಕಿಂಗ್ ತಾಣವಾದ ಹೈವೇ ಸರ್ವಿಸ್ ರಸ್ತೆ!

ಎಂ.ಆರ್.ಚಕ್ರಪಾಣಿ ಸುಗಮ ಸಂಚಾರಕ್ಕೆ ಅಡಚಣೆ, ವಾಹನ ಸಂಚಾರಕ್ಕೆ ಹರಸಾಹಸ  ಮದ್ದೂರು: ನಗರ ವ್ಯಾಪ್ತಿಯ ಬೆಂಗಳೂರು-ಮೈಸೂರು ಹೆದ್ದಾರಿ ಸರ್ವಿಸ್ ರಸ್ತೆ ವಾಹನಗಳ…

2 hours ago

ಪಿರಿಯಾಪಟ್ಟಣ: ತಂಬಾಕು ನಾಟಿ ಕಾರ್ಯ ಚುರುಕು

ನವೀನ್ ಕುಮಾರ್ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ರೈತರಲ್ಲಿ ಮಂದಹಾಸ  ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಪ್ರಮುಖ ಬೆಳೆಯಾದ…

5 hours ago

ಬಾಲ್ಯವನ್ನು ನೆನಪಿಸಿದ ಗುರು-ಶಿಷ್ಯರ ಸ್ನೇಹ ಸಮ್ಮಿಲನ

ಎಸ್.ಎ.ಹುಸೇನ್ ಡಿ.ಚೆನ್ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಕಣ್ಣಾಲಿಗಳನ್ನು ಒದ್ದೆಯಾಗಿಸಿದ ಗುರು-ಶಿಷ್ಯರ ಬಾಂಧವ್ಯ ಮಡಿಕೇರಿ: ಕಾಲ ಚಕ್ರ ಉರುಳುತ್ತಾ ಸಾಗುತ್ತದೆ, ತಲೆಗೂದಲು…

5 hours ago

ಹೆದ್ದಾರಿಯಲ್ಲಿ ಮನಸ್ಸಿಗೆ ಮುದ ನೀಡುತ್ತಿರುವ ಕೆಂಬಣ್ಣದ ಹೂಗಳ ಚಿತ್ತಾರ!

ಭೇರ್ಯ ಮಹೇಶ್ ಕೆ.ಆರ್.ನಗರದಿಂದ ಭೇರ್ಯ ಗ್ರಾಮದವರೆಗೆ ಅಲ್ಲಲ್ಲಿ ಮೇ ಫ್ಲವರ್ ಮರಗಳ ಆಕರ್ಷಣೆ  ಕೆ.ಆರ್.ನಗರ: ಬೇಸಿಗೆಯ ನಡುವೆ ಆಗೊಮ್ಮೆ ಈಗೊಮ್ಮೆ…

6 hours ago

ಪಾರಂಪರಿಕ ಕಟ್ಟಡ ತತ್ತರ; ನಿರ್ವಹಣೆಗಿಲ್ಲ ಸ್ಪಷ್ಟ ಉತ್ತರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತುಗಳಲ್ಲಿ ಪಾರಂಪರಿಕ ಕಟ್ಟಡಗಳೂ ಪ್ರಮುಖವಾದವು. ಪ್ರವಾಸಿಗರಿಗೂ ಇವುಗಳ ಸೆಳೆತ ಇದ್ದೇ ಇದೆ. ಇಂತಹ ಕಟ್ಟಡಗಳ…

6 hours ago